10:46 PM (IST) Jul 05

Karnataka News Live 5th July 2025 ಐಫೋನ್ 17 ಬಿಡುಗಡೆಗೂ ಮೊದಲೇ ಐಫೋನ್ 16 ಬೆಲೆ ಬರೋಬ್ಬರಿ 13,000 ರೂ ಕಡಿತ

ಐಫೋನ್ 17 ಬಿಡುಗಡೆಗೆ ಕೆಲ ತಿಂಗಳು ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ 2024ರಲ್ಲಿ ಬಿಡುಗಡೆಯಾದ ಐಫೋನ್ 16 ಬೆಲೆ ಬರೋಬ್ಬರಿ 13,000 ರೂಪಾಯಿ ಕಡಿತಗೊಂಡಿದೆ.

Read Full Story
10:24 PM (IST) Jul 05

Karnataka News Live 5th July 2025 ಶಿವಮೊಗ್ಗ - ಗಣಪತಿ ವಾಸುಕಿ ವಿಗ್ರಹ ಒದ್ದು ಅವಮಾನಿಸಿದ ಅನ್ಯಕೋಮಿನ ಯುವಕರು; ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ!

 ಕಟ್ಟೆಯ ಮೇಲಿದ್ದ ಗಣಪತಿ ಮತ್ತು ಶೇಷನಾಗ (ವಾಸುಕಿ) ವಿಗ್ರಹಗಳನ್ನು ಅನ್ಯಕೋಮಿನ ಯುವಕರ ಗುಂಪು ಕಾಲಿನಿಂದ ಒದ್ದು ಚರಂಡಿಗೆ ಎಸೆದು ಹಿಂದೂ ದೇವರುಗಳಿಗೆ ಅವಮಾನ ಮಾಡಿದ ಘಟನೆ ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಡೆದಿದೆ.

Read Full Story
09:53 PM (IST) Jul 05

Karnataka News Live 5th July 2025 Nisha Ravikrishnan - ನೆಚ್ಚಿನ ನಟ-ನಟಿ ಹೆಸ್ರು ಹೇಳಲು ಪರದಾಡಿದ 'ಅಣ್ಣಯ್ಯ' ಪಾರು! ಟ್ರೋಲರ್ಸ್​ ಕೇಳ್ಬೇಕಾ?

ಗಟ್ಟಿಮೇಳದ ರೌಡಿ ಬೇಬಿ ಇದೀಗ ಅಣ್ಣಯ್ಯ ಸೀರಿಯಲ್​ ಪಾರು ಆಗಿ ಸಕತ್​ ಮನರಂಜನೆ ನೀಡುತ್ತಿದ್ದಾರೆ. ಆದರೆ ನೆಚ್ಚಿನ ನಟ-ನಟಿಯರ ಹೆಸರು ಹೇಳಿ ಎಂದಾಗ ಪರದಾಡಿ ಟ್ರೋಲ್​ಗೆ ಒಳಗಾಗಿದ್ದಾರೆ. ಆಗಿದ್ದೇನು ನೋಡಿ!

Read Full Story
09:41 PM (IST) Jul 05

Karnataka News Live 5th July 2025 ಭಾರತ 427 ರನ್‌ಗೆ ಡಿಕ್ಲೇರ್, ಇಂಗ್ಲೆಂಡ್‌ಗೆ ಬೃಹತ್ 608 ರನ್ ಟಾರ್ಗೆಟ್

2ನೇ ಇನ್ನಿಂಗ್ಸ್‌ನಲ್ಲಿ ಭಾರತ 6 ವಿಕೆಟ್ ಕಳೆದು 427 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ 608 ರನ್ ಟಾರ್ಗೆಟ್ ನೀಡಲಾಗಿದೆ.

Read Full Story
09:28 PM (IST) Jul 05

Karnataka News Live 5th July 2025 Fatima Shaikh - ಅಲ್ಲಿ ಅಪ್ಪ ಎಂದೋಳು, ಇಲ್ಲಿ ಲವರ್​ ಆದಳು! ಜನರ ಟೀಕೆಗೆ ಆಮೀರ್​ ಗರಂ - ಏನಿದು ವಿವಾದ?

ಒಂದು ಚಿತ್ರದಲ್ಲಿ ಆಮೀರ್​ ಖಾನ್​ ಮಗಳ ಪಾತ್ರ ಮಾಡಿದ ನಟಿ ಫಾತೀಮಾ ಇನ್ನೊಂದು ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ್ದು ಸಕತ್​ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ನಟ ಹೇಳಿದ್ದೇನು?

