ವಿಮಾನಕ್ಕಿಂತಲೂ ಲಕ್ಷುರಿ, ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ? ವಿಡಿಯೋ ಹಂಚಿಕೊಂಡ ಸಚಿವ ಅಶ್ವಿನಿ ವೈಷ್ಣವ್. ಅತ್ಯಾಧುನಿಕ ಸೌಲಭ್ಯ, ಆರಾಮದಾಯಕ ಪ್ರಯಾಣ ನೀಡಲಿರುವ ವಂದೇ ಭಾರತ್ ಸ್ಲೀಪರ್ ರೈಲಿನ ವಿಡಿಯೋ ಇಲ್ಲಿದೆ.
- Home
- News
- India News
- India Latest News Live: ವಿಮಾನಕ್ಕಿಂತಲೂ ಲಕ್ಷುರಿ, ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ? ವಿಡಿಯೋ ಹಂಚಿಕೊಂಡ ಸಚಿವ
India Latest News Live: ವಿಮಾನಕ್ಕಿಂತಲೂ ಲಕ್ಷುರಿ, ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ? ವಿಡಿಯೋ ಹಂಚಿಕೊಂಡ ಸಚಿವ
ನವದೆಹಲಿ: ಕೆಲ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ರಾಜ್ಯಸಭೆ ಸಂಸದೆ ಮೌಸಮ್ ನೂರ್(46) ಅವರು ಶನಿವಾರ ಕಾಂಗ್ರೆಸ್ಗೆ ಮರುಸೇರ್ಪಡೆಗೊಂಡಿದ್ದಾರೆ. ಚುನಾವಣೆಯಲ್ಲಿ ಇವರು ಮಾಲ್ದಾದಿಂದ ಸ್ಪರ್ಧಿಸುವ ನಿರೀಕ್ಷೆಯಿದ್ದು. ಟಿಎಂಸಿಗೆ ಶಾಕ್ ನೀಡಿದ್ದಾರೆ. ನೂರ್ ಅವರು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪಕ್ಷದ ನಾಯಕರಾದ ಜೈರಾಂ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮೀರ್ ಹಾಗೂ ಪಿಸಿಸಿ ಅಧ್ಯಕ್ಷ ಶುಭಂಕರ್ ಸರ್ಕಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರಿದರು.
ತಾಯಿ ರೂಬಿ ನೂರ್ರ ನಿಧನಾನಂತರ 2009ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಮೌಸಮ್, 2009ರಿಂದ 2019ರ ವರೆಗೆ ನಿರಂತರ 2 ಬಾರಿ ಮಾಲ್ದಾದಿಂದ ಲೋಕಸಭೆಯ ಸದಸ್ಯೆಯಾಗಿದ್ದರು. 2019ರ ಜನವರಿಯಲ್ಲಿ ಟಿಎಂಸಿ ಸೇರಿದ್ದರು.
India Latest News Live 4 January 2026ವಿಮಾನಕ್ಕಿಂತಲೂ ಲಕ್ಷುರಿ, ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ? ವಿಡಿಯೋ ಹಂಚಿಕೊಂಡ ಸಚಿವ
India Latest News Live 4 January 2026ಅತೀ ಕಿರಿಯ ವಯಸ್ಸಿಗೆ ಭಾರತ ತಂಡದ ನಾಯಕ, ಯೂತ್ ODIನಲ್ಲಿ ವೈಭವ್ ಸೂರ್ಯವಂಶಿ ದಾಖಲೆ
ಅತೀ ಕಿರಿಯ ವಯಸ್ಸಿಗೆ ಭಾರತ ತಂಡದ ನಾಯಕ, ಯೂತ್ ODIನಲ್ಲಿ ವೈಭವ್ ಸೂರ್ಯವಂಶಿ ದಾಖಲೆ ಬರೆದಿದ್ದಾನೆ. ಕೇವಲ 14ನೇ ವಯಸ್ಸಿಗೆ ಯೂತ್ ಏಕದಿನದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ವಿಶ್ವ ದಾಖಲೆ.
India Latest News Live 4 January 2026ವಿಜ್ಞಾನಕ್ಕೇ ಸವಾಲು ಗರುಡ ಪಕ್ಷಿಯ ಕಣ್ಣುಗಳು - ವಿಡಿಯೋ ಮೂಲಕ ನಂಬಲಸಾಧ್ಯ ನಿಗೂಢ ಸತ್ಯ ತೆರೆದಿಟ್ಟ ವಿದೇಶಿಗರು!
India Latest News Live 4 January 2026Taslima nasreen - ಗಡ್ಡ ಬಿಟ್ಟವನಷ್ಟೇ ಅಲ್ಲ, ಸೂಟು ಧರಿಸಿದವನ ಕನಸೂ ಒಂದೇ; ಬಾಂಗ್ಲಾ ಉಗ್ರರ ವಿನಾಶಕಾರಿ ಸ್ಕೆಚ್ ಬಿಚ್ಚಿಟ್ಟ ಲೇಖಕಿ!
ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ಲೇಖಕಿ ತಸ್ಲಿಮಾ ನಸ್ರೀನ್ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಎರಡು ಬಗೆಯ ಜಿಹಾದಿಗಳಿದ್ದು, ಭಾರತವನ್ನು ದ್ವೇಷಿಸಿ ಬಾಂಗ್ಲಾವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವುದೇ ಅವರ ಗುರಿ ಎಂದು ಅವರು ವಿಶ್ಲೇಷಿಸಿದ್ದಾರೆ.
India Latest News Live 4 January 2026ವಿಮಾನ ನಿಲ್ದಾಣದಲ್ಲೇ ಖ್ಯಾತ ಬಿಗ್ ಬಾಸ್ ಮಾಜಿ ಸ್ಪರ್ಧಿ ಬಂಧನ, ಸಂಚಲನ ಸೃಷ್ಟಿಸಿದ ಪೊಲೀಸ್ ನಡೆ
ವಿಮಾನ ನಿಲ್ದಾಣದಲ್ಲೇ ಖ್ಯಾತ ಬಿಗ್ ಬಾಸ್ ಮಾಜಿ ಸ್ಪರ್ಧಿ ಬಂಧನ, ಸಂಚಲನ ಸೃಷ್ಟಿಸಿದ ಪೊಲೀಸ್ ನಡೆ, ಲ್ಯಾಂಡಿಂಗ್ ಆಗಿ ಏರ್ಪೋರ್ಟ್ನಿಂದ ಹೊರಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ನಟನ ಅರೆಸ್ಟ್ಗೆ ಕಾರಣವೇನು?
India Latest News Live 4 January 2026ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಂಚಾಯತ್ ಅಧ್ಯಕ್ಷ ಅಪರಿಚಿತರ ಗುಂಡಿನ ದಾಳಿಗೆ ಬಲಿ
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಂಚಾಯತ್ ಅಧ್ಯಕ್ಷ ಅಪರಿಚಿತರ ಗುಂಡಿನ ದಾಳಿಗೆ ಬಲಿ, ಮೂವರು ಅಪರಿಚಿತರು ಬೈಕ್ ಮೂಲಕ ಆಗಮಿಸಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಪಂಚಾಯತ್ ಅಧ್ಯಕ್ಷನ ಕಾರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
India Latest News Live 4 January 2026ಲೈವ್ ಬ್ಯಾಂಡ್ಗೆ ಎಚ್ಚರಗೊಂಡ ಗೆಳತಿಗೆ ಅಚ್ಚರಿ, ಬಾಯ್ಫ್ರೆಂಡ್ ಭಿನ್ನ ಪ್ರಪೋಸ್ಗೆ ಉತ್ತರವೇನು?
ಲೈವ್ ಬ್ಯಾಂಡ್ಗೆ ಎಚ್ಚರಗೊಂಡ ಗೆಳತಿಗೆ ಅಚ್ಚರಿ, ಬಾಯ್ಫ್ರೆಂಡ್ ಭಿನ್ನ ಪ್ರಪೋಸ್ಗೆ ಉತ್ತರವೇನು? ಮುದ್ದಾದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ರೀತಿ ಪ್ರಪೋಸ್ ಮಾಡಿದರೆ ಹುಡುಗಿಯರು ಸುಲಭವಾಗಿ ಒಪ್ಪಿಕೊಳ್ತಾರಾ?
