- Home
- News
- India News
- India Latest News Live: ಗೃಹಲಕ್ಷ್ಮೀ ರೀತಿಯ ಸ್ಕೀಂನಿಂದ 92 ಲಕ್ಷ ಜನಕ್ಕೆ ಶಾಕ್; 14000 ಪುರುಷರಿಗೂ ಯೋಜನೆ ಲಾಭ
LIVE NOW
India Latest News Live: ಗೃಹಲಕ್ಷ್ಮೀ ರೀತಿಯ ಸ್ಕೀಂನಿಂದ 92 ಲಕ್ಷ ಜನಕ್ಕೆ ಶಾಕ್; 14000 ಪುರುಷರಿಗೂ ಯೋಜನೆ ಲಾಭ

ಸಾರಾಂಶ
ಗೋರಖ್ಪುರ: ಅಯೋಧ್ಯೆ ರಾಮ ಮಂದಿರ ದೇಣಿಗೆ ಅಕ್ರಮದ ಬಗ್ಗೆ ವಿವಾದಾತ್ಮಕ ಪೋಸ್ಟರ್ ಹಾಕಿದ್ದ ಸಮಾಜವಾದಿ ಪಕ್ಷ (ಎಸ್ಪಿ) ನಾಯಕ ಅರವಿಂದ್ ಉಪೇಂದ್ರ ಶುಕ್ಲಾ ಸೇರಿ ಮೂವರನ್ನು ಬಂಧಿಸಲಾಗಿದೆ. ಶುಕ್ಲಾ ಜೊತೆಗೆ, ಕಾರ್ಮಿಕ ಭರತ್ ನಿಶಾದ್ ಮತ್ತು ವರ್ಣಚಿತ್ರಕಾರ ರಾಮಚಂದ್ರ ಮೌರ್ಯ ಅವರನ್ನು ಈ ಸಂಬಂಧ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಪೋಸ್ಟರ್ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಿಕೊಂಡು ಘೋಷಣೆಗಳಿದ್ದವು. ಅಂತಹ ಎಲ್ಲಾ ಬ್ಯಾನರ್ಗಳನ್ನು ತೆಗೆದುಹಾಕಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
06:59 AM (IST) Jul 14
India Latest News Live 14 July 2026ಗೃಹಲಕ್ಷ್ಮೀ ರೀತಿಯ ಸ್ಕೀಂನಿಂದ 92 ಲಕ್ಷ ಜನಕ್ಕೆ ಶಾಕ್; 14000 ಪುರುಷರಿಗೂ ಯೋಜನೆ ಲಾಭ
ಕರ್ನಾಟಕದ ಗೃಹಲಕ್ಷ್ಮಿ ಮಾದರಿಯ, ಮಹಾರಾಷ್ಟ್ರದ ‘ಮಾಝಿ ಲಡ್ಕಿ ಬಹಿನ್ ಯೋಜನೆ’ಯ ಪುನರ್ ಪರಿಶೀಲನೆ ನಡೆಸಲಾಗಿದೆ. ಈ ಪರಿಶೀಲನೆ ಬಳಿಕ, 14,000 ಪುರುಷರು ಸೇರಿದಂತೆ ಒಟ್ಟು 92 ಲಕ್ಷ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲಾಗಿದೆ.
Read Full Story 06:48 AM (IST) Jul 14
India Latest News Live 14 July 2026ಮಾಜಿ ಉಗ್ರರ ಸಂದರ್ಶನದಲ್ಲಿ ಬೆಳಕಿಗೆ ಬಂದ ವಿಷಯ ಕೇಳಿ ಇಡೀ ವಿಶ್ವವೇ ಶಾಕ್; ಆಘಾತಕಾರಿ ಸತ್ಯ
ಐಸಿಸ್, ಅಲ್ ಖೈದಾ, ಬೋಕೊ ಹರಾಮ್ನಂತಹ ಉಗ್ರ ಸಂಘಟನೆಗಳು ಬಾಂಬ್ ತಯಾರಿಕೆ, ಶಸ್ತ್ರಾಸ್ತ್ರಗಳ ಉತ್ಪಾದನೆ ಹಾಗೂ ದಾಳಿಗಳನ್ನು ಸಂಘಟಿಸಲು ಎಐ ಚಾಟ್ಬಾಟ್ಗಳನ್ನು ಬಳಸುತ್ತಿವೆ. ಮಾಜಿ ಉಗ್ರರ ಸಂದರ್ಶನವನ್ನು ಆಧರಿಸಿದ ಅಧ್ಯಯನವೊಂದು ಈ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದು, ಉಗ್ರರಿಗೆ ಎಐ ಬಳಕೆಯ ಬಗ್ಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ.
