Belagavi: ಒಂದು ಹುಡುಗಿಗಾಗಿ ಇಬ್ಬರು ಯುವಕ ಮಧ್ಯೆ ಗಲಾಟೆ: ಬುದ್ಧಿ ಹೇಳಿದ ಗ್ರಾಮದ ಮುಖ್ಯಸ್ಥರ ಮನೆ ಧ್ವಂಸ !

ಹುಡುಗಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ
ನಾವಗೆ ಗ್ರಾಮದಲ್ಲಿ ನಾಲ್ಕು ಮನೆಗಳ ಮೇಲೆ ದಾಳಿ 
ಗ್ರಾಮದ ಹಿರಿಯರ ಮನೆಗಳನ್ನು ಟಾರ್ಗೆಟ್ ಮಾಡಿ ಕೃತ್ಯ

First Published Jan 2, 2024, 11:02 AM IST | Last Updated Jan 2, 2024, 11:02 AM IST

ಬೆಳಗಾವಿ: ಹುಡುಗಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ(Conflict) ನಡೆದಿದ್ದು, ಓದುವ ವಯಸ್ಸಲ್ಲಿ ಪ್ರೀತಿಸುವುದು(Love) ತಪ್ಪು ಎಂದು ಪಂಚರು ಬುದ್ಧಿವಾದ ಹೇಳಿದ್ದಾರೆ. ಬುದ್ಧಿವಾದ ಹೇಳಿದ ಗ್ರಾಮದ ಪಂಚರಾದ ಮಾರುತಿ ಹುರಕಡ್ಲಿ ಮನೆ ದ್ವಂಸಕ್ಕೆ ಯತ್ನ ಮಾಡಿದ್ದಾರೆ. 30 ಕ್ಕೂ ಅಧಿಕ ಯುವಕರ ಗುಂಪಿನಿಂದ ಗ್ರಾಮದ ಹಿರಿಯರ ನಾಲ್ಕು ಮನೆ ಮೇಲೆ ದಾಳಿ(Attack) ಮಾಡಲಾಗಿದೆ. ಬೆಳಗಾವಿ(Belagavi) ತಾಲೂಕಿನ ನಾವಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿದ 30ಕ್ಜೂ ಅಧಿಕ ಪುಂಡರು, ಮನೆಯ ಮುಂದೆ ಇದ್ದ ಕಾರು, ಮನೆಯ ಗ್ಲಾಸ್ ಒಡೆದು ಹಾಕಿದ್ದಾರೆ. ಪ್ರೀತಿಯ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಬಾದರವಾಡಿ ಮತ್ತು ನಾವಗೆ ಗ್ರಾಮದ ಯುವಕರ ಮಧ್ಯೆ ಗಲಾಟೆ ನಡೆದಿದೆ. ಈ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  Wheeling : ರಾಜಧಾನಿಯಲ್ಲಿ ವ್ಹೀಲಿಂಗ್‌ ಹುಚ್ಚಾಟ: ಡಿಸಿಪಿ ಆಫೀಸ್‌ ಮುಂಭಾಗದಲ್ಲೇ ಯುವಕರ ಪುಂಡಾಟ

Video Top Stories