MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಜಲಪಾತದಲ್ಲಿ ಮಿಂದೆದ್ದ ರಾಧಿಕಾ ಪಂಡಿತ್; ಮಕ್ಕಳೊಂದಿಗೆ 'ಕಾಡಿನ ರಾಣಿ'ಯಾದ ನಟಿ ಪೋಸ್ಟ್‌ಗೆ ಫ್ಯಾನ್ಸ್ ಫಿದಾ!

ಜಲಪಾತದಲ್ಲಿ ಮಿಂದೆದ್ದ ರಾಧಿಕಾ ಪಂಡಿತ್; ಮಕ್ಕಳೊಂದಿಗೆ 'ಕಾಡಿನ ರಾಣಿ'ಯಾದ ನಟಿ ಪೋಸ್ಟ್‌ಗೆ ಫ್ಯಾನ್ಸ್ ಫಿದಾ!

ಕೇವಲ ಪ್ರಕೃತಿ ಸೌಂದರ್ಯ ಸವಿಯುವುದು ಮಾತ್ರವಲ್ಲದೆ, ರಾಧಿಕಾ ಇಲ್ಲಿ ಸಾಹಸವನ್ನೂ ಮಾಡಿದ್ದಾರೆ. ಸುಡು ಬೇಸಿಗೆಯ ನಡುವೆಯೂ ಯಾರಿಗೂ ತಿಳಿಯದ, ಅಸ್ಪೃಶ್ಯವಾಗಿರುವ ಕಾಡಿನ ಹಾದಿಯಲ್ಲಿ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ. ಮರಗಳನ್ನು ಹತ್ತಿ, ತೊರೆಯ ಪಕ್ಕದ ಜಾರುಬಂಡೆ ಹತ್ತಿದ್ದಾರೆ.

2 Min read
Author : Shriram Bhat
Published : May 06 2026, 01:49 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Instagram

ಸ್ಯಾಂಡಲ್‌ವುಡ್ ಸಿಂಡ್ರೆಲಾ ಈಗ ಕಾಡಿನ ರಾಣಿ! ಪ್ರಕೃತಿಯ ಮಡಿಲಲ್ಲಿ ರಾಧಿಕಾ ಪಂಡಿತ್ ಸಾಹಸ; ಪೋಸ್ಟ್ ನೋಡಿ ಫ್ಯಾನ್ಸ್ ಫಿದಾ!

ಸ್ಯಾಂಡಲ್‌ವುಡ್‌ನ ಪ್ರೀತಿಯ 'ಸಿಂಡ್ರೆಲಾ' ಮತ್ತು ರಾಕಿಂಗ್ ಸ್ಟಾರ್ ಯಶ್ (Yash) ಅವರ ಪತ್ನಿ ರಾಧಿಕಾ ಪಂಡಿತ್ (Radhika Pandit) ಅವರು ಬೆಳ್ಳಿತೆರೆಯಿಂದ ಸ್ವಲ್ಪ ದೂರವಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

28
Image Credit : Instagram

ಇತ್ತೀಚೆಗೆ ರಾಧಿಕಾ ಪಂಡಿತ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಗ್ಲಾಮರ್ ಲೋಕದ ಮಿಂಚಿನಿಂದ ಕೊಂಚ ವಿರಾಮ ಪಡೆದಿರುವ ರಾಧಿಕಾ, ಈಗ ದಟ್ಟ ಕಾಡಿನ ಮಧ್ಯೆ ಅಡ್ವೆಂಚರ್ ಮಾಡುತ್ತಾ ಪ್ರಕೃತಿಯ ಸೌಂದರ್ಯಕ್ಕೆ ಮಾರುಹೋಗಿದ್ದಾರೆ.

