Asianet Suvarna News Asianet Suvarna News

ಅಲ್ಲು ಅರವಿಂದ್, ರವಿ ತೇಜಾಗೆ ತಿರುಗೇಟು ನೀಡಿದ ಯಶ್ ಫ್ಯಾನ್ಸ್..!

ಯಶ್ ಸ್ಯಾಂಡಲ್‌ವುಡ್‌ನ ಲಕ್ಕಿ ಸ್ಟಾರ್. ಅಭಿಮಾನಿಗಳ ರಾಕಿಂಗ್ ಸ್ಟಾರ್. ಈಗ ಭಾರತೀಯ ಚಿತ್ರರಂಗಕ್ಕೆ ನ್ಯಾಷನಲ್ ಸ್ಟಾರ್ ಆಗಿದ್ದಾರೆ.
 

ಯಶ್ ಹೀರೋ ಆಗಿ ಎಂಟ್ರಿ ಆಗುತ್ತಿದ್ದಂತೆ ಅವರ ಗುರಿ ಇದ್ದದ್ದು ತನ್ನ ಕಟೌಟ್ ಆಲ್ ಇಂಡಿಯಾದಲ್ಲಿ ನಿಲ್ಲಬೇಕು ಅನ್ನೋದು. ಕೆಜಿಎಫ್‌ನಿಂದ ಆ ಗುರಿಯನ್ನ ಸಾಧಿಸಿ ಆಗಿದೆ. ಇಷ್ಟೆಲ್ಲಾ ಆದ್ಮೇಲೆ ರಾಕಿ ಅಂದ್ರೆ ಉರ್ಕೋಳ್ಳೋರು ಇಲ್ದೆ ಇರ್ತಾರಾ. ಅವ್ರೆಲ್ಲಾ ಈಗ ಒಬ್ಬೊಬ್ರಾಗೆ ಹುತ್ತದಿಂದ ಎದ್ದು ಬರ್ತಿದ್ದಾರೆ ಅಂತ ಯಶ್ ಫ್ಯಾನ್ಸ್(Yash Fans) ಹೇಳ್ತಿದ್ದಾರೆ. ಯಶ್(Yash) ಬೆಳವಣಿಗೆಯನ್ನ ಕೆಲವ್ರಿಗೆ ಸಹಿಸಿಕೊಳ್ಳಾಗ್ತಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್‌ಗಳನ್ನ ಕೊಟ್ಟಿದ್ದಾರೆ ರಾಕಿ ಫ್ಯಾನ್ಸ್. ಇತ್ತೀಚೆಗೆ ತೆಲುಗು ನಟ ರವಿ ತೇಜಾ (Ravi Teja)ಯಶ್ ಬಗ್ಗೆ ಹಗೂರವಾಗಿ ಮಾತಾಡಿದ್ರು. ಇದನ್ನ ನೋಡಿದ್ದ ಯಶ್ ಫ್ಯಾನ್ಸ್ ರವಿ ತೇಜಾ ರಾಕಿಗೆ ಕ್ಷಮೆ ಕೇಳಬೇಕು ಅಂತ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಶ್ ಸಕ್ಸಸ್‌ಫುಲ್‌ ಸ್ಟಾರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಅದನ್ನ ಒಪ್ಪೋಕೆ ಕೆಲವರಿಂದ ಆಗ್ತಿಲ್ಲ. ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್(Allu Aravind) ಕೂಡ ರಾಕಿ ಬಗ್ಗೆ ಉಡಾಫೆಯಾಗಿ ಮಾತಾಡಿದ್ರು. 'KGF' ಬರೋಕ್ಕೆ ಮುಂಚೆ ಯಶ್‌ ಯಾರು.? ಆತ ಎಷ್ಟು ದೊಡ್ಡ ಹೀರೋ ಹೇಳಿ ನೋಡೋಣಾ ಅಂತ ನಾಲಿಗೆ ಮೇಲೆ ಹಿಡಿತ ಇಲ್ಲದಂತೆ ಮಾತಾಡಿದ್ರು.. ಇದನ್ನ ಕೇಳಿಸಿಕೊಂಡ ಫ್ಯಾನ್ಸ್ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಶ್ ವಿರುದ್ಧ ಇವರೆಲ್ಲಾ ಮಾತಾಡ್ತಿರೋದನ್ನ ನೋಡಿದ್ರೆ ರಾಕಿ ಸಿನಿಮಾದ ಒಂದೊಂದು ಡೈಲಾಗ್ಗಳು ಈಗ ಮತ್ತೆ ರಿಪೀಟ್ ಆಗ್ತಿವೆ. ಮಾಸ್ಟರ್ ಪೀಸ್ ಸಿನಿಮಾದಲ್ಲಿ ಯಶ್ ನಮ್ಮನ್ ಕಂಡ್ರೆ ಉರ್ಕೋಳೋರು ಒಬ್ರಾ ಇಬ್ರಾ ಅಂತ ಡೈಲಾಗ್ ಹೊಡೆದಿದ್ರು. ಅಷ್ಟೆ ಅಲ್ಲ ದುಶ್ಮನ್ ಕಹಾ ಹೈ ಅಂದ್ರೆ ಊರ್ತುಂಬಾ ಹೈ ಅಂತ ಹೇಳಿದ್ರು.

ಇದನ್ನೂ ವೀಕ್ಷಿಸಿ:  ಬೆಳ್ಳಿತೆರೆ ಮೇಲೆ ಬೆಳಗುತ್ತಿದೆ ಮತ್ತೊಂದು ದೇಸಿ ಕಥೆ! ಯೋಗರಾಜ್ ಭಟ್-ಬಿ.ಸಿ. ಪಾಟೀಲ್ 'ಗರಡಿ' ಹೇಗಿದೆ?

Video Top Stories