10:48 PM (IST) Jun 14

Karnataka News Live 14 June 2026SIR ಮೂಲಕ ಮತದಾರರ ಹಕ್ಕು ಕಸಿಯಲು ಅವಕಾಶ ನೀಡಲ್ಲ - ಸಲೀಂ ಅಹ್ಮದ್ ಎಚ್ಚರಿಕೆ

SIR: ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೂಲಕ ಜನರ ಮೂಲಭೂತ ಹಕ್ಕು ಕಸಿಯುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದು ಸಲೀಂ ಅಹ್ಮದ್ ಎಚ್ಚರಿಕೆ ನೀಡಿದರು.

Read Full Story
10:34 PM (IST) Jun 14

Karnataka News Live 14 June 2026ಕೇವಲ 106 ರನ್‌ಗೆ ಪಾಕಿಸ್ತಾನ ಆಲೌಟ್, ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಪಾಕ್ ಮಣಿಸಿ ದಾಖಲೆ ಬರೆದ ಭಾರತ

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಶುಭಾರಂಭ ಮಾಡಿದೆ. ಪಾಕಿಸ್ತಾನ ವಿರುದ್ಧ 64 ರನ್ ಗೆಲುವು ದಾಖಲಿಸಿದ ಭಾರತ ಸಂಭ್ರಮಾಚರಿಸಿದೆ. ಭಾರತದ ದಾಳಿಗೆ ಪಾಕಿಸ್ತಾನ ಕೇವಲ 106 ರನ್‌ಗೆ ಆಲೌಟ್ ಆಗಿದೆ.

Read Full Story
09:43 PM (IST) Jun 14

Karnataka News Live 14 June 2026Udupi - ರೈಲು ನಿಲ್ದಾಣದಲ್ಲಿ ಅಪರಿಚಿತನಾಗಿ ಸಿಕ್ಕಿದ್ದ ಯುವಕ, 9 ತಿಂಗಳ ಬಳಿಕ ಕುಟುಂಬ ಸೇರಿದ್ದು ಹೇಗೆ?

Missing Youth Found: ನಗರದ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ಯುವಕನ ವಾರಸುದಾರರನ್ನು ಪತ್ತೆಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು..

Read Full Story
09:19 PM (IST) Jun 14

Karnataka News Live 14 June 2026ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ಅನಂತ್ ಅಂಬಾನಿ, ವಿಶೇಷ ಪೂಜೆ ಸಲ್ಲಿಸಿದ ಉದ್ಯಮಿ

ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಭೇಟಿ ನೀಡಿದ್ದಾರೆ. ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಅನಂತ್ ಅಂಬಾನಿ ಇದೀಗ ಕೊಲ್ಲೂರಿನಲ್ಲಿ ದೇವಿ ದರ್ಶನ ಪಡೆದಿದ್ದಾರೆ.

Read Full Story
08:12 PM (IST) Jun 14

Karnataka News Live 14 June 2026ಎಲ್ಲ ಸಚಿವರು ರಜೆಯಲ್ಲಿದ್ದಾರೆ - Congress ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ!

Karnataka Politics: ಲೂಟಿಗಾಗಿ ಸರ್ಕಾರ ರಚನೆಯಾಗಿದೆ. ಖಾತೆಗಾಗಿ ಸೋನಿಯಾ ಗಾಂಧಿ ಮನೆಯ ಬಾಗಿಲು ಬಳಿ ನಿಂತಿದ್ದು ಎಲ್ಲ ಸಚಿವರು ರಜೆಯ ಮೇಲೆ ಹೊರಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

Read Full Story
07:48 PM (IST) Jun 14

Karnataka News Live 14 June 2026Mandya - ಲಕ್ಷ್ಮೀಸಾಗರದಲ್ಲಿ ಕಣ್ಣೀರಿನ ಕಥೆ - ಚೆಂಡಿನೊಂದಿಗೆ ಆಟವಾಡುತ್ತಿದ್ದ ಮಗು ನೀರಿನ ಸಂಪಿಗೆ ಬಿದ್ದು ಸಾವು

Mandya: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಷ್ಮೀಸಾಗರದಲ್ಲಿ ನಡೆದಿದೆ. ವಿನೀಶ್ (ವಿನು) (2) ಮೃತ ಬಾಲಕ.

Read Full Story
06:22 PM (IST) Jun 14

Karnataka News Live 14 June 2026Tumakuru - 'ನಾನು ಮತ್ತು ಡಿಕೆಶಿ ಜೋಡೆತ್ತು' - ಅನಾರೋಗ್ಯದ ನಡುವೆಯೂ ಡಿಸಿಎಂ ಪರಮೇಶ್ವರ್ ಹೇಳಿಕೆ ವೈರಲ್!

Tumakuru: ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಅನಾರೋಗ್ಯದ ನಡುವೆಯೂ ಭಾಗವಹಿಸಿ ಭಾವನಾತ್ಮಕ ಭಾಷಣ ಮಾಡಿದರು. ದಣಿದ ಧ್ವನಿಯಲ್ಲಿ..

Read Full Story
05:26 PM (IST) Jun 14

Karnataka News Live 14 June 2026PHOTOS - ಡಾಕ್ಟರ್‌ ಗಂಡ, ರಿಯಲ್ ಮಗನ ಜೊತೆ ಸಿಂಗಾಪುರಕ್ಕೆ ಹಾರಿದ Brahmagantu Serial ಸೌಂದರ್ಯ!

Actress preethi srinivas: ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರಧಾರಿ ನಟಿ ಪ್ರೀತಿ ಶ್ರೀನಿವಾಸ್‌ ಅವರು ಗಂಡ, ಮಗನ ಜೊತೆ ಸಿಂಗಾಪುರಕ್ಕೆ ಹೋಗಿದ್ದಾರೆ. ಅಲ್ಲಿ ಒಂದಿಷ್ಟು ಸುಂದರ ಸಮಯ ಕಳೆದಿದ್ದು, ಈ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Read Full Story
05:18 PM (IST) Jun 14

Karnataka News Live 14 June 2026Chanakya Niti - ಜೀವನದಲ್ಲಿ ಯಶಸ್ಸು ಬೇಕಾ? 30ರೊಳಗೆ ಈ 5 ಪಾಠ ಕಲಿಯಿರಿ ಎಂದ ಚಾಣಕ್ಯ!

Chanakya Motivational Thoughts: ಆಚಾರ್ಯ ಚಾಣಕ್ಯರ ಪ್ರಕಾರ, 30 ವರ್ಷ ತುಂಬುವ ಮುನ್ನ ಪ್ರತಿಯೊಬ್ಬರೂ ಕೆಲವು ಪ್ರಮುಖ ವಿಷಯಗಳನ್ನು ಕಲಿಯಲು ಚಾಣಕ್ಯ ನೀತಿ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ.

Read Full Story
04:25 PM (IST) Jun 14

Karnataka News Live 14 June 2026ನಿಮ್ಮ ಕಳೆದ ಶತ್ರುವೇ ಈ ಜನ್ಮದಲ್ಲಿ ನಿಮ್ಮ ಗಂಡ / ಹೆಂಡತಿಯಾಗಿರ್ತಾರೆ; ಸತ್ಯ ಬಿಚ್ಚಿಟ್ಟ ಆಧ್ಯಾತ್ಮಿಕ ಗುರು

Enemy Of Your Past Life Is Your Husband or Wife: ಕಳೆದ ಜನ್ಮದ ಶತ್ರುವೇ ಈ ಜನ್ಮದ ಸಂಗಾತಿ! ಈ ಮಾತು ಕೇಳಿ ಕಂಗಾಲಾಗಬೇಡಿ. ಇದು ಮದುವೆಯೋ ಅಥವಾ ಕರ್ಮದ ಜಾಲವೋ? ಹೌದು, ಈ ಡೌಟ್‌ ಬರೋದು ಸಹಜ. Dr Manmit ಎನ್ನುವ ಆಧ್ಯಾತ್ಮಿಕ ಗುರು ಈ ಬಗ್ಗೆ ಮಾತನಾಡಿದ್ದಾರೆ.

Read Full Story
03:20 PM (IST) Jun 14

Karnataka News Live 14 June 2026ಒಂದೇ ಒಂದು ಸಾಂಗ್ಸ್‌ಗೆ ಇಂದು ಕೋಟಿ ಸಂಭಾವನೆ ಪಡೆಯುವ ನಟಿ ಸಮಂತಾಗೆ ಬಾಲ್ಯದಲ್ಲಿ ಏನಾಗಿತ್ತು ಗೊತ್ತಾ?

ಬಾಲ್ಯದಲ್ಲಿ ಬಡತನವನ್ನು ಕಂಡು, ಇಂದು ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ನಟಿ ಸಮಂತಾ ರುತ್ ಪ್ರಭು ಅವರ ಜೀವನದ ಕಥೆ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಈ ಸ್ಟೋರಿ ನೋಡಿ..

Read Full Story
01:46 PM (IST) Jun 14

Karnataka News Live 14 June 2026ಡಿವೋರ್ಸ್ ಬಗ್ಗೆ ಇರೋ 'ಸತ್ಯ ಸಂಗತಿ' ಹೇಳಿ ಕೊನೆಗೂ ಮನಸ್ಸು ಹಗುರ ಮಾಡಿಕೊಂಡ ಚಂದನ್ ಶೆಟ್ಟಿ!

