- Home
- News
- State
- Karnataka News Live: ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್
Karnataka News Live: ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್

ಬೆಂಗಳೂರು: ಕಳೆದ ತಿಂಗಳು ಸಾರ್ವಜನಿಕರು ಕಳೆದುಕೊಂಡಿದ್ದ 1.75 ಕೋಟಿ ರು. ಮೌಲ್ಯದ 692 ಮೊಬೈಲ್ಗಳನ್ನು ಪತ್ತೆ ಹಚ್ಚಿ ಈಶಾನ್ಯ ವಿಭಾಗದ ಪೊಲೀಸರು ಮರಳಿಸಿದ್ದಾರೆ.
ಯಲಹಂಕ-83, ಯಲಂಹಕ ನ್ಯೂ ಟೌನ್-76, ಕೊಡಿಗೇಹಳ್ಳಿ-66, ವಿದ್ಯಾರಣ್ಯಪುರ-86, ಸಂಪಿಗೆಹಳ್ಳಿ -107, ಕೊತ್ತನೂರು-70, ಬಾಗಲೂರು-85, ಅಮೃತಹಳ್ಳಿ-66, ಚಿಕ್ಕಜಾಲ-34, ದೇವನಹಳ್ಳಿ-12 ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ-07 ಸೇರಿದಂತೆ ಒಟ್ಟು ಈಶಾನ್ಯ ವಿಭಾಗದ 11 ಠಾಣೆಗಳ ಪೊಲೀಸರು ಒಟ್ಟು 692 ಮೊಬೈಲ್ ಪತ್ತೆ ಹಚ್ಚಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮೊಬೈಲ್ ಪತ್ತೆ ತಂಡ ರಚನೆ
ಮೊಬೈಲ್ಗಳ ಕಳ್ಳತನ ಪತ್ತೆಗೆ ಪ್ರತಿ ವಿಭಾಗದಲ್ಲಿ ತಂಡ ರಚಿಸಲಾಗಿದೆ. ಮೊಬೈಲ್ ಕಣ್ಮರೆ ಬಗ್ಗೆ ಸಿಇಐರ್ ಪೋರ್ಟಲ್ನಲ್ಲಿ ದೂರು ದಾಖಲಾದ ಕೂಡಲೇ ಪೊಲೀಸರು ಕಾರ್ಯಾಚರಣೆಗಿಳಿಯುತ್ತಾರೆ. ಅಂತೆಯೇ ಏಪ್ರಿಲ್ ತಿಂಗಳಲ್ಲಿ ಈಶಾನ್ಯ ವಿಭಾಗದ ಪೊಲೀಸರು ಉತ್ತಮ ಕಾರ್ಯನಿರ್ವಹಣೆ ತೊರಿದ್ದಾರೆ ಎಂದು ಆಯುಕ್ತರು ಶ್ಲಾಘಿಸಿದರು. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಹ ಕಳವು ಮೊಬೈಲ್ಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೊಬೈಲ್ ಕಳ್ಳತನ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮೊಬೈಲ್ ಕಳ್ಳತನವಾದ ಕೂಡಲೇ ಸಿಇಐಆರ್ ಪೋರ್ಟಲ್ನಲ್ಲಿ ಸಾರ್ವಜನಿಕರು ದೂರು ದಾಖಲಿಸಿದರೆ ತನಿಖೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
Karnataka News Live 6 May 2026ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್
Karnataka News Live 6 May 2026ವಿಶ್ವದಲ್ಲಿ ಬಿಜೆಪಿಯಷ್ಟು ಮೋಸಗಾರರು ಯಾರಿಲ್ಲ - ಸಚಿವ ಈಶ್ವರ್ ಖಂಡ್ರೆ ಆಕ್ರೋಶ
ಚುನಾವಣಾ ಆಯೋಗ ಯಾರ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಅದು ಮಾಧ್ಯಮಗಳಿಗೂ ಗೊತ್ತಿದೆ. ವಿಶ್ವದಲ್ಲಿ ಬಿಜೆಪಿಯಷ್ಟು ಮೋಸಗಾರರು ಯಾರಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Karnataka News Live 6 May 2026ಪಾರ್ಲಿಮೆಂಟ್ಗೆ ಹೇಳಿದ್ದಲ್ಲಿ ಸೀಟು ಕೊಡ್ತೀನಿ - ಶಿವಣ್ಣಗೆ ಡಿಕೆಶಿ ಭರ್ಜರಿ ಆಫರ್- ನಟ ಹೇಳಿದ್ದೇನು?
