
Karnataka Business Award: ಶ್ರೀ ದತ್ತಾ ಪ್ರಾಪರ್ಟಿಸ್ ಪ್ರೈಲೀ. ಎಂಡಿ ಕಿರಣ ಪಿ ಭೂಮಾ ಯಶೋಗಾಥೆ
ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ಉತ್ತರ ಕರ್ನಾಟಕ ಆವೃತ್ತಿ ವಿಜೇತರು ಶ್ರೀ ದತ್ತಾ ಪ್ರಾಪರ್ಟಿಸ್ ಪ್ರೈಲೀ. ಎಂಡಿ ಕಿರಣ ಪಿ ಭೂಮಾ ಅವರ ಯಶೋಗಾಥೆ ಇಲ್ಲಿದೆ
ಬೆಂಗಳೂರು (ಜೂನ್ 15): ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ (Karnataka Business Award) ಅನ್ನು ನೀಡಲಾಗುತ್ತಿದೆ. ಈ ಬಾರಿಯ ಉತ್ತರ ಕರ್ನಾಟಕ ಆವೃತ್ತಿಯ ವಿಜೇತರು ಶ್ರೀದತ್ತಾ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ನ (sridatta properties pvt ltd ) ವ್ಯವಸ್ಥಾಪಕ ನಿರ್ದೇಶಕ ಕಿರಣ್. ಪಿ. ಭೂಮಾ (MD Kiran P Bhum).
ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 20118ರಲ್ಲಿ ಆರಂಭವಾದ ಶ್ರೀದತ್ತ ಪಾಪ್ರರ್ಟೀಸ್ ಉತ್ತರ ಕರ್ನಾಟಕದಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದು ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ಕಿರಣ್ ಭೂಮಾ ವಿವರಿಸಿದ್ದಾರೆ.
Karnataka Business Award: ಸೈನೋ ಆರ್ಟ್ನ ಶ್ರೀಕಾಂತ್ ಯಾಕಪುರ ಯಶಸ್ಸಿನ ಸೂತ್ರ