- Home
- News
- India News
- India Latest News Live: ತೀವ್ರ ಬಿಸಿಲ ಅಪಾಯದಲ್ಲಿರೋ ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗಳೂರು; ಭಾರತದ 14 ನಗರಗಳು
India Latest News Live: ತೀವ್ರ ಬಿಸಿಲ ಅಪಾಯದಲ್ಲಿರೋ ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗಳೂರು; ಭಾರತದ 14 ನಗರಗಳು

ಚೆನ್ನೈ: ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ತಮಿಳುನಾಡಿನ ಶಾಲೆಗಳಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದೆ. ಅಲ್ಲದೇ ಶಾಲೆಗಳಲ್ಲಿ ರಾಜಕಾರಣಿಗಳ ಜನ್ಮದಿನಾಚರಣೆಗೂ ಬ್ರೇಕ್ ಹಾಕಿದೆ.
ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಕಾರ್ಯಗಳನ್ನು ನಡೆಯಬಾರದು ಎಂಬ ಸಿಎಂ ವಿಜಯ್ ಸೂಚನೆ ಆಧರಿಸಿ ಶಿಕ್ಷಣ ಸಚಿವ ರಾಜ್ ಮೋಹನ್ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
‘ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಶಾಲೆಗಳು ಮತ್ತು ತರಗತಿ ಕೊಠಡಿಗಳನ್ನು ಪ್ರವೇಶಿಸಲು ಅವಕಾಶವಿದೆ. ತರಗತಿ ಕೋಣೆಗಳು ಶಿಕ್ಷಣಕ್ಕಾಗಿ ಇರಬೇಕು ಹೊರತು ರಾಜಕೀಯ ಚಟುವಟಿಕೆಗಳಿಗೆ, ಇನ್ಯಾರನ್ನೋ ಹೊಗಳುವುದಕ್ಕೆ ಅಲ್ಲ. ತರಗತಿ ಕೋಣೆ, ಶಾಲಾ ಆವರಣಗಳಲ್ಲಿ ರಾಜಕೀಯ ನಾಯಕರ ಜನ್ಮದಿನಚಾರಣೆ ಮಾಡುವಂತಿಲ್ಲ’ ಎಂದಿದ್ದಾರೆ.
India Latest News Live 11 July 2026ತೀವ್ರ ಬಿಸಿಲ ಅಪಾಯದಲ್ಲಿರೋ ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗಳೂರು; ಭಾರತದ 14 ನಗರಗಳು
India Latest News Live 11 July 2026ಇ20 ಪೆಟ್ರೋಲಿಂದ ಮೈಲೇಜ್ ಕುಸಿತ ನಿಜ, ಆದ್ರೆ ಎಥನಾಲ್ ರಹಿತ ಪೆಟ್ರೋಲ್ ಕೊಡಲ್ಲ - ಕೇಂದ್ರ
ಶೇ.20 ಎಥನಾಲ್ ಮಿಶ್ರಿತ ಇ20 ಪೆಟ್ರೋಲ್ ಬಳಕೆಯಿಂದ ಮೈಲೇಜ್ ಕುಸಿಯುತ್ತಿದೆ ಎಂಬ ದೂರಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಮೈಲೇಜ್ ಶೇ.5ರಷ್ಟು ಕಡಿಮೆಯಾಗುವುದನ್ನು ಒಪ್ಪಿಕೊಂಡಿರುವ ಸಚಿವಾಲಯ, ಎಂಜಿನ್ಗೆ ಯಾವುದೇ ಹಾನಿಯಾಗುವುದಿಲ್ಲ, ಎಥನಾಲ್ ರಹಿತ ಪೆಟ್ರೋಲ್ ಪೂರೈಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.