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಟ ಶಿವರಾಜ್ಕುಮಾರ್ಗೆ ರಾಜಕೀಯಕ್ಕೆ ಬರುವಂತೆ ಆಫರ್ ನೀಡಿದ್ದರು. ಆದರೆ, ತಮ್ಮ ತಂದೆಯ ಬಳುವಳಿಯಾದ ನಟನೆಯಲ್ಲೇ ಮುಂದುವರೆಯುವುದಾಗಿ ಹೇಳಿ ಶಿವಣ್ಣ ಈ ಆಹ್ವಾನಕ್ಕೆ ನಟ ಏನಂದ್ರು? ತಮಿಳುನಾಡಿನಂತೆ ಕರ್ನಾಟಕದಲ್ಲಿ ನಟರು ರಾಜಕೀಯದಲ್ಲಿ ಯಶಸ್ವಿಯಾಗುವುದು ಕಷ್ಟ ಎಂಬ ವಿಶ್ಲೇಷಣೆಯನ್ನೂ ಈ ಲೇಖನ ಒಳಗೊಂಡಿದೆ.
Karnataka News Live 6 May 2026ತಾಯಿ ಕಣ್ಮರೆ - ಬಂಡೀಪುರದಲ್ಲಿ ಅನಾಥ ಹುಲಿ ಮರಿಗಳ ಅದ್ಭುತ ಬದುಕಿನ ರೋಚಕ ಕಥೆ ಇಲ್ಲಿದೆ!
ಅದು ನಾಲ್ಕು ಮರಿಗಳನ್ನು ಹೊಂದಿದ್ದ ತಾಯಿ ಹುಲಿ. ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಒಂದು ದಿನ ಮರಿಗಳನ್ನು ಬಿಟ್ಟು ಕಣ್ಮರೆ ಆಯ್ತು. ತಾಯಿ ಇಲ್ಲದೆ ಅನಾಥವಾದ ನಾಲ್ಕುಹುಲಿ ಮರಿಗಳನ್ನು ಅರಣ್ಯ ಇಲಾಖೆಯಿಂದ..
Karnataka News Live 6 May 2026ಕನಕಗಿರಿ ಉತ್ಸವಕ್ಕೆ ಸಿದ್ಧತೆ ಕೈಗೊಳ್ಳಿ - ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಟ್ನಾಳ ಹೇಳಿದ್ದೇನು?
ಸಮೀಪದ ಐತಿಹಾಸಿಕ ಕನಕಗಿರಿಯಲ್ಲಿ ಮೇ.16 ಮತ್ತು 17 ರಂದು ನಡೆಯುವ ಕನಕಗಿರಿ ಉತ್ಸವದ ಸಿದ್ದತೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಿರಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.
Karnataka News Live 6 May 2026ಈ ಗೆಲುವಿಗೆ ನೀವು ಅರ್ಹರು - ಟಿವಿಕೆ ಗೆಲುವಿನ ಬಳಿಕ ವಿಜಯ್ಗೆ ಸೆಲೆಬ್ರಿಟಿಗಳ ಅಭಿನಂದನೆ
‘ವಿಜಯ್ ಅವರೇ ಈ ಗೆಲುವಿಗೆ ನೀವು ಅರ್ಹರು’ ಎಂದಿರುವ ಶಿವಣ್ಣ, ‘ಹಿಂದೊಮ್ಮೆ ನಾನು ಟಿವಿಕೆ ಅಂದರೆ ಟ್ರೈ ವಿಜಯ್ ಆ್ಯಸ್ ಕಿಂಗ್ ಎಂದು ತಮಾಷೆಯಾಗಿ ಹೇಳಿದ್ದೆ ಎಂದರು ಶಿವರಾಜ್ ಕುಮಾರ್.
Karnataka News Live 6 May 2026ʻಕಾಮಿಡಿ ಟೈಮ್ʼ ಕಾರ್ಯಕ್ರಮವೇ ನನ್ನನ್ನ ಚಿತ್ರರಂಗಕ್ಕೆ ಕರೆತಂದಿದ್ದು - ಗೋಲ್ಡನ್ ಸ್ಟಾರ್ ಗಣೇಶ್
ʻಕಾಮಿಡಿ ಟೈಮ್ʼ ಕಾರ್ಯಕ್ರಮವೇ ನನ್ನನ್ನ ಚಿತ್ರರಂಗಕ್ಕೆ ಕರೆತಂದಿದ್ದು. ಬೃಂದಾವಿಹಾರಿ ಚಿತ್ರದ ಮೊದಲ ಹಾಡು ರಾಮ ರಾಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು ಗೋಲ್ಡನ್ ಸ್ಟಾರ್ ಗಣೇಶ್.
Karnataka News Live 6 May 2026ಜಲಪಾತದಲ್ಲಿ ಮಿಂದೆದ್ದ ರಾಧಿಕಾ ಪಂಡಿತ್; ಮಕ್ಕಳೊಂದಿಗೆ 'ಕಾಡಿನ ರಾಣಿ'ಯಾದ ನಟಿ ಪೋಸ್ಟ್ಗೆ ಫ್ಯಾನ್ಸ್ ಫಿದಾ!
ಕೇವಲ ಪ್ರಕೃತಿ ಸೌಂದರ್ಯ ಸವಿಯುವುದು ಮಾತ್ರವಲ್ಲದೆ, ರಾಧಿಕಾ ಇಲ್ಲಿ ಸಾಹಸವನ್ನೂ ಮಾಡಿದ್ದಾರೆ. ಸುಡು ಬೇಸಿಗೆಯ ನಡುವೆಯೂ ಯಾರಿಗೂ ತಿಳಿಯದ, ಅಸ್ಪೃಶ್ಯವಾಗಿರುವ ಕಾಡಿನ ಹಾದಿಯಲ್ಲಿ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ. ಮರಗಳನ್ನು ಹತ್ತಿ, ತೊರೆಯ ಪಕ್ಕದ ಜಾರುಬಂಡೆ ಹತ್ತಿದ್ದಾರೆ.
Karnataka News Live 6 May 2026ತುಮಕೂರಿನ ಜೆರಾಕ್ಸ್ ಅಂಗಡಿಯಲ್ಲಿ ಲವ್ - ಗರ್ಭಿಣಿ ಪತ್ನಿ ಬಿಟ್ಟು ಮತ್ತೊಂದು ಮದ್ವೆಗೆ ರೆಡಿಯಾದ ಪತಿ
Karnataka News Live 6 May 2026ಅಕ್ಕನಿಗಿಂತ್ಲೂ ಒಂದ್ ಹೆಜ್ಜೆ ಮುಂದೆ..? ಒಂದೇ ಒಂದು ಹಾಡಿಗೆ ಪ್ಯಾನ್ ಇಂಡಿಯಾ ಸಿಂಗರ್ ಆದ ಮಂಗ್ಲಿ ತಂಗಿ!
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಸಿನೆಪಲ್ಲೆ ತಾಂಡಾದಲ್ಲಿ ಜನಿಸಿದ ಈ ಬಂಜಾರ (ಲಂಬಾಣಿ) ಕುವರಿ, ಬಾಲ್ಯದಿಂದಲೇ ಕಲೆಯ ಮಡಿಲಲ್ಲಿ ಬೆಳೆದವರು. ಮೊದಲು 'ಬೋಲ್ ಬೇಬಿ ಬೋಲ್' ಎಂಬ ರಿಯಾಲಿಟಿ ಶೋ ಮೂಲಕ ಕ್ಯಾಮೆರಾ ಎದುರಿಸಿದ ಇಂದ್ರವತಿ, ನಂತರ 'ಜಾಜಿಮೊಗುಲಾಲಿ' ಹಾಡಿನ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು.
Karnataka News Live 6 May 2026ಡ್ರೈ ಕ್ಲೀನಿಂಗ್ಗೆ ಕೊಡದೇ ಮನೆಯಲ್ಲಿಯೇ ದುಬಾರಿ ರೇಷ್ಮೆ ಸೀರೆಗಳನ್ನು ತೊಳೆಯೋದು ಹೇಗೆ?
ದುಬಾರಿ ರೇಷ್ಮೆ ಸೀರೆಗಳನ್ನು ಸಾಮಾನ್ಯವಾಗಿ ಡ್ರೈ ಕ್ಲೀನಿಂಗ್ಗೆ ನೀಡಲಾಗುತ್ತದೆ, ಆದರೆ ಮನೆಯಲ್ಲಿಯೇ ಇವುಗಳನ್ನು ಕಾಳಜಿಯಿಂದ ತೊಳೆಯಬಹುದು. ಹೆಚ್ಚು ಉಜ್ಜದೆ ಸೀರೆಯ ಮೃದುತ್ವವನ್ನು ಕಾಪಾಡುವುದು ಹೇಗೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.
Karnataka News Live 6 May 2026ಅರಮನೆಯಲ್ಲಿ ರಾಜನಂತೆ ಇರಬೇಕಿದ್ದ ದರ್ಶನ್ ಸೆರೆಮನೆಯಲ್ಲಿ; ಪತ್ನಿ ವಿಜಯಲಕ್ಷ್ಮೀ ಪೋಸ್ಟ್ಗೆ ಅಪರೂಪದ ಕಾಮೆಂಟ್!
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಕಾಲ ಕಳೆಯುತ್ತಿದ್ದಾರೆ. ಇತ್ತ ಅರಮನೆಯಂತಹ ಮನೆಯಲ್ಲಿ ರಾಜನಂತೆ ಇರಬೇಕಾಗಿದ್ದ ಪತಿ ಜೈಲು ಪಾಲಾಗಿದ್ದರೆ, ಅತ್ತ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ವೈರಲ್ ಆಗ್ತಿದೆ..
Karnataka News Live 6 May 2026Met Gala 2026 - ಪಬ್ಲಿಕ್ನಲ್ಲಿ ತನ್ನ ವರ್ತನೆಯಿಂದಲೇ ವಿವಾದ ಎಬ್ಬಿಸಿದ ರೇಚಲ್ ಜೆಗ್ಲರ್!
Met Gala 2026: ಮೆಟ್ ಗಾಲಾ 2026ರಲ್ಲಿ ನಟಿ ರೇಚಲ್ ಜೆಗ್ಲರ್ ಅವರ ವಿಡಿಯೋ ಒಂದು ಸಖತ್ ವೈರಲ್ ಆಗಿದೆ. ಇದರಲ್ಲಿ ಅವರ ಮುಖದ ಹಾವಭಾವ ನೋಡಿ, ನೆಟ್ಟಿಗರು ನಾನಾ ರೀತಿ ಚರ್ಚೆ ಶುರು ಮಾಡಿದ್ದಾರೆ. ಕೆಲವರಂತೂ ಅವರು ಡ್ರಗ್ಸ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಏನಿದು ವಿವಾದ? ಇಲ್ಲಿದೆ ಪೂರ್ತಿ ಮಾಹಿತಿ.
Karnataka News Live 6 May 2026Mandya - ಒಂದು ವರ್ಷದಲ್ಲಿ 55 ಅಪ್ರಾಪ್ತ ಗರ್ಭಿಣಿಯರ ಸ್ಕ್ಯಾನಿಂಗ್; ಆಘಾತಕಾರಿ ಸತ್ಯ!
Karnataka News Live 6 May 2026ಮನೆ ಗೋಡೆಯಲ್ಲಿ ಸಿಕ್ಕಿದ್ದ ನಾಗರ ಹಾವಿನ 16 ಮೊಟ್ಟೆಗಳಿಗೆ ಕೃತಕ ಕಾವು - ಮರಿಗಳ ರಕ್ಷಣೆ
ಬೆಳ್ತಂಗಡಿಯ ಮನೆಯೊಂದರ ಗೋಡೆಯಲ್ಲಿ ಸಿಕ್ಕ 16 ನಾಗರ ಹಾವಿನ ಮೊಟ್ಟೆಗಳನ್ನು ಉರಗ ಮಿತ್ರ ಸ್ನೇಕ್ ಅನಿಲ್ ರಕ್ಷಿಸಿದ್ದಾರೆ. ಇರುವೆಗಳಿಂದ ಅಪಾಯದಲ್ಲಿದ್ದ ಮೊಟ್ಟೆಗಳಿಗೆ ಕೃತಕ ಕಾವು ನೀಡಿ, ಯಶಸ್ವಿಯಾಗಿ 16 ಮರಿಗಳನ್ನು ಹೊರತಂದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.
Karnataka News Live 6 May 2026ಬಿಸಿಲಿನಿಂದ ರಕ್ಷಣೆಗಾಗಿ ಸವಾರರಿಗೆ ಬಂತು ಟ್ರಾಫಿಕ್ ಸಿಗ್ನಲ್ನಲ್ಲಿ ನೆರಳಿನ ಟೆಂಟ್
Karnataka News Live 6 May 2026ಹಳೆ ಬಾಟಲಿ, ಹಳೆ ಜೀನ್ಸ್; ಮನೆಯಲ್ಲಿರೋ ಈ 6 ವಸ್ತುಗಳಿಂದ ಮಾಡಿ ಸೂಪರ್ ಪ್ಲಾಂಟರ್ಸ್
Karnataka News Live 6 May 2026ಜನಪರ ಯೋಜನೆಗಳ ಹರಿಕಾರ ಯಡಿಯೂರಪ್ಪ
Karnataka News Live 6 May 20268 ವರ್ಷ ಪ್ರೀತಿ, 3 ಗರ್ಭಪಾತ, 35 ಲಕ್ಷ; ಮಹಿಳಾ ಪೇದೆಯಿಂದ ಯಾದಗಿರಿ PSIಗೆ ಲವ್ ದೋಖಾ ಆರೋಪ?
ಇಂಟಲಿಜೆನ್ಸ್PSI ವಿರೇಶ್ ಆಲೂರು, 8 ವರ್ಷಗಳಿಂದ ಪ್ರೀತಿಸುತ್ತಿದ್ದ ಮಹಿಳಾ ಪೇದೆ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ಕುಟುಂಬಕ್ಕೆ 35 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಇದೀಗ ಬೇರೊಬ್ಬರೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.