MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Uttara Kannada
  • ರಿಶೆಲ್ ಡಿಸೋಜಾ ದುರಂತ ಸಾವು ಕೇಸ್, ಜೆಡಿಎಸ್ ಮುಖಂಡೆ ಪುತ್ರ ಚಿರಾಗ್ ಕೋಠಾರಕರ್ ಅರೆಸ್ಟ್

ರಿಶೆಲ್ ಡಿಸೋಜಾ ದುರಂತ ಸಾವು ಕೇಸ್, ಜೆಡಿಎಸ್ ಮುಖಂಡೆ ಪುತ್ರ ಚಿರಾಗ್ ಕೋಠಾರಕರ್ ಅರೆಸ್ಟ್

ರಿಶೆಲ್ ಡಿಸೋಜಾ ದುರಂತ ಸಾವು ಕೇಸ್, ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ರಿಶೆಲ್ ಸಾವಿಗೆ ಕಾರಣವಾಗಿದ್ದ ಆರೋಪಿ ಚಿರಾಗ್ ಕೋಠಾರಕರ್‌ನನ್ನು ಪೊಲೀಸರು 20 ದಿನಗಳ ಹುಡುಕಾಟದ ಬಳಿಕ ಅರೆಸ್ಟ್ ಮಾಡಿದ್ದಾರೆ.

2 Min read
Author : Chethan Kumar
Published : Jan 29 2026, 09:10 PM IST
Share this Photo Gallery
  • FB
  • TW
  • Linkdin
  • Whatsapp
16
ಆರೋಪಿ ಚಿರಾಗ್ ಅರೆಸ್ಟ್
Image Credit : Asianet News

ಆರೋಪಿ ಚಿರಾಗ್ ಅರೆಸ್ಟ್

ಕದ್ರಾದ ಕೆಪಿಸಿ ಕಾಲೋನಿಯ ವಿದ್ಯಾರ್ಥಿನಿ ರಿಶೆಲ್ ಡಿಸೋಜಾ ಆತ್ಮ***ತ್ಯೆ ಪ್ರಕರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಪುತ್ರ ಚಿರಾಗ್ ಕೋಠಾರಕರ್ ಕಿರುಕುಳಕ್ಕೆ ಬೇಸತ್ತೆ ತಮ್ಮ ಮಗಳು ದುರಂತ ಅಂತ್ಯಕಂಡಿದ್ದಾಳೆ ಎಂದು ರಿಶೆಲ್ ತಾಯಿ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದರು. ಪೊಲೀಸರ ನಿರ್ಲಕ್ಷ್ಯದ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್‌ಗೂ ಮನವಿ ಪತ್ರ ಸಲ್ಲಿಕೆ ಮಾಡಲಾಗಿತ್ತು. ಘಟನೆ ಗಂಭೀರತೆ ಪಡೆಯುತ್ತಿದ್ದಂತೆ ಚುರುಕಾದ ಪೊಲೀಸರು 20 ದಿನಗ ಬಳಿಕ ಆರೋಪಿ ಚಿರಾಗ್ ಕೋಠಾರಕರ್ ಅರೆಸ್ಟ್ ಮಾಡಿದ್ದಾರೆ.

26
ಚೆನ್ನೈನಲ್ಲಿ ಚಿರಾಗ್ ಬಂಧಿಸಿದ ಪೊಲೀಸ್
Image Credit : Asianet News

ಚೆನ್ನೈನಲ್ಲಿ ಚಿರಾಗ್ ಬಂಧಿಸಿದ ಪೊಲೀಸ್

ರಿಶೆಲ್ ಡಿಸೋಜಾ ದುರಂತ ಅಂತ್ಯಕಾಣುತ್ತಿದ್ದಂತೆ ಇತ್ತ ಚಿರಾಗ್ ಕೋಠಾರಕರ್ ನಾಪತ್ತೆಯಾಗಿದ್ದ. ಕಳೆದ 20 ದಿನಗಳಿಂದ ಪೊಲೀಸರು ಚಿರಾಗ್ ಹುಡುಕಾಟ ಆರಂಭಿಸಿದ್ದರು. ಇತ್ತ ಚಿರಾಕ್ ಉತ್ತರ ಕನ್ನಡದಿಂದ ಪರಾರಿಯಾಗಿ ಚೆನ್ನೈಗೆ ತೆರಳಿದ್ದ. ಚೆನ್ನೈನಲ್ಲಿ ಸಂಬಂಧಿಕರ ಜೊತೆ ತಂಗಿದ್ದ ಚಿರಾಗ್‌ನನ್ನು ಪೊಲೀಸರು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ.

Related Articles

Related image1
Bengaluru: ಸ್ನೇಹಿತನಿಂದಲೇ ಕೊಲೆಯಾದ ಯುವತಿ; ಆಂಧ್ರದಿಂದ ಬಿಬಿಎಂ ಓದಲು ಬಂದಿದ್ದ ದೇವಿಶ್ರೀ ದುರಂತ ಸಾವು!
Related image2
ಕಾರ್ಪೊರೇಟ್ ಸಂಸ್ಥೆಗಳಲ್ಲಿ ಎಷ್ಟು ಮಂದಿಗೆ ವಿವಾಹೇತರ ಸಂಬಂಧವಿದೆ?, ಯುವತಿ ಹೇಳಿದ್ದನ್ನ ಕೇಳಿ ನೆಟ್ಟಿಗರು ಶಾಕ್!
36
ಚೆನ್ನೈನಿಂದ ಕಾರವಾರಕ್ಕೆ ಚಿರಾಗ್
Image Credit : Asianet News

ಚೆನ್ನೈನಿಂದ ಕಾರವಾರಕ್ಕೆ ಚಿರಾಗ್

ಆರೋಪಿ ಚಿರಾಗ್ ಬಂಧಿಸುವಂತೆ ಕಾರವಾರದಲ್ಲಿ ಕ್ರಿಶ್ಚಿಯನ್ ಸಂಘಟನೆ ಪ್ರತಿಭಟನೆ ನಡೆಸಿತ್ತು. ಇತ್ತ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಹೀಗಾಗಿ ಎ.ಎಸ್.ಪಿ ಕೃಷ್ಣಮೂರ್ತಿ ನೇತೃತ್ವದ ನಾಲ್ಕು ತಂಡಗಳು ಕಾರ್ಯಾಚರೆ ತೀವ್ರಗೊಳಿಸಿತ್ತು. ಚಿರಾಗ್ ಬಂಧಿಸಿದ ಪೊಲೀಸರು ಕಾರವಾರಕ್ಕೆ ಕರೆತರುತ್ತಿದ್ದಾರೆ.

46
ಪ್ರೀತಿ ಹೆಸರಲ್ಲಿ ಕಿರುಕುಳ ಆರೋಪ
Image Credit : Asianet News

ಪ್ರೀತಿ ಹೆಸರಲ್ಲಿ ಕಿರುಕುಳ ಆರೋಪ

ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಪುತ್ರ ಚಿರಾಗ್ ಕಿರುಕುಳಕ್ಕೆ ಬೇಸತ್ತ ತಮ್ಮ ಮಗಳು ಈ ನಿರ್ಧಾರ ಮಾಡಿದ್ದಾರೆ. ಗಗನಸಖಿ ಕೋರ್ಸ್ ಮುಗಿಸಿ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದ್ದ ಪುತ್ರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ತಾಯಿ ಆರೋಪಿಸಿದ್ದರು. ಪ್ರೀತಿಸುವಂತೆ ಪದೇ ಪದೇ ಪೀಡಿಸುತ್ತಿದ್ದ. ಈ ಕುರಿತು ರಿಶೆಲ್ ಹೇಳಿಕೊಂಡಿದ್ದರು. ಹೀಗಾಗಿ ಸಾಕಷ್ಟು ಬಾರಿ ಪುತ್ರಿಗೆ ಸಮಾಧಾನ ಹೇಳಿದ್ದೇವು ಎಂದು ರಿಶೆಲ್ ತಾಯಿ ಹೇಳಿದ್ದರು.