Related Articles

Related image1
ಅರಮನೆಯಲ್ಲಿ ರಾಜನಂತೆ ಇರಬೇಕಿದ್ದ ದರ್ಶನ್ ಸೆರೆಮನೆಯಲ್ಲಿ; ಪತ್ನಿ ವಿಜಯಲಕ್ಷ್ಮೀ ಪೋಸ್ಟ್‌ಗೆ ಅಪರೂಪದ ಕಾಮೆಂಟ್!
Related image2
ಅಕ್ಕನಿಗಿಂತ್ಲೂ ಒಂದ್ ಹೆಜ್ಜೆ ಮುಂದೆ..? ಒಂದೇ ಒಂದು ಹಾಡಿಗೆ ಪ್ಯಾನ್ ಇಂಡಿಯಾ ಸಿಂಗರ್ ಆಗಿರೋ ಮಂಗ್ಲಿ ತಂಗಿ!
38
Image Credit : Instagram

ತಮ್ಮ ಕಾಡಿನ ಪಯಣದ ಬಗ್ಗೆ ರಾಧಿಕಾ ಪಂಡಿತ್ ತುಂಬಾ ಅದ್ಭುತವಾಗಿ ಬರೆದುಕೊಂಡಿದ್ದಾರೆ. "ಗಾಳಿಯು ನಿಮ್ಮ ಕಿವಿಗಳಲ್ಲಿ ಪಿಸುಗುಟ್ಟುವ ಕಾಡಿನ ಮಧ್ಯೆ ನಡಿಗೆಯ ಅನುಭವವೇ ಬೇರೆ. ಎಲೆಗಳ ಮರ್ಮರ ಸದ್ದು, ಕೊಂಬೆಗಳು ಮುರಿಯುವ ಶಬ್ದ ಮತ್ತು ಹಕ್ಕಿಗಳ ಚಿಲಿಪಿಲಿ ಗಾನ... ಇವೆಲ್ಲವೂ ಸೇರಿ ಒಂದು ಅದ್ಭುತ ಸಂಗೀತ ಸಂಯೋಜನೆಯಂತೆ ಭಾಸವಾಗುತ್ತಿತ್ತು" ಎಂದು ಅವರು ಪ್ರಕೃತಿಯ ಮಡಿಲಲ್ಲಿ ಕಳೆದ ಕ್ಷಣಗಳನ್ನು ವರ್ಣಿಸಿದ್ದಾರೆ.

48
Image Credit : Instagram

ಕೇವಲ ಪ್ರಕೃತಿ ಸೌಂದರ್ಯ ಸವಿಯುವುದು ಮಾತ್ರವಲ್ಲದೆ, ರಾಧಿಕಾ ಇಲ್ಲಿ ಸಾಹಸವನ್ನೂ ಮಾಡಿದ್ದಾರೆ. ಸುಡು ಬೇಸಿಗೆಯ ನಡುವೆಯೂ ಯಾರಿಗೂ ತಿಳಿಯದ, ಅಸ್ಪೃಶ್ಯವಾಗಿರುವ ಕಾಡಿನ ಹಾದಿಯಲ್ಲಿ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ. ಮರಗಳನ್ನು ಹತ್ತಿ, ತೊರೆಯ ಪಕ್ಕದ ಜಾರುಬಂಡೆಗಳ ಮೇಲೆ ಜಾಗರೂಕತೆಯಿಂದ ಹೆಜ್ಜೆ ಇಡುತ್ತಾ ಸಾಗಿದ್ದಾರೆ.

58
Image Credit : Instagram

ಇಷ್ಟೆಲ್ಲಾ ಕಷ್ಟಪಟ್ಟು ಸಾಗಿದ ಮೇಲೆ ಸಿಕ್ಕ ಆ ಸುಂದರ ಜಲಪಾತ, ಅವರ ಶರೀರದ ಪ್ರತಿಯೊಂದು ಕಣದಲ್ಲಿದ್ದ ಸುಸ್ತನ್ನು ಕ್ಷಣಾರ್ಧದಲ್ಲಿ ಮಾಯವಾಗುವಂತೆ ಮಾಡಿತಂತೆ. ಆ ಸ್ವಚ್ಛವಾದ ನೀರಿನಲ್ಲಿ ಮಿಂದು ರಾಧಿಕಾ ಫುಲ್ ರಿಫ್ರೆಶ್ ಆಗಿದ್ದಾರೆ.

68
Image Credit : Instagram

ಈ ಅದ್ಭುತ ಮತ್ತು ಸಾಹಸಮಯ ಪ್ರವಾಸವನ್ನು ಆಯೋಜಿಸಿದ ಗೋವಾದ ಬ್ಯಾಕ್‌ಪ್ಯಾಕರ್ ತಂಡಕ್ಕೆ (@that_goan_backpacker) ರಾಧಿಕಾ ಧನ್ಯವಾದ ಅರ್ಪಿಸಿದ್ದಾರೆ.