India Latest News Live 4 January 2026F&O ಟ್ರೇಡರ್ ಖಾತೆಗೆ ಬೈಮಿಸ್ಟೆಕ್ 40 ಕೋಟಿ ಹಾಕಿದ ಕೊಟಕ್ ಸೆಕ್ಯೂರಿಟಿಸ್ - ಆಮೇಲೇನಾಯ್ತು ನೋಡಿ
ಬ್ರೂಕರೇಜ್ ಸಂಸ್ಥೆ ಕೊಟಕ್ ಸೆಕ್ಯೂರಿಟಿಸ್ನಿಂದ ತಪ್ಪಾಗಿ ವರ್ಗಾವಣೆಯಾದ 40 ಕೋಟಿ ರೂ. ಬಳಸಿ, ಟ್ರೇಡರ್ ಒಬ್ಬರು ಎಫ್&ಓ ಟ್ರೇಡಿಂಗ್ನಲ್ಲಿ ಕೇವಲ 20 ನಿಮಿಷದಲ್ಲಿ 1.75 ಕೋಟಿ ರೂ. ಲಾಭ ಗಳಿಸಿದರು ಆಮೇಲೇನಾಯ್ತು ಇಲ್ಲಿದೆ ಡಿಟೇಲ್ ಸ್ಟೋರಿ…
India Latest News Live 4 January 2026ವಿಶ್ವದ ಟಾಪ್ 10 ಬ್ಯೂಸಿ ರೈಲ್ವೇ ನಿಲ್ದಾಣ ಯಾವುದು? ಪಟ್ಟಿಯಲ್ಲಿದೆ ಭಾರತದ 2 ಸ್ಟೇಶನ್
ವಿಶ್ವದ ಟಾಪ್ 10 ಬ್ಯೂಸಿ ರೈಲ್ವೇ ನಿಲ್ದಾಣ ಯಾವುದು? ಪಟ್ಟಿಯಲ್ಲಿದೆ ಭಾರತದ 2 ಸ್ಟೇಶನ್, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರೈಲು ನಿಲ್ದಾಣ ಯಾವುದು? ಭಾರತದ ಬ್ಯೂಸಿಯೆಸ್ಟ್ ರೈಲು ನಿಲ್ದಾಣ ಯಾವುದು? ಮುಂಬೈ, ದೆಹಲಿ ಅಲ್ಲ
India Latest News Live 4 January 2026ಮದುವೆಗೆ ಮುನ್ನ ದೈಹಿಕ ಸಂಬಂಧ ತಪ್ಪೇ ಅಲ್ಲ ಎಂದ ನಟಿ ರೇಖಾ ತಮ್ಮ ಆ ಗರ್ಭಧಾರಣೆ ಬಗ್ಗೆ ಬಿಚ್ಚಿಟ್ಟ ಗುಟ್ಟೇನು?
71ರ ಹರೆಯದ ನಟಿ ರೇಖಾ ಅವರ ವೈಯಕ್ತಿಕ ಜೀವನದ ಕುರಿತು ಯಾಸಿರ್ ಉಸ್ಮಾನ್ ಅವರ ಪುಸ್ತಕವು ಹಲವು ರಹಸ್ಯಗಳನ್ನು ಬಹಿರಂಗಪಡಿಸಿದೆ. ಮದುವೆಗೂ ಮುನ್ನ ದೈಹಿಕ ಸಂಬಂಧವನ್ನು ಸಹಜ ಎಂದಿದ್ದ ರೇಖಾ, ತಾನು ಗರ್ಭಿಣಿಯಾಗದಿರುವುದು ಕೇವಲ ಕಾಕತಾಳೀಯ ಎಂಬ ವಿವಾದಿತ ಹೇಳಿಕೆ ನೀಡಿದ್ದರು.
India Latest News Live 4 January 2026ಮುಸ್ತಾಫಿಜುರ್ ರಹಮಾನ್ ಕೆಕೆಆರ್ ತಂಡದಿಂದ ಗೇಟ್ಪಾಸ್; ಮೊದಲ ಸಲ ಮೌನ ಮುರಿದ ಬಾಂಗ್ಲಾದೇಶ ವೇಗಿ!
ಐಪಿಎಲ್ನಿಂದ ಮುಸ್ತಾಫಿಜುರ್ ಅವರನ್ನು ಕೈಬಿಟ್ಟಿದ್ದಕ್ಕೆ ಪ್ರತೀಕಾರವಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಮುಂಬರುವ 2026ರ ಟಿ20 ವಿಶ್ವಕಪ್ನಲ್ಲಿ ಭಾರತದಲ್ಲಿ ನಡೆಯಲಿರುವ ತನ್ನ ಪಂದ್ಯಗಳನ್ನು ಬಹಿಷ್ಕರಿಸಿ, ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಬಿಸಿಬಿ ಚಿಂತನೆ ನಡೆಸಿದೆ.
India Latest News Live 4 January 2026ಲೆ ಮೆರಿಡಿಯನ್ ಹೊಟೇಲ್ನ 12ನೇ ಮಹಡಿಯಿಂದ ಕೆಳಗೆ ಹಾರಿ 50 ವರ್ಷದ ವ್ಯಕ್ತಿ ಸಾವಿಗೆ ಶರಣು
ರಾಜಧಾನಿ ಲೆ ಮೆರಿಡಿಯನ್ ಹೊಟೇಲ್ನ 12ನೇ ಮಹಡಿಯಿಂದ ಕೆಳಗೆ ಹಾರಿ 50 ವರ್ಷದ ಪರ್ವಿಂದರ್ ಸಿಂಗ್ ಜುನೇಜಾ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ನಡೆದ ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆ ಆರಂಭಿಸಿದ್ದಾರೆ.
India Latest News Live 4 January 2026ವಿಮಾನ ಪ್ರಯಾಣಿಕರಿಗೆ ಹೊಸ ಸುರಕ್ಷತಾ ಮಾರ್ಗಸೂಚಿ ಪ್ರಕಟ, ಇನ್ಮೇಲೆ ಈ ವಸ್ತುಗಳನ್ನು ಒಯ್ಯುವಂತಿಲ್ಲ
ವಿಮಾನ ಪ್ರಯಾಣಿಕರಿಗೆ ಹೊಸ ಸುರಕ್ಷತಾ ಮಾರ್ಗಸೂಚಿ ಪ್ರಕಟ, ಇದುವರೆಗೆ ಇದ್ದ ನಿರ್ಬಂಧಕ್ಕಿಂತ ಹೊಸ ಮಾರ್ಗಸೂಚಿಯಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಹೀಗಾಗಿ ಇನ್ಮುಂದೆ ಪ್ರಯಾಣಿಕರು ವಿಮಾನ ಪ್ರಯಾಣದ ವೇಳೆ ಕೆಲ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ.
India Latest News Live 4 January 2026ನಾವು ಯಾರನ್ನು ಶಿಕ್ಷಿಸುತ್ತಿದ್ದೇವೆ? ಮುಸ್ತಾಫಿಜುರ್ಗೆ ಐಪಿಎಲ್ನಿಂದ ಗೇಟ್ಪಾಸ್ ಬೆನ್ನಲ್ಲೇ ಬಿಸಿಸಿಐ ಮೇಲೆ ಕಿಡಿಕಾರಿದ ಶಶಿ ತರೂರ್!
ಭಾರತ-ಬಾಂಗ್ಲಾ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಬಿಸಿಸಿಐ ಸೂಚನೆ ಮೇರೆಗೆ ಕೆಕೆಆರ್ ತಂಡವು ಮುಸ್ತಾಫಿಜುರ್ ರೆಹಮಾನ್ ಅವರನ್ನು ರಿಲೀಸ್ ಮಾಡಿದೆ. ಈ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದಾರೆ.
