08:45 PM (IST) Apr 18

India News Live 18th April: ನಾರಿಶಕ್ತಿ ವಂದನಾ ಮಸೂದೆಗೆ ಸೋಲು - ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ

ಲೋಕಸಭೆಯಲ್ಲಿ ನಾರಿಶಕ್ತಿ ವಂದನಾ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ್ದಾರೆ. ಮಸೂದೆ ವಿಫಲವಾಗಲು ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿಪಕ್ಷಗಳೇ ಕಾರಣ ಎಂದು ಆರೋಪಿಸಿದ ಅವರು, ವಿಪಕ್ಷಗಳು ನಾರಿಶಕ್ತಿಗೆ ಅವಮಾನ ಮಾಡಿವೆ ಎಂದು ವಾಗ್ದಾಳಿ ನಡೆಸಿದರು.

Read Full Story
08:13 PM (IST) Apr 18

India News Live 18th April: ನಂಬಿ ಬಂದ ನಟಿಗೆ ಸೆಟ್‌ನಲ್ಲೇ ಅವಮಾನ - ಚಿರಂಜೀವಿ ಚಿತ್ರದಲ್ಲಿ ರಾಧಿಕಾಗೆ ಆಗಿದ್ದೇನು?

1981ರಲ್ಲಿ ಕ್ರಾಂತಿ ಕುಮಾರ್ ನಿರ್ಮಾಣದಲ್ಲಿ 'ಕಿರಾಯಿ ರೌಡಿಲು' ಚಿತ್ರ ತೆರೆಕಂಡಿತ್ತು. ಇದರಲ್ಲಿ ಚಿರಂಜೀವಿ, ಮೋಹನ್ ಬಾಬು, ರಾಧಿಕಾ ಮುಖ್ಯಭೂಮಿಕೆಯಲ್ಲಿದ್ದರು. ಕೋದಂಡ ರಾಮಿರೆಡ್ಡಿ ಈ ಚಿತ್ರದ ನಿರ್ದೇಶಕರು.

Read Full Story
08:03 PM (IST) Apr 18

India News Live 18th April: ಮಲವಿಸರ್ಜನೆಗೆ ತೆರಳಿದಾಗ ಅತಿ ಆಯಾಸದಿಂದ 10 ವರ್ಷದ ಸ್ಮರಣ ಶಕ್ತಿ ಕಳೆದುಕೊಂಡ ಮಹಿಳೆ

ಮಹಿಳೆಯೊಬ್ಬರು ಮಲಬದ್ಧತೆಯಿಂದಾಗಿ ಶೌಚಾಲಯದಲ್ಲಿ ಅತಿಯಾಗಿ ಆಯಾಸಗೊಂಡ ಪರಿಣಾಮ, ತಮ್ಮ 10 ವರ್ಷಗಳ ನೆನಪಿನ ಶಕ್ತಿಯನ್ನು ತಾತ್ಕಾಲಿಕವಾಗಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ವೈದ್ಯರು ಏನು ಹೇಳ್ತಾರೆ? ಈ ಸಮಸ್ಯೆಗೆ ಕಾರಣ ಏನು?

Read Full Story
07:38 PM (IST) Apr 18

India News Live 18th April: 'ಡಕಾಯಿತ್' ಹಿಟ್ ಆಗ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ಅಡಿವಿ ಶೇಷ್? ಈಗ ಡಿಮ್ಯಾಂಡ್ ಎಷ್ಟು ಕೋಟಿ?

ಡಕಾಯಿತ್ ಸಿನಿಮಾ ಯಶಸ್ಸಿನ ನಂತರ ನಟ ಅಡಿವಿ ಶೇಷ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಕಂಟೆಂಟ್ ಇರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವ ಈ ನಟ, ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾದರೆ ಅವರು ಎಷ್ಟು ಕೋಟಿ ಬೇಡಿಕೆ ಇಡುತ್ತಿದ್ದಾರೆ?

Read Full Story
07:21 PM (IST) Apr 18

India News Live 18th April: ಅಕ್ಷಯ್ ಕುಮಾರ್ ಮಗ ಹೀರೋ ಆಗಲ್ವಂತೆ - ಮಾಡ್ತಿರೋದು ಬರೀ ಇಷ್ಟು ಸಾವಿರದ ಕೆಲಸ!

