ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ನ್ಯಾಯಾಲಯಕ್ಕೆ ಸಾಕ್ಷ್ಯ ಸಲ್ಲಿಕೆ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಡುಪಿ ಪೊಲೀಸರಿಂದ ಜನಪ್ರತಿನಿಧಿಗಳ ಕೋರ್ಟ್ಗೆ ಸಾಕ್ಷ್ಯ ಸಲ್ಲಿಕೆಯಾಗಿದೆ. ಸಂತೋಷ್ ಪಾಟೀಲ್ಗೆ ಸೇರಿದ ಎರಡು ಮೊಬೈಲ್'ಗಳ ಡೀಟೈಲ್ಸ್, FSL ವರದಿ ಹಾಗೂ ತನಿಖೆಯ ವೇಳೆ ಮಾಡಿದ್ದ ವಿಡಿಯೋ ನೀಡಲು ಕೋರ್ಟ್ ಸೂಚಿಸಿತ್ತು. ಉಡುಪಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್' ಪ್ರಶಾಂತ್ ಪ್ರಶ್ನಿಸಿದ್ದರು. ಪ್ರಶಾಂತ್ ಅರ್ಜಿ ಆಧರಿಸಿ ಪೊಲೀಸರಿಗೆ ಸಾಕ್ಷ್ಯ ಡಿಟೇಲ್ಸ್ ನೀಡಲು ನ್ಯಾಯಾಲಯ ಸೂಚನೆ ನೀಡಿತ್ತು.