ದುಲೀಪ್ ಟ್ರೋಫಿಯಲ್ಲಿ ಮಿಂಚುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರ ಬೌಲಿಂಗ್ ಶೈಲಿಯನ್ನು ಕಂಡು ದಿಗ್ಗಜ ಯುವರಾಜ್ ಸಿಂಗ್ ಫಿದಾ ಆಗಿದ್ದಾರೆ. "ನನಗಿಂತ ನಿನ್ನ ಬೌಲಿಂಗ್ ಆಕ್ಷನ್ ಬೆಟರ್" ಎಂದು ಯುವಿ ಕಾಮೆಂಟ್ ಮಾಡಿದ್ದು, ವೈಭವ್ ಬ್ಯಾಟಿಂಗ್ನಲ್ಲಿ 92 ರನ್ ಸಿಡಿಸಿ ಆಲ್ರೌಂಡ್ ಪ್ರದರ್ಶನ ನೀಡಿದ್ದಾರೆ.
- Home
- News
- State
- Karnataka News Live 31 August 2026: ಯುವಿ ಅಂತೆಯೇ ಸೇಮ್ ಟು ಸೇಮ್ - ಸೂರ್ಯವಂಶಿ ಬೌಲಿಂಗ್ ಸ್ಟೈಲ್ಗೆ ಸಿಕ್ಸರ್ ಕಿಂಗ್ ಕಾಮೆಂಟ್
Karnataka News Live 31 August 2026: ಯುವಿ ಅಂತೆಯೇ ಸೇಮ್ ಟು ಸೇಮ್ - ಸೂರ್ಯವಂಶಿ ಬೌಲಿಂಗ್ ಸ್ಟೈಲ್ಗೆ ಸಿಕ್ಸರ್ ಕಿಂಗ್ ಕಾಮೆಂಟ್

ವಿಜಯಪುರ: ಪಾದಯಾತ್ರೆ ಬಿಜೆಪಿಯ ನಿರ್ಧಾರವಾಗಿದೆ. ನಾಗೇಂದ್ರ ರಾಜೀನಾಮೆಗೆ ಅವರೂ ಕಾರಣವಾಗಿರಬಹುದು, ಜೊತೆಗೆ ರಾಜೀನಾಮೆ ನಮ್ಮ ಪಕ್ಷದ ನಿರ್ಧಾರವೂ ಆಗಿರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಬಿಜೆಪಿಗೆ ಟಾಂಗ್ ನೀಡಿದರು.
ಸಚಿವ ನಾಗೇಂದ್ರ ರಾಜೀನಾಮೆ ಬಳಿಕವೂ ಬಿಜೆಪಿ ಪಾದಯಾತ್ರೆ ಮಾಡುತ್ತಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಅಷ್ಟೇ ಅಲ್ಲ ವಾಲ್ಮೀಕಿ ಹಗರಣದ ಹಣ ಎಲ್ಲಿ ಹೋಯ್ತು ಎಂದು ಬಿಜೆಪಿ ಪ್ರಶ್ನೆ ಮಾಡಿದ್ದು, ಹಣದ ಕುರಿತು ಸದನದಲ್ಲೇ ಮಾಹಿತಿ ನೀಡಲಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹಾಗೂ ಈಗ ಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಸಹ ಹೇಳಿದ್ದಾರೆ ಎಂದರು.
ಎರಡು ಸಚಿವ ಸ್ಥಾನ ಖಾಲಿ ಹಾಗೂ ಮಹಿಳೆಯರಿಗೆ ಅವಕಾಶ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಯಾರಿಗೆ ಏನು ಕೊಡಬೇಕೆಂದು ತೀರ್ಮಾನಿಸಲಾಗುತ್ತದೆ ಎಂದರು. ವಿಜಯಪುರಕ್ಕೆ ಮತ್ತೊಂದು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯದ ವಿಚಾರವಾಗಿ ಮಾತನಾಡಿ, ಹಿಂದೆ ಎರಡು ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿ ಒಂದು ಸಚಿವ ಸ್ಥಾನ ಮಾತ್ರ ನೀಡಲಾಗಿದೆ. ಇನ್ನೊಂದು ಸಚಿವ ಸ್ಥಾನ ಸಿಗಬೇಕಿತ್ತು, ಕಾರಣಾಂತರಗಳಿಂದ ನೀಡಿಲ್ಲ. ಎಲ್ಲದಕ್ಕೂ ಕಾಯಬೇಕಾಗುತ್ತದೆ, ಸಮಯ ಬಂದಾಗ ಅವಕಾಶ ಸಿಗುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Karnataka News Live 31 August 2026ಯುವಿ ಅಂತೆಯೇ ಸೇಮ್ ಟು ಸೇಮ್ - ಸೂರ್ಯವಂಶಿ ಬೌಲಿಂಗ್ ಸ್ಟೈಲ್ಗೆ ಸಿಕ್ಸರ್ ಕಿಂಗ್ ಕಾಮೆಂಟ್
Karnataka News Live 31 August 2026Success Story; ಚಿಕಿತ್ಸೆಗೆ ಹಣವಿಲ್ಲದೆ ತತ್ತರಿಸಿದ್ದ ಬಡ ಕಾರ್ಮಿಕನ ಮಗ - ಫುಟ್ಬಾಲ್ ದಂತಕಥೆ ಮೆಸ್ಸಿಯ ಒಟ್ಟು ಆಸ್ತಿ ಎಷ್ಟು ಗೊತ್ತಾ?
