Asianet Suvarna News Asianet Suvarna News

ರಾಜಾಜ್ಞೆ ತಂದ ನಿಟ್ಟುಸಿರು,  ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್

ಮನೆ ಬಾಡಿಗೆದಾರರಿಗೆ ಬಿಗ್ ರಿಲೀಫ್ ಕೊಟ್ಟ ಕೇಂದ್ರ ಸರ್ಕಾರ/ ಲಾಕ್ ಡೌನ್ ಅವಧಿ ಮುಗಿಯುವವರೆಗೆ ಮನೆ ಬಾಡಿಗೆಗೆ ಒತ್ತಡ ಹೇರುವಂತೆ ಇಲ್ಲ/ ಮನೆ ಖಾಲಿ ಮಾಡಿ ಎಂದು ದಬಾಯಿಸುವಂತೆ ಇಲ್ಲ

ನವದೆಹಲಿ(ಮಾ.29) ಕೊರೋನಾ  ಲಾಕ್ ಡೌನ್ ಕಾಲ್ ಕಾಲದಲ್ಲಿ ಇಎಂಐ ಕಟ್ಟುವುದರಿಂದ ವಿನಾಯಿತಿ ನೀಡಲಾಗಿತ್ತು. ಮಧ್ಯಮ ವರ್ಗದ ಹಲವಾರು ಜನರು ಮನೆ ಬಾಡಿಗೆ ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿ ಇದ್ದರು.

ಮೂರನೇ ಹಂತಕ್ಕೂ ಮುನ್ನ ಆರೋಗ್ಯ ಇಲಾಖೆ ಅಪ್ಪಣೆ ಕೇಳಿ

ಕೇಂದ್ರ ಸರ್ಕಾರ ಈ ಚಿಂತೆಗೂ ಸದ್ಯ ವಿನಾಯಿತಿ ನೀಡಿದೆ. ಲಾಕ್ ಡೌನ್ ಅವಧಿ ಮುಗಿಯುವವರೆಗೆ ಮನೆ ಬಾಡಿಗೆ ಕೇಳುವ ಹಾಗಿಲ್ಲ ಜತೆಗೆ ಮನೆ ಖಾಲಿ ಮಾಡಲು ಒತ್ತಡ ಹೇರುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿದೆ.