ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ: ತಂದೆ ನೋಡಲು ಹೋಗಿ ಅನಾರೋಗ್ಯಕ್ಕೆ ತುತ್ತಾದ ಮದನಿ

ಬೆಂಗಳೂರಿನ ಬ್ಲಾಸ್ಟ್‌ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಅಬ್ದುಲ್‌ ನಾಸೆರ್‌ ಮದನಿ, ತಂದೆಯನ್ನು ನೋಡಲು ಹೋಗಿ ಆತನೇ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ.
 

Share this Video
  • FB
  • Linkdin
  • Whatsapp

ಬೆಂಗಳೂರು ಸರಣಿ ಬಾಂಬ್ ಸ್ಫೋಟಗಳ (Bengalure serial bomb blast case) ಆರೋಪಿ ಅಬ್ದುಲ್ ನಾಸೆರ್ ಮದನಿ (Abdul Nasser Madani) ತಂದೆಯನ್ನು ನೋಡಲು ಹೋಗಿ, ನಿರಾಸೆಯಿಂದ ವಾಪಸ್‌ ಆಗಿದ್ದಾನೆ. ಕಾರಣ ತಂದೆ ನೋಡಲು ಹೋಗಿದ್ದ ಆತ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ತಂದೆಯನ್ನು ನೋಡಲು ಮದನಿ ಕೇರಳಕ್ಕೆ(Kerala) ತೆರಳಿದ್ದ, ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆ ಪೊಲೀಸರ ಭದ್ರತೆಯಲ್ಲಿ ಅಲ್ಲೇ ಚಿಕಿತ್ಸೆ ಕೊಡಿಸಲಾಗಿದೆ. ಜೂನ್‌ 26 ರಂದು ತಂದೆಯನ್ನು ನೋಡಲು ಮದನಿ ಕೇರಳಕ್ಕೆ ತೆರಳಿದ್ದು, ಜುಲೈ 7ರ ವರೆಗೆ ಅಲ್ಲಿ ಇರಲು ಅವಕಾಶ ನೀಡಲಾಗಿತ್ತು. ಆದ್ರೆ ಅಲ್ಲಿ ತನಕ ಆತ ಆಸ್ಪತ್ರೆಯಲ್ಲೇ ಇದ್ದ ಕಾರಣ ಬೆಂಗಳೂರಿಗೆ(Bengaluru) ವಾಪಸ್‌ ಆಗಿದ್ದಾನೆ. ತಂದೆ ವಾಸವಿದ್ದ ಸುಮಾರು 30 ಕಿಲೋ ಮೀಟರ್‌ ದೂರದಲ್ಲಿ ಚಿಕಿತ್ಸೆ ಪಡೆದಿದ್ದು, ತಂದೆ ನೋಡದೇ ವಾಪಸ್‌ ಆಗಿದ್ದಾನೆ. ಸುಪ್ರೀಂಕೋರ್ಟ್ ಆದೇಶದಂತೆ ತಂದೆ ನೋಡಲು ತೆರಳಿದ್ದ. 

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: ಸದನದಲ್ಲಿ ಇಂದೇ ಪೆನ್‌ಡ್ರೈವ್‌ ಬಾಂಬ್‌ ಸಿಡಿಸ್ತಾರಾ ದಳಪತಿ ?: ನಿಜಕ್ಕೂ ಅದರಲ್ಲಿ ಸಾಕ್ಷಿ ಇದೆಯಾ ?

Related Video