56
ಯುವತಿ ದೇಹದ ಮೇಲೆ ಗಾಯದ ಗುರುತು
Image Credit : Asianet News

ಯುವತಿ ದೇಹದ ಮೇಲೆ ಗಾಯದ ಗುರುತು

ತಾಯಿ ನೀಡಿದ ದೂರು ಹಾಗೂ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ, ಮಗಳ ದೇಹದ ಮೇಲೆ ಗಾಯದ ಗುರುತುಗಳಿವೆ. ಹೀಗಾಗಿ ಸಂಪೂರ್ಣ ತನಿಖೆ ನಡೆಯಬೇಕು. ಚಿರಾಗ್ ಹೇಯ ಕೃತ್ಯದಿಂದ ಮಾನಸಿಕವಾಗಿ ನೊಂದು ಮಗಳು ಈ ನಿರ್ಧಾರ ಮಾಡಿದ್ದಾಳೆ ಎಂದು ತಾಯಿ ಕಣ್ಣೀರಿಟ್ಟಿದ್ದರು.

66
ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ
Image Credit : Asianet News

ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ

ಆರೋಪಿ ಚಿರಾಗ್ ತಾಯಿ ಜೆಡಿಎಸ್ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ಪ್ರಭಾವ ಬಳಸಿದ್ದಾರೆ. ಹೀಗಾಗಿ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎಂದು ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದ್ದರು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಉತ್ತರ ಕನ್ನಡ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಉತ್ತರ ಕನ್ನಡ: ಎರಡೂವರೆ ಗಂಟೆ ರಸ್ತೆಗೆ ಅಡ್ಡ ನಿಂತ ಗೂಡ್ಸ್ ರೈಲು, ಊರಿಗೆ ಊರೇ ಸಂಪರ್ಕ ಬಂದ್! ಜನರ ಪರದಾಟ
Recommended image2
ಇಡಗುಂಜಿ ಗಣಪನ ಸನ್ನಿಧಿಯಲ್ಲಿ ಅರ್ಚಕರ ಹೈಡ್ರಾಮಾ; 'ತಟ್ಟೆ ಕಾಸಿಗಾಗಿ' ಭಕ್ತರ ಮುಂದೆಯೇ ಕಿತ್ತಾಟ!
Recommended image3
ಜಪಾನ್‌ದಲ್ಲಿ ಮತ್ತೊಮ್ಮೆ ಪ್ರಶಸ್ತಿ ಪಡೆದ ಇಕೋ ಸೈಕಲ್: ಕನ್ನಡಿಗ ಡಾ. ಶ್ರೀಹರಿ ಚಂದ್ರಘಾಟಗಿ ಅಪೂರ್ವ ಸಾಧನೆ
Related Stories
Recommended image1
Bengaluru: ಸ್ನೇಹಿತನಿಂದಲೇ ಕೊಲೆಯಾದ ಯುವತಿ; ಆಂಧ್ರದಿಂದ ಬಿಬಿಎಂ ಓದಲು ಬಂದಿದ್ದ ದೇವಿಶ್ರೀ ದುರಂತ ಸಾವು!
Recommended image2
ಕಾರ್ಪೊರೇಟ್ ಸಂಸ್ಥೆಗಳಲ್ಲಿ ಎಷ್ಟು ಮಂದಿಗೆ ವಿವಾಹೇತರ ಸಂಬಂಧವಿದೆ?, ಯುವತಿ ಹೇಳಿದ್ದನ್ನ ಕೇಳಿ ನೆಟ್ಟಿಗರು ಶಾಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved