08:31 AM (IST) Jan 20

Karnataka News Live 20 January 2026ಕರ್ಣನ ಮೇಲಿನ ದ್ವೇಷಕ್ಕೆ ಕಾರಣ ಏನು? ರಮೇಶ್ ಮನದಲ್ಲಿಡಗಿದ್ದ ರಹಸ್ಯ ರಿವೀಲ್, ಇನ್ಮುಂದೆ ನಿತ್ಯಾ ಸೇಫ್!

ಕರ್ಣನು ತನ್ನ ಸ್ವಂತ ಮಗನಲ್ಲ ಎಂಬ ಕಾರಣಕ್ಕೆ ರಮೇಶ್ ದ್ವೇಷಿಸುತ್ತಾನೆ ಎಂಬ ಸತ್ಯ ಬಯಲಾಗಿದೆ. ಇದೇ ಕಾರಣಕ್ಕೆ, ಬೇರೆಯವರ ಮಗುವನ್ನು ಸಾಕುವ ನೋವು ಕರ್ಣನಿಗೆ ತಿಳಿಯಲೆಂದು ರಮೇಶ್ ನಿತ್ಯಾಳ ಮಗುವನ್ನು ರಕ್ಷಿಸುತ್ತಿದ್ದಾನೆ. ಜೊತೆಗೆ, ಸಂಜಯ್ ಮತ್ತು ತಾರಾ ಅವರ ದ್ವೇಷದ ಹಿಂದಿನ ಕಾರಣಗಳೂ ಸಹ ಬಹಿರಂಗಗೊಂಡಿವೆ.

Read Full Story
08:22 AM (IST) Jan 20

Karnataka News Live 20 January 2026ತಂತಿಯಿಲ್ಲದೆ ಗಾಳಿಯಲ್ಲೇ ವಿದ್ಯುತ್‌ ಸಂಚಾರ ಸಕ್ಸಸ್‌

ವಿಜ್ಞಾನದ ಅದ್ಭುತವೆಂದೇ ಪರಿಗಣಿಸಲಾಗುವ ವಿದ್ಯುತ್‌ ಅನ್ನು ತಂತಿಯಿಲ್ಲದೆ ಬರೀ ಗಾಳಿಯಲ್ಲಿ ಪ್ರವಹಿಸುವ ಇನ್ನೊಂದು ಅದ್ಭುತ ತಂತ್ರಜ್ಞಾನವನ್ನು ಫಿನ್ಲೆಂಡ್‌ ಅವಿಷ್ಕರಿಸಿದೆ. ಇದರಡಿಯಲ್ಲಿ ಅಲ್ಟ್ರಾಸೌಂಡ್‌ನಿಂದ ವಿದ್ಯುತ್‌ ಸಂಚಾರಕ್ಕೆ ಮಾರ್ಗವನ್ನು ಸೃಷ್ಟಿಸಲಾಗುವುದು

Read Full Story
08:06 AM (IST) Jan 20

Karnataka News Live 20 January 2026ಪವಿತ್ರಾಗೌಡಗೆ ಮನೆ ಊಟ - ಪ್ರಶ್ನಿಸಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೈಲಿನಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್‌ ಮತ್ತು ಲಕ್ಷ್ಮಣ್‌ಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ನಗರದ ಸೆಷನ್ಸ್‌ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೆಟ್ಟಿಲೇರಿದೆ.

Read Full Story
07:51 AM (IST) Jan 20

Karnataka News Live 20 January 2026ಸಂತ್ರಸ್ತೆಯರಿಂದ ದಾಖಲಾಗದ ದೂರು; ಡಿಜಿಪಿ ರಾಮಚಂದ್ರರಾವ್ ಪ್ರಕರಣದ ಮುಂದಿನ ಕತೆ ಏನು ?

ಡಿಜಿಪಿ ರಾಮಚಂದ್ರರಾವ್ ಅವರ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಆದರೆ, ಸಂತ್ರಸ್ತೆಯಿಂದ ದೂರು ದಾಖಲಾಗಿಲ್ಲ. ಈ ಪ್ರಕರಣದ ಜೊತೆಗೆ ಅವರ ಹಿಂದಿನ ಆರೋಪಗಳು ಮತ್ತು ವೈರಲ್ ಆಡಿಯೋದ ವಿವರಗಳೂ ಇಲ್ಲಿವೆ.

Read Full Story
07:28 AM (IST) Jan 20

Karnataka News Live 20 January 2026ದಾವೋಸ್‌ ಶೃಂಗಸಭೆಗೆ ಸಚಿವ ಜೋಶಿ

ಸ್ವಿಜರ್ಲೆಂಡ್‌ನ ಹಿಮಚ್ಛಾದಿತ ನಗರಿ ದಾವೋಸ್‌ನಲ್ಲಿ ಸೋಮವಾರದಿಂದ ಆರಂಭಗೊಂಡ 5 ದಿನಗಳ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ ಮೂವರು ಸಚಿವರು ಪಾಲ್ಗೊಂಡಿದ್ದಾರೆ.

Read Full Story
07:25 AM (IST) Jan 20

Karnataka News Live 20 January 2026ಕೆಂಪೇಗೌಡ ಬಡಾವಣೆ ನಿವಾಸಿಗಳ ಎದೆಬಡಿತ ಹೆಚ್ಚಿಸಿದ ಬಿಡಿಎ ನೋಟಿಸ್ - ಕಟ್ಟಡ ತೆರವಿಗೆ ಸೂಚನೆ

ನಾಡಪ್ರಭು ಕೆಂಪೇಗೌಡ ಬಡಾವಣೆಯ ಸ್ಕಂದ ನಗರ, ಮುನೇಶ್ವರ ಬ್ಲಾಕ್‌ ಸೇರಿದಂತೆ ಹಲವೆಡೆ ವಾಸವಿರುವ ನಿವಾಸಿಗಳಿಗೆ ವಾರದೊಳಗೆ ಕಟ್ಟಡಗಳನ್ನು ತೆರವುಗೊಳಿಸುವಂತೆ ಬಿಡಿಎ ನೋಟಿಸ್‌ ನೀಡಿದೆ. ಖಾಸಗಿ ಭೂ ಮಾಲೀಕರಿಂದ ನಿವೇಶನ ಖರೀದಿಸಿದ್ದೇವೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ.

Read Full Story