Karnataka News Live 31 August 202644 ವರ್ಷಗಳ ಇತಿಹಾಸವಿರೋ ಕೋನಿಗರಹಳ್ಳಿ ಬ್ರಿಡ್ಜ್ ಕುಸಿತ, 1982ರಲ್ಲಿ ಮಾಜಿ ಸಿಎಂ ಗುಂಡೂರಾವ್ ಉದ್ಘಾಟಿಸಿದ್ದರು
ಮಾಜಿ ಸಿಎಂ ದಿ. ಗುಂಡೂರಾವ್ 1982ರಲ್ಲಿ ಉದ್ಘಾಟಿಸಿದ್ದ ಚಳ್ಳಕೆರೆಯ ಕೋನಿಗರಹಳ್ಳಿ ಸೇತುವೆ ಈಗ ಕುಸಿತ ಕಂಡಿದ್ದು 15 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
Karnataka News Live 31 August 2026125 ವರ್ಷಗಳ ಹಳೆಯ ದಾಖಲೆ ಉಡೀಸ್ - ಆಗಸ್ಟ್ನ ಕಹಿ ಸತ್ಯ ಬಿಚ್ಚಿಟ್ಟ IMD, ಸೆಪ್ಟೆಂಬರ್ ಕುರಿತು ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
Karnataka News Live 31 August 2026ಆಸ್ಪತ್ರೆಯಲ್ಲಿ ಕಂಡ ಸಾವು-ಬದುಕು - ನಟಿ ಶ್ರೀಲೀಲಾ ನಟನೆಯನ್ನೇ ಬದಲಿಸಿದ ಆ ಅನುಭವವೇನು?
ನಟಿ ಶ್ರೀಲೀಲಾ ಆಸ್ಪತ್ರೆಯಲ್ಲಿ ಬದುಕು-ಸಾವು, ರೋಗಿಗಳು ಮತ್ತು ಕುಟುಂಬಗಳ ಭಾವನಾತ್ಮಕ ಹೋರಾಟಗಳನ್ನು ಹತ್ತಿರದಿಂದ ಕಂಡ ಅನುಭವ ತಮ್ಮ ಸಂವೇದನೆ ಹಾಗೂ ಪಾತ್ರಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನವನ್ನು ಬದಲಿಸಿದೆ ಎಂದು ಶ್ರೀಲೀಲಾ ಹೇಳಿದ್ದಾರೆ.
Karnataka News Live 31 August 2026ಬಂಡೀಪುರ, ನಾಗರಹೊಳೆ ಸಫಾರಿ ದರ ಭಾರೀ ಏರಿಕೆ.. ಇದು ಪ್ರವಾಸೋದ್ಯಮಕ್ಕೇ ದೊಡ್ಡ ಹೊಡೆತ..!
ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇಂದಿನಿಂದ ಸಫಾರಿ ದರ ಭಾರಿ ಏರಿಕೆಯಾಗಿದೆ. ವಯಸ್ಕರ ಟಿಕೆಟ್ 1,000 ರೂ.ಗೆ ಹಾಗೂ ಜೀಪ್ ಸಫಾರಿ ದರ 1,500 ರೂ.ಗೆ ಏರಿಕೆಯಾಗಿದ್ದು, ಪ್ರವಾಸಿಗರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
Karnataka News Live 31 August 2026'ಇದು ಡಾರ್ಕ್ಫೀಲ್ಡ್ ಪೊಲೀಸ್ ಸ್ಟೇಷನ್' ವೈಟ್ಫೀಲ್ಡ್ ಪೊಲೀಸ್ ಸ್ಟೇಷನ್ಗೆ ಮತ್ತೊಮ್ಮೆ ಹೈಕೋರ್ಟ್ ಚಾಟಿ
ಸಿವಿಲ್ ವಿವಾದದಲ್ಲಿ ಮಧ್ಯಪ್ರವೇಶಿಸಿ ಕಾಂಪೌಂಡ್ ಕೆಡವಿದ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್ ವೈಟ್ಫೀಲ್ಡ್ ಪೊಲೀಸ್ ಠಾಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಠಾಣೆಯನ್ನು 'ಡಾರ್ಕ್ ಫೀಲ್ಡ್' ಎಂದು ಹಿಂದಿನ ಪೀಠ ಕರೆದಿದ್ದನ್ನು ಕೋರ್ಟ್ ಉಲ್ಲೇಖಿಸಿದೆ.
Karnataka News Live 31 August 2026Cyber - ಕಲಬುರಗಿಯಲ್ಲಿ ಭೀಕರ ಸೈಬರ್ ವಂಚನೆ; 'ಡಿಜಿಟಲ್ ಅರೆಸ್ಟ್' ನೆಪದಲ್ಲಿ ವೈದ್ಯನಿಗೆ 1.79 ಕೋಟಿ ರೂ. ಟೋಪಿ!
Karnataka News Live 31 August 2026ಹುಟ್ಟುಹಬ್ಬಕ್ಕೆ ʻಕಿಂಗ್-ಸೈಜ್ʼ ಗಿಫ್ಟ್ - ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಕಿಚ್ಚ ಸುದೀಪ್?
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾದ ಅಧಿಕೃತ ಘೋಷಣೆ ನಡೆಯಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ‘ಕಿಂಗ್-ಸೈಜ್’ ಪ್ರಾಜೆಕ್ಟ್ನಲ್ಲಿ ಸುದೀಪ್ ಕೃಷ್ಣದೇವರಾಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Karnataka News Live 31 August 2026'ಸಿನಿಮಾ ತಡವಾದ್ರೆ ಏನಾಗುತ್ತೆ?' ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಹೇಳಿಕೊಂಡ ಸೀಕ್ರೆಟ್ ಇಲ್ಲಿದೆ ನೋಡಿ!
"ಸಿನಿಮಾ ಕೊಟ್ಟೇ ತೀರಬೇಕು ಎಂಬ ಹಠಕ್ಕೆ ಬಿದ್ದು, ಕೇವಲ ಐದೂವರೆ ತಿಂಗಳಲ್ಲಿ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಮುಗಿಸಿದ್ದೇನೆ. ಕಳೆದ 120 ದಿನಗಳ ಕಾಲ 80 ಲೊಕೇಶನ್ಗಳು ಮತ್ತು 22 ಸೆಟ್ಗಳಲ್ಲಿ ಹಗಲಿರುಳು ನಿದ್ದೆಗೆಟ್ಟು ಕೆಲಸ ಮಾಡಿದ್ದೇವೆ.' ಎಂದಿದ್ದಾರೆ ಸುದೀಪ್. ಇನ್ನೇನು ಹೇಳಿದ್ದಾರೆ ನೋಡಿ..
Karnataka News Live 31 August 2026ವಿಧಾನಸೌಧದಿಂದ ತೆರಳಲು ಕಾರಿನ ಡ್ರೈವರ್ಗಾಗಿ ಕಾದು ನಿಂತ ಸಿಎಂ ಡಿಕೆಶಿ, ಸಿಂಪಲ್ ನಡೆಗೆ ಮೆಚ್ಚುಗೆ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನ ಸೌಧದಿಂದ ತೆರಳಲು ಹೊರಗೆ ಆಗಮಿಸಿದ್ದಾರೆ.ಕಾರಿನತ್ತ ಬಂದು ಡಿಕೆ ಶಿವಕುಮಾರ್ ಕಾರಿನ ಡ್ರೈವರ್ಗದಾಗಿ ಕಾದು ನಿಂತ ಘಟನೆ ನಡೆದಿದೆ. ಮುಂದೇನಾಯಿತು?
Karnataka News Live 31 August 202612ನೇ ವಯಸ್ಸಿಗೆ ಹುಡುಗರಾಗಿ ಬದಲಾಗೋ ಹುಡುಗಿಯರು - ಈ ಹಳ್ಳಿಯ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!
