ನಾಳೆ ಆರೋಗ್ಯ ಸರಿ ಇರಲ್ಲ, ಮ್ಯೂಸಿಕ್ ಕಾನ್ಸರ್ಟ್ಗೆ ಸಿಕ್ ಲೀವ್ ಕೇಳಿದ ಉದ್ಯೋಗಿಯಿಂದ ಬಾಸ್ ಶಾಕ್, ಮುಂಬೈನಲ್ಲಿ ಆಯೋಜನೆಗೊಂಡಿದ್ದ ಟ್ರಾವಿಸ್ ಸ್ಕಾಟ್ ಮ್ಯೂಸಿಕ್ ಕಾನ್ಸರ್ಟ್ಗಾಗಿ ರಜೆ ಕೇಳಿದ್ದಾನೆ. ಹಲವರು ಇದೇ ವಾಸ್ತವ ಎಂದಿದ್ದಾರೆ.
- Home
- News
- India News
- India Latest News Live: ನಾಳೆ ಆರೋಗ್ಯ ಸರಿ ಇರಲ್ಲ, ಮ್ಯೂಸಿಕ್ ಕಾನ್ಸರ್ಟ್ಗೆ ಸಿಕ್ ಲೀವ್ ಕೇಳಿದ ಉದ್ಯೋಗಿಯಿಂದ ಬಾಸ್ ಶಾಕ್
India Latest News Live: ನಾಳೆ ಆರೋಗ್ಯ ಸರಿ ಇರಲ್ಲ, ಮ್ಯೂಸಿಕ್ ಕಾನ್ಸರ್ಟ್ಗೆ ಸಿಕ್ ಲೀವ್ ಕೇಳಿದ ಉದ್ಯೋಗಿಯಿಂದ ಬಾಸ್ ಶಾಕ್

ಚೆನ್ನೈ: 'ಪ್ರಧಾನಿ ನರೇಂದ್ರ ಮೋದಿ ನರಕಾಸುರನಿದ್ದಂತೆ. ಅವರನ್ನು ಸಂಹರಿಸಬೇಕು' ಎಂದು ತಮಿಳುನಾಡಿದ ಡಿಎಂಕೆ ತೆಂಕಾಸಿ ಜಿಲ್ಲಾ ಮುಖಂಡ ಜೆ. ಜೆಯಬಾಲನ್ ಕರೆ ನೀಡಿದ್ದಾರೆ. 'ಮೋದಿ ನಿಮ್ಮ ಮತಗಳನ್ನು ಕಸಿದು ಕೊಳ್ಳಲು ಹತಾಶರಾಗಿದ್ದಾರೆ. ಅವರು ನರಕಾಸುರನಂತಹ ರಾಕ್ಷಸ. ಅಂತಹ ವ್ಯಕ್ತಿಯನ್ನು ನಿರ್ಮೂಲನೆ ಮಾಡಿದರಷ್ಟೆ ತಮಿಳುನಾಡಿಗೆ ನಿಜವಾದ ಲಾಭ. ಎಲ್ಲರೂ ಹೋರಾಡೋಣ' ಎಂದಿದ್ದಾರೆ. ಡಿಎಂಕೆ ನಾಯಕನ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
India Latest News Live 20 November 2025ನಾಳೆ ಆರೋಗ್ಯ ಸರಿ ಇರಲ್ಲ, ಮ್ಯೂಸಿಕ್ ಕಾನ್ಸರ್ಟ್ಗೆ ಸಿಕ್ ಲೀವ್ ಕೇಳಿದ ಉದ್ಯೋಗಿಯಿಂದ ಬಾಸ್ ಶಾಕ್
India Latest News Live 20 November 2025ವೈದ್ಯಕೀಯ ರಜೆಯಲ್ಲಿದ್ದರೂ, ಐಸಿಯುವಿನಲ್ಲಿದ್ದಾಗಲೇ ರಾಜೀನಾಮೆ ಪತ್ರಕ್ಕೆ ಒತ್ತಾಯಿಸಿದ ಟಿಸಿಎಸ್!
