
ಶಂಕಿತ ಉಗ್ರನ ಬಂಧನ: ಭಯೋತ್ಪಾದಕರ ಅಡಗುತಾಣವಾಗ್ತಿದೆಯಾ ಬೆಂಗಳೂರು?
* ತಾಲೀಬ್ ಬಂಧನದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಹೈಅಲರ್ಟ್
* ಕಾಶ್ಮೀರ ಮೂಲದ ತಾಲೀಬ್ನನ್ನ ಹೆಡೆಮುರಿ ಕಟ್ಟಿದ ಪೊಲೀಸರು
* 8 ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿದ್ದನಂತೆ ಬಂಧಿತ ಶಂಕಿತ ಉಗ್ರ
ಬೆಂಗಳೂರು(ಜೂ.08): ಕಾಶ್ಮೀರದ ತಾಲೀಬ್ ಬಂಧನದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಬೆಂಗಳೂರಿನಲ್ಲಿ ಅಡಗಿದ್ದ ಕಾಶ್ಮೀರದ ತಾಲೀಬ್ನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಉಗ್ರರ ಅಡಗುತಾಣವಾಗುತ್ತಿದೆಯಾ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಕಳೆದ 8 ವರ್ಷದಿಂದ ತಾಲೀಬ್ ಬೆಂಗಳೂರಿನಲ್ಲೇ ನೆಲೆಸಿದ್ದನಂತೆ, ಬೆಂಗಳೂರಿನಲ್ಲಿ ತಾಲೀಬ್ ಇದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದರು. ಈತನ ಬಂಧನವಾಗುವ 15 ದಿನ ಮುಂಚೆಯೇ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಗರಕ್ಕೆ ಆಗಮಿಸಿದ್ದರು.
Add Asianetnews Kannada as a Preferred Source

BIG 3: ಜಮೀನುಗಳಲ್ಲಿ ವಾಲಿದ ವಿದ್ಯುತ್ ಕಂಬಗಳು, ಜೀವಭಯದಲ್ಲಿ ಅನ್ನದಾತ..!