11:55 PM (IST) Jan 29

Karnataka News Live 29th January: ಸಿಎಂ ಡಿಸಿಎಂ ಫೋಟೋ ಬಳಸಿ ಬಿಜೆಪಿ 'ಸ್ಕ್ಯಾಮ್ ಲಾರ್ಡ್' ಪೋಸ್ಟ್ - ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ ಕಾಂಗ್ರೆಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ 'ಸ್ಕ್ಯಾಮ್ ಲಾರ್ಡ್' ಶೀರ್ಷಿಕೆಯಡಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕಾಗಿ ಬಿಜೆಪಿ ವಿರುದ್ಧ ಕೆಪಿಸಿಸಿ ದೂರು ದಾಖಲಿಸಿದೆ. ಈ ಪೋಸ್ಟ್ ಸರ್ಕಾರದ ಗಣ್ಯರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ ಎಂಬ ಆರೋಪ.

Read Full Story
11:23 PM (IST) Jan 29

Karnataka News Live 29th January: ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಜಿಮ್‌ಖಾನ ಆರಂಭ, ವೀಕೆಂಡ್‌ಗೆ ಪರ್ಫೆಕ್ಟ್ ಸ್ಪಾಟ್

ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಜಿಮ್‌ಖಾನ ಆರಂಭ, ಇಲ್ಲಿ ಆಫ್ ರೋಡ್, ಡ್ರಿಫ್ಟ್, ಜಂಪಿಂಗ್, ಕಂಟ್ರೋಲ್ ಸೇರಿದಂತೆ ಎಲ್ಲಾ ಸ್ಕಿಲ್ ಕಲಿಯಲು ಸಾಧ್ಯವಿದೆ. ಏನಿದು ರಾಯಲ್ ಎನ್‌ಫೀಲ್ಡ್ ಜಿಮ್‌ಖಾನ?

Read Full Story
11:07 PM (IST) Jan 29

Karnataka News Live 29th January: ಗಾಂಧೀಜಿಯನ್ನು ಕೊಂದವರು ಈಗ ಅವರ ಹೆಸರನ್ನೇ ಬದಲಿಸುತ್ತಿದ್ದಾರೆ - ಶಿವಮೊಗ್ಗದಲ್ಲಿ ಕೇಂದ್ರದ ವಿರುದ್ಧ ಡಿಕೆಶಿ ವಾಗ್ದಾಳಿ

ಭದ್ರಾವತಿಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ನರೇಗಾ ಯೋಜನೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

Read Full Story
09:55 PM (IST) Jan 29

Karnataka News Live 29th January: ಪಶ್ಚಿಮ ಘಟ್ಟದ ಎದೆ ಬಗೆದ ಸತ್ಯ - ಅಧ್ಯಯನ ವರದಿ ಬಿಚ್ಚಿಟ್ಟ ಮಹಾ ಅಪಾಯ, ಶೇ. 60.7ರಷ್ಟು ಭೂಕುಸಿತ!

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಕಳೆದ ಎರಡು ದಶಕಗಳಲ್ಲಿ 1,200ಕ್ಕೂ ಹೆಚ್ಚು ಭೂಕುಸಿತಗಳು ಸಂಭವಿಸಿವೆ. ಉತ್ತರ ಕನ್ನಡ ಜಿಲ್ಲೆಯು ಅತಿ ಹೆಚ್ಚು ಅಪಾಯದಲ್ಲಿದ್ದು, ಅವೈಜ್ಞಾನಿಕ ಅಭಿವೃದ್ಧಿ ಮತ್ತು ಮಳೆಯಿಂದಾಗಿ ಭವಿಷ್ಯದಲ್ಲಿ ಶೇ. 60.7ರಷ್ಟು ಭೂಕುಸಿತದ ಸಂಭಾವ್ಯ ಅಪಾಯವಿದೆ.