Read Full Story
09:12 PM (IST) Jul 05

Karnataka News Live 5th July 2025 ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಬೆನ್ನಲ್ಲೇ ಹಸುವಿನ ಮೇಲೆ ಮತ್ತೊಂದು ಹೇಯ ಕೃತ್ಯ

ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಂತ ಹೇಯ ಕೃತ್ಯ ದಾಖಲಾಗಿದೆ. ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ನಡೆದ ಈ ಘಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉದ್ದೇಶದಿಂದ ಈ ಕೃತ್ಯ ಎಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

Read Full Story
09:02 PM (IST) Jul 05

Karnataka News Live 5th July 2025 ತಮನ್ನಾ ವಿವಾದದಿಂದಾಗಿ ಮೈಸೂರು ಸ್ಯಾಂಡಲ್ ವುಡ್ ಸೋಪ್ ಮಾರಾಟದಲ್ಲಿ ಭಾರೀ ಏರಿಕೆ!

ವಿವಾದದ ನಡುವೆಯೂ ಮೈಸೂರು ಸ್ಯಾಂಡಲ್ ಸೋಪ್ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ತಮನ್ನಾ ಭಾಟಿಯಾ ಅವರನ್ನು ಬ್ರಾಂಡ್ ರಾಯಭಾರಿಯಾಗಿ ನೇಮಿಸಿದ ನಂತರ ₹186 ಕೋಟಿ ಮಾರಾಟವಾಗಿದೆ. 2028ರ ವೇಳೆಗೆ ₹5,000 ಕೋಟಿ ಆದಾಯದ ಗುರಿಯನ್ನು ಕಂಪನಿ ಹೊಂದಿದೆ.
Read Full Story
08:53 PM (IST) Jul 05

Karnataka News Live 5th July 2025 ಸಿನಿಮಾಕ್ಕೆ ಬರುವಾಗ ನನಗೆ ಪರೀಕ್ಷೆನೇ ಮಾಡಿರಲಿಲ್ಲ! ನಟಿ ಮಿಲನಾ ನಾಗರಾಜ್​ ಅಚ್ಚರಿಯ ಹೇಳಿಕೆ...

ಚಾರ್ಲಿ, ವಿಕ್ರಾಂತ್ ರೋಣ, ಬೃಂದಾವನ ಸೇರಿದಂತೆ ಹಲವು ಬ್ಲಾಕ್​ಬಸ್ಟರ್​ ಸಿನಿಮಾ ಕೊಟ್ಟಿರುವ ನಟಿ ಮಿಲನಾ ನಾಗರಾಜ್​ ತಮಗೆ ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಿರುವ ಅವಕಾಶಗಳ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?

Read Full Story
08:38 PM (IST) Jul 05

Karnataka News Live 5th July 2025 ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣು, ಆಗಲೇ ಗೊತ್ತಾಗಿದ್ದು 40 ವರ್ಷ ಹಳೇ ಕೊಲೆ ಪ್ರಕರಣ

ಸಣ್ಣ ಗ್ರಾಮದಲ್ಲಿ ನಡೆದ ಕೊಲೆ ಪೊಲೀಸರಿಗೆ ಗೊತ್ತೆ ಆಗಲಿಲ್ಲ. ಸಹಜ ಸಾವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಪ್ರಕರಣ ಕ್ಲೋಸ್ ಮಾಡಿದ್ದರು. ಆದರೆ ಕೊಲೆ ಮಾಡಿದ ಆರೋಪಿಗೆ ಪಶ್ಚಾತ್ತಾಪ ಶುರುವಾಗಿದೆ. 40 ವರ್ಷದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇದರೊಂದಿಗೆ ಹಳೇ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.

Read Full Story
08:12 PM (IST) Jul 05

Karnataka News Live 5th July 2025 ದ್ವಿತಕದ ಬಳಿಕ ಸೆಂಚುರಿ ಸಿಡಿಸಿದ ಶುಬ್‌ಮನ್ ಗಿಲ್, ಹೊಸ ದಾಖಲೆ ಬರೆದ ಭಾರತದ ನಾಯಕ

ಟೀಂ ಇಂಡಿಯಾ ನಾಯಕ ಶುಬ್‌ಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ. 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲೂ ಗಿಲ್ ಸೆಂಚುರಿ ಸಿಡಿಸಿದ್ದರೆ. ಈ ಮೂಲಕ ಹಲವು ದಾಖಲೆ ಬರೆದಿದ್ದಾರೆ.

Read Full Story
07:48 PM (IST) Jul 05

Karnataka News Live 5th July 2025 ಕೊಡಗು ಹಾಸ್ಟೆಲ್‌ನಲ್ಲಿ ಆಹಾರ ಚೋರಿ ವಾರ್ಡನ್‌, ಕಳವು ಸಾಬೀತಾದರೂ ಕ್ರಮ ಕೈಗೊಳ್ಳದ ಇಲಾಖೆ

ಕೊಡಗು ಜಿಲ್ಲೆಯ ಕುಶಾಲನಗರದ ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್‌ನಲ್ಲಿ ವಾರ್ಡನ್ ಶಕುಂತಲ ಆಹಾರ ಪದಾರ್ಥಗಳನ್ನು ಕದ್ದು ಬೇರೆ ಹಾಸ್ಟೆಲ್‌ಗೆ ಸಾಗಿಸಿದ್ದಾರೆ. ಪೊಲೀಸರು ದಾಳಿ ನಡೆಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ವಾರ್ಡನ್ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ.
Read Full Story
07:40 PM (IST) Jul 05

Karnataka News Live 5th July 2025 ಪುತ್ತೂರು ಲವ್-ಸೆ*ಕ್ಸ್-ದೋಖಾ - ಕೊನೆಗೂ ಬಿಜೆಪಿ ಮುಖಂಡನ ಪುತ್ರ ಬಂಧನ, ತಂದೆ ಕೂಡ ಅರೆಸ್ಟ್

ಪುತ್ತೂರಿನಲ್ಲಿ ನಡೆದ ಲವ್-ಸೆ*ಕ್ಸ್-ದೋಖಾ ಪ್ರಕರಣದಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಪುತ್ರ ಕೃಷ್ಣ ಜೆ. ರಾವ್ ಬಂಧಿತರಾಗಿದ್ದಾರೆ. ಮೈಸೂರಿನಲ್ಲಿ ಕೃಷ್ಣನನ್ನು ಬಂಧಿಸಿದ ಬಳಿಕ, ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read Full Story
07:38 PM (IST) Jul 05

Karnataka News Live 5th July 2025 ಮತ್ತೊಮ್ಮೆ ಅಬ್ಬರಿಸಿದ ವೈಭವ್‌ ಸೂರ್ಯವಂಶಿ, ಇಂಗ್ಲೆಂಡ್‌ ಬೌಲರ್‌ಗಳ ಚೆಂಡಾಡಿದ ಯುವ ಬ್ಯಾಟ್ಸ್‌ಮನ್‌!

ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತದ ಅಂಡರ್‌-19 ತಂಡದ 14 ವರ್ಷದ ವೈಭವ್‌ ಸೂರ್ಯವಂಶಿ ಯೂತ್‌ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಒಟ್ಟಾರೆ 78 ಎಸೆತಗಳಲ್ಲಿ 143 ರನ್‌ ಸಿಡಿಸಿದರು.
Read Full Story
07:13 PM (IST) Jul 05

Karnataka News Live 5th July 2025 ಶಾಲಿನಿ ರಜನೀಶ್ ಬಗ್ಗೆ ರವಿಕುಮಾರ್‌ ಅವಹೇಳನಕಾರಿ ಹೇಳಿಕೆ, ಕಠಿಣ ಕಾನೂನಿಗೆ ಬಾನು ಮುಷ್ತಾಕ್ ಒತ್ತಾಯ

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು, ಶಾಲಿನಿ ರಜನೀಶ್ ವಿವಾದ, ಕೇರಳ ಸರ್ಕಾರದ ಆಹ್ವಾನ, ತಮ್ಮ ಬರವಣಿಗೆಯ ವೈಶಾಲ್ಯತೆ ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಕುರಿತು ಮಾತನಾಡಿದರು.
Read Full Story
06:56 PM (IST) Jul 05

Karnataka News Live 5th July 2025 ವಾಹನ ಸವಾರರಿಗೆ ಹೊಸ ನಿಯಮ, BIS ಪ್ರಮಾಣೀಕೃತ ISI ಹೆಲ್ಮೆಟ್ ಕಡ್ಡಾಯ

ಕಳಪೆ ಹೆಲ್ಮೆಟ್‌ಗೆ ಕೇಂದ್ರ ಸರ್ಕಾರ ತಡೆ ನೀಡಿದೆ. ದ್ವಿಚಕ್ರ ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್‌ ಕಡ್ಡಾಯವಾಗಿದೆ. ಕಡಿಮೆ ಬೆಲೆ ಎಂದು ಯಾವುದೋ ಹೆಲ್ಮೆಟ್ ಇನ್ನು ಬಳಸುವಂತಿಲ್ಲ.

