ದೆಹಲಿ ಸ್ಫೋಟಕ್ಕೂ ಪುಲ್ವಾಮಾ ಲಿಂಕ್, ಕಾರು ಮಾಲೀಕ ಸಲ್ಮಾನ್ ವಶಕ್ಕೆ, ನದೀಮ್ಗೆ ಹುಡುಕಾಟ , ದೆಹಲಿ ಸ್ಫೋಟಕ್ಕೂ ಫರೀದಾಬಾದ್ ಸ್ಫೋಟಕ ಪತ್ತೆಗೂ ಲಿಂಕ್ ಇದೆ ಅನ್ನೋ ಅನುಮಾನ ಹೆಚ್ಚಾಗುತ್ತಿದೆ.
- Home
- News
- India News
- India News Live: ದೆಹಲಿ ಸ್ಫೋಟಕ್ಕೂ ಪುಲ್ವಾಮಾ ಲಿಂಕ್, ಕಾರು ಮಾಲೀಕ ಸಲ್ಮಾನ್ ವಶಕ್ಕೆ, ನದೀಮ್ಗೆ ಹುಡುಕಾಟ
India News Live: ದೆಹಲಿ ಸ್ಫೋಟಕ್ಕೂ ಪುಲ್ವಾಮಾ ಲಿಂಕ್, ಕಾರು ಮಾಲೀಕ ಸಲ್ಮಾನ್ ವಶಕ್ಕೆ, ನದೀಮ್ಗೆ ಹುಡುಕಾಟ

ಬೆಂಗಳೂರು : ‘1925ರಲ್ಲಿ ಆರ್ಎಸ್ಎಸ್ ಆರಂಭಿಸಿದ ಡಾ.ಹೆಡ್ಗೆವಾರ್ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಹಾಗಾದರೆ ನಾವು ಸಂಘವನ್ನು ಬ್ರಿಟಿಷ್ ಸರ್ಕಾರದಲ್ಲಿ ನೋಂದಣಿ ಮಾಡಬೇಕಿತ್ತೆ? ಸ್ವಾತಂತ್ರ್ಯಾನಂತರ ಸರ್ಕಾರವು ಸಂಘವನ್ನು ವ್ಯಕ್ತಿಗಳ ಸಂಘಟನೆ ಎಂದು ಗುರುತಿಸಿದೆ. ಆದಾಯ ತೆರಿಗೆ ಇಲಾಖೆಯು ಗುರುದಕ್ಷಿಣೆ ಗೆ ಆದಾಯ ತೆರಿಗೆ ವಿನಾಯಿತಿ ನೀಡಿದೆ ಎಂದು ಆರ್ಎಸ್ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ತನ್ಮೂಲಕ ಆರ್ಎಸ್ಎಸ್ ಏಕೆ ನೋಂದಣಿಯಾಗಿಲ್ಲ? ಎಂದು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ಸಿಗರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ. ಆರ್ಎಸ್ಎಸ್ ನೂರನೇ ವರ್ಷದ ಆಚರಣೆ ಪ್ರಯುಕ್ತ ನಗರದ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ‘ಸಂಘದ 100 ವರ್ಷ ಪಯಣ; ನವ ಕ್ಷಿತಿಜಗಳು ಶೀರ್ಷಿಕೆಯಡಿ ಆಯೋಜಿಸಿರುವ ಎರಡು ದಿನಗಳ ಉಪನ್ಯಾಸ ಮಾಲಿಕೆಯಲ್ಲಿ 2ನೇ ದಿನವಾದ ಭಾನುವಾರ ಪ್ರಶ್ನೋತ್ತರದ ವೇಳೆ ಅವರು ಮಾತನಾಡಿದರು. ಈ ಹಿಂದೆ ಮೂರು ಬಾರಿ ಸರ್ಕಾರವು ಸಂಘವನ್ನು ನಿಷೇಧಿಸಿದೆ ಎಂದರೆ ಅದು ಸಂಘವನ್ನು ಗುರುತಿಸಿದೆ ಎಂದಲ್ಲವೇ? ಸಂಘವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದೆ. ಹಾಗೆ ನೋಡಿದರೆ ಹಿಂದೂ ಧರ್ಮವೂ ನೋಂದಣಿ ಆಗಿಲ್ಲ ಅಲ್ಲವೇ ಎನ್ನುವ ಮುಖಾಂತರ ಆರ್ಎಸ್ಎಸ್ ಸಂಘಟನೆ ನೋಂದಣೆಯಾಗದಿರುವುದನ್ನು ಸಮರ್ಥಿಸಿಕೊಂಡರು.