ತಂದೆಯ ತುರ್ತು ಚಿಕಿತ್ಸೆಗಾಗಿ ರಜೆಯಲ್ಲಿದ್ದ ಟಿಸಿಎಸ್ ಉದ್ಯೋಗಿಯೊಬ್ಬರನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ, ನಂತರ ಗ್ರಾಚ್ಯುಟಿ ನಿರಾಕರಿಸಿದ ಘಟನೆ ನಡೆದಿದೆ. ಕಾರ್ಮಿಕ ಇಲಾಖೆಯ ಮಧ್ಯಪ್ರವೇಶದಿಂದ ಉದ್ಯೋಗಿಗೆ ನ್ಯಾಯ ಸಿಕ್ಕಿದ್ದು, ಕಂಪನಿಗೆ ಪೂರ್ಣ ಗ್ರಾಚ್ಯುಟಿ ಪಾವತಿಸಲು ಆದೇಶಿಸಲಾಗಿದೆ.
India Latest News Live 20 November 2025ಪುಟಿನ್- ಜಿನ್ಪಿಂಗ್ ರಹಸ್ಯ ಭೇಟಿ ಫಲ? 150 ವರ್ಷ ಜೀವಿಸೋ ಮಾತ್ರೆ ಕಂಡುಹಿಡಿದ ಚೀನಾ! ಏನಿದರ ವಿಶೇಷತೆ?
ಚೀನಾದ ಜೈವಿಕ ತಂತ್ರಜ್ಞಾನ ಕಂಪನಿಯೊಂದು ದೀರ್ಘಾಯುಷ್ಯದ ಮಾತ್ರೆಯೊಂದನ್ನು ಕಂಡುಹಿಡಿದಿದೆ. ದ್ರಾಕ್ಷಿ ಬೀಜದ ಸಂಯುಕ್ತ ಬಳಸಿ ತಯಾರಿಸಲಾದ ಈ ಮಾತ್ರೆ, ವೃದ್ಧಾಪ್ಯ ಕೋಶಗಳನ್ನು ಗುರಿಯಾಗಿಸಿ ಇಲಿಗಳ ಮೇಲೆ ಯಶಸ್ವಿ ಪ್ರಯೋಗ ಕಂಡಿದಿದೆ.
India Latest News Live 20 November 2025ತಾಳಿ ಕಟ್ಟುವ ಹೊತ್ತಿಗೆ ಎಂಟ್ರಿ ಕೊಟ್ಟ ಮೊದಲ ಪತ್ನಿ - 2ನೇ ಮದುವೆ ಕನಸಿನಲ್ಲಿದ್ದವನಿಗೆ ಆಘಾತ
ಉತ್ತರ ಪ್ರದೇಶದಲ್ಲಿ, ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಎರಡನೇ ಮದುವೆಯಾಗಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ಆತನ ಮೊದಲ ಪತ್ನಿ ಶಾಕ್ ನೀಡಿದ್ದಾಳೆ. ವರನು ವಧುವಿಗೆ ತಾಳಿ ಕಟ್ಟುವಷ್ಟರಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ ಆಕೆ, ಮದುವೆ ನಿಲ್ಲಿಸಿದ್ದಾಳೆ.
India Latest News Live 20 November 2025ನಿತೀಶ್ ಕುಮಾರ್ 10ನೇ ಬಾರಿಗೆ ಸಿಎಂ ಆದ್ರೂ 5 ಲಾಂಗೆಸ್ಟ್ ಮುಖ್ಯಮಂತ್ರಿ ಪಟ್ಟಿಯಲ್ಲಿಲ್ಲ ಸ್ಥಾನ, ಇಲ್ಲಿದೆ ಲಿಸ್ಟ್
ನಿತೀಶ್ ಕುಮಾರ್ 10ನೇ ಬಾರಿಗೆ ಸಿಎಂ ಆದ್ರೂ 5 ಲಾಂಗೆಸ್ಟ್ ಮುಖ್ಯಮಂತ್ರಿ ಪಟ್ಟಿಯಲ್ಲಿಲ್ಲ ಸ್ಥಾನ, ಇಲ್ಲಿದೆ ಲಿಸ್ಟ್, 19 ವರ್ಷಗಳಿಂದ ಮುಖ್ಯಮಂತ್ರಿ ಸ್ಥಾನದಲ್ಲಿರುವ ನಿತೀಶ್ ಕುಮಾರ್ ಈ ಅವಧಿಯಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಲಿದ್ದಾರೆ. ಸುದೀರ್ಘ ಸೇವೆ ಸಲ್ಲಿಸಿದ ಸಿಎಂ ಯಾರು?