Read Full Story
09:52 PM (IST) Jan 29

Karnataka News Live 29th January: CCL ಪಂದ್ಯದಲ್ಲಿ ಸುದೀಪ್​ ಕೆಟ್ಟ ಬೈಗುಳ ವಿವಾದ - ಜೋಗಿ ಪ್ರೇಮ್​ ಬುಡಕ್ಕೆ ತಂದಿಟ್ಟ ಕಿಚ್ಚ- ಆಗಿದ್ದೇನು ನೋಡಿ

ಸೆಲೆಬ್ರಿಟಿ ಕ್ರಿಕೇಟ್​ ಲೀಗ್​ ಪಂದ್ಯದಲ್ಲಿ ಬಳಸಿದ ಅವಾಚ್ಯ ಶಬ್ದದ ಬಗ್ಗೆ ಎದ್ದಿದ್ದ ಚರ್ಚೆಗೆ ನಟ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮಾತಿಗೆ ನಿರ್ದೇಶಕ ಜೋಗಿ ಪ್ರೇಮ್ ಅವರೇ ಗುರು ಎಂದು ಹೇಳಿದ ಅವರು, ಕ್ರಿಕೆಟ್ ಮೈದಾನದ ವಾತಾವರಣ ಹಾಗೂ ಕೌಟುಂಬಿಕ ಕಾರ್ಯಕ್ರಮದ ಬಗ್ಗೆ ಹೇಳಿದ್ದೇನು?

Read Full Story
09:37 PM (IST) Jan 29

Karnataka News Live 29th January: ಬೆಂಗಳೂರು - ಫೆ.1ರಂದು ‘ಬ್ಯಾರಿ ಕೂಟ’ದ ಸಂಭ್ರಮ; 15 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ ವಿತರಣೆ, ಆ್ಯಂಬ್ಯುಲೆನ್ಸ್ ಲೋಕಾರ್ಪಣೆ!

ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಭಾಗದ ಬ್ಯಾರಿ ಸಮುದಾಯವನ್ನು ಒಗ್ಗೂಡಿಸಲು 'ಬ್ಯಾರಿಸ್ ಸೆಂಟ್ರಲ್ ಕಮಿಟಿ'ಯು 'ಬ್ಯಾರಿ ಕೂಟ 2026' ಅನ್ನು ಆಯೋಜಿಸುತ್ತಿದೆ. ಫೆಬ್ರವರಿ 1, 2026 ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಆಂಬ್ಯುಲೆನ್ಸ್ ಲೋಕಾರ್ಪಣೆ.

Read Full Story
09:16 PM (IST) Jan 29

Karnataka News Live 29th January: ನಿವೃತ್ತರ ಸರ್ಗದಿಂದ ಡ್ರಗ್ ತಯಾರಿಕರ ಸ್ವರ್ಗವಾಗುತ್ತಿರುವ ಮೈಸೂರು ನಗರ! ಎನ್‌ಸಿಬಿಯಿಂದ ಓರ್ವನ ಬಂಧನ

ಮೈಸೂರಿನ ಹೆಬ್ಬಾಳು ಪ್ರದೇಶದಲ್ಲಿ ಡ್ರಗ್ಸ್ ತಯಾರಿಕಾ ಘಟಕದ ಶಂಕೆಯ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುಜರಾತ್ ಡ್ರಗ್ಸ್ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.

Read Full Story
09:10 PM (IST) Jan 29

Karnataka News Live 29th January: ರಿಶೆಲ್ ಡಿಸೋಜಾ ದುರಂತ ಸಾವು ಕೇಸ್, ಜೆಡಿಎಸ್ ಮುಖಂಡೆ ಪುತ್ರ ಚಿರಾಗ್ ಕೋಠಾರಕರ್ ಅರೆಸ್ಟ್

ರಿಶೆಲ್ ಡಿಸೋಜಾ ದುರಂತ ಸಾವು ಕೇಸ್, ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ರಿಶೆಲ್ ಸಾವಿಗೆ ಕಾರಣವಾಗಿದ್ದ ಆರೋಪಿ ಚಿರಾಗ್ ಕೋಠಾರಕರ್‌ನನ್ನು ಪೊಲೀಸರು 20 ದಿನಗಳ ಹುಡುಕಾಟದ ಬಳಿಕ ಅರೆಸ್ಟ್ ಮಾಡಿದ್ದಾರೆ.

Read Full Story
09:05 PM (IST) Jan 29

Karnataka News Live 29th January: ಒಳ ನುಸುಳುವಿಕೆ ತಡೆಯದ ಕೇಂದ್ರ, ಪತ್ತೆ ಹಚ್ಚದ ರಾಜ್ಯ - ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಪರಸ್ಪರ ದೂಷಣೆ!

ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಸುಮಾರು 25 ಲಕ್ಷ ಅಕ್ರಮ ಬಾಂಗ್ಲಾ ನಿವಾಸಿಗಳಿದ್ದು, ಅವರಿಂದ ಭದ್ರತೆಗೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರವು ವಿಶೇಷ ತಂಡ ರಚಿಸುವ ಭರವಸೆ ನೀಡಿದೆ.

Read Full Story
08:23 PM (IST) Jan 29

Karnataka News Live 29th January: ಲೋಕಾಯುಕ್ತರ ಭರ್ಜರಿ ಬೇಟೆ - ಅರಣ್ಯ ಇಲಾಖೆ ಅಧಿಕಾರಿ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

ಅರಣ್ಯ ಇಲಾಖೆಯ ಸಹಾಯಕ ಆಯುಕ್ತ ತೇಜಸ್ ಕುಮಾರ್ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಚಿತ್ರದುರ್ಗದ ರೆಸಾರ್ಟ್ ಸೇರಿದಂತೆ ಐದು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಅಧಿಕಾರಿಗಳು 26.55 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ, 8 ಐಷಾರಾಮಿ ಮನೆಗಳು ಮತ್ತು 16 ಎಕರೆ ಕೃಷಿ ಜಮೀನಿನ ದಾಖಲೆ ಪತ್ತೆ

Read Full Story
08:13 PM (IST) Jan 29

Karnataka News Live 29th January: ಸುದೀಪ್​ ತಲೆ ಏರಿತು ಲೇಡೀಸ್​ ಹೇರ್​ ಕ್ಲಿಪ್! ಪುರುಷರಿಂದ ಭಾರಿ ಡಿಮಾಂಡು - ಇದೆಲ್ಲಿ ಸಿಗತ್ತೆ?

ಫ್ಯಾಷನ್ ಜಗತ್ತಿನಲ್ಲಿ ಹೆಣ್ಣು-ಗಂಡಿನ ವೇಷಭೂಷಣಗಳು ಅದಲು ಬದಲಾಗುತ್ತಿವೆ. ಹೆಣ್ಣುಮಕ್ಕಳು ಪುರುಷರ ಉಡುಪುಗಳನ್ನು ಅಳವಡಿಸಿಕೊಂಡರೆ, ಇದೀಗ ನಟ ಕಿಚ್ಚ ಸುದೀಪ್ ಅವರ ಹೊಸ ಹೇರ್ ಕ್ಲಿಪ್ ಸ್ಟೈಲ್ ಪುರುಷರಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಈ ಕ್ಲಿಪ್‌ಗಾಗಿ ಅವರ ಅಭಿಮಾನಿಗಳಿಂದ ಭಾರಿ ಬೇಡಿಕೆ ಶುರುವಾಗಿದೆ.
Read Full Story
08:13 PM (IST) Jan 29

Karnataka News Live 29th January: ಬೆಂಗಳೂರು ರಸ್ತೆಯಲ್ಲಿ ವಿದೇಶಿಗನ ಹುಚ್ಚಾಟ, ಕೈಯಲ್ಲಿ ಸಿಗರೇಟ್, ತಲೆಯಲ್ಲಿ ಹೆಡ್‌ಸೆಟ್‌, ನೋ ಹೆಲ್ಮೆಟ್‌!