Read Full Story
06:30 PM (IST) Jul 05

Karnataka News Live 5th July 2025 ಕುಡಿದು ಬಂದ ಪತಿಗೆ ರಾಗಿ ಮುದ್ದೆ ಕೋಲಿನಿಂದ ಮಂಗಳರಾತಿ, ದುರಂತ ಅಂತ್ಯ ಕಂಡ ಗಂಡ

ಮನೆಗೆ ಕುಡಿದು ಬಂದ ತನ್ನ ಕೈಯಲ್ಲಿದ್ದ ರಾಗಿ ಮುದ್ದೆ ಲಟ್ಟಿಸುವ ಕೋಲಿನಿಂದ ಒಂದೇ ಒಂದು ಏಟು ಹೊಡೆದಿದ್ದಾಳೆ. ಇಷ್ಟೇ ನೋಡಿ ಪತಿ ಅಲ್ಲೆ ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಲ್ಲಿ ನಡೆದಿದೆ.

Read Full Story
06:23 PM (IST) Jul 05

Karnataka News Live 5th July 2025 ಗೆಳತಿಗೆ ಲಿಪ್‌ಲಾಕ್‌ ಮಾಡಿ ವೈರಲ್‌ ಆದ ನಟಿ ಸಂಯುಕ್ತಾ ಹೆಗ್ಡೆ, ಮದುವೆ ಹುಡುಗ ಕಂಗಾಲ್‌!

ನಟಿ ಸಂಯುಕ್ತಾ ಹೆಗ್ಡೆ ತಮ್ಮ ಗೆಳತಿಯ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಗೆಳತಿಗೆ ಮುತ್ತಿಟ್ಟ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story
06:20 PM (IST) Jul 05

Karnataka News Live 5th July 2025 ಕಿರಿಕ್‌ ನಟಿಯ ವಿವಾದಾತ್ಮಕ ಹೇಳಿಕೆ, ರಶ್ಮಿಕಾ ಮಂದಣ್ಣ ಪರ ನಿಂತ ಹರ್ಷಿಕಾ ಪೂಣಚ್ಚ

ರಶ್ಮಿಕಾ ಮಂದಣ್ಣ ಅವರ ವಿವಾದಾತ್ಮಕ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊಡವ ಸಮುದಾಯದ ಹಲವು ನಟಿಯರ ಸಾಧನೆಯನ್ನು ಸ್ಮರಿಸಿದ್ದಾರೆ. ರಶ್ಮಿಕಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.
Read Full Story
05:53 PM (IST) Jul 05

Karnataka News Live 5th July 2025 ಅಕ್ಕಿ ತೊಳೆದ ನೀರಿನ ಈ 6 ಅದ್ಭುತ ಪ್ರಯೋಜನ ತಿಳಿದರೆ ನೀವು ಇನ್ನೆಂದು ಚೆಲ್ಲುವುದಿಲ್ಲ! ಬಳಸುವುದು ಹೇಗೆ?

ಅಕ್ಕಿ ತೊಳೆದ ನೀರು ವೇಸ್ಟ್ ಅಂದುಕೊಂಡು ಚೆಲ್ಲುವುದೇ ಹೆಚ್ಚು. ಆದರೆ ಆ ನೀರಿನಲ್ಲಿ ಅದೆಷ್ಟೋ ಉಪಯೋಗಗಳಿವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಗೊತ್ತಾದ್ರೆ ಇನ್ಮುಂದೆ ನೀವು ಅಕ್ಕಿ ತೊಳೆದ ನೀರು ಚೆಲ್ಲುವುದಿಲ್ಲ. ಉಪಯೋಗಗಳೇನು ಅನ್ನೋದು ಇಲ್ಲಿ ತಿಳಿಯೋಣ.

Read Full Story
05:46 PM (IST) Jul 05

Karnataka News Live 5th July 2025 'ಹಸುಗಳಿಗೆ ಐವಿಎಫ್‌ ಮೂಲಕ ಕರು ಮಾಡಿಸ್ತಾರೆ..' ಗಂಡನಿಲ್ಲದೆ ಗರ್ಭಿಣಿಯಾದ ಭಾವನಾ ಖಡಕ್‌ ಮಾತು!

ನಟಿ ಭಾವನಾ ರಾಮಣ್ಣ ಅವರು ಐವಿಎಫ್‌ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಮದುವೆಯಾಗದೆ ತಾಯ್ತನವನ್ನು ಸ್ವೀಕರಿಸುವ ತಮ್ಮ ಹಕ್ಕನ್ನು ಎತ್ತಿ ಹಿಡಿದಿದ್ದಾರೆ. ಸಮಾಜದಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ವಿಷಯದ ಬಗ್ಗೆ ಭಾವನಾ ಅವರ ನಿಲುವು ಏನು?
Read Full Story