Asianet Suvarna News Asianet Suvarna News

ಬೆಂಗಳೂರಿಗೆ ಹೊರಟಿದ್ದವಳು ನಿಗೂಢವಾಗಿ ಕೊಲೆಯಾದಳು..!

ಆಕೆ ಜವಬ್ದಾರಿಯುತ ಹೆಣ್ಣುಮಗಳು. ಅವಳ ಮನೆಗೆ ಅವಳೇ ಎಲ್ಲವೂ ಆಗಿದ್ದಳು. ಈಗ ತಾನೆ ಓದು ಮುಗಿಸಿದ್ದ ಆಕೆ.. ಬೆಂಗಳೂರಿಗೆ ಬಂದು ಐಟಿ ಕಂಪನಿಯಲ್ಲಿ ಇಂಟರ್ವ್ಯೂವ್ ಕೂಡ ಪಾಸ್ ಮಾಡಿದ್ಲು. ಕೆಲಸ ಸಿಕ್ಕಿತು.. ಇನ್ನೂ ಅಪ್ಪ ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಬೆಂಗಳೂರಿಗೆ ಬರಲು ಎಲ್ಲಾ ತಯಾರಿಸಿ ನಡೆಸಿದ್ದ ಆಕೆ ಬಸ್ ಹತ್ತುವ ಹಿಂದಿನ ರಾತ್ರಿ ತನ್ನ ಮನೆ ಎದುರೇ ಬರ್ಬರವಾಗಿ ಕೊಲೆಯಾಗಿ ಹೋದಳು.

ಮಡಿಕೇರಿ (ಜ.19): ತನ್ನ ಮನೆಗೆ ಆಧಾರವಾಗಿದ್ದ ಹುಡುಗಿ ಆಕೆ. ಬೆಂಗಳೂರಿಗೆ ಬಂದು ಐಟಿ ಕಂಪನಿಯಲ್ಲಿ ಕೆಲಸ ಕೂಡ ಸಿಕ್ಕಿತು. ಇನ್ನೂ ಅಪ್ಪ ಅಮ್ಮನನ್ನ ಚೆನ್ನಾಗಿ ನೋಡಿ ಕೊಳ್ಳಬೇಕು ಅಂತ ಬೆಂಗಳೂರಿಗೆ ಬರಲು ಎಲ್ಲಾ ತಯಾರಿಸಿ ನಡೆಸಿದ್ದ ಆಕೆ ಬಸ್ ಹತ್ತುವ ಹಿಂದಿನ ರಾತ್ರಿ ತನ್ನ ಮನೆ ಎದುರೇ ಬರ್ಬರವಾಗಿ ಕೊಲೆಯಾಗಿ ಹೋದಳು. 

ಫೋನ್ ಕಾಲ್ ಬಂತು ಅಂತ ಫೋನ್ ರಿಸೀವ್ ಮಾಡಿ ಹೊರ ಹೊದವಳು ಮನೆ ಎದುರಲ್ಲೇ ಶವವಾಗಿದ್‌ದಳು. ಇನ್ನೂ ಅವಳ ಸಾವಿನ ಕಾರಣ ಹುಡುಕುತ್ತ ಹೊರಟ ಪೊಲೀಸರಿಗೆ ಒಂದೊಂದು ಹಂತದಲ್ಲೂ ಒಂದೊಂದು ಟ್ವಿಸ್ಟ್ ಮತ್ತು ಟರ್ನ್‌ಗಳು. ಅಷ್ಟಕ್ಕೂ ಆಕೆಯನ್ನ ಕೊಂದವರು ಯಾರು? ಅವತ್ತು ರಾತ್ರಿ ಅವಳಿಗೆ ಬಂದ ಫೋನ್ ಕಾಲ್ ಯಾರದ್ದು?

ಕೊಡಗಿನಲ್ಲಿ ಯುವತಿಯ ಕೊಲೆ: ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಅಲ್ಲಿ ಫೋನ್ ಮಾಡಿದವನು ರುದ್ರಗುಪ್ಪೆಯ ತಿಮ್ಮಯ್ಯ.. ಈತ ಆ ಫ್ಯಾಮಿಲಿಗೆ ಪರಿಚಿತನೇ  ಆದ್ರೆ ಅಷ್ಟು ಕ್ಲೋಸ್ ಏನೂ ಇರಲಿಲ್ಲ.. ಅಂಥವನು ಅಷ್ಟು ರಾತ್ರಿಯಲ್ಲಿ ಆರತಿಗೆ ಕಾಲ್ ಮಅಡಿದ್ದೇಕೆ..? ಫೋನ್‌ನಲ್ಲಿ ಆರತಿಗೂ ಆಕೆಗೂ ಏನ್ ಮಾತುಕತೆ ಆಯ್ತು..? ಫೋನ್ ಮಾಡಿದ ಆತನಿಗೂ ಈ ಕೊಲೆಗೂ ಸಂಬಂಧ ಇದ್ಯಾ ಅನ್ನೋ ಪ್ರಶ್ನೆ ಪೊಲೀಸರಿಗೆ ಮೂಡುತ್ತೆ.. ತಡ ಮಾಡದೇ ಪೊಲೀಸರು ಅವನನ್ನೇ ಹುಡುಕಿಕೊಂಡು ಅವನ ಮನೆಗೆ ಹೋದ್ರು.. ಅಲ್ಲಿ ನೋಡಿದ್ರೆ ಆತನ ರಕ್ತಸಕ್ತವಾದ ಜ್ಯಾಕೆಟ್ ಮನೆಯ ಬಳಿ ಬಿದ್ದಿದ್ರೆ.. ವಿಷದ ಬಾಟೆಲ್ ಮನೆ ಮುಂದೆ ಇದ್ದ ಹೊಂಡದ ಪಕ್ಕ ಬಿದ್ದಿತ್ತು.

Video Top Stories