11:56 PM (IST) May 11

ಸಾಗರದಲ್ಲಿ ಸುನಾಮಿ ಎಬ್ಬಿಸಬಲ್ಲ ಶಸ್ತ್ರಾಸ್ತ್ರಗಳಿವು! ವಿಶ್ವದ ಈ 2 ದೇಶಗಳು ಮಾತ್ರ ಹೊಂದಿವೆ!

2025ರ ಮೇ ತಿಂಗಳ ಭಾರತ-ಪಾಕಿಸ್ತಾನ ಸಂಘರ್ಷವು S-400, ರಫೇಲ್, ಮತ್ತು ಸುನಾಮಿ ಆಯುಧಗಳಂತಹ ಆಧುನಿಕ ಶಸ್ತ್ರಾಸ್ತ್ರಗಳ ಬಳಕೆಗೆ ಸಾಕ್ಷಿಯಾಯಿತು. ಈ ಘರ್ಷಣೆಯು ಜಾಗತಿಕ ಭದ್ರತೆ ಮತ್ತು ಶಸ್ತ್ರಾಸ್ತ್ರ ಪೈಪೋಟಿಯ ಮೇಲೆ ಗಂಭೀರ ಪರಿಣಾಮ ಬೀರಿದೆ.

ಪೂರ್ತಿ ಓದಿ
11:25 PM (IST) May 11

22400% Return! 5 ವರ್ಷದಲ್ಲಿ ಕೋಟ್ಯಧಿಪತಿಯನ್ನಾಗಿ ಮಾಡಿದ 4 ರೂಪಾಯಿ ಷೇರು

PG Electroplast Ltd ಕಳೆದ 5 ವರ್ಷಗಳಲ್ಲಿ ಹೂಡಿಕೆದಾರರಿಗೆ 22,400% ಲಾಭ ತಂದುಕೊಟ್ಟಿದೆ. ₹3.59 ಇದ್ದ ಷೇರು ₹807.60 ತಲುಪಿದೆ. 1:10 ಸ್ಟಾಕ್ ಸ್ಪ್ಲಿಟ್‌ನಿಂದ ಹೂಡಿಕೆದಾರರಿಗೆ ಹೆಚ್ಚಿನ ಲಾಭ.

ಪೂರ್ತಿ ಓದಿ
11:01 PM (IST) May 11

ನಮ್ಮ ಕೆಲಸ ಶತ್ರು ಗುರಿಯನ್ನು ಹೊಡೆಯುವುದು, ಹೆಣಗಳನ್ನು ಎಣಿಸುವುದಲ್ಲ: ಏರ್ ಮಾರ್ಷಲ್ ಎ.ಕೆ. ಭಾರ್ತಿ

ಆಪರೇಷನ್ ಸಿಂಧೂರ್ ಬ್ರೀಫಿಂಗ್‌ನಲ್ಲಿ ಏರ್ ಮಾರ್ಷಲ್ ಎ.ಕೆ. ಭಾರ್ತಿಯವರ "ನಮ್ಮ ಕೆಲಸ ಗುರಿಯನ್ನು ಹೊಡೆಯುವುದು, ದೇಹಗಳನ್ನು ಎಣಿಸುವುದಲ್ಲ" ಎಂಬ ಹೇಳಿಕೆ ವೈರಲ್ ಆಗಿದ್ದು, ಭಾರತವು ನಿಖರ ದಾಳಿಗಳು ಮತ್ತು ಮಿಲಿಟರಿ ದೃಢಸಂಕಲ್ಪದ ಮೇಲೆ ಕೇಂದ್ರೀಕರಿಸಿದೆ ಎಂದು ಒತ್ತಿಹೇಳುತ್ತದೆ.

