ಭಾರತವು ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ನಂತರ, ಅಮೆರಿಕ ತಕ್ಷಣವೇ ಮಧ್ಯಸ್ಥಿಕೆ ವಹಿಸಲು ಪ್ರಾರಂಭಿಸಿತು.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಮಿಲಿಟರಿ ಮುಖಾಮುಖಿಯಲ್ಲಿ ಅತ್ಯಂತ ನಿರ್ಣಾಯಕ ತಿರುವು ಬಂದಿದ್ದು ಭಾರತವು ರಾವಲ್ಪಿಂಡಿ ಮೂಲದ ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದಾಗ. ಈ ದಾಳಿ ಎಷ್ಟು ನಾಟಕೀಯವಾಗಿತ್ತೆಂದರೆ, ಇಲ್ಲಿಯವರೆಗೆ ಪರಿಸ್ಥಿತಿಯಿಂದ ದೂರ ಉಳಿದಿದ್ದ ಅಮೆರಿಕ, ತಕ್ಷಣವೇ ಮಧ್ಯಸ್ಥಿಕೆ ಪ್ರಯತ್ನಗಳನ್ನು ಪ್ರಾರಂಭಿಸಬೇಕಾಯಿತು. ಅಮೆರಿಕದ ಈ ನಡೆಯ ಹಿಂದಿನ ಕಾರಣ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. 

Add Asianetnews Kannada as a Preferred SourcegooglePreferred

ವರದಿಗಳ ಪ್ರಕಾರ, ಮೂರು ವಾಯುನೆಲೆಗಳಲ್ಲಿ ಪ್ರಮುಖವಾದ ದಾಳಿ ನೂರ್ ಖಾನ್ ವಾಯುನೆಲೆಯ ಮೇಲೆ ನಡೆದಿತ್ತು. ಇದು ಪಾಕಿಸ್ತಾನದ ಮಿಲಿಟರಿ ಲಾಜಿಸ್ಟಿಕ್ಸ್‌ನ ಪ್ರಮುಖ ಕೇಂದ್ರವಾಗಿದೆ. ಈ ನೆಲೆಯು ಇಸ್ಲಾಮಾಬಾದ್‌ನಿಂದ ಕೇವಲ 10 ಕಿಲೋಮೀಟರ್ ದೂರ, ಪಾಕಿಸ್ತಾನ ಮಿಲಿಟರಿ ಪ್ರಧಾನ ಕಚೇರಿಯ ಪಕ್ಕದಲ್ಲಿದೆ. ಬೆನಜೀರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಾಷ್ಟ್ರೀಯ ಏರೋಸ್ಪೇಸ್ ಕೇಂದ್ರ ಕೂಡ ಈ ವಾಯುನೆಲೆಯ ಪಕ್ಕದಲ್ಲಿವೆ.

ದಲು ದೊಡ್ಡ ಸ್ಫೋಟ ಸಂಭವಿಸಿತು, ನಂತರ ಸ್ವಲ್ಪ ಸಮಯದ ನಂತರ ಎರಡನೆಯದು. ಜ್ವಾಲೆಗಳು ಕಾಣಿಸಿಕೊಂಡು ದಟ್ಟವಾದ ಹೊಗೆ ಕಾಣಿಸಿಕೊಳ್ಳಲು ಶುರುವಾಯ್ತು. ಇಡೀ ಪ್ರದೇಶವನ್ನು ಸೈನ್ಯವು ಸುತ್ತುವರೆದಿತ್ತು. ಮಾಧ್ಯಮದವರು ಮತ್ತು ಸಾಮಾನ್ಯ ಜನರು ಹತ್ತಿರ ಹೋಗಲು ಸಹ ಅವಕಾಶವಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಬಿಬಿಸಿ ಉರ್ದುಗೆ ಹೇಳಿದ್ದಾರೆ.

ಸಂಭಾವ್ಯ ಪರಮಾಣು ಬೆದರಿಕೆಯ ಎಚ್ಚರಿಕೆ
ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನದ ವಾಯು ಇಂಧನ ತುಂಬುವ ಸಾಮರ್ಥ್ಯ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ನೋಡಿಕೊಳ್ಳುವ ಕಾರ್ಯತಂತ್ರದ ಯೋಜನೆ ವಿಭಾಗಕ್ಕೆ ಬಹಳ ಹತ್ತಿರದಲ್ಲಿದೆ. ಇದೇ ಕಾರಣಕ್ಕೆ ಅಮೆರಿಕ ಭಾರತದ ಈ ಶಸ್ತ್ರಚಿಕಿತ್ಸಾ ಕ್ರಮವನ್ನು ಸಂಭಾವ್ಯ ಪರಮಾಣು ಬೆದರಿಕೆಯ ಎಚ್ಚರಿಕೆಯಾಗಿ ನೋಡಿತು (ನ್ಯೂಕ್ಲಿಯರ್ ಡೆಕಾಪಿಟೇಶನ್ ವಾರ್ನಿಂಗ್). ಪಾಕಿಸ್ತಾನದ ಪರಮಾಣು ಕಮಾಂಡ್ ರಚನೆಯು ನಾಶವಾಗಬಹುದು ಎಂಬುದು ಅದರ ದೊಡ್ಡ ಕಳವಳವಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದನ್ನು ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿದೆ.

ಇದನ್ನೂ ಓದಿ: ಪಾಕಿಸ್ತಾನ ಸೇನೆ ಸರ್ಕಾರದ ಮಾತು ಕೇಳಲ್ಲ, ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ; ಸಚಿವ ಜೋಶಿ

ದಾಳಿಯ ನಂತರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ (ಎನ್‌ಸಿಎ) ಸಭೆಯನ್ನು ಕರೆದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಸಭೆಯು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಆದರೆ, ಪಾಕಿಸ್ತಾನ ಸರ್ಕಾರ ಈ ಹೇಳಿಕೆಯನ್ನು ನಿರಾಕರಿಸಿದೆ.

ಭಾರತದ ಪ್ರತಿದಾಳಿ ಕಂಡು ಅಮೆರಿಕ ಶಾಕ್
ನೂರ್ ಖಾನ್ ವಾಯುನೆಲೆಯ ದಾಳಿಯಿಂದ ಮುಂದಾಗುವ ಅಪಾಯಗಳ ಬಗ್ಗೆ ಎಚ್ಚೆತ್ತ ಅಮೆರಿಕ ಮಧ್ಯಸ್ಥಿಕೆಗೆ ಮುಂದಾಯ್ತು ಎಂದು ವರದಿಯಾಗಿದೆ. ಭಾರತದ ಆಕ್ರಮಣಶೀಲತೆಯನ್ನು ಕಂಡು ಬೆಕ್ಕಸಬೆರಗೊಳಗಾದ ಅಮೆರಿಕ, ಮುಂದೆ ಪಾಕಿಸ್ತಾನದ ಸುರಕ್ಷಿತ ನೆಲೆಗಳ ಮೇಲೆಯೂ ದಾಳಿ ನಡೆಸಬಹುದು ಎಂದು ಅಂದಾಜಿಸಿತ್ತು. ಈ ವೇಳೆಗಾಗಲೇ ಪಾಕಿಸ್ತಾನ ಸಹ ಅಮೆರಿಕದ ಮುಂದೆ ಹೋಗಿತ್ತು. ಹಾಗಾಗಿ ಅಮೆರಿಕ ಮಧ್ಯಸ್ಥಿಕೆಗೆ ಮುಂದಾಯ್ತು ಎಂದು ವರದಿಗಳು ಬಂದಿವೆ. ಇದು ಪಾಕಿಸ್ತಾನದ ಮಿಲಿಟರಿ ಸನ್ನದ್ಧತೆಗೆ ಒಂದು ಹೊಡೆತ ಮಾತ್ರವಲ್ಲದೆ, ಈ ಸಂಘರ್ಷ ನಿಯಂತ್ರಣ ತಪ್ಪಿದರೆ, ಅದು ಜಾಗತಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಅಂತರರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆಯೂ ಆಗಿತ್ತು.

ಇದನ್ನೂ ಓದಿ: 'ಬದುಕಿ, ಬದುಕಲು ಬಿಡಿ' ಕದನ ವಿರಾಮ ಬಗ್ಗೆ ಉತ್ತರ ಪ್ರದೇಶದ ಮೌಲನಾ ಹೇಳಿದ್ದು ಪಾಕಿಸ್ತಾನಕ್ಕಾ? ಭಾರತಕ್ಕಾ?