Read Full Story 06:20 AM (IST) Jul 14
India Latest News Live 14 July 2026ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ - ಟ್ರಸ್ಟ್ಗೆ ಸುಪ್ರೀಂ ಕೋರ್ಟ್ ತನಿಖಾಸ್ತ್ರ
ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್ಐಟಿಯಿಂದ ತನಿಖಾ ವರದಿ ಕೇಳಿರುವ ಸುಪ್ರೀಂ ಕೋರ್ಟ್, ಟ್ರಸ್ಟ್ಗೆ ನೋಟಿಸ್ ಜಾರಿ ಮಾಡಿದೆ. ಈ ವಿವಾದದ ನಡುವೆಯೇ, ಟ್ರಸ್ಟ್ ಸಿಇಒ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಮತ್ತೊಂದೆಡೆ ಟ್ರಸ್ಟ್ನ ಪ್ರಮುಖರ ವಿರುದ್ಧ ಎಫ್ಐಆರ್ ದಾಖಲಿಸಲು ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
Read Full Story 05:56 AM (IST) Jul 14
India Latest News Live 14 July 2026ಚೀನಾಗೆ ಸೆಡ್ಡು ಹೊಡೆದ ಬೆಂಗ್ಳೂರು ಸ್ಟಾರ್ಟಪ್; ಮ್ಯಾಗ್ನೆಟ್ ಇಲ್ಲದ EV ಮೋಟರ್ ಉತ್ಪಾದನೆ
ಬೆಂಗಳೂರು ಮೂಲದ 'ವಿಮಾಗ್ ಲ್ಯಾಬ್ಸ್' ಸ್ಟಾರ್ಟಪ್, ಅಯಸ್ಕಾಂತ ರಹಿತ ಇವಿ ಮೋಟರ್ ಅಭಿವೃದ್ಧಿಪಡಿಸಿದೆ. ಅಪರೂಪದ ಖನಿಜಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ, ಈ ತಂತ್ರಜ್ಞಾನವು ತಾಮ್ರದ ಸುರುಳಿಗಳು ಮತ್ತು ಸಾಫ್ಟ್ವೇರ್ ಬಳಸಿ ಕಾರ್ಯನಿರ್ವಹಿಸುತ್ತದೆ, ಇದು ಭಾರತದ ಇವಿ ಉದ್ಯಮದಲ್ಲಿ ಸ್ವಾವಲಂಬನೆಗೆ ದೊಡ್ಡ ಹೆಜ್ಜೆಯಾಗಿದೆ.
Read Full Story 05:46 AM (IST) Jul 14
India Latest News Live 14 July 2026ಫುಟ್ಬಾಲ್ ವಿಶ್ವಕಪ್ ಫೈನಲ್ ನಡೆಯುವ ಮೈದಾನದ ಹುಲ್ಲು ಮಾರಾಟಕ್ಕಿಟ್ಟ ಫಿಫಾ! ಬೆಲೆ ಎಷ್ಟು?
2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ನ್ಯೂಯಾರ್ಕ್ ಕ್ರೀಡಾಂಗಣದ ಹುಲ್ಲನ್ನು ಫಿಫಾ ಸಂಗ್ರಹಣಾ ವಸ್ತುವಾಗಿ ಮಾರಾಟ ಮಾಡುತ್ತಿದೆ. ಅಕ್ರಿಲಿಕ್ ಕ್ಯೂಬ್ನಲ್ಲಿ ಸಂರಕ್ಷಿಸಲಾದ ಈ ಹುಲ್ಲಿನ ತುಣುಕುಗಳು ವಿವಿಧ ಪ್ಯಾಕೇಜ್ಗಳಲ್ಲಿ ಲಭ್ಯವಿದೆ.