ಪೂರ್ತಿ ಓದಿ
10:08 PM (IST) May 11

ಆಪರೇಷನ್ ಸಿಂದೂರ್ ನಂತರ ಪಾಕಿಸ್ತಾನದ ಸ್ಥಿತಿ ಏನಾಗಿದೆ? ನಿಮ್ಮ 5 ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ 

ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಆಪರೇಷನ್ ಸಿಂದೂರ್ ನಲ್ಲಿ ಉಗ್ರ ನೆಲೆಗಳ ನಾಶ, ಸೈನಿಕರ ಸಾವು, ಬಳಸಿದ ಶಸ್ತ್ರಾಸ್ತ್ರಗಳು ಸೇರಿದಂತೆ 5 ಪ್ರಮುಖ ಪ್ರಶ್ನೆಗಳಿಗೆ ಭಾರತೀಯ ಸೇನೆ ಉತ್ತರಿಸಿದೆ. ಕಾರ್ಯಾಚರಣೆಯ ಗೌಪ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲವು ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಪೂರ್ತಿ ಓದಿ
09:09 PM (IST) May 11

ಉಗ್ರರು & ಅವರ ಹಿತೈಷಿಗಳಿಗೆ ಭಾರತ ಕಳುಹಿಸಿದ ಸಂದೇಶ ಕೇಳಿ ಪತರುಗುಟ್ಟಿದ ಪಾಕ್! ಏನಿದು ಮೆಸೇಜ್?

ಇಂದಿನ ಸುದ್ದಿಗೋಷ್ಠಿ ಬೆನ್ನಲ್ಲೇ ಪಾಕಿಸ್ತಾನದಲ್ಲಿರುವ ಉಗ್ರರು ಮತ್ತು ಅವರ ಹಿತೈಷಿಗಳಿಂದ ಭಾರತದಿಂದ ಖಡಕ್ ಸಂದೇಶವೊಂದನ್ನು ರವಾನಿಸಲಾಗಿದೆ. ಅ ಸಂದೇಶದಲ್ಲಿ ಏನಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಪೂರ್ತಿ ಓದಿ
08:26 PM (IST) May 11

ಪಾಕ್‌ಗೆ ಭಾರತ ಕೊಟ್ಟ ತಿರುಗೇಟಿಗೆ ಶಾಕ್ ಆಗಿತ್ತು ಅಮೆರಿಕಾ? ಮಧ್ಯಸ್ಥಿಕೆಗೆ ಬಂದ ಹಿಂದಿನ ಕಾರಣ ಇಲ್ಲಿದೆ

ಭಾರತವು ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ನಂತರ, ಅಮೆರಿಕ ತಕ್ಷಣವೇ ಮಧ್ಯಸ್ಥಿಕೆ ವಹಿಸಲು ಪ್ರಾರಂಭಿಸಿತು.

ಪೂರ್ತಿ ಓದಿ
07:39 PM (IST) May 11

Parenting Tips: ಯುದ್ಧ ಪರಿಸ್ಥಿತಿ ವೇಳೆ ಭಯಗೊಳ್ಳದಂತೆ ಮಕ್ಕಳ ಮನಸನ್ನು ಶಾಂತವಾಗಿರಿಸಲು ಇಷ್ಟು ಮಾಡಿ!

ಯುದ್ಧದಂಥ ಪರಿಸ್ಥಿತಿ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅವರ ವಯಸ್ಸಿಗೆ ತಕ್ಕಂತೆ ಮಾತನಾಡಿ, ಭಯಾನಕ ಸುದ್ದಿಗಳಿಂದ ದೂರವಿಡಿ ಮತ್ತು ನಿಯಮಿತ ದಿನಚರಿಯನ್ನು ಕಾಪಾಡಿಕೊಳ್ಳಿ. ಆಟಪಾಠಗಳು ಮತ್ತು ಸಕಾರಾತ್ಮಕತೆಯಿಂದ ಅವರ ಮನಸ್ಸನ್ನು ಶಾಂತವಾಗಿರಿಸಿ.

ಪೂರ್ತಿ ಓದಿ
07:28 PM (IST) May 11

ಪಾಕ್ ವಾಯುನೆಲೆಗಳ ಮೇಲೆ ಭಾರತದಿಂದ ನಿಖರ ದಾಳಿ: ಫೋಟೋಗಳಲ್ಲಿ ನೋಡಿ

ಆಪರೇಷನ್ ಸಿಂದೂರದಲ್ಲಿ ಭಾರತೀಯ ವಾಯುಪಡೆಯು ಪಾಕಿಸ್ತಾನದ ವಾಯುನೆಲೆಗಳ ಮೇಲೆ ನಿಖರ ದಾಳಿ ನಡೆಸಿ, ಪ್ರಮುಖ ಮೂಲಸೌಕರ್ಯಗಳಿಗೆ ಹಾನಿ ಮಾಡಿದೆ. ಭೋಲಾರಿ, ಜಾಕೋಬಾಬಾದ್, ಸರ್ಗೋಧಾ ಮತ್ತು ನೂರ್ ಖಾನ್ ವಾಯುನೆಲೆಗಳು ಈ ದಾಳಿಗೆ ಒಳಗಾಗಿವೆ.

ಪೂರ್ತಿ ಓದಿ
06:59 PM (IST) May 11

ಡಿಜಿಎಂಒ ಜಂಟೀ ಪತ್ರಿಕಾಗೋಷ್ಠಿ: ಭಾರತದ ದಾಳಿಯಿಂದ 35ಕ್ಕೂ ಹೆಚ್ಚು ಪಾಕ್‌ ಸೇನಾಧಿಕಾರಿಗಳ ಸಾವು

ಪಹಲ್ಗಾಮ್ ದಾಳಿಯ ನಂತರ, ಭಾರತವು ಆಪರೇಷನ್ ಸಿಂದೂರ್ ಅಡಿಯಲ್ಲಿ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಿತು. ಈ ನಿಖರ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನದ ದಾಳಿಗಳನ್ನು ಭಾರತ ಯಶಸ್ವಿಯಾಗಿ ವಿಫಲಗೊಳಿಸಿದೆ.

ಪೂರ್ತಿ ಓದಿ
06:51 PM (IST) May 11

'ಬದುಕಿ, ಬದುಕಲು ಬಿಡಿ' ಕದನ ವಿರಾಮ ಬಗ್ಗೆ ಉತ್ತರ ಪ್ರದೇಶದ ಮೌಲನಾ ಹೇಳಿದ್ದು ಪಾಕಿಸ್ತಾನಕ್ಕಾ? ಭಾರತಕ್ಕಾ?

ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಒಪ್ಪಂದವು ಧನಾತ್ಮಕ ಬದಲಾವಣೆ ತೋರಿಸುತ್ತಿದೆ. ದೇವಬಂದಿ ಸಿದ್ಧಾಂತದ ವಿದ್ವಾಂಸ ಮೌಲಾನಾ ಖಾರಿ ಇಶಾಕ್ ಗೋರಾ ಅವರು ಈ ಕದನ ವಿರಾಮವನ್ನು ಮಾನವೀಯತೆಯ ಪ್ರಾರ್ಥನೆಯ ಫಲವೆಂದು ಬಣ್ಣಿಸಿದ್ದಾರೆ. ಆದರೆ, ಕದನ ವಿರಾಮ ಜಾರಿಯಾದ ಬಳಿಕವೂ ಪಾಕಿಸ್ತಾನದಿಂದ ಡ್ರೋನ್ ದಾಳಿ ನಡೆದಿರುವುದು ಆತಂಕ ಮೂಡಿಸಿದೆ.

ಪೂರ್ತಿ ಓದಿ
06:40 PM (IST) May 11

ಗಡಿಯತ್ತ ಹೊರಟಿದ್ದ ಸೈನಿಕನ ಬಳಿ ಲಂಚ ಕೇಳಿದ TTE: ಮುಂದೇನಾಯ್ತು ಅಂತ ವಿಡಿಯೋ ನೋಡಿ

ಕರ್ತವ್ಯಕ್ಕೆ ತೆರಳುತ್ತಿದ್ದ ಸೈನಿಕನ ಬಳಿ ಟಿಕೆಟ್ ಪರಿಶೀಲಕ ಲಂಚ ಕೇಳಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಲಂಚ ಕೇಳಿದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸೈನಿಕ ತುರ್ತಾಗಿ ಗಡಿಗೆ ತೆರಳಬೇಕಿದ್ದರಿಂದ ಸಾಮಾನ್ಯ ಟಿಕೆಟ್ ಪಡೆದಿದ್ದರು.

ಪೂರ್ತಿ ಓದಿ
05:07 PM (IST) May 11

ಪಾಕ್‌ ಲೀಗ್ ಆತಿಥ್ಯಕ್ಕೆ ಯುಎಇ ನಿರಾಕರಿಸುವುದರ ಹಿಂದೆ ಜಯ್‌ ಶಾ ಪಾತ್ರ!

ಯುದ್ಧ ಪರಿಸ್ಥಿತಿಯಿಂದಾಗಿ ಪಾಕಿಸ್ತಾನ ತನ್ನ PSL ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ಯತ್ನಿಸಿತು, ಆದರೆ ಯುಎಇ ಆತಿಥ್ಯ ವಹಿಸಲು ನಿರಾಕರಿಸಿತು. ಈ ನಿರ್ಧಾರದ ಹಿಂದೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಐಸಿಸಿ ಮುಖ್ಯಸ್ಥ ಜಯ್ ಶಾ ಅವರ ಪ್ರಭಾವವಿದೆ ಎಂದು ವರದಿಯಾಗಿದೆ.

ಪೂರ್ತಿ ಓದಿ
05:02 PM (IST) May 11

ಅಲ್ಲಿಂದ ಗುಂಡು ಬಂದ್ರೆ, ಇಲ್ಲಿಂದಲೂ ಗುಂಡು ಸಿಡಿಯುತ್ತೆ; ಯಾರ ಮಧ್ಯಸ್ಥಿಕೆಯೂ ಬೇಡ; ಪ್ರಧಾನಿ ಮೋದಿ

ಪಾಕಿಸ್ತಾನದಿಂದ ಗುಂಡು ಬಂದರೆ, ಭಾರತದಿಂದ ಬಾಂಬ್ ಹೋಗಲಿದೆ ಎಂದು ಪ್ರಧಾನಿ ಮೋದಿ ಸೇನೆಗೆ ಸೂಚನೆ ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದೇ ಭಾರತದ ಗುರಿಯಾಗಿದ್ದು, ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತ್ರ ಮಾತುಕತೆ ನಡೆಸಲು ಸಿದ್ಧ ಎಂದಿದ್ದಾರೆ.

ಪೂರ್ತಿ ಓದಿ
04:51 PM (IST) May 11

ಪಾಕಿಸ್ತಾನ ಸೇನೆ ಸರ್ಕಾರ ಮಾತು ಕೇಳಲ್ಲ, ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ; ಸಚಿವ ಜೋಶಿ

ಪಾಕಿಸ್ತಾನದಲ್ಲಿ ಸೈನ್ಯವೇ ಪ್ರಬಲವಾಗಿದ್ದು ಚುನಾಯಿತ ಸರ್ಕಾರದ ಮಾತು ಕೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಬಲವಾದ ನಿಲುವು ತೆಗೆದುಕೊಂಡಿದ್ದು, ರಕ್ಷಣಾ ಪಡೆಗಳಿಗೆ ಮುಕ್ತ ಹಸ್ತ ನೀಡಲಾಗಿದೆ.

ಪೂರ್ತಿ ಓದಿ
04:48 PM (IST) May 11

ರೋಹಿತ್ ಶರ್ಮಾ ನಿವೃತ್ತಿ ಬೆನ್ನಲ್ಲೇ ಈ ಆಟಗಾರನಿಗೆ ಜಾಕ್‌ಪಾಟ್, ಇಂಗ್ಲೆಂಡ್ ಸರಣಿಗೆ ಆಯ್ಕೆ?

ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ಸಾಯಿ ಸುದರ್ಶನ್ ಆಡುವ ಸಾಧ್ಯತೆ ಇದೆ. ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಸುದರ್ಶನ್, ಆರಂಭಿಕ ಅಥವಾ ಮೂರನೇ ಕ್ರಮಾಂಕದಲ್ಲಿ ಆಡಬಹುದು. ರೋಹಿತ್ ಶರ್ಮಾ ನಿವೃತ್ತಿ ಹಿನ್ನೆಲೆಯಲ್ಲಿ ಯುವ ಆಟಗಾರರಿಗೆ ಅವಕಾಶ ಲಭ್ಯವಾಗುವ ಸಾಧ್ಯತೆಯಿದೆ.