ಡೊಮಿನಿಕನ್ ರಿಪಬ್ಲಿಕ್ ದೇಶದ ಲಾಸ್ ಸಲಿನಾಸ್ ಅನ್ನೋ ಹಳ್ಳಿಯೊಂದು ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದೆ. ಇಲ್ಲಿ ಹುಟ್ಟುವ ಕೆಲವು ಮಕ್ಕಳು ನೋಡೋಕೆ ಹೆಣ್ಣುಮಕ್ಕಳಂತೆ ಇರ್ತಾರೆ, ಹಾಗೇ ಬೆಳೀತಾರೆ. ಆದ್ರೆ 12 ವರ್ಷ ತುಂಬುತ್ತಿದ್ದಂತೆ ಹುಡುಗರಾಗಿ ಬದಲಾಗಿಬಿಡ್ತಾರೆ.
Karnataka News Live 31 August 2026Love Failure - ಮನವೊಲಿಸಿದರೂ ಕೇಳ್ತಿಲ್ಲ, ಒನ್ಸೈಡ್ ಲವ್ ಸಿಗದೇ ಇಳಿಯಲ್ಲ; ಟವರ್ ಏರಿ ಕುಳಿತ ಭಗ್ನ ಪ್ರೇಮಿ!
ಕೊಪ್ಪಳದ ಗಂಗಾವತಿಯಲ್ಲಿ ಯುವತಿಯೊಬ್ಬಳನ್ನು ಒನ್ಸೈಡ್ ಪ್ರೀತಿಸುತ್ತಿದ್ದ ರಾಜು ಎಂಬ ಯುವಕ, ಆಕೆ ಪ್ರೀತಿ ನಿರಾಕರಿಸಿದ್ದಕ್ಕೆ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಮುಂದೆ ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
Karnataka News Live 31 August 2026ರಾಯರ ಮಧ್ಯಾರಾಧನೆಗೆ ಮಂತ್ರಾಲಯದಲ್ಲಿ ಭಕ್ತಿಯ ಮಹಾಪೂರ - ಚಿನ್ನದ ರಥೋತ್ಸವ ಕಣ್ತುಂಬಿಕೊಂಡ ಭಕ್ತರು
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ರಾಯರ ಮಧ್ಯಾರಾಧನೆಯನ್ನು ವೈಭವದಿಂದ ಆಚರಿಸಲಾಯಿತು. ಮಹಾ ಪಂಚಾಮೃತಾಭಿಷೇಕ, ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Karnataka News Live 31 August 2026Bigg Boss ಹಿಸ್ಟರಿಯಲ್ಲೇ ಬಿಗ್ ಅಪ್ಡೇಟ್ಸ್.. ಸೇತುಪತಿ, ಮೋಹನ್ ಲಾಲ್, ನಾಗಾರ್ಜುನ ಜೊತೆ ಕಿಚ್ಚನ ಜುಗಲ್ಬಂದಿ..! VIDEO
ದಕ್ಷಿಣ ಭಾರತದ ಸೂಪರ್ಸ್ಟಾರ್ಗಳಾದ ಕಿಚ್ಚ ಸುದೀಪ್, ಮೋಹನ್ ಲಾಲ್, ವಿಜಯ್ ಸೇತುಪತಿ ಮತ್ತು ನಾಗಾರ್ಜುನ ಒಂದೇ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 6 ರಂದು ನಾಲ್ಕು ಭಾಷೆಗಳ ಸೀಸನ್ಗಳ ಜೊತೆಗೆ ಸಲ್ಮಾನ್ ಖಾನ್ ಅವರ ಹಿಂದಿ ಬಿಗ್ ಬಾಸ್ ಕೂಡ ಏಕಕಾಲದಲ್ಲಿ ಭರ್ಜರಿಯಾಗಿ ಲಾಂಚ್ ಆಗಲಿದೆ. ಈ ಕುರಿತ ಸ್ಟೋರಿ ಇಲ್ಲಿದೆ.
Karnataka News Live 31 August 2026Nepal - ಭಾರತದ ಎಚ್ಚರಿಕೆ ಕಡೆಗಣಿಸಿ ಚೀನಾ ಬಲೆಗೆ ಬಿದ್ದ ನೇಪಾಳ; ಭಾರತೀಯ ರಾಜತಾಂತ್ರಿಕ ದೂರದೃಷ್ಟಿಗೆ ಸಾಟಿಯೇ ಇಲ್ಲ ಎನ್ನುವುದಕ್ಕೆ ಆ ಒಂದು ಕಾರಣವೇ ಸಾಕ್ಷಿ!
Karnataka News Live 31 August 2026ಇದ್ದಕ್ಕಿದ್ದಂತೆ ಯಶ್ಗೆ ಪತ್ರ ಬರೆದ ಸುಮಲತಾ ಅಂಬರೀಷ್.. 'ಟಾಕ್ಸಿಕ್' ಬಗ್ಗೆ ಹೀಗ್ಯಾಕೆ ಅಂದ್ರು?
ಇಡೀ ಚಿತ್ರವು ಒಂದು ದೃಶ್ಯ ವೈಭವವಾಗಿದೆ ಮತ್ತು ನಿಸ್ಸಂದೇಹವಾಗಿ ಇದು ನಿಮಗೆ ಹಾಗೂ ಚಿತ್ರದ ನಿರ್ದೇಶಕರಿಗೆ ಒಂದು ಮಹತ್ವದ ಮೈಲಿಗಲ್ಲು. ಆದರೆ ಪ್ರತಿಯೊಂದು ಫ್ರೇಮ್ನಲ್ಲೂ ನೀವು ನಿಮ್ಮನ್ನೇ ಮೀರಿಸಿರುವುದನ್ನು ಕಂಡು ನನಗೆ ಎಷ್ಟು ಹೆಮ್ಮೆ ಎನಿಸಿತು ಎಂದು ಹೇಳಲು ಸಾಧ್ಯವಿಲ್ಲ. ಒಬ್ಬ ನಟನಾಗಿ ನೀವು ತುಂಬಾ ಬೆಳೆದಿದ್ದೀರಿ ಮತ್ತು ಪ್ರಬುದ್ಧರಾಗಿದ್ದೀರಿ…
Karnataka News Live 31 August 2026ಸುರಂಗ ರಸ್ತೆ ಬಳಿಕ ಸಬರ್ಬನ್ ರೈಲು - ಬೆಂಗಳೂರಿನಲ್ಲಿ ಅದಾನಿ ಕಂಪನಿಗೆ ಮತ್ತೊಂದು ಬೃಹತ್ ಟೆಂಡರ್ ಸಾಧ್ಯತೆ
ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಚುರುಕು ಸಿಕ್ಕಿದ್ದು, ಅದಾನಿ ಗ್ರೂಪ್ ಬೆಂಬಲಿತ 'ಸೆಮಿಂಡಿಯಾ ಪ್ರಾಜೆಕ್ಟ್ಸ್' 665.61 ಕೋಟಿ ರೂ. ಮೌಲ್ಯದ ಕಾಮಗಾರಿಗೆ ಅತ್ಯಂತ ಕಡಿಮೆ ಬಿಡ್ ಸಲ್ಲಿಸಿದೆ.
Karnataka News Live 31 August 2026KPSC ಅಕ್ರಮ; ಜಿಪಂ ಮಾಜಿ ಸಿಇಒ ಜ್ಞಾನೇಂದ್ರಕುಮಾರ್ ಅರೆಸ್ಟ್ ಬೆನ್ನಲ್ಲೇ, ಬಿಜೆಪಿ ಶಾಸಕನ ಆಪ್ತ ಸಹಾಯಕನನ್ನು ವಶಕ್ಕೆ ಪಡೆದ CID!
ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ಬಿಜೆಪಿ ಶಾಸಕನ ಆಪ್ತ ಸಹಾಯಕನನ್ನು ವಶಕ್ಕೆ ಪಡೆದಿದ್ದಾರೆ. ಈತ ಈ ಹಿಂದೆ ಬಂಧಿತರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಎಂಬ ಆರೋಪವಿದೆ.
Karnataka News Live 31 August 2026ಶಿವರಾಮ ಕಾರಂತ ಲೇಔಟ್ ಜಾಗ ಕೊಟ್ಟ ರೈತರಿಗೆ ಗುಡ್ ನ್ಯೂಸ್, ಸೈಟ್ ಬೆಲೆ ಇಳಿಸಿದ ಡಿಕೆ ಶಿವಕುಮಾರ್
ಶಿವರಾಮ ಕಾರಂತ ಬಡಾವಣೆ ಮಾಡಲು ಜಾಗ ಕೊಟ್ಟ ರೈತರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ಸೈಟ್ ನೀಡಲು ಸಿಎಂ ಸೂಚಿಸಿದ್ದಾರೆ.