Asianet Suvarna News Asianet Suvarna News

ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ: ಬಿಜೆಪಿ ಆಡಳಿತದಲ್ಲಿ ಬದಲಾಯ್ತು ಭಾರತದ ಚಿತ್ರಣ

ಅಣ್ಣಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಇ ಬಾಲಗುರುಸಾಮಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸಂವಾದ ನಡೆಸಿದ್ದು, ಐಟಿ  ಕ್ಷೇತ್ರದ ಕುರಿತು ಹಲವಾರು ಮಾಹಿತಿ ನೀಡಿದ್ದಾರೆ.
 

ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಐಟಿ ಬಳಕೆಯಾಗುತ್ತಿದ್ದು, ವ್ಯಾಪಾರ, ವೈದ್ಯಕೀಯ ಕ್ಷೇತ್ರ ಹಾಗೂ ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಐಟಿಯು ಪ್ರಾಬಲ್ಯ ಹೊಂದಿದೆ ಎಂದು ಪ್ರೊ. ಇ ಬಾಲಗುರುಸಾಮಿ ತಿಳಿಸಿದರು. ನಾವು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೇವೆ ಆದರೆ ಅದನ್ನು ತೊಡೆದು ಹಾಕಲು ಪಾರದರ್ಶಕತೆ ಬಹಳ ಮುಖ್ಯವಾಗಿದೆ. ಇನ್ನು ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿ ವಿಚಾರವಾಗಿ ಮಾತನಾಡಿ, ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಕ್ಷಿಪ್ರ ಅಭಿವೃದ್ಧಿಯಾಗುತ್ತಿದೆ. ಅದರಲ್ಲೂ ಕೇರಳ, ತಮಿಳುನಾಡಿನಂತಹ ದಕ್ಷಿಣದ ರಾಜ್ಯಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆರ್ಥಿಕ ಮಟ್ಟದಲ್ಲಿ ಮಾತ್ರವಲ್ಲದೆ ಸಾಮಾಜಿಕ ಮಟ್ಟದಲ್ಲಿಯೂ ಬದಲಾವಣೆಗಳಾಗಿವೆ ಎಂದರು.

ಅಫ್ಘಾನಿಸ್ತಾನದಲ್ಲಿ ವಿದ್ಯಾರ್ಥಿನಿಯರ ಓದಿಗೆ ಕೊಳ್ಳಿ: ಇರಾನಿನಲ್ಲಿ ಹಿ ...

Video Top Stories