
BIG 3: ಜಮೀನುಗಳಲ್ಲಿ ವಾಲಿದ ವಿದ್ಯುತ್ ಕಂಬಗಳು, ಜೀವಭಯದಲ್ಲಿ ಅನ್ನದಾತ..!
* ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟ ಗ್ರಾಮದಲ್ಲಿ ನಡೆದ ಘಟನೆ
* ರೈತರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು
* ನಮ್ಮನ್ನ ಕಾಪಾಡಿ ಅಂತ ಅಂಗಲಾಚಿ ಬೇಡಿಕೊಳ್ಳುತ್ತಿರುವ ರೈತರು
ಚಿತ್ರದುರ್ಗ(ಜೂ.08): ಜಮೀನುಗಳಲ್ಲಿ ಒಂದೇ ಕಡೆ ವಿದ್ಯುತ್ ಕಂಬಗಳು ವಾಲಿದ್ದರಿಂದ ರೈತರು ಜೀವಭಯದಲ್ಲೇ ಓಡಾಡುವಂತ ಸ್ಥಿತಿ ನಿರ್ಮಾಣವಾದ ಘಟನೆ ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಅಂತ ರೈತರು ದೂರಿದ್ದಾರೆ. ಅಪ್ಪಿತಪ್ಪಿ ಶಾರ್ಟ್ಸರ್ಕ್ಯೂಟ್ ಆಯ್ತು ಅಂದ್ರೆ ಬೆಳೆದ ಬೆಳೆ ಸಂಪೂರ್ನವಾಗಿ ಸುಟ್ಟು ಹೋಗುತ್ತದೆ. ಹೀಗಾಗಿ ನಮ್ಮನ್ನ ಕಾಪಾಡಿ ಅಂತ ರೈತರು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ನ ಬಿಗ್ 3 ಕಾರ್ಯಕ್ರಮದಲ್ಲಿ ವಿವರವಾಗಿ ಬಿತ್ತರಿಸಲಾಗಿದೆ. ಇನ್ನಾದರೂ ಅಧಿಕಾರಿಗಳು ಸ್ಪಂದಿಸುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.
Add Asianetnews Kannada as a Preferred Source

ತಂದೆ ಫೋಟೋಗೆ ಹೂ ಇಟ್ಟು ಅಪ್ಪ ಅಪ್ಪ ಎಂದ ಕೂಗಿದ ರಾಯನ್; ವಿಡಿಯೋ ವೈರಲ್