India Latest News Live 4 January 2026ರೈಲು ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಬೆಂಕಿ - 500 ಬೈಕ್ಗಳು ಬೆಂಕಿಗಾಹುತಿ
India Latest News Live 4 January 2026ತಾಜ್ ಮಹಲ್ ಮುಂದೆ ಫೋಟೋ ತೆಗೆಯುವಂತೆ ಕೇಳಿದ ವೃದ್ಧ ದಂಪತಿ - ವೀಡಿಯೋಗೆ ಭಾವುಕರಾದ ನೆಟ್ಟಿಗರು
ಇಂದಿನ ದಂಪತಿಗಳ ಕಲಹಕ್ಕೆ ಪ್ರೀತಿಯ ಕೊರತೆಯ ಹೊರತಾಗಿಯೂ ನೂರೆಂಟು ಕಾರಣಗಳಿವೆ ಎಲ್ಲರಂತೆ ನಾವಿಲ್ಲ ಎಂಬ ಹೋಲಿಕೆಯ ಜೊತೆ ಇಲ್ಲಗಳ ಪಟ್ಟಿ ಬಹಳ ದೊಡ್ಡದೇ ಇದೆ. ಆದರೆ ಈ ಸ್ಮಾರ್ಟ್ಫೋನ್ಗಳ ಕಾಲಘಟ್ಟದಲ್ಲಿ ನಾವು ಬದುಕುತ್ತಿರುವಾಗ ಇಲ್ಲೊಂದು ವೃದ್ಧ ಜೋಡಿಯ ಮುಗ್ಧತೆ ಬಾರಿ ವೈರಲ್ ಆಗಿದೆ.
India Latest News Live 4 January 2026ವಿವಾದಗಳ ನಡುವೆ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ; ಮುಸ್ತಾಫಿಜುರ್ ಸೇರಿ ಈ ಎಲ್ಲಾ ಆಟಗಾರರಿಗೆ ಸ್ಥಾನ!
India Latest News Live 4 January 2026ಆರೋಪಿಯ ಒಳಚಡ್ಡಿಯ ಬದಲಾವಣೆ - ಕೇರಳ ಶಾಸಕನಿಗೆ 3 ವರ್ಷ ಜೈಲು ಶಿಕ್ಷೆ
ಡ್ರಗ್ಸ್ ಪ್ರಕರಣದ ಆರೋಪಿಯನ್ನು ರಕ್ಷಿಸಲು ಸಾಕ್ಷ್ಯ ತಿರುಚಿದ 34 ವರ್ಷಗಳ ಹಳೆಯ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಶಾಸಕ ಆಂಟನಿ ರಾಜುಗೆ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯ ಪರಿಣಾಮವಾಗಿ, ಅವರು ತಮ್ಮ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ.
India Latest News Live 4 January 2026ಮುಸ್ತಾಫಿಜುರ್ ರಹಮಾನ್ ಕೆಕೆಆರ್ ತಂಡದಿಂದ ಗೇಟ್ಪಾಸ್; ಮೊದಲ ಸಲ ಮೌನ ಮುರಿದ ಬಾಂಗ್ಲಾದೇಶ ವೇಗಿ!
ಬಿಸಿಸಿಐ ಸೂಚನೆಯಂತೆ, ಭಾರತ-ಬಾಂಗ್ಲಾದೇಶ ರಾಜತಾಂತ್ರಿಕ ಸಂಘರ್ಷದ ಹಿನ್ನೆಲೆಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ವೇಗಿ ಮುಸ್ತಫಿಜುರ್ ರಹಮಾನ್ ಅವರನ್ನು ಕೈಬಿಟ್ಟಿದೆ. ಈ ನಿರ್ಧಾರವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟೀಕಿಸಿದೆ. ಈ ಬಗ್ಗೆ ಎಡಗೈ ವೇಗಿ ಮೊದಲ ಸಲ ಪ್ರತಿಕ್ರಿಯಿಸಿದ್ದಾರೆ.
India Latest News Live 4 January 2026ಮಂಗಳೂರು - ಕಾಂಪೌಂಡ್ ಹಾರಿ ಮನೆ ಅಂಗಳಕ್ಕೆ ಬಂದು ಬಿದ್ದ ಕಾರು - ಚಾಲಕ ಪವಾಡದಂತೆ ಪಾರು - ವೀಡಿಯೋ
ಮಂಗಳೂರಿನ ಮರಕಡದಲ್ಲಿ, ಟೈರ್ ಸ್ಫೋಟಗೊಂಡು ಕಾರೊಂದು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಹಾರಿ ಅಂಗಳಕ್ಕೆ ಬಿದ್ದಿದೆ. ಕಾರು ಚಲಾಯಿಸುತ್ತಿದ್ದ ಚರ್ಚ್ನ ಧರ್ಮಗುರುಗಳು ಈ ಘಟನೆಯಲ್ಲಿ ಪವಾಡಸದೃಶವಾಗಿ ಪಾರಾಗಿದ್ದಾರೆ.