National news today 10th november ದೆಹಲಿ ಸ್ಫೋಟಕ್ಕೂ ಪುಲ್ವಾಮಾ ಲಿಂಕ್, ಕಾರು ಮಾಲೀಕ ಸಲ್ಮಾನ್ ವಶಕ್ಕೆ, ನದೀಮ್ಗೆ ಹುಡುಕಾಟ
National news today 10th november ದೆಹಲಿ ಸ್ಫೋಟದ ಬಳಿಕ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ, ಉನ್ನತ ಮಟ್ಟದ ಸಭೆ
ದೆಹಲಿ ಸ್ಫೋಟದ ಬಳಿಕ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ, ಉನ್ನತ ಮಟ್ಟದ ಸಭೆ, ಘಟನೆಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಭಯೋತ್ಪಾದಕ ಕೃತ್ಯದ ಶಂಕೆ ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೇ ಮೋದಿ ಪ್ರತಿಕ್ರಿಯಿಸಿದ್ದಾರೆ.
National news today 10th november ದೆಹಲಿ ಸ್ಫೋಟ ಸಂಬಂಧ ಓರ್ವ ಶಂಕಿತ ಪೊಲೀಸ್ ವಶಕ್ಕೆ, ಎನ್ಐಎ ತನಿಖೆಗೆ ಆದೇಶಿಸಿದ ಅಮಿತ್ ಶಾ
ದೆಹಲಿ ಸ್ಫೋಟ ಸಂಬಂಧ ಓರ್ವ ಶಂಕಿತ ಪೊಲೀಸ್ ವಶಕ್ಕೆ, ಎನ್ಐಎ ತನಿಖೆಗೆ ಆದೇಶಿಸಿದ ಅಮಿತ್ ಶಾ , ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಎನ್ಐಎ ಜೊತೆ ಎನ್ಎಸ್ಜಿ ಕೂಡ ತನಿಖೆ ನಡೆಸಲಿದೆ. ಸ್ಥಳಕ್ಕೆ ಅಮಿತ್ ಶಾ ಭೇಟಿ ನೀಡುತ್ತಿದ್ದಾರೆ.
National news today 10th november ದೆಹಲಿ ಸ್ಫೋಟಕ್ಕೆ 10 ಸಾವು ಹಲವರಿಗೆ ಗಾಯ, ಬ್ಲಾಸ್ಟ್ ತೀವ್ರತೆ ಸಾರಿ ಹೇಳುತ್ತಿದೆ ಫೋಟೋಸ್
ದೆಹಲಿ ಸ್ಫೋಟಕ್ಕೆ 10 ಸಾವು ಹಲವರಿಗೆ ಗಾಯ, ಬ್ಲಾಸ್ಟ್ ತೀವ್ರತೆ ಸಾರಿ ಹೇಳುತ್ತಿದೆ ಫೋಟೋಸ್, ಭೀಕರ ಸ್ಫೋಟ ಸಂಭವಿಸಿದೆ. ಕೆಂಪು ಕೋಟೆ ಬಳಿ ಪಾರ್ಕ್ ಮಾಡಿದ್ದ ಎರಡು ಕಾರು ಸ್ಫೋಟಗೊಂಡಿದೆ. ಘಟನೆಯ ತೀವ್ರತೆಯನ್ನು ಫೋಟೋಗಳು ಹೇಳುತ್ತಿದೆ.
National news today 10th november ದೆಹಲಿ ಕೆಂಪು ಕೋಟೆ ಬಳಿ ಕಾರು ಬ್ಲಾಸ್ಟ್, ರಾಜಧಾನಿ, ಮುಂಬೈ ಸೇರಿ ಹಲವು ನಗರದಲ್ಲಿ ಹೈ ಅಲರ್ಟ್
ದೆಹಲಿ ಕೆಂಪು ಕೋಟೆ ಬಳಿ ಕಾರು ಬ್ಲಾಸ್ಟ್, ರಾಜಧಾನಿ, ಮುಂಬೈ ಸೇರಿ ಹಲವು ನಗರದಲ್ಲಿ ಹೈ ಅಲರ್ಟ್, ಕಾರು ಸ್ಫೋಟದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಯೋತ್ಪಾದಕ ಕೃತ್ಯ ಎಂದು ಶಂಕಿಸಲಾಗಿದೆ.