ಸಿನಿಮಾ ಇಂಡಸ್ಟ್ರಿಯಲ್ಲಿ ನಟರ ಮಕ್ಕಳು ನಟರಾಗೋದೇ ಹೆಚ್ಚು. ಆದರೆ 'ಭೂತ್ ಬಂಗ್ಲಾ' ಸ್ಟಾರ್ ಅಕ್ಷಯ್ ಕುಮಾರ್ ಮಗನ ವಿಷಯದಲ್ಲಿ ಇದು ಸುಳ್ಳಾಗಿದೆ. ಅಕ್ಷಯ್ ಪ್ರಕಾರ, ಅವರ ಮಗ ಆರವ್ ಭಾಟಿಯಾಗೆ ಸಿನಿಮಾಗಳಲ್ಲಿ ಕೆಲಸ ಮಾಡಲು ಇಷ್ಟವಿಲ್ಲವಂತೆ.

Read Full Story
06:23 PM (IST) Apr 18

India News Live 18th April: ಕರೆದಿದ್ದು ಊಟಕ್ಕೆ ಮುಂದೆ ನಡೆದಿದ್ದೇ ಬೇರೆ; 27 ವರ್ಷಗಳ ಹಿಂದಿನ ಮಾಧವನ್ ಲವ್ ಸ್ಟೋರಿ ವೈರಲ್!

ಸಿನೆಮಾ ರಂಗದ ಗ್ಲಾಮರ್ ಜಗತ್ತಿನಲ್ಲಿದ್ದರೂ ಮಾಧವನ್ ಎಂದಿಗೂ ವಿವಾದಗಳಿಗೆ ಸಿಲುಕಿದವರಲ್ಲ. ಸರಿತಾ ಸದಾ ಮಾಧವನ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇಂದಿಗೂ ಸಿನೆಮಾ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಇವರಿಗೆ ವೇದಾಂತ್ ಎಂಬ ಮಗನಿದ್ದಾನೆ. 

Read Full Story
06:21 PM (IST) Apr 18

India News Live 18th April: ಮೂಗಿನೊಳಗೆ ಸಿಲುಕಿದ ಯುವತಿ ಮೂಗುತಿ; ಅಗ್ನಿಶಾಮಕದಳದ ಸಿಬ್ಬಂದಿಯಿಂದ ಯಶಸ್ವಿ ಆಪರೇಷನ್!

ಪಟ್ಟಮಟ್ಟಂ ನಿವಾಸಿ ಯುವತಿಯೊಬ್ಬರ ಮೂಗುತಿ ಮೂಗಿನೊಳಗೆ ಆಳವಾಗಿ ಸಿಲುಕಿಕೊಂಡು ಆತಂಕ ಸೃಷ್ಟಿಸಿತ್ತು. ಕುಟುಂಬದ ಪ್ರಯತ್ನ ವಿಫಲವಾದಾಗ, ಅಗ್ನಿಶಾಮಕ ದಳದ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಮೂಗುತಿಯನ್ನು ಸುರಕ್ಷಿತವಾಗಿ ಹೊರತೆಗೆದು ಯುವತಿಯನ್ನು ರಕ್ಷಿಸಿದರು.
Read Full Story
06:06 PM (IST) Apr 18

India News Live 18th April: RCB ಇವತ್ತು ರೆಡ್ ಜೆರ್ಸಿ ಬಿಟ್ಟು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 'ಗೋ ಗ್ರೀನ್' ಉಪಕ್ರಮದ ಭಾಗವಾಗಿ ಹಸಿರು ಜರ್ಸಿ ಧರಿಸಿ ಕಣಕ್ಕಿಳಿದಿದೆ. ಮರುಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಾದ ಈ ವಿಶೇಷ ಜರ್ಸಿಯಲ್ಲಿ ತಂಡದ ಪ್ರದರ್ಶನದ ಇತಿಹಾಸ ಮತ್ತು ಪಂದ್ಯದ ಸಂಕ್ಷಿಪ್ತ ವರದಿಯನ್ನು ಈ ಲೇಖನ ಒಳಗೊಂಡಿದೆ.
Read Full Story
05:54 PM (IST) Apr 18

India News Live 18th April: ಆಗ ಬಾಲಿವುಡ್​ ನಟಿ, ಈಗ ಜರ್ಮನ್​ ಬ್ಯೂಟಿ - ವಿರಾಟ್​ ಕೊಹ್ಲಿ ರಾತ್ರಿಯ 'Like' ಸೃಷ್ಟಿಸಿದೆ ಹಲ್​ಚಲ್​

ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆಯು ಜರ್ಮನ್ ಪ್ರಭಾವಿಯೊಬ್ಬರ ಫೋಟೋವನ್ನು ಲೈಕ್ ಮಾಡಿ, ನಂತರ ಅನ್‌ಲೈಕ್ ಮಾಡಿದ್ದು ರಾತ್ರೋರಾತ್ರಿ ವೈರಲ್ ಆಗಿದೆ. ಈ ಹಿಂದೆ ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದಾಗಲೂ ಇದೇ ರೀತಿ ವಿವಾದ ಸೃಷ್ಟಿಯಾಗಿತ್ತು. ಈ ಘಟನೆಯ ಬಗ್ಗೆ ಸ್ವತಃ ಜರ್ಮನ್ ನಟಿ ಬೇಸರ ವ್ಯಕ್ತಪಡಿಸಿದ್ದು, ನೆಟ್ಟಿಗರು ಕೊಹ್ಲಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
Read Full Story
05:52 PM (IST) Apr 18

India News Live 18th April: ನನ್ನ ಹೃದಯದಲ್ಲಿ ನಿರಂತರ ನೋವಿದೆ - ಅಮ್ಮನ ನೆನಪಲ್ಲಿ ಕಣ್ಣೀರಿಟ್ಟ ನಟಿ ಜರೀನ್ ಖಾನ್

ತಾಯಿ ಪರ್ವೀನ್ ಖಾನ್ ನಿಧನದ ನಂತರ ನಟಿ ಜರೀನ್ ಖಾನ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಮ್ಮನೇ ನನ್ನ ಪ್ರಪಂಚ, ನನ್ನ ಎಲ್ಲವೂ ಆಗಿದ್ದರು. ನನ್ನ ಹೃದಯದಲ್ಲಿ ನಿರಂತರ ನೋವಿದೆ ಮತ್ತು ಖಾಲಿತನ ಕಾಡುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

Read Full Story
05:38 PM (IST) Apr 18

India News Live 18th April: ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ನಟ ವಿದ್ಯುತ್ ಜಮ್ವಾಲ್ - ಮಂತ್ರಮುಗ್ಧರಾದ ಸ್ಟಾರ್ಸ್

ಲಾಸ್ ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್ ಈವೆಂಟ್‌ನಲ್ಲಿ ನಟ ವಿದ್ಯುತ್ ಜಮ್ವಾಲ್ ತಮ್ಮ 'ಸ್ಟ್ರೀಟ್ ಫೈಟರ್' ಚಿತ್ರದ ಟ್ರೈಲರ್ ಲಾಂಚ್ ವೇಳೆ ಗಾಯತ್ರಿ ಮಂತ್ರ ಪಠಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ನಡೆಗೆ ಸಹನಟರಾದ ನೋವಾ ಸೆಂಟಿನಿಯೊ ಮತ್ತು ಜೇಸನ್ ಮೊಮೊವಾ ಮಂತ್ರಮುಗ್ಧರಾಗಿದ್ದಾರೆ.

Read Full Story
05:31 PM (IST) Apr 18

India News Live 18th April: ಅತಿವೇಗದ ಐಪಿಎಲ್ 1000 ರನ್! ಸಾಲ್ಟ್, ಹೆಡ್ ದಾಖಲೆ ಮುರಿದ ಟಿಮ್ ಡೇವಿಡ್‌ಗೆ ಎರಡನೇ ಸ್ಥಾನ!

ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಅತಿವೇಗವಾಗಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story
05:05 PM (IST) Apr 18

India News Live 18th April: 'ದುಪಟ್ಟಾ ಬಿಸಿ ಮಾಡಿ ಕಣ್ಣಿಗಿಡುತ್ತಿದ್ದರು' - ಅಮ್ಮನ ನೆನಪಲ್ಲಿ ಭಾವುಕರಾದ ಅಮಿತಾಭ್ ಬಚ್ಚನ್!

ಈ ಪೋಸ್ಟ್‌ನ ಮುಖ್ಯ ಉದ್ದೇಶವೇ ದಿವಂಗತ ತಾಯಿ ತೇಜಿ ಬಚ್ಚನ್ ಅವರನ್ನು ನೆನಪಿಸಿಕೊಳ್ಳುವುದಾಗಿತ್ತು. ಬಾಲ್ಯದಲ್ಲಿ ತಾಯಿ ತಮಗೆ ಮಾಡುತ್ತಿದ್ದ 'ಮನೆಮದ್ದು' ಉಪಚಾರವನ್ನು ಅಮಿತಾಭ್ ವಿವರಿಸಿದ್ದಾರೆ.

Read Full Story
04:47 PM (IST) Apr 18

India News Live 18th April: ಪಾದಯಾತ್ರೆಯಲ್ಲಿ ದೀದೀ ಜೀವ ಬಾಯಿಗೆ ತಂದ ಅಭಿಮಾನಿ - ಹೃದಯ ಅರೆಕ್ಷಣ ಸ್ತಬ್ಧ- Video Viral

ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾದಯಾತ್ರೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಅಭಿಮಾನಿಯೊಬ್ಬರು ದಿಢೀರನೆ ಅವರ ಕಾಲಿಗೆ ಬೀಳಲು ಬಂದಾಗ ದೀದಿ ಬೆಚ್ಚಿಬಿದ್ದಿದ್ದು, ಈ ಘಟನೆಯು ರಾಜಕೀಯ ನಾಯಕರ ಭದ್ರತೆಯ ಆತಂಕವನ್ನು ನೆನಪಿಸಿದೆ.
Read Full Story
04:45 PM (IST) Apr 18

India News Live 18th April: ಆ ಇಬ್ಬರು ಬೌಲರ್‌ಗಳಿಗೆ ಸಂಬಳ ಕೊಟ್ಟು ಮನೆಗೆ ಕಳಿಸಿ! ಮುಂಬೈ ಇಂಡಿಯನ್ಸ್‌ ವೇಗಿಗಳ ಮೇಲೆ ಕಿಡಿಕಾರಿದ ಮಾಜಿ ಕ್ರಿಕೆಟಿಗ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‌ಗಳಾದ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹಾರ್ ಅವರ ಕಳಪೆ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಆಟಗಾರರಿಗೆ ಸಂಬಳ ಕೊಟ್ಟು ಮನೆಗೆ ಕಳುಹಿಸುವಂತೆ ಸಲಹೆ ನೀಡಿದ್ದು, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದ್ದಾರೆ.

Read Full Story
04:44 PM (IST) Apr 18

India News Live 18th April: ಮದ್ವೆ ನಂತರ ನಾಲ್ಕು ನಾಯಿಗಳ ಜೊತೆ ಬಂದ ವಿಜಯ್ ದೇವರಕೊಂಡ - ಪೌರಾಣಿಕ ಲೋಕದಲ್ಲಿ ಭರ್ಜರಿ ಎಂಟ್ರಿ

'ಹಾಯ್ ನಾನ್ನ' ಖ್ಯಾತಿಯ ನಿರ್ದೇಶಕ ಶೌರ್ಯುವ್ ಜೊತೆ ನಟ ವಿಜಯ್ ದೇವರಕೊಂಡ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಇದೊಂದು ದೊಡ್ಡ ಮಟ್ಟದ, ಪೌರಾಣಿಕ ಹಿನ್ನೆಲೆಯುಳ್ಳ ಚಿತ್ರವಾಗಲಿದೆ.

Read Full Story
03:58 PM (IST) Apr 18

India News Live 18th April: ಕೋವಿಡ್​ನಲ್ಲಿ ರೀಲ್ಸ್​ ನೋಡಿದ್ದೇ ಬದಲಾಗೋಯ್ತು ಬದುಕು - 21ನೇ ವಯಸ್ಸಲ್ಲಿ ಕೋಟಿ ಕೋಟಿ ಗಳಿಕೆ

ಕೋವಿಡ್ ಸಮಯದಲ್ಲಿ ರೀಲ್ಸ್ ನೋಡುತ್ತಾ ಕಾಲ ಕಳೆದ 16 ವರ್ಷದ ದಿಗ್ವಿಜಯ ಸಿಂಗ್, ಮನೆಯಲ್ಲಿಯೇ ಚಾಕಲೇಟ್ ತಯಾರಿಸಲು ಆರಂಭಿಸಿದರು. ಹವ್ಯಾಸವಾಗಿ ಶುರುವಾದ ಈ ಚಾಕಲೇಟ್ ತಯಾರಿಕೆ, ಇಂದು 'ಸಾರಮ್' ಎಂಬ ಬ್ರ್ಯಾಂಡ್‌ನಡಿಯಲ್ಲಿ ಕೋಟಿ ರೂಪಾಯಿ ವ್ಯವಹಾರವಾಗಿ ಬೆಳೆದು, ಅವರನ್ನು ಯುವ ಉದ್ಯಮಿಯನ್ನಾಗಿಸಿದೆ.
Read Full Story
03:55 PM (IST) Apr 18

India News Live 18th April: ದೇಶವನ್ನದ್ದುದೇಶಿ ಪ್ರಧಾನಿ ಮೋದಿ ಮಾತು ; ಈ ಬಾರಿ ಸಮಯ 8 ಗಂಟೆ ಅಲ್ಲ, 8.30 ಯಾಕೆ?

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋತ ನಂತರ, ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ವಿಪಕ್ಷಗಳ ಒಗ್ಗಟ್ಟಿನಿಂದಾಗಿ ಸರ್ಕಾರದ ಪ್ರಯತ್ನ ವಿಫಲವಾಗಿದೆ.

Read Full Story
03:20 PM (IST) Apr 18

India News Live 18th April: 25ನೇ ವಯಸ್ಸಿಗೆ ಮಾಡಿದ ಆ ಒಂದು ನಿರ್ಧಾರವೇ ನನ್ನ ಜೀವನದ ಮಹಾ ದೊಡ್ಡ ತಪ್ಪು - ನಟಿ ಜಯಪ್ರದಾ ಹೇಳಿದ ಸೀಕ್ರೆಟ್!

ಬೆಳ್ಳಿತೆರೆಯ ಮೇಲೆ ರಾಣಿಯಂತೆ ಮೆರೆದ ಜಯಪ್ರದಾ ಅವರ ಈ ಮಾತುಗಳು ಸಿನೆಮಾ ರಂಗದ ಗ್ಲಾಮರ್ ಅಡಿಯಲ್ಲೂ ಎಂತಹ ಕರಾಳ ಸತ್ಯಗಳು ಅಡಗಿರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಭಿಮಾನಿಗಳು ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದು, "ನೀವು ಇಂದಿಗೂ ನಮಗೆ ಸ್ಫೂರ್ತಿ" ಎಂದಿದ್ದಾರೆ.

Read Full Story
02:28 PM (IST) Apr 18

India News Live 18th April: Exclusive Interview - ಜೀವನದ ದಿಕ್ಕೇ ಬದಲಿಸಿ 'ಮಿಸ್​ ಯೂನಿವರ್ಸ್​ ಕರ್ನಾಟಕ' ಪಟ್ಟ ಕೊಟ್ಟ ಆ ಗಾಯ

ಬೆಂಗಳೂರಿನಲ್ಲಿ ನಡೆದ ಮಿಸ್​ ಯೂನಿವರ್ಸ್​ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ವಿಜೇತರಾಗಿದ್ದಾರೆ. ಬಾಸ್ಕೆಟ್​ ಬಾಲ್​ ಆಟಗಾರ್ತಿಯಾಗುವ ಕನಸು ಕಂಡಿದ್ದ ಲೇಖನಾ, ಗಾಯದ ಕಾರಣದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಇದೀಗ ಮಿಸ್​ ಯೂನಿವರ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Read Full Story