78
Image Credit : Instagram

"ನಿಮ್ಮ ಅಚ್ಚುಕಟ್ಟಾದ ಯೋಜನೆ ಮತ್ತು ಪ್ರತಿಯೊಂದು ಸಣ್ಣ ವಿಷಯದ ಬಗ್ಗೆ ನೀವು ವಹಿಸಿದ ಕಾಳಜಿಗೆ ದೊಡ್ಡ ಧನ್ಯವಾದಗಳು. ನಾವೆಲ್ಲರೂ ಈ ಟ್ರೆಕ್ಕಿಂಗ್ ಅನ್ನು ದೀರ್ಘಕಾಲದವರೆಗೆ ನೆನಪಿಸಿಕೊಳ್ಳುತ್ತೇವೆ" ಎಂದು ಅವರು ಬರೆದುಕೊಂಡಿದ್ದಾರೆ.

88
Image Credit : Instagram

ರಾಧಿಕಾ ಅವರ ಈ ಸಾಹಸಮಯ ಅವತಾರ ನೋಡಿ ಅಭಿಮಾನಿಗಳು "ನಮ್ಮ ಸಿಂಡ್ರೆಲಾ ಈಗ ರಿಯಲ್ ಲೈಫ್ ಅಡ್ವೆಂಚರ್ ಕ್ವೀನ್ ಆಗಿದ್ದಾರೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಯಶ್ ಅವರ 'ಟಾಕ್ಸಿಕ್' ಸಿನಿಮಾ ಸುದ್ದಿಗಳ ನಡುವೆ ರಾಧಿಕಾ ಅವರ ಈ ಕೂಲ್ ಪೋಸ್ಟ್ ಅಭಿಮಾನಿಗಳಿಗೆ ಸಖತ್ ಕಿಕ್ ನೀಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ರಾಧಿಕಾ ಪಂಡಿತ್
ಯಶ್
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ವೈರಲ್ ಸುದ್ದಿ

Latest Videos
Recommended Stories
Recommended image1
ಅರಮನೆಯಲ್ಲಿ ರಾಜನಂತೆ ಇರಬೇಕಿದ್ದ ದರ್ಶನ್ ಸೆರೆಮನೆಯಲ್ಲಿ; ಪತ್ನಿ ವಿಜಯಲಕ್ಷ್ಮೀ ಪೋಸ್ಟ್‌ಗೆ ಅಪರೂಪದ ಕಾಮೆಂಟ್!
Recommended image2
ಪತ್ನಿ ವಜ್ರದೋಲೆ ಕಳೆದಾಗ ಹುಡುಕಿ ಕೊಟ್ಟಿದ್ದ ಕೊರಗಜ್ಜ: ರೋಚಕ ಘಟನೆ ನೆನೆದ ವಿಜಯ ರಾಘವೇಂದ್ರ
Recommended image3
Dr Rajkumar fans protest: ಅಣ್ಣಾವ್ರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ನಟ ಚೇತನ್ ಗಡಿಪಾರಿಗೆ ಹೆಚ್ಚಿದ ಒತ್ತಡ, ರಾಜ್ಯಾದ್ಯಂತ ಡಾ ರಾಜ್ ಫ್ಯಾನ್ಸ್ ಪ್ರತಿಭಟನೆ!
Related Stories
Recommended image1
ಅರಮನೆಯಲ್ಲಿ ರಾಜನಂತೆ ಇರಬೇಕಿದ್ದ ದರ್ಶನ್ ಸೆರೆಮನೆಯಲ್ಲಿ; ಪತ್ನಿ ವಿಜಯಲಕ್ಷ್ಮೀ ಪೋಸ್ಟ್‌ಗೆ ಅಪರೂಪದ ಕಾಮೆಂಟ್!
Recommended image2
ಅಕ್ಕನಿಗಿಂತ್ಲೂ ಒಂದ್ ಹೆಜ್ಜೆ ಮುಂದೆ..? ಒಂದೇ ಒಂದು ಹಾಡಿಗೆ ಪ್ಯಾನ್ ಇಂಡಿಯಾ ಸಿಂಗರ್ ಆಗಿರೋ ಮಂಗ್ಲಿ ತಂಗಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved