06:11 AM (IST) May 06

Karnataka News Live 6 May 2026ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ ಮೇಲೆ ಮತ್ತೆ ಚರ್ಚೆ ಅಪ್ರಸ್ತುತ - ಸಚಿವ ಪ್ರಿಯಾಂಕ್

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷರೇ ಹೇಳಿರುವುದರಿಂದ ಆ ಚರ್ಚೆ ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಉಪಚುನಾವಣೆ ಫಲಿತಾಂಶಕ್ಕೂ ಸಚಿವ ಸಂಪುಟ ಪುನಾರಚನೆಗೂ ಯಾವುದೇ ಸಂಬಂಧವಿಲ್ಲ, ಅದು ಒಂದು ಸಹಜ ಪ್ರಕ್ರಿಯೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story
06:02 AM (IST) May 06

Karnataka News Live 6 May 2026ಮುಂದಿನ ವಾರ ಸಿದ್ದು, ಡಿಕೆಗೆ ದಿಲ್ಲಿಗೆ ಬುಲಾವ್‌? ನಾಯಕತ್ವ, ಸಂಪುಟ ಪುನಾರಚನೆ ಚರ್ಚೆ ಸಂಭವ

ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲ ಮತ್ತು ಸಂಪುಟ ಪುನಾರಚನೆ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ. ಕೇರಳದ ಸರ್ಕಾರ ರಚನೆ ಬಳಿಕ, ಸಿಎಂ ಮತ್ತು ಡಿಸಿಎಂ ಅವರನ್ನು ದೆಹಲಿಗೆ ಕರೆಸಿ ಚರ್ಚಿಸುವ ಸಾಧ್ಯತೆಯಿದೆ. ಸರ್ಕಾರಕ್ಕೆ 3 ವರ್ಷ ತುಂಬುವ ಮೊದಲು ಅಥವಾ ನಂತರ ಈ ಗೊಂದಲಕ್ಕೆ ತೆರೆ ಬೀಳಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ.
Read Full Story
05:55 AM (IST) May 06

Karnataka News Live 6 May 20262ನೇ ಸಂಸಾರ ಪೋಷಿಸುವ ವ್ಯಕ್ತಿ ತನ್ನತಾಯಿ ಪೋಷಣೆ ನಿರಾಕರಿಸುವಂತಿಲ್ಲ - ಹೈಕೋರ್ಟ್ ಆದೇಶ

ಎರಡನೇ ಪತ್ನಿ ಮತ್ತು ಮಕ್ಕಳನ್ನು ಪೋಷಿಸುವ ವ್ಯಕ್ತಿ, ತನ್ನ ಮೊದಲ ಪತ್ನಿ ಮತ್ತು ವೃದ್ಧ ತಾಯಿಗೆ ಜೀವನಾಂಶ ನೀಡಲು ಹಣವಿಲ್ಲ ಎಂದು ಹೇಳಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಭಾಗಶಃ ಮಾರ್ಪಡಿಸಿದ ಹೈಕೋರ್ಟ್, ಮೊದಲ ಕುಟುಂಬ ಮತ್ತು ತಾಯಿಯ ಪೋಷಣೆಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸುವಂತೆ ಪತಿಗೆ ಆದೇಶಿಸಿದೆ.
Read Full Story
05:45 AM (IST) May 06

Karnataka News Live 6 May 2026ಶಿರಸಿ-ಬಿಸಿಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳಿಗೆ ತಾತ್ಕಾಲಿಕ ನಿಷೇಧ; ಪರ್ಯಾಯ ಮಾರ್ಗ ಸೂಚನೆ

ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಶಿರಸಿ-ಬಿಸಿಲಕೊಪ್ಪ ಮಾರ್ಗದಲ್ಲಿ ಮೇ 7ರ ವರೆಗೆ ಲಾರಿ, ಬಸ್, ಟೆಂಪೋ ಟ್ರಾವೆಲ್ಲರ್‌ಗಳಂತಹ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದು, ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
Read Full Story
05:39 AM (IST) May 06

Karnataka News Live 6 May 2026Mysuru - ರಸ್ತೆಬದಿಯಲ್ಲಿ ಮೂತ್ರವಿಸರ್ಜನೆ ತಡೆಗೆ ಕಾಂಪೌಂಡ್‌ಗೆ ಕನ್ನಡಿಗಳ ಅಳವಡಿಕೆ

ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಸ್ಥಾನದ ಗುರಿಯೊಂದಿಗೆ, ಮೈಸೂರು ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ವಿಶಿಷ್ಟ ಯೋಜನೆ ಕೈಗೊಂಡಿದೆ. ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರಾಯೋಗಿಕವಾಗಿ ಕನ್ನಡಿಗಳನ್ನು ಅಳವಡಿಸಿದೆ.

Read Full Story
05:28 AM (IST) May 06

Karnataka News Live 6 May 2026ಬೆಳಗಾವಿಯ ಅಥಣಿಗೆ ಬರಲಿದೆ ಕವರ್ಡ್ ಕಂಡಕ್ಟರ್ ಕೇಬಲ್‌ - ಹೆಸ್ಕಾಂ ಹೊಸ ಮಾಸ್ಟರ್ ಪ್ಲಾನ್

ಅಥಣಿ ಪಟ್ಟಣದಲ್ಲಿ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಮತ್ತು ನಿರಂತರ ವಿದ್ಯುತ್ ಪೂರೈಸಲು ಹೆಸ್ಕಾಂ ಹೊಸ ಮಾಸ್ಟರ್ ಪ್ಲಾನ್ ರೂಪಿಸಿದೆ. ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ, ಹಳೆಯ ವಿದ್ಯುತ್ ತಂತಿಗಳನ್ನು ತೆಗೆದು, ಸುರಕ್ಷಿತವಾದ ಕವರ್ಡ್ ಕಂಡಕ್ಟರ್ ಕೇಬಲ್‌ಗಳನ್ನು ಅಳವಡಿಸುವ ಮಹತ್ವದ ಯೋಜನೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ.
Read Full Story
05:10 AM (IST) May 06

Karnataka News Live 6 May 2026ಮಳೆ ನಿಂತರೂ ನಿಲ್ಲದ ಬೆಂಗಳೂರಿನ ಸಂಕಷ್ಟದ ಕಥೆ; ವಾರ ಕಳೆದರೂ ಬಿದ್ದ ಮರಗಳ ತೆರವು ಇಲ್ಲ

ಏಪ್ರಿಲ್ 29ರ ಭೀಕರ ಮಳೆಗೆ ಬೆಂಗಳೂರಿನಲ್ಲಿ ಬಿದ್ದ ನೂರಾರು ಮರಗಳು ಮತ್ತು ಕಟ್ಟಿಕೊಂಡ ಚರಂಡಿಗಳ ತೆರವು ಕಾರ್ಯ ಒಂದು ವಾರವಾದರೂ ಪೂರ್ಣಗೊಂಡಿಲ್ಲ. ಓಕಳಿಪುರದಂತಹ ಪ್ರದೇಶಗಳಲ್ಲಿ ಇನ್ನೂ ನೀರು ನಿಂತಿದ್ದು, ಮತ್ತೊಂದು ಮಳೆಯ ಭೀತಿ ನಗರದ ಜನರನ್ನು ಕಾಡುತ್ತಿದೆ.
Read Full Story