
ಸೂಪರ್ ಜೋಡಿಯ ಫ್ಯೂಚರ್ ಹೇಗಿರುತ್ತೆ ಸ್ವಾಮಿ..? ವಿಜಯ್-ರಶ್ಮಿಕಾರ ಭವಿಷ್ಯ ನುಡಿದ ವೇಣುಸ್ವಾಮಿ!
ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ವಿಷ್ಯ ಈಗ ಸಿನಿಲೋಕದಲ್ಲಿ ಹಾಟ್ ಟಾಪಿಕ್. ಆದ್ರೆ ಎಂಗೇಜ್ಮೆಂಟ್ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ ಆಗಿದ್ದನ್ನ ನೋಡಿ ಫ್ಯಾನ್ಸ್ ಆತಂಕಿತರಾಗಿದ್ರು.
ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ವಿಷ್ಯ ಈಗ ಸಿನಿಲೋಕದಲ್ಲಿ ಹಾಟ್ ಟಾಪಿಕ್. ಆದ್ರೆ ಎಂಗೇಜ್ಮೆಂಟ್ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ ಆಗಿದ್ದನ್ನ ನೋಡಿ ಫ್ಯಾನ್ಸ್ ಆತಂಕಿತರಾಗಿದ್ರು. ಈ ನಡುವೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ ಈ ಜೋಡಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಏನುದು ಜ್ಯೋತಿಷಿ ಹೇಳಿದ ಭವಿಷ್ಯ ಈ ಸ್ಟೋರಿ ನೋಡಿ. ಯೆಸ್ ವಿಜಯ್ ದೇವರಕೊಂಡ ಅಂಡ್ ರಶ್ಮಿಕಾ ಕಳೆದ 7 ವರ್ಷಗಳಿಂದಲೂ ಸಿನಿಲೋಕದಲ್ಲಿ ಲವ್ ಬರ್ಡ್ಸ್ ಅನ್ನಿಸಿಕೊಂಡಿದ್ರು. ಇಷ್ಟು ದಿನ ಕದ್ದು ಮುಚ್ಚಿ ಡೇಟಿಂಗ್ ಮಾಡ್ತಾ ಇದ್ದ ಈ ಜೋಡಿ ಕಳೆದ ವಾರ ಕುಟುಂಬದಸ್ಥರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಲವ್ ಗಾಸಿಪ್ ಶುರುವಾಗಿ 7 ವರ್ಷಗಳೇ ಆದವು.
ಗೀತಗೋವಿಂದಂ ಸೆಟ್ನಲ್ಲಿ ಮೀಟ್ ಆದ ಈ ಜೋಡಿ ಮುಂದೇ ಡೇಟ್ ಮಾಡೋದಕ್ಕೆ ಶುರುಮಾಡಿದ್ರು. ಇದೀಗ ಇವರ ನಂಟಿಗೆ ಅಧಿಕೃತ ಮುದ್ರೆ ಬಿದ್ದಿದೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರೋ ಜೋಡಿ ಫೆಬ್ರುವರಿಯಲ್ಲಿ ಮದುವೆಯಾಗಲಿದೆ. ಯೆಸ್ ತೆಲುಗು ಸಿನಿರಂಗದಲ್ಲಿ ವೇಣುಸ್ವಾಮಿ ಶ್ಯಾನೇ ಫೇಮಸ್. ಅಸಲಿಗೆ ಈತ ಮೊದಲು ಚಾನೆಲ್ಗಳಲ್ಲಿ ಭವಿಷ್ಯ ಹೇಳ್ತಾ ಇದ್ದ. ಈತನ ಭವಿಷ್ಯವನ್ನ ಯಾರೂ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದ್ರೆ ಟಾಲಿವುಡ್ನ ತಾರಾಜೋಡಿ ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಆಗುತ್ತೆ ಅಂತ ಈತ ಭವಿಷ್ಯ ನುಡಿದಿದ್ದ. ಟಾಲಿವುಡ್ನ ಈ ಲವ್ಲಿ ಕಪಲ್ ಬೇರೆ ಯಾಗ್ತಾರೆ ಅಂತ ಯಾರೂ ನಂಬೋದಕ್ಕೆ ರೆಡಿ ಇರಲಿಲ್ಲ. ಪ್ರೀತಿಸಿ ಮದುವೆ ಆದ ಈ ಜೋಡಿ ಅತ್ಯಂತ ಅನ್ಯೋನ್ಯವಾಗಿ ಇತ್ತು. ಆದ್ರೆ ಅಚ್ಚರಿ ಅಂದ್ರೆ 2021ರಲ್ಲಿ ಈ ಜೋಡಿ ಡಿವೋರ್ಸ್ಗೆ ಅಪ್ಲೈ ಮಾಡ್ತು.
ಚೈತನ್ಯ-ಸಮಂತಾ ವಿಚಾರದಲ್ಲಿ ವೇಣುಸ್ವಾಮಿ ಭವಿಷ್ಯ ನಿಜವಾದದನ್ನ ನೋಡಿ ಜನ ಈತನನ್ನ ನಂಬೋದಕ್ಕೆ ಶುರುಮಾಡಿದ್ರು. ಅದೇನು ಕಾಕತಾಳೀಯವೋ ಏನೋ ಈತ ನುಡಿದ ಕೆಲ ಭವಿಷ್ಯಗಳು ನಿಜವಾದವು. ಸೆಲೆಬ್ರಿಟಿಗಳು ಈತನನ್ನ ನಂಬೋದಕ್ಕೆ ಶುರುಮಾಡಿದ್ರು. ಹೌದು ರಶ್ಮಿಕಾ ಟಾಲಿವುಡ್ಗೆ ಎಂಟ್ರಿ ಕೊಟ್ಟ ಸಮಯದಲ್ಲೇ ಇದೇ ವೇಣುಸ್ವಾಮಿ ಬಳಿ ಹೋಗಿ ‘ರಾಜಶ್ಯಾಮಲ' ಪೂಜೆ ಮಾಡಿಸಿದ್ರು. ಸೋಷಿಯಲ್ ಮಿಡಿಯಾದಲ್ಲಿ ಆ ಪೂಜೆಯ ವಿಡಿಯೋಸ್ ವೈರಲ್ ಆಗಿದ್ವು. ಟಾಲಿವುಡ್ನಲ್ಲಿ ಸೂಪರ್ ಸಕ್ಸಸ್ ಕಂಡ ರಶ್ಮಿಕಾ ಮುಂದೆ ಬಾಲಿವುಡ್ನಲ್ಲೂ ಕ್ವೀನ್ ಆದ್ರು. ನ್ಯಾಷನಲ್ ಕ್ರಶ್ ಪಟ್ಟ ಪಡೆದ್ರು. ರಶ್ಮಿಕಾಳ ಈ ಯಶಸ್ಸಿಗೆ ತಾನು ಪೂಜೆ ಮಾಡಿಸಿದ್ದೇ ಕಾರಣ ಅಂತ ವೇಣುಸ್ವಾಮಿ ಎಲ್ಲೆಡೆ ಪ್ರಚಾರ ಗಿಟ್ಟಿಸಿದ್ದ.
ಹೌದು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಬಗ್ಗೆ ಗಾಸಿಪ್ ಹರಿದಾಡ್ತಾ ಇದ್ದ ಟೈಂನಲ್ಲಿ ಆ ಬಗ್ಗೆಯೂ ವೇಣುಸ್ವಾಮಿ ಭವಿಷ್ಯ ನುಡಿದಿದ್ದ. ಇವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಳ್ತಾರೆ ಅಂದಿದ್ದ. ಇದೀಗ ವಿಜಯ್-ರಶ್ಮಿಕಾ ಎಂಗೇಜ್ ಆಗಿದ್ದಾರೆ. ಅವರು ಒಂದಾಗ್ತಾರೆ ಅಂತ ಹೇಳಿರೋ ಈ ಸ್ವಾಮಿ, ಅವರಿಗೆ ದೂರವಾಗೋ ಯೋಗ ಇದೆ.. ಕಂಟಕ ಇದೆ ಅಂತಲೂ ಹೇಳಿದ್ದಾನೆ. ಅದು ಸರಿಹೋಗಬೇಕು ಅಂದರೆ ತನ್ನ ಬಳಿ ಬಂದು ಪೂಜೆ ಮಾಡಿಸಬೇಕು ಅಂತಾನೂ ಪ್ರಮೋಷನ್ ಶುರುಮಾಡಿದ್ದಾನೆ. ಹಿಂದೊಮ್ಮೆ ಇವನ ಬಳಿ ಹೋಗಿ ಪೂಜೆ ಮಾಡಿಸಿದ್ದ ರಶ್ಮಿಕಾ ಮತ್ತೆ ಈತನ ಮೊರೆ ಹೋಗ್ತಾರೆ. ಅಥವಾ ಇವನೊಬ್ಬ ನಕಲಿ ಜ್ಯೋತಿಷಿ ಅಂತ ದೂರವಿಡ್ತಾರಾ ಗೊತ್ತಿಲ್ಲ... ಒಟ್ನಲ್ಲಿ ಈ ಸ್ಟಾರ್ ಜೋಡಿ ಬಗ್ಗೆ ಈ ಸೆಲೆಬ್ರಿಟಿ ಜ್ಯೋತಿಷಿ ಚಿತ್ರವಿಚಿತ್ರ ಭವಿಷ್ಯ ಹೇಳಿ ಫ್ಯಾನ್ಸ್ಗೆ ಟೆನ್ಶನ್ ಕೊಡ್ತಾ ಇದ್ದಾನೆ.