ನಮಗಿಬ್ಬರಿಗೂ ಮುಗಿದ ಹೋದ ಆ ಅಧ್ಯಾಯದ ಬಗ್ಗೆ ಮಾತನ್ನಾಡಲು ಈಗ ಏನೂ ಇಲ್ಲ, ಮಾತನ್ನಾಡುವ ಅಗತ್ಯವಾಗಲೀ ಮನಸ್ಸಾಗಲೀ ಇಲ್ಲ. ಆದರೂ ಈಗ ಕೇಳಿರೋದಕ್ಕೆ ಹೇಳಬೇಕಲ್ಲ ಎಂದು ಹೇಳುವುದಾದರೆ ಅದನ್ನು ಹೀಗೆ ಹೇಳಬಹುದು... ಕೊನೆಗೂ ಸತ್ಯ ಬಾಯ್ಬಿಟ್ಟ ಚಂದನ್ ಶೆಟ್ಟಿ..

Read Full Story
12:46 PM (IST) Jun 14

Karnataka News Live 14 June 2026'ನಾನು ಅವರನ್ನು ಅಪ್ಪಿಕೊಳ್ಳಲ್ಲ..' ರಾಹುಲ್ ಗಾಂಧಿ ಹೊಸ ವಿವಾದ ಸೃಷ್ಟಿ, ಕಾಂಗ್ರೆಸ್ ವಿರುದ್ಧ ಸಿಪಿಎಂ ನಾಯಕರು ವಾಗ್ದಾಳಿ!

ಇಂಡಿಯಾ ಒಕ್ಕೂಟದ ಸಭೆಯಲ್ಲಿ ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರನ್ನು ಅಪ್ಪಿಕೊಳ್ಳಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎನ್ನಲಾದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಈ ಘಟನೆಯು ಇಂಡಿಯಾ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗ.

Read Full Story
12:44 PM (IST) Jun 14

Karnataka News Live 14 June 2026ತನಿಷಾ ಕುಪ್ಪಂಡಗೆ ಬಾಡಿ ಶೇಮಿಂಗ್ - ಟ್ರೋಲರ್ಸ್‌ಗಳಿಗೆ ಖಡಕ್ ಉತ್ತರ ನೀಡಿದ ಕಿಶನ್ ಬಿಳಗಲಿ

ಬಿಗ್‌ಬಾಸ್‌ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ತನಿಷಾ ಕುಪ್ಪಂಡ ಅವರು ವಿಧಾನಸೌಧದ ಮುಂದೆ 'ದತ್ತ' ಚಿತ್ರದ ಹಾಡಿಗೆ ಮಾಡಿದ ನೃತ್ಯವು ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋಗೆ ತನಿಷಾ ಅವರ ದೇಹದ ಬಗ್ಗೆ ನಕಾರಾತ್ಮಕ ಕಾಮೆಂಟ್‌ಗಳು ಬಂದಿದ್ದು, ಬಾಡಿ ಶೇಮಿಂಗ್ ಮಾಡದಂತೆ ಕಿಶನ್ ಮನವಿ ಮಾಡಿದ್ದಾರೆ.
Read Full Story
11:28 AM (IST) Jun 14

Karnataka News Live 14 June 2026Karnataka Police - ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶಾಸಕರ ಶಿಫಾರಸು ಪತ್ರಗಳ ಹಸ್ತಕ್ಷೇಪವಿಲ್ಲದೆ, ಪಾರದರ್ಶಕ ವರ್ಗಾವಣೆಗಾಗಿ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಗೃಹ ಇಲಾಖೆ ಚಿಂತನೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಹೊಸ ನೀತಿ ಜಾರಿಗೆ ತರಲು ಉತ್ಸುಕರಾಗಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವ ಸಾಧ್ಯತೆಯಿದೆ.

Read Full Story
10:52 AM (IST) Jun 14

Karnataka News Live 14 June 2026Cockroach janata party - ಬೆಂಗಳೂರಿನಲ್ಲಿಂದು 'ಜಿರಳೆ'ಗಳ ಪ್ರತಿಭಟನೆ; ನಟ ಪ್ರಕಾಶ್ ರಾಜ್ ಭಾಗಿ!

ನೀಟ್ ಪೇಪರ್ ಲೀಕ್ ವಿರೋಧಿಸಿ ಬೆಂಗಳೂರಿನಲ್ಲಿ ಇಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಯಲ್ಲಿ ಖ್ಯಾತ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಭಾಗವಹಿಸಲಿದ್ದಾರೆ. ಈ ಬಗ್ಗೆ ಸಿಜೆಪಿ ಮತ್ತು ಪ್ರಕಾಶ್ ರಾಜ್ ಇಬ್ಬರೂ X (ಟ್ವಿಟರ್) ನಲ್ಲಿ ಖಚಿತಪಡಿಸಿದ್ದಾರೆ.
Read Full Story
10:26 AM (IST) Jun 14

Karnataka News Live 14 June 2026ಬೆಂಗಳೂರು ನಗರದಲ್ಲಿ 1 ಲಕ್ಷ ಗಿಡಗಳ ನಾಟಿಗೆ ಸಿದ್ಧತೆ; ಪ್ರತಿ ಪಾಲಿಕೆಗೂ 30 ಸಾವಿರ ಸಸಿ ನೆಡಲು ಸೂಚನೆ!

ಬೆಂಗಳೂರು ನಗರದಲ್ಲಿ ಬೀಳುವ ಮರಗಳ ಸಮಸ್ಯೆ ತಡೆಯಲು ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ. ಗುಲ್ ಮೊಹರ್, ಸ್ಪೆತೋಡಿಯಾ ಬದಲಿಗೆ ನೇರಳೆ, ಬುಗುರಿಯಂತಹ ಸುಮಾರು 1 ಲಕ್ಷ ಉಪಯುಕ್ತ ಗಿಡಗಳನ್ನು ನೆಡಲು ತೀರ್ಮಾನ, ಇವುಗಳಿಂದ ಭವಿಷ್ಯದಲ್ಲಿ ನಗರದ ನಿವಾಸಿಗಳಿಗೆ ಉಚಿತ ಹಣ್ಣು ಮತ್ತು ಔಷಧೀಯ ಲಾಭಗಳು ದೊರೆಯಲಿವೆ.

Read Full Story
09:57 AM (IST) Jun 14

Karnataka News Live 14 June 2026Kannada vs Hindi - ಕರ್ನಾಟಕದಲ್ಲಿ ನನ್ನ ಮೇಲೆ ದೌರ್ಜನ್ಯ ಆಗ್ತಿದೆ; ಕನ್ನಡ ಕಲಿತ ತಮಿಳು ಹುಡುಗಿ ಆರೋಪ

Kannada vs Hindi apartment issue: ಕರ್ನಾಟಕದಲ್ಲಿ ಅದರಲ್ಲಿ ಬೆಂಗಳೂರಿನಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಈಗ ಬೆಂಗಳೂರಿನಲ್ಲಿ ಕನ್ನಡ ಕಲಿಯುತ್ತಿರುವ ತಮಿಳುನಾಡಿನ ಮಹಿಳೆಗೆ ಹಿಂದಿ ಮಾತನಾಡಿ ಎಂದು ಸೆಕ್ಯೂರಿಟಿ ಗಾರ್ಡ್‌ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪದ ವಿಡಿಯೋ ವೈರಲ್‌ ಆಗ್ತಿದೆ.

Read Full Story
09:28 AM (IST) Jun 14

Karnataka News Live 14 June 2026Sri Raghavendra Mahathme Serial - ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ, ರಾಯರ ಪಟ್ಟಾಭಿಷೇಕದ ಎಪಿಸೋಡ್

Sri raghavendra mahatme serial director: ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಯರ ಜೀವನದ ಪವಿತ್ರ ಪಯಣವಿದೆ. ಗುರು ರಾಯರ ಮಹಿಮೆಯನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ತರುವ ಪ್ರಯತ್ನ ಮಾಡಲಾಗುತ್ತಿದೆ. ಈ ವಾರ ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ ಆಗಮನವಾಗಿದೆ.

Read Full Story
08:55 AM (IST) Jun 14

Karnataka News Live 14 June 2026ಹೆದ್ದಾರಿ ಡಿವೈಡರ್ ಮಧ್ಯದಲ್ಲಿ ಹೊಸ ಮುರಿನಕಟ್ಟೆ ನಿರ್ಮಾಣಕ್ಕೆ ಸಿದ್ಧತೆ - ಹಿಂದೂ ಸಂಘಟನೆಗಳಿಂದ ವಿರೋಧ

ಭಟ್ಕಳದಲ್ಲಿ ಧ್ವಂಸಗೊಂಡಿದ್ದ ಮುರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮಧ್ಯೆ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಸ್ಥಳವು ಪೂಜೆಗೆ ಮತ್ತು 'ಮಾರಿ ಹೊರೆ' ಇಡಲು ಸೂಕ್ತವಲ್ಲ ಎಂದು ಹಿಂದೂ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ವಿರೋಧಿಸಿವೆ.
Read Full Story