ಬೆಂಗಳೂರಿನ ಸಿಲ್ಕ್ ಬೋರ್ಡ್ ಫ್ಲೈಓವರ್ ಬಳಿ ವಿದೇಶಿಗನೊಬ್ಬ ಹೆಡ್‌ಫೋನ್ ಧರಿಸಿ, ಸಿಗರೇಟ್ ಸೇದುತ್ತಾ ಅಪಾಯಕಾರಿಯಾಗಿ ಬೈಕ್ ಚಲಾಯಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
Read Full Story
08:07 PM (IST) Jan 29

Karnataka News Live 29th January: ರಿಯಲ್ ಆಗೋಯ್ತಾ 45 ಸಿನಿಮಾ ಕಥೆ..? ಅಜಿತ್ ಪವಾರ್ ಸಾವಿಗೂ- 45 ಚಿತ್ರಕ್ಕೂ ಲಿಂಕ್ ಇದ್ಯಾ?

45 ಸಿನಿಮಾ ತೆರೆಕಂಡು, ಓಟಿಟಿಗೂ ಎಂಟ್ರಿ ಕೊಟ್ಟಿದೆ. ಆದ್ರೆ ಈಗ ಅಜಿತ್ ಪವಾರ್ ಅಪಘಾತದಲ್ಲಿ ತೀರಿದ ಬಳಿಕ, 45 ಸಿನಿಮಾ ಬಗ್ಗೆ ಚರ್ಚೆಯಾಗ್ತಾ ಇದೆ. ಅದು ಕಾಕತಾಳಿಯವೇ ಅಥವಾ ನಿಜವೇ? ಪವಾರ್ ಅಪಘಾತಕ್ಕೂ 45 ಸಂಖ್ಯೆಗೂ ನಂಟಿದೆ. ಥೇಟ್ ಸಿನಿಮಾದ ದೃಶ್ಯದಂತೆ ಕಾಣ್ತಾ ಇದೆ ಈ ಸನ್ನಿವೇಶ..!

Read Full Story
07:47 PM (IST) Jan 29

Karnataka News Live 29th January: ನಿಮ್ಹಾನ್ಸ್‌ ಆಸ್ಪತ್ರೆಗೆ ಅನಂತ್ ಸುಬ್ಬರಾವ್ ದೇಹದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಹೋರಾಟಗಾರ!

ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಹಾಗೂ ಹಿರಿಯ ಕಾರ್ಮಿಕ ನಾಯಕ ಅನಂತ್ ಸುಬ್ಬರಾವ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬದುಕಿದ್ದಾಗ ಕಾರ್ಮಿಕರ ಹಕ್ಕಿಗಾಗಿ ಹೋರಾಡಿದ್ದ ಅವರು, ಸಾವಿನ ನಂತರವೂ ಶರೀರವನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

Read Full Story
07:22 PM (IST) Jan 29

Karnataka News Live 29th January: ಇಂಧನ ಇಲಾಖೆಯಲ್ಲಿ ವರ್ಗಾವಣೆಗೆ ಸಿಎಂ ಪುತ್ರ ಹಸ್ತಕ್ಷೇಪ, ಯಾವ ಸಚಿವರೂ ಕೂಡ ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲವೇ?

ಇಂಧನ ಇಲಾಖೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿದ್ದಾರೆಂಬ ಕಾರಣಕ್ಕೆ ಸಚಿವ ಕೆ.ಜೆ. ಜಾರ್ಜ್ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದರು ಎಂದು ವರದಿಯಾಗಿದೆ.

Read Full Story
07:21 PM (IST) Jan 29

Karnataka News Live 29th January: ಗ್ರಾಮ ಪಂಚಾಯತ್ ಸಮರಕ್ಕೆ ಮುಹೂರ್ತ ಫಿಕ್ಸ್? ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ!

Gram Panchayat Elections 2026 ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ. 2026-31ನೇ ಸಾಲಿನ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ಅಧಿಕೃತ ಸೂಚನೆ ಹೊರಡಿಸಿದೆ

Read Full Story
07:02 PM (IST) Jan 29

Karnataka News Live 29th January: ಬೆಂಗಳೂರು ಚೀಟಿ ವ್ಯವಹಾರ ಇತ್ಯರ್ಥಕ್ಕೆ ₹4 ಲಕ್ಷ ಲಂಚ ಬೇಡಿಕೆ; ಹಣ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್!

ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು, ಚೀಟಿ ವ್ಯವಹಾರದ ಪ್ರಕರಣವೊಂದನ್ನು ಇತ್ಯರ್ಥಪಡಿಸಲು ₹4 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹಣ ಸಮೇತ ಆರೋಪಿ ಇನ್ಸ್‌ಪೆಕ್ಟರ್‌ನನ್ನು ಬಂಧಿಸಿದ್ದಾರೆ.

Read Full Story
06:55 PM (IST) Jan 29

Karnataka News Live 29th January: ಬಾಗಲಕೋಟೆ - ಮೇಲ್ತಂತಿ ತಗುಲಿ ಧಗಧಗ ಹೊತ್ತಿ ಉರಿದ ಟ್ರ್ಯಾಕ್ಟರ್; ಕಣ್ಣೆದುರೇ ಸುಟ್ಟು ಕರಕಲಾಯ್ತು ಅನ್ನದಾತನ ಆಸ್ತಿ!

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬಳಿ, ಕಬ್ಬಿನ ರವದಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಈ ದುರ್ಘಟನೆಯಲ್ಲಿ ಟ್ರ್ಯಾಕ್ಟರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ?

Read Full Story
06:46 PM (IST) Jan 29

Karnataka News Live 29th January: ನೀವೇ 5 ವರ್ಷ ಸಿಎಂ ಆಗಿರಿ, ಆದ್ರೆ ಬಳ್ಳಾರಿ ರೌಡಿಸಂ ಮಟ್ಟಹಾಕಿ - ಸಿದ್ದರಾಮಯ್ಯಗೆ ಮನವಿ ಮಾಡಿದ ಜನಾರ್ದನ ರೆಡ್ಡಿ

ವಿಧಾನಸಭೆಯಲ್ಲಿ ಬಳ್ಳಾರಿ ಹಿಂಸಾಚಾರದ ಬಗ್ಗೆ ಮಾತನಾಡಿದ ಜನಾರ್ದನ ರೆಡ್ಡಿ, ಅಲ್ಲಿನ ಗನ್ ಮತ್ತು ಬಾಂಬ್ ಸಂಸ್ಕೃತಿಗೆ ಅಂತ್ಯ ಹಾಡಲು ಆಗ್ರಹಿಸಿದರು. ಸಿದ್ದರಾಮಯ್ಯನವರು ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿ ಎಂದರು. ಜೊತೆಗೆ, ಡಿಸಿಎಂ ವಿರುದ್ಧ ಹರಿಹಾಯ್ದು, ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದರು.

Read Full Story
06:35 PM (IST) Jan 29

Karnataka News Live 29th January: ಗಂಡನಿಂದಲೇ ಸ್ವಾಟ್ ಕಮಾಂಡೋ ಆಗಿದ್ದ 24 ವರ್ಷದ ಗರ್ಭಿಣಿ ಪತ್ನಿಯ ಭೀಕರ ಹತ್ಯೆ - ಒಂದೂವರೆ ವರ್ಷದ ಮಗು ಅನಾಥ

4 ತಿಂಗಳ ಗರ್ಭಿಣಿಯಾಗಿದ್ದ ಸ್ವಾಟ್ ಕಮಾಂಡೋ ಆಗಿದ್ದ 24 ವರ್ಷದ ಮಹಿಳೆಯನ್ನು ಆಕೆಯ ಪತಿ ಡಂಬಲ್ಸ್‌ನಿಂದ ತಲೆಗೆ ಹೊಡೆದು ಕೊಂದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

Read Full Story