National news today 10th november Breaking ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ, ಭಯೋತ್ಪಾದಕ ಕೃತ್ಯದ ಶಂಕೆ
Breaking ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ, ಭಯೋತ್ಪಾದಕ ಕೃತ್ಯದ ಶಂಕೆ, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿರುವ ಶಂಕೆಯಿದೆ.
National news today 10th november ಡಿಜಿಟಲ್ ಗೋಲ್ಡ್, ಇ ಚಿನ್ನದ ಮೇಲೆ ಹೂಡಿಕೆ ಅಪಾಯ, ಹಗರಣ ಕುರಿತು ಸೆಬಿ ಎಚ್ಚರಿಕೆ
ಡಿಜಿಟಲ್ ಗೋಲ್ಡ್, ಇ ಚಿನ್ನದ ಮೇಲೆ ಹೂಡಿಕೆ ಅಪಾಯ, ಹಗರಣ ಕುರಿತು ಸೆಬಿ ಎಚ್ಚರಿಕೆ, ಹೂಡಿಕೆದಾರರು ಅತೀವ ಎಚ್ಚರಿಕೆ ವಹಿಸಬೇಕು, ಇದು ಅತೀ ದೊಡ್ಡ ಹಗರಣ ಎಂದು ಸೆಬಿ ಹೇಳಿದೆ. ಡಿಜಿಟಲ್ ಗೋಲ್ಡ್ ಸೆಬಿ ನಿಯಂತ್ರಣದಲ್ಲಿಲ್ಲ.
National news today 10th november ಈತ ಬಂದ್ರೆ ಧೋನಿ ಐಪಿಎಲ್ಗೆ ಗುಡ್ ಬೈ ಹೇಳ್ತಾರೆ - ಹೊಸ ಬಾಂಬ್ ಸಿಡಿಸಿದ ಮಾಜಿ ಕ್ರಿಕೆಟಿಗ!
2008ರಲ್ಲಿ ಧೋನಿ ಮತ್ತು ಜಡೇಜಾ ಒಟ್ಟಿಗೆ ಐಪಿಎಲ್ ಪಯಣ ಆರಂಭಿಸಿದ್ದರು. ಮೊದಲ ಸೀಸನ್ನಲ್ಲಿ ಚೆನ್ನೈಗೆ ಬಂದ ನಂತರ ಧೋನಿ ಬೇರೆಲ್ಲೂ ಹೋಗಿಲ್ಲ. ಇದೀಗ ಸಂಜು ಸ್ಯಾಮ್ಸನ್ ಚೆನ್ನೈ ತಂಡಕ್ಕೆ ಬಂದ್ರೆ ಧೋನಿ ಐಪಿಎಲ್ಗೆ ಮಧ್ಯದಲ್ಲೇ ಗುಡ್ ಬೈ ಹೇಳುವ ಸಾಧ್ಯತೆಯಿದೆ ಎಂದು ಮಾಜಿ ಕ್ರಿಕೆಟಿಗ ಬಾಂಬ್ ಸಿಡಿಸಿದ್ದಾರೆ
National news today 10th november ಸಂಜು ರಾಜಸ್ಥಾನ ರಾಯಲ್ಸ್ ತೊರೆದರೆ ಮುಂದಿನ ಕ್ಯಾಪ್ಟನ್ ಯಾರು? ಶುರುವಾಯ್ತು ಈ ಮೂವರ ನಡುವೆ ಫೈಟ್!
National news today 10th november ವೇಗವಾಗಿ ಸಾಗುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಹದ್ದು - ಗಾಜು ಒಡೆದು ಚಾಲಕನಿಗೆ ಗಾಯ
eagle breaks train windshield: ವೇಗವಾಗಿ ಚಲಿಸುತ್ತಿದ್ದ ಬಾರಾಮುಲ್ಲಾ-ಬನಿಹಾಲ್ ರೈಲಿಗೆ ಹದ್ದೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ರೈಲಿನ ಮುಂಭಾಗದ ಗಾಜು ಒಡೆದು, ಲೋಕೋ ಪೈಲಟ್ಗೆ ಗಾಯಗಳಾಗಿವೆ. ಡಿಕ್ಕಿಯ ರಭಸಕ್ಕೆ ಹದ್ದಿಗೂ ಗಾಯಗಳಾಗಿದೆ.