India Latest News Live 20 November 2025'ವಿಶ್ವ ಸುಂದರಿ' ಸ್ಪರ್ಧೆ ವೇಳೆ ಕ್ಯಾಟ್ವಾಕ್ನಲ್ಲೇ ಕುಸಿದು ಬಿದ್ದ ಬ್ಯೂಟಿ! ದಶಕಗಳ ಕನಸು ಭಗ್ನ? ವಿಡಿಯೋ ವೈರಲ್
India Latest News Live 20 November 2025'ವೈದ್ಯರು, ಶಿಕ್ಷಿತರು ಟೆರರಿಸ್ಟ್ಗಳು ಆಗುತ್ತಿರುವುದು ಅಪಾಯಕಾರಿ..' ಸುಪ್ರೀಂ ಕೋರ್ಟ್ನಲ್ಲಿ ದೆಹಲಿ ಗಲಭೆ ಕೇಸ್ ಬೇಲ್ಗೆ ವಿರೋಧ
2020ರ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ನಲ್ಲಿ ವಿರೋಧಿಸಿದ್ದಾರೆ. ವಿದ್ಯಾವಂತರು ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗುವ 'ವೈಟ್ ಕಾಲರ್ ಭಯೋತ್ಪಾದನೆ'ಯ ಪ್ರವೃತ್ತಿ ಅಪಾಯಕಾರಿ ಎಂದಿದ್ದಾರೆ.
India Latest News Live 20 November 2025ನೇಪಾಳದಲ್ಲಿ ಮತ್ತೆ ಭುಗಿಲೆದ್ದ ಜೆನ್ ಝೀ ಪ್ರತಿಭಟನೆ, ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ
ನೇಪಾಳದಲ್ಲಿ ಮತ್ತೆ ಭುಗಿಲೆದ್ದ ಜೆನ್ ಝೀ ಪ್ರತಿಭಟನೆ, ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ, ಇಡೇ ದೇಶ ಹೊತ್ತಿ ಉರಿದು ಚುನಾಯಿತ ಪ್ರಧಾನಿ ಸೇರಿದಂತೆ ಇಡೀ ಸರ್ಕಾರ ಪತನಗೊಂಡು ಪಲಾಯನ ಮಾಡುವ ಪರಿಸ್ಥಿತಿಗೆ ಕಾರಣವಾಗಿದ್ದ ಇದೇ ZEN G ಪ್ರತಿಭಟನೆ ಮತ್ತೆ ಶುರುವಾಗಿದೆ.
India Latest News Live 20 November 2025ದಕ್ಷಿಣ ಆಫ್ರಿಕಾ ಎದುರಿನ ಗುವಾಹಟಿ ಟೆಸ್ಟ್ಗೂ ಮುನ್ನ ಭಾರತಕ್ಕೆ ದೊಡ್ಡ ಶಾಕ್!
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನಿಂದ ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದಾಗಿ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
India Latest News Live 20 November 2025ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್, 8ನೇ ವೇತನ ಆಯೋಗದ ಸ್ಯಾಲರಿ ಹೆಚ್ಚಳ ಪ್ರಕ್ರಿಯೆ ಶುರು
ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್, 8ನೇ ವೇತನ ಆಯೋಗದ ಸ್ಯಾಲರಿ ಹೆಚ್ಚಳ ಪ್ರಕ್ರಿಯೆ ಶುರು, 2026ರ ಆರಂಭದಿಂದಲೇ 8ನೇ ವೇತನ ಆಯೋಗ ಜಾರಿಯಾಗಲಿದೆ. ಇದರ ಪ್ರಕಾರ ವೇತನ ಎಷ್ಟಾಗಲಿದೆ? 8ನೇ ವೇತನ ಆಯೋಗದ ಮಹತ್ವದ ಅಪ್ಡೇಟ್ ಇಲ್ಲಿದೆ.
India Latest News Live 20 November 2025ನಿಂಗೆ ಎಷ್ಟು ಅಳೋಕೆ ಸಾಧ್ಯನೋ ಅಷ್ಟು ಅಳು ಎಂದ ಶಿಕ್ಷಕಿ - ಸಾವಿಗೆ ಶರಣಾದ ಬಾಲಕ
Student Died after Teacher insult: ದೆಹಲಿಯ ಪ್ರತಿಷ್ಠಿತ ಸೇಂಟ್ ಕೊಲಂಬಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶೌರ್ಯ ಪಾಟೀಲ್ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ಶಾಲೆಯ ಶಿಕ್ಷಕರ ಕಿರುಕುಳವೇ ಕಾರಣ ಎಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾನೆ.
India Latest News Live 20 November 2025ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ಮನಿ ಲಾಂಡರಿಂಗ್ ಸಂಕಷ್ಟ, ಇಡಿ ಚಾರ್ಜ್ಶೀಟ್ ಸಲ್ಲಿಕೆ
ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ಮನಿ ಲಾಂಡರಿಂಗ್ ಸಂಕಷ್ಟ, ಇಡಿ ಚಾರ್ಜ್ಶೀಟ್ ಸಲ್ಲಿಕೆ, ಯುಕೆ ಮೂಲದ ರಕ್ಷಣಾ ಉತ್ಪನ್ನಗಳ ಡೀಲರ್ ಜೊತೆಗಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದೀಗ ರಾಬರ್ಟ್ ವಾದ್ರಾ ಸಂಕಷ್ಟ ಹೆಚ್ಚಾಗಿದೆ.
India Latest News Live 20 November 2025ಟೆಸ್ಟ್ ಆಡುವ ಎಲ್ಲಾ 11 ದೇಶಗಳ ಎದುರು ಶತಕ ಸಿಡಿಸಿ ಅಪರೂಪದಲ್ಲೇ ಅಪರೂಪದ ವಿಶ್ವದಾಖಲೆ ಬರೆದ ಶಾಯ್ ಹೋಪ್!
ನೇಪಿಯರ್: ವೆಸ್ಟ್ ತಂಡದ ಸ್ಟಾರ್ ಕ್ರಿಕೆಟಿಗ ಶಾಯ್ ಹೋಪ್, ನ್ಯೂಜಿಲೆಂಡ್ ಎದುರು ಶತಕ ಸಿಡಿಸುವ ಮೂಲಕ, ಟೆಸ್ಟ್ ಆಡುವ ಎಲ್ಲಾ ದೇಶಗಳ ತಂಡದ ವಿರುದ್ದ ಶತಕ ಸಿಡಿಸಿದ ಅಪರೂಪದ ವಿಶ್ವದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ದೀಟೈಲೈ ಇಲ್ಲಿದೆ ನೋಡಿ
India Latest News Live 20 November 2025ಆಪರೇಷನ್ ಸಿಂದೂರ್ ವೇಳೆ ಭಾರತದ 3, ಪಾಕಿಸ್ತಾನದ ಐದು ಜೆಟ್ ಧ್ವಂಸ - ಅಮೆರಿಕ ವರದಿ
ಮೇ ತಿಂಗಳಲ್ಲಿ ನಡೆದ ಭಾರತ-ಪಾಕಿಸ್ತಾನದ 'ಆಪರೇಷನ್ ಸಿಂದೂರ್' ಕುರಿತ ಯುಎಸ್ ಕಾಂಗ್ರೆಸ್ ವರದಿಯ ಪ್ರಕಾರ, ಈ ಯುದ್ಧದ ನಿಜವಾದ ವಿಜೇತ ಚೀನಾ. ಬೀಜಿಂಗ್ ಈ ಸಂಘರ್ಷವನ್ನು ತನ್ನ ಮುಂದುವರಿದ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು ಒಂದು ಅವಕಾಶವಾಗಿ ಬಳಸಿಕೊಂಡಿದೆ ಎಂದು ವರದಿ ತಿಳಿಸಿದೆ.
India Latest News Live 20 November 202510ನೇ ಬಾರಿಗೆ ಸಿಎಂ ಆದರೂ ನಿತೀಶ್ ಕುಮಾರ್ ಆಸ್ತಿ 13 ದನ-ಕರು, 21 ರೂ ನಗದು, ಒಂದು ಮನೆ
10ನೇ ಬಾರಿಗೆ ಸಿಎಂ ಆದರೂ ನಿತೀಶ್ ಕುಮಾರ್ ಆಸ್ತಿ 13 ದನ-ಕರು,21 ರೂ ನಗದು, ಒಂದು ಮನೆ, ನಿತೀಶ್ ಕುಮಾರ್ ಬಿಹಾರದ ಅತ್ಯಂತ ಯಶಸ್ವಿ ಮುಖ್ಯಮಂತ್ರಿ. ಇವರ ಒಟ್ಟು ಆಸ್ತಿ ಇದೀಗ ಭಾರಿ ಚರ್ಚೆಯಾಗುತ್ತಿದೆ.
India Latest News Live 20 November 2025ಕೇರಳದ ಹೋಮ್ ನರ್ಸ್ ಇಸ್ರೇಲ್ನಲ್ಲಿ ಸಾವು
Indian nurse dies in Israel: ಇಸ್ರೇಲ್ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಮೂಲದ ನರ್ಸ್ ಒಬ್ಬರು ಸಾವಿಗೀಡಾಗಿದ್ದಾರೆ. ಇಸ್ರೇಲ್ನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 34 ವರ್ಷದ ಮಹಿಳೆ ಶರಣ್ಯ ಪ್ರಸನ್ನನ್ ಮೃತಪಟ್ಟವರು ಎಂದು ತಿಳಿದು ಬಂದಿದೆ.
India Latest News Live 20 November 2025ಎರಡು ವರ್ಷವಾದ್ರೂ ಮಿಲನಕ್ಕೆ ನಿರಾಸಕ್ತಿ ತೋರಿದ ಗಂಡನಿಗೆ ಕಾದಿತ್ತು ಭಯಾನಕ ಆಘಾತ!
violence against men: ಪತ್ನಿ ಪಿಂಕಿ ಶರ್ಮಾ ತನ್ನ ಪತಿ ಅನುಜ್ ಶರ್ಮಾನಿಗೆ ವಿಷವಿಕ್ಕಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಮದುವೆಯಾಗಿ ಎರಡು ವರ್ಷವಾದರೂ ಪತಿ ದೈಹಿಕವಾಗಿ ಸ್ಪಂದಿಸದ ಕಾರಣ, ಆತನ ನಿರಾಸಕ್ತಿಯಿಂದ ಬೇಸತ್ತು ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.
India Latest News Live 20 November 2025ಉದ್ಯೋಗ ಕಡಿತದ ನೋವು ತೋಡಿಕೊಂಡ ಮ್ಯಾನೇಜರ್, 70 ಲಕ್ಷ ರೂ ವೇತನದಿಂದ ಈಗ ಝಿರೋ
ಉದ್ಯೋಗ ಕಡಿತದ ನೋವು ತೋಡಿಕೊಂಡ ಮ್ಯಾನೇಜರ್, 70 ಲಕ್ಷ ರೂ ವೇತನದಿಂದ ಈಗ ಝಿರೋ , 7 ತಿಂಗಳಿನಿಂದ ಬೇರೆ ಕೆಲಸವೂ ಸಿಕ್ಕಿಲ್ಲ, ಇರುವ ಉಳಿತಾಯ, ಬ್ಯಾಂಕ್ ಬ್ಯಾನೆಲ್ಸ್ ಖಾಲಿಯಾಗಿದೆ. ಖರೀದಿಸದ ಹೊಸ ಮನೆಯ ಇಎಂಐ, ಕುಟುಂಬ ನಿರ್ವಹಣ ಕಷ್ಟವಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.
India Latest News Live 20 November 2025ಇದೇ 30ರ ಒಳಗೆ ಈ ಸರ್ಟಿಫಿಕೇಟ್ ಸಲ್ಲಿಸದಿದ್ರೆ ಪಿಂಚಣಿ ಸಿಗಲ್ಲ! ಮನೆಯಿಂದ್ಲೇ ಸಲ್ಲಿಕೆ ಹೇಗೆ? ಹಂತ ಹಂತದ ಮಾಹಿತಿ
ಪಿಂಚಣಿದಾರರು ತಮ್ಮ ಪಿಂಚಣಿಯನ್ನು ನಿರಂತರವಾಗಿ ಪಡೆಯಲು ಪ್ರತಿ ವರ್ಷ 'ಜೀವನ್ ಪ್ರಮಾಣ' ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ತಪ್ಪಿದಲ್ಲಿ ಪಿಂಚಣಿ ಸ್ಥಗಿತಗೊಳ್ಳುತ್ತದೆ. ಆನ್ಲೈನ್ ಮೂಲಕ ಅಥವಾ ಹತ್ತಿರದ ಕೇಂದ್ರಗಳಲ್ಲಿ ಸಲ್ಲಿಕೆ ವಿಧಾನ ವಿವರಿಸಲಾಗಿದೆ.
India Latest News Live 20 November 2025ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಿಂದ ಭಾರತದ ಇಬ್ಬರು ಮ್ಯಾಚ್ ವಿನ್ನರ್ಸ್ ಔಟ್! ಇಲ್ಲಿದೆ ನೋಡಿ ಸಂಭಾವ್ಯ ತಂಡ
ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಮಹತ್ವದ ಅಪ್ಡೇಟ್ ಹೊರಬಿದ್ದಿದೆ.