- Home
- News
- India News
- India Latest News Live: ಕ್ರಿಕೆಟಿಂದಲೇ ಪಾಕ್ ಹೊರಗಟ್ಟುವ ಟೈಂ ಬಂತಾ? ಅಷ್ಟಕ್ಕೂ ಪಾಕ್ ಹೇಳಿದಂತೆ ಐಸಿಸಿ ಏಕೆ ಕೇಳಬೇಕು?
LIVE NOW
India Latest News Live: ಕ್ರಿಕೆಟಿಂದಲೇ ಪಾಕ್ ಹೊರಗಟ್ಟುವ ಟೈಂ ಬಂತಾ? ಅಷ್ಟಕ್ಕೂ ಪಾಕ್ ಹೇಳಿದಂತೆ ಐಸಿಸಿ ಏಕೆ ಕೇಳಬೇಕು?

ಸಾರಾಂಶ
ನವದೆಹಲಿ: ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗೆ ಈ ಬಾರಿ ತಮಿಳುನಾಡಿನ ಕಾಂಜೀವರಂ ಸೀರೆ ಉಟ್ಟು ಬರುತ್ತಾರೆ ಎಂದು ಶಿವಸೇನೆ (ಉದ್ಧವ್) ಬಣದ ಸಂಸದೆ ಪ್ರಿಯಾಂಕಾ ಚರ್ತುರ್ವೇದಿ ನುಡಿದ ಭವಿಷ್ಯ ನಿಜವಾಗಿದೆ. ಈ ಕುರಿತು ಅವರು ‘ನಾನು ಊಹಿಸಿದಂತೆಯೇ ಆಗಿದೆ’ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಬಜೆಟ್ ಹಿಂದಿನ ದಿನ ಮಾಧ್ಯಮವೊಂದರೆ ಜತೆ ಮಾತನಾಡಿದ್ದ ಪ್ರಿಯಾಂಕಾ, ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಲಾ ಅವರು ಬಜೆಟ್ ಮಂಡನೆ ವೇಳೆ ತಮಿಳುನಾಡಿನ ಸೀರೆಯುಟ್ಟು, ಬಂಗಾಳದ ಪದಗಳನ್ನು ಬಳಸಲಿದ್ದಾರೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಅದರಂತೆ ಬಜೆಟ್ ಮಂಡನೆಗೆ ನಿರ್ಮಲಾ ಅವರು ಕಾಂಜೀವರಂ ಸೀರೆಯುಟ್ಟು ಬಂದಿದ್ದರು.
08:35 AM (IST) Feb 03
India Latest News Live 3 February 2026 ಕ್ರಿಕೆಟಿಂದಲೇ ಪಾಕ್ ಹೊರಗಟ್ಟುವ ಟೈಂ ಬಂತಾ? ಅಷ್ಟಕ್ಕೂ ಪಾಕ್ ಹೇಳಿದಂತೆ ಐಸಿಸಿ ಏಕೆ ಕೇಳಬೇಕು?
ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಮೂಲಕ ಪಾಕಿಸ್ತಾನವು ಐಸಿಸಿ ನಿಯಮಗಳನ್ನು ಉಲ್ಲಂಘಿಸಿದೆ. ಪಾಕ್ ಸರ್ಕಾರದ ಹಸ್ತಕ್ಷೇಪವೇ ಇದಕ್ಕೆ ಕಾರಣವಾಗಿದ್ದು, ಇದನ್ನೇ ಬ್ರಹ್ಮಾಸ್ತ್ರವಾಗಿ ಬಳಸಿ ಪಾಕಿಸ್ತಾನವನ್ನು ಕ್ರಿಕೆಟ್ನಿಂದಲೇ ಅಮಾನತುಗೊಳಿಸಲು ಬಿಸಿಸಿಐಗೆ ಪ್ರಬಲ ಅವಕಾಶ ಲಭಿಸಿದೆ.
Read Full Story