National news today 10th november ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಪಾನ್-ಆಧಾರ್ ಕಡ್ಡಾಯ; ಏನಿದು ನಿಯಮ?
ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಪಾನ್-ಆಧಾರ್ ಕಡ್ಡಾಯ; ಏನಿದು ನಿಯಮ? 2026ರಿಂದ ಹೊಸ ನಿಯಮಗಳು ಜಾರಿಯಾಗುತ್ತಿದೆ. ಕೈಯಲ್ಲಿ ನಗದು ಹಣವಿದೆ, ಅಕೌಂಟ್ನಲ್ಲಿ ದುಡ್ಡಿದೆ ಎಂದು ಕೈಬೀಸಿ ಚಿನ್ನ ಖರೀದಿಸಲು ಹೋದರೆ ಸಾಧ್ಯವಿಲ್ಲ.
National news today 10th november ಸಂಜುಗಾಗಿ ಜಡೇಜಾ ಕಳೆದುಕೊಳ್ಳಬೇಡಿ - ಚೆನ್ನೈ ಫ್ರಾಂಚೈಸಿಗೆ ಎಚ್ಚರಿಕೆ ಕೊಟ್ಟ ಮಾಜಿ ಕ್ರಿಕೆಟರ್
ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾರನ್ನು ಬಿಟ್ಟುಕೊಡುವ ಸಾಧ್ಯತೆಯ ಬಗ್ಗೆ ವರದಿಗಳಿದ್ದು, ಇದು CSK ಮಾಡುವ ದೊಡ್ಡ ತಪ್ಪಾಗಲಿದೆ ಎಂದು ಮಾಜಿ ಕ್ರಿಕೆಟಿಗ ಪ್ರಿಯಾಂಕ್ ಪಾಂಚಾಲ್ ಎಚ್ಚರಿಸಿದ್ದಾರೆ.
National news today 10th november ರಾಜಧಾನಿಗೆ ಸಮೀಪದಲ್ಲೇ 300 KG ಸ್ಫೋಟಕ ಪತ್ತೆ - ಒಂದೇ ವಾರದಲ್ಲಿ ಮತ್ತೊಬ್ಬ ಡಾಕ್ಟರ್ ಅರೆಸ್ಟ್
Doctor arrested for terrorism: ಜಮ್ಮು ಕಾಶ್ಮೀರದ ಪೊಲೀಸರು ಹರ್ಯಾಣದ ಫರಿದಾಬಾದ್ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬ ವೈದ್ಯನನ್ನು ಬಂಧಿಸಲಾಗಿದೆ.
National news today 10th november ರವೀಂದ್ರ ಜಡೇಜಾ ಇನ್ಸ್ಟಾಗ್ರಾಂ ಅಕೌಂಟ್ ನಾಪತ್ತೆ! ಚೆನ್ನೈ ಸೂಪರ್ ಕಿಂಗ್ಸ್ ತೊರೆಯೋದು ಗ್ಯಾರಂಟಿನಾ?
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತನ್ನ ರೀಟೈನ್ಷನ್ ಮಾಹಿತಿಯನ್ನು ಫೈನಲ್ ಮಾಡಬೇಕಿದೆ. ಆದರೆ ಸಿಎಸ್ಕೆ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಟ್ರೇಡಿಂಗ್ ವಿಚಾರ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅವರ ಇನ್ಸ್ಟಾಗ್ರಾಂ ಅಕೌಂಟ್ ನಾಪತ್ತೆಯಾಗಿದೆ.
National news today 10th november ಸತತ 8 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಬರೆದ ಆಕಾಶ್ ಕುಮಾರ್ ಚೌಧರಿ ಯಾರು? ಈತನ ಹಿನ್ನಲೆ ಏನು?
ಮೇಘಾಲಯದ ಕ್ರಿಕೆಟಿಗ ಆಕಾಶ್ ಕುಮಾರ್ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸತತ ಎಂಟು ಸಿಕ್ಸರ್ಗಳನ್ನು ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ, ಅವರು ಕೇವಲ 11 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕವನ್ನೂ ಗಳಿಸಿದರು. ಅಷ್ಟಕ್ಕೂ ಯಾರು ಈ ಆಕಾಶ್ ಕುಮಾರ್ ಚೌಧರಿ?
National news today 10th november ಡಿವೋರ್ಸ್ ಪ್ರಕರಣದಲ್ಲಿ ತಿಂಗಳಿಗೆ 6 ಲಕ್ಷ ಪರಿಹಾರ ಕೇಳಿದ ಪತ್ನಿ - ಅರ್ಜಿ ತಿರಸ್ಕರಿಸಿ ನ್ಯಾಯಾಧೀಶರು ಹೇಳಿದ್ದೇನು?
Divorce settlement amount: ಕೌಟುಂಬಿಕ ಕಲಹದ ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಯೊಬ್ಬರ ಮಾಸಿಕ 6 ಲಕ್ಷ ರೂಪಾಯಿಗಳ ಪರಿಹಾರದ ಬೇಡಿಕೆಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಆ ವಿಚಾರಣೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
National news today 10th november ಐಪಿಎಲ್ ಟ್ರೇಡ್ - ಸಂಜುಗಾಗಿ ಸಿಎಸ್ಕೆ-ಆರ್ಆರ್ ಮಹಾ ಒಪ್ಪಂದ? ಜಡ್ಡು ಜತೆ ಇಂಗ್ಲೆಂಡ್ ಆಟಗಾರ ರಾಯಲ್ಸ್ ಪಾಲು!
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಸಂಜು ಸ್ಯಾಮ್ಸನ್ ಅವರ ಟ್ರೇಡ್ ಒಪ್ಪಂದದ ವದಂತಿಗಳು ಹಬ್ಬಿವೆ. ಸಂಜುಗೆ ಬದಲಾಗಿ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರ್ರನ್ರನ್ನು ಬಿಟ್ಟುಕೊಡಲು ಸಿಎಸ್ಕೆ ಸಿದ್ಧವಿದೆ ಎಂದು ವರದಿಯಾಗಿದೆ.
National news today 10th november ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು - ಶೈಕ್ಷಣಿಕ ಸಾಲ ಮುಗಿಸಲು ಸ್ನೇಹಿತರಿಂದ ಗೋಫಂಡ್ ಅಭಿಯಾನ
Indian student dies in USA: ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿಯೊಬ್ಬರು ಹಠಾತ್ ಸಾವನ್ನಪ್ಪಿದ್ದು, ಬಡಕುಟುಂಬದಿಂದ ಬಂದ ವಿದ್ಯಾರ್ಥಿನಿ ಕುಟುಂಬಕ್ಕೆ ನೆರವಾಗಲು ಸ್ನೇಹಿತರು ಗೋಫಂಡ್ ಅಭಿಯಾನ ನಡೆಸಿದ್ದಾರೆ.
National news today 10th november ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ 7 ವರ್ಷ ಜೈಲು ಶಿಕ್ಷೆ! ಸಂತ್ರಸ್ತರಿಗೆ ಸರ್ಕಾರದಿಂದಲೇ ನೆರವು
7 years in prison for polygamy in Assam ಅಸ್ಸಾಂ ಸರ್ಕಾರವು ಬಹುಪತ್ನಿತ್ವವನ್ನು ನಿಷೇಧಿಸುವ ಹೊಸ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಕಾಯ್ದೆ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ವಿವಾಹವಾದರೆ, ಧರ್ಮ ಲೆಕ್ಕಿಸದೆ, ಆರೋಪಿಗೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
National news today 10th november ಬಿಹಾರ - ಬಹಿರಂಗ ಪ್ರಚಾರಕ್ಕೆ ತೆರೆ, ನಾಳೆ ಅಂತಿಮ ಸುತ್ತಿನ ಮತದಾನ, ನ.14ಕ್ಕೆ ಫಲಿತಾಂಶ
Bihar elections 2025 live updates: ಬಿಹಾರ ವಿಧಾನಸಭಾ ಚುನಾವಣೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ನ. 11 ರಂದು ಎರಡನೇ ಹಂತದ ಮತದಾನ ನಡೆಯಲಿದೆ ಮತ್ತು ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದರೆ,