
ಬಿಜೆಪಿಯಿಂದ 15 ಮಂದಿ ಜೆಡಿಎಸ್'ಗೆ ಬರಲು ತಯಾರಾಗಿದ್ದಾರೆ
ಸರ್ಕಾರ ರಚನೆಗೆ ಮೈತ್ರಿ ಪಕ್ಷದ ಸಂಖ್ಯೆ ಹೆಚ್ಚಿದ್ದು ಕಾನೂನುಬದ್ಧವಾಗಿ ನೀವು ನಮಗೆ ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
ಬೆಂಗಳೂರು(ಮೇ.16): ನೀವು 100 ಕೋಟಿ ಹಣ, ಸಚಿವ ಸ್ಥಾನದ ಆಮಿಷ ನೀಡಿ ಮೈತ್ರಿ ಶಾಸಕರನ್ನು ಸೆಳೆದರೆ ನಾವು ಕೂಡ ಕೈ ಹಾಕಬೇಕಾಗುತ್ತದೆ ಎಂದು ಜೆಡಿಎಸ್'ನಿಂದ ಶಾಸಕಾಂಗ ನಾಯಕರಾಗಿ ಆಯ್ಕೆಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಗೆ ಮೈತ್ರಿ ಪಕ್ಷದ ಸಂಖ್ಯೆ ಹೆಚ್ಚಿದ್ದು ಕಾನೂನುಬದ್ಧವಾಗಿ ನೀವು ನಮಗೆ ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
Add Asianetnews Kannada as a Preferred Source