ಪೂರ್ತಿ ಓದಿ
03:48 PM (IST) May 11

ಅಂತ್ಯಕ್ರಿಯೆಯ ಚಿತೆಯ ಬೂದಿ ಇದೆ, ಜಗತ್ತು ಸಿಂದೂರವನ್ನು ಕೇಳುತ್ತಿದೆ; ಕೊನೆಗೂ ಮೌನ ಮುರಿದ Amitabh Bachchan

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆಯ ಧೈರ್ಯವನ್ನು ಅಮಿತಾಬ್ ಬಚ್ಚನ್ ಶ್ಲಾಘಿಸಿದ್ದಾರೆ, 'ಆಪರೇಷನ್ ಸಿಂಧೂರ'ವನ್ನು ಗೌರವಿಸುತ್ತಾ ಕ್ರೌರ್ಯವನ್ನು ಖಂಡಿಸಿದ್ದಾರೆ ಮತ್ತು ರಾಷ್ಟ್ರೀಯ ರಕ್ಷಣೆ ಮತ್ತು ದೃಢಸಂಕಲ್ಪವನ್ನು ಒತ್ತಿ ಹೇಳಿದ್ದಾರೆ.

ಪೂರ್ತಿ ಓದಿ
03:02 PM (IST) May 11

ಭಾರತದ ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ; ಪಾಕ್‌ಗೆ ಎಚ್ಚರಿಕೆ ಕೊಟ್ಟ ವಾಯುಪಡೆ!

ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನ ಕುರಿತು ವಾಯುಪಡೆ ಮಾಹಿತಿ ನೀಡಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಸದ್ಯದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

ಪೂರ್ತಿ ಓದಿ
02:27 PM (IST) May 11

ವರ ಮಾಡಿದ ಒಂದು ತಮಾಷೆಯಿಂದ ಮದುವೆ ಮುರಿದುಕೊಂಡು ಹೋದ ವಧು!

ವರನ ಜನ್ಮದಿನದ ತಮಾಷೆಯ ಮಾತಿನಿಂದಾಗಿ ವಧು ಮದುವೆಯನ್ನು ಮುರಿದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವರನು ತನ್ನ ಜನ್ಮ ದಿನಾಂಕವನ್ನು ತಪ್ಪಾಗಿ ಹೇಳಿದ್ದರಿಂದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ.

ಪೂರ್ತಿ ಓದಿ
12:57 PM (IST) May 11

ರಾಜೇಶ್‌ ಕಾಲ್ರಾ ವಿಶೇಷ ಲೇಖನ: ಕದನ ವಿರಾಮಕ್ಕೆ ಭಾರತ ಒಪ್ಪಿದ್ದು ಏಕೆ?

ಯುದ್ಧ ಮುಂದುವರೆಸಿ ಪಿಒಕೆ(ಪಾಕ್‌ ಆಕ್ರಮಿತ ಕಾಶ್ಮೀರ)ಯನ್ನೂ ಯಾಕೆ ವಶಪಡಿಸಿಕೊಳ್ಳಬಾರದು? ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಬಹುತೇಕರು ಎಡವುತ್ತಿರುವುದು ಇಲ್ಲೇ. ಪಾಕಿಸ್ತಾನ ಒಂದು ವಿಫಲವಾಗಿರುವ ದೇಶ. 

ಪೂರ್ತಿ ಓದಿ
12:45 PM (IST) May 11

ಮತ್ತೆ ಯಾವತ್ತೂ ಪಾಕ್‌ಗೆ ಹೋಗಲ್ಲ ಎಂದ ಡ್ಯಾರಿಲ್‌ ಮಿಚೆಲ್‌, ಬಿಕ್ಕಿಬಿಕ್ಕಿ ಅತ್ತ ಕರ್ರನ್‌!

ಪಾಕಿಸ್ತಾನ ಸೂಪರ್ ಲೀಗ್ ನಿಂದ ದುಬೈಗೆ ಸ್ಥಳಾಂತರಗೊಂಡ ಆಟಗಾರರು ಪಾಕಿಸ್ತಾನಕ್ಕೆ ಮರಳಲು ಹಿಂದೇಟು ಹಾಕುತ್ತಿದ್ದಾರೆ. ಟೂರ್ನಿ ವೇಳೆ ಉಂಟಾದ ಭದ್ರತಾ ಆತಂಕಗಳಿಂದಾಗಿ ಆಟಗಾರರು ಭಯಭೀತರಾಗಿದ್ದಾರೆ ಎಂದು ವರದಿಯಾಗಿದೆ.

ಪೂರ್ತಿ ಓದಿ