- Home
- News
- India News
- India News Live: ಇಂದು ಬಿಹಾರಕ್ಕೆ ಮೊದಲ ಬಿಜೆಪಿ ಮುಖ್ಯಮಂತ್ರಿ, ಸಿಎಂ ರೇಸ್ನಲ್ಲಿ ಸಮರ್ಥ್ ಚೌಧರಿ?
India News Live: ಇಂದು ಬಿಹಾರಕ್ಕೆ ಮೊದಲ ಬಿಜೆಪಿ ಮುಖ್ಯಮಂತ್ರಿ, ಸಿಎಂ ರೇಸ್ನಲ್ಲಿ ಸಮರ್ಥ್ ಚೌಧರಿ?

ನವದೆಹಲಿ (ಏ.14): 1.5 ತಿಂಗಳಿನಿಂದ ಹೋರ್ಮುಜ್ ಜಲಸಂಧಿಯನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡು ಜಗತ್ತಿನ ಆರ್ಥಿಕತೆಯ ಉಸಿರುಗಟ್ಟಿಸಿದ್ದ ಇರಾನ್ ವಿರುದ್ಧ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ನಿರ್ಬಂಧವನ್ನು ಪ್ರತ್ಯಸ್ತವಾಗಿ ಬಳಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಸೋಮವಾರ ಸಂಜೆ 7.30ರಿಂದಲೇ ಜಲಸಂಧಿಯಲ್ಲಿ ಇರಾನ್ನ ಹಡಗು ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಇರಾನ್ನ ಯಾವುದೇ ಹಡಗು ಜಲಸಂಧಿ ಬಳಿ ಬಂದರೆ ಅದನ್ನು ಧ್ವಂಸಗೊಳಿಸುವುದಾಗಿ ಟ್ರಂಪ್ ಎಚ್ಚರಿಸಿದ್ದು, 15 ಸಮರ ನೌಕೆ ನಿಯೋಜಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 14th April: ಇಂದು ಬಿಹಾರಕ್ಕೆ ಮೊದಲ ಬಿಜೆಪಿ ಮುಖ್ಯಮಂತ್ರಿ, ಸಿಎಂ ರೇಸ್ನಲ್ಲಿ ಸಮರ್ಥ್ ಚೌಧರಿ?
India News Live 14th April: ಮಹಾರಾಷ್ಟ್ರ ಕಾರ್ಪೊರೇಟ್ ಜಿಹಾದ್ - ಟಿಸಿಎಸ್ನ 7 ಜನ ಅಮಾನತು
ನಾಸಿಕ್ನ ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರಕ್ಕೆ ಒತ್ತಾಯಿಸಿದ 'ಕಾರ್ಪೊರೆಟ್ ಜಿಹಾದ್' ಆರೋಪ ಕೇಳಿಬಂದಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಟಿಸಿಎಸ್, ಆರೋಪಿಗಳನ್ನು ಅಮಾನತುಗೊಳಿಸಿದೆ.
India News Live 14th April: ಮತಗಟ್ಟೆಗಳಲ್ಲಿ ಬೆರಳಚ್ಚು, ಕಣ್ಣಿನ ಬಯೋಮೆಟ್ರಿಕ್ - ಸುಪ್ರೀಂನಿಂದ ವಿಚಾರಣೆ
ನಕಲಿ ಮತದಾನ ತಡೆಯಲು ಮತಗಟ್ಟೆಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಪ್ಪಿಕೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
India News Live 14th April: 'ಯುದ್ಧ ದೇವರು ಮೆಚ್ಚಲ್ಲ' ಎಂದ ಪೋಪ್ ವಿರುದ್ಧವೇ ತಿರುಗಿಬಿದ್ದ ಟ್ರಂಪ್! ಯೇಸುವಿನ ರೂಪದ ಎಐ ಫೋಟೋ ಹಂಚಿಕೊಂಡು ವಾಗ್ದಾಳಿ!
ಯುದ್ಧ ನಿಲ್ಲಿಸಲು ಕರೆ ನೀಡಿದ ಪೋಪ್ ಲಿಯೋ 14 ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮನ್ನು ಯೇಸುವಿಗೆ ಹೋಲಿಸುವ ಎಐ ನಿರ್ಮಿತ ಫೋಟೋವನ್ನು ಹಂಚಿಕೊಳ್ಳುವ ಮೂಲಕ, ಪೋಪ್ರ ಶಾಂತಿ ಸಂದೇಶವನ್ನು ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ.
India News Live 14th April: ಹೋರ್ಮುಜ್ ಜಲಸಂಧಿ ಪ್ರವೇಶಕ್ಕೆ ಇರಾನ್ಗೇ ನಿರ್ಬಂಧ! ಸಮೀಪ ಬಂದ್ರೆ ಉಡೀಸ್ ಮಾಡ್ತೀವಿ ಟ್ರಂಪ್ ಬೆದರಿಕೆ, ಭಾರತಕ್ಕೆ ಆತಂಕ ಇಲ್ಲ ಏಕೆ?
ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ಸಂಚಾರವನ್ನು ಅಮೆರಿಕ ನಿರ್ಬಂಧಿಸಿದೆ. ಇರಾನ್ ಹಡಗುಗಳು ಕಂಡರೆ ಧ್ವಂಸ ಮಾಡುವುದಾಗಿ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದು, ಇದಕ್ಕೆ ಪ್ರತಿಯಾಗಿ ಇಡೀ ಕೊಲ್ಲಿಯನ್ನು ಅಸ್ಥಿರಗೊಳಿಸುವುದಾಗಿ ಇರಾನ್ ತಿರುಗೇಟು ನೀಡಿದೆ, ಇದರಿಂದ ಮತ್ತೆ ಯುದ್ಧದ ಭೀತಿ ಆವರಿಸಿದೆ.