ವರ್ಕ್ ಫ್ರಮ್ ಹೋಮ್, ವಿದೇಶದಲ್ಲಿ ಮದುವೆ ಬೇಡ, ವಿದೇಶ ಯಾತ್ರೆ ಕಡಿತ, ಮನೆಯಿಂದ ಕೆಲಸ, ಇವಿ ವಾಹನ ಬಳಕೆ, ಅನಗತ್ಯ ಚಿನ್ನ ಖರೀದಿ ಬೇಡ ಸೇರಿದಂತೆ ಈ ಒಂದು ವರ್ಷ 8 ಸೂತ್ರ ಅನುಸರಿಸಲು ಸೂಚಿಸಿದ್ದಾರೆ.
- Home
- News
- India News
- India Latest News Live: ಯುದ್ಧ ಬೆನ್ನಲ್ಲೇ ಮೋದಿ ಮಹತ್ವದ ಸಂದೇಶ, ಸಾರಿಗೆ ಬಳಕೆ, WFH ಸೇರಿ 8 ಸೂತ್ರ ಅನುಸರಿಸಲು ಸೂಚನೆ
India Latest News Live: ಯುದ್ಧ ಬೆನ್ನಲ್ಲೇ ಮೋದಿ ಮಹತ್ವದ ಸಂದೇಶ, ಸಾರಿಗೆ ಬಳಕೆ, WFH ಸೇರಿ 8 ಸೂತ್ರ ಅನುಸರಿಸಲು ಸೂಚನೆ

ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ, ಎಸ್ಆರ್ಐ ವಿಶೇಷ ವೀಕ್ಷಕರಾಗಿದ್ದ ಸುಬ್ರತಾ ಗುಪ್ತಾ ಅವರು ನೇಮಕಗೊಂಡಿದ್ದಾರೆ.
1990ರ ಬ್ಯಾಚಿನ ಅಧಿಕಾರಿಯಾಗಿರುವ ಗುಪ್ತಾ ಅವರು ಚುನಾವಣೆಗೆ ಮುಂಚೆ ನಡೆದಿದ್ದ ಮತಪಟ್ಟಿ ಪರಿಷ್ಕರಣೆಯ ವಿಶೇಷ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮತ್ತೊಂದೆಡೆ 2017ರ ಬ್ಯಾಚಿನ ಐಎಎಸ್ ಅಧಿಕಾರಿ ಶಂತನು ಬಾಲಾ ಅವರನ್ನು ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿ ಆದೇಶಿಸಿದೆ.
India Latest News Live 10 May 2026ಯುದ್ಧ ಬೆನ್ನಲ್ಲೇ ಮೋದಿ ಮಹತ್ವದ ಸಂದೇಶ, ಸಾರಿಗೆ ಬಳಕೆ, WFH ಸೇರಿ 8 ಸೂತ್ರ ಅನುಸರಿಸಲು ಸೂಚನೆ
India Latest News Live 10 May 2026ಸುಮ್ನೆ ಸೂಪರ್ಸ್ಟಾರ್ ಅಂತಾರೆ, ಎಲ್ಲಾ PR ಆಟ - ಯುವ ನಟಿಯರ ವಿರುದ್ಧ ಅಮೀಶಾ ಪಟೇಲ್ ಕಿಡಿ
ಬಾಲಿವುಡ್ನ ಯುವ ನಟಿಯರು 'ಫೇಕ್ ಪಿಆರ್ ಗೇಮ್' ಮೂಲಕ ತಮ್ಮನ್ನು ಸೂಪರ್ಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ನಟಿ ಅಮೀಶಾ ಪಟೇಲ್ ಗಂಭೀರ ಆರೋಪ ಮಾಡಿದ್ದಾರೆ. ಒಂದೇ ಒಂದು ದೊಡ್ಡ ಹಿಟ್ ಸಿನಿಮಾ ನೀಡದೆಯೇ ಹೇಗೆ ನಂಬರ್ 1 ಪಟ್ಟಕ್ಕೇರಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
India Latest News Live 10 May 2026ಸಿಎಂ ಚಂದ್ರಬಾಬು, ಡಿಸಿಎಂ ಪವನ್ ಕಲ್ಯಾಣ್ ಮನೆಗೆ ಮೋದಿ ದಿಢೀರ್ ಭೇಟಿ, ಕಾರಣವೇನು?
ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮೋದಿ ಹೈದರಾಬಾದ್ ಪ್ರವಾಸದ ವೇಳೆ ದಿಢೀರ್ ಆಂಧ್ರ ಸಿಎಂ ಚಂದ್ರಬಾಬು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ಭೇಟಿಗೆ ಕಾರಣವೇನು?
India Latest News Live 10 May 202615 ವರ್ಷಗಳ ಬಳಿಕ ಪೌರಾಣಿಕ ಸಿನಿಮಾ - ಅಜ್ಜ, ಚಿಕ್ಕಪ್ಪ ಮಾಡದ ಪಾತ್ರದಲ್ಲಿ ಜೂ.ಎನ್ಟಿಆರ್!
ನಂದಮೂರಿ ಕುಟುಂಬದಿಂದ 15 ವರ್ಷಗಳ ಬಳಿಕ ಪೌರಾಣಿಕ ಸಿನಿಮಾವೊಂದು ಬರಲಿದೆ. ಯಂಗ್ ಟೈಗರ್ ಜೂ.ಎನ್ಟಿಆರ್ ನಟಿಸಲಿರುವ ಈ ಚಿತ್ರದ ಬಗ್ಗೆ ಮೇ 20ರಂದು ದೊಡ್ಡ ಸರ್ಪ್ರೈಸ್ ಸಿಗುವ ನಿರೀಕ್ಷೆ ಇದೆ.
India Latest News Live 10 May 2026'ಅಮ್ಮ' ಸಂಗೀತಾಗೆ ಬಿಗ್ ಗಿಫ್ಟ್ ನೀಡಿ ನೆಟ್ಟಿಗರ ಮೆಚ್ಚುಗೆ ಪಡೆದ ದಳಪತಿ ವಿಜಯ್ ಮಕ್ಕಳು!
ನಟ, ತಮಿಳುನಾಡು ನೂತನ ಸಿಎಂ ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಸಮಾರಂಭದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇದು ತಮಿಳು ಚಿತ್ರರಂಗದ ಅತಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಕ್ಕಳು ತಮ್ಮ ಅಮ್ಮನಿಗೆ ಕೊಟ್ಟ ಉಡುಗೊರೆ ಏನು?
India Latest News Live 10 May 2026ಮನೆ ತಲುಪಲು 2 ಕಿ.ಮಿ ಬಾಕಿ ಇರುವಾಗಲೇ ಮದುವೆಗೆ ತೆರಳಿದ್ದ ಬಸ್ ಯಲ್ಲಾಪುರದ ಬಳಿ ಅಪಘಾತ
ಮದುವೆ ಮುಗಿಸಿಕೊಂಡು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಮಿನಿ ಬಸ್ ಯಲ್ಲಾಪುರ ಸಮೀಪ ಅಪಘಾತಕ್ಕೀಡಾದ ಘಟನೆ ನಡೆದಿದೆ. ಇನ್ನೇನು ಮನೆ ತಲುಪಿತು ಅನ್ನೋವಷ್ಟರಲ್ಲೇ ಘಟನೆ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.
India Latest News Live 10 May 2026ಸಲ್ಮಾನ್ ಖಾನ್ಗಿಂತ 4 ಪಟ್ಟು ಹೆಚ್ಚು ಸಂಭಾವನೆ - 'ಮೈನೆ ಪ್ಯಾರ್ ಕಿಯಾ' ಸೀಕ್ರೆಟ್ ಬಿಚ್ಚಿಟ್ಟ ನಟಿ ಭಾಗ್ಯಶ್ರೀ!
ಮೈನೆ ಪ್ಯಾರ್ ಕಿಯಾ' ಮೂಲಕ ಒಂದೇ ರಾತ್ರಿಯಲ್ಲಿ ಸ್ಟಾರ್ ಆದ ನಟಿ ಭಾಗ್ಯಶ್ರೀ, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಸಲ್ಮಾನ್ ಖಾನ್ಗಿಂತ ಹೆಚ್ಚು ಸಂಭಾವನೆ ಪಡೆದಿದ್ದರ ಬಗ್ಗೆ ಅವರು ನೀಡಿರುವ ಹೇಳಿಕೆ.
India Latest News Live 10 May 2026ಭಾರತೀಯ ರೈಲ್ವೆ ವೇಯ್ಟಿಂಗ್ ಲಿಸ್ಟ್ ಸಮಸ್ಯೆ, ಬರೋಬ್ಬರಿ 3.39 ಕೋಟಿ ಪ್ರಯಾಣಿಕರು ಪ್ರಯಾಣ ವಂಚಿತ!
India Latest News Live 10 May 2026ಬಿಸಿಸಿಐ ವಾರ್ನಿಂಗ್ ಬಳಿಕ ಪಂದ್ಯದ ನಡುವೆ ಲಖನೌ ಸ್ಟಾಫ್ ಫೋನ್ ಬಳಕೆ, ಫಿಕ್ಸಿಂಗ್ ಅನುಮಾನ
ಬಿಸಿಸಿಐ ಸತತ ವಾರ್ನಿಂಗ್ ನೀಡುತ್ತಿದ್ದರೂ ಯಾವ ತಂಡಗಳು ಕ್ಯಾರೇ ಅನ್ನುತ್ತಿಲ್ಲ. ಇದೀಗ ಸಿಎಸ್ಕೆ ವಿರುದ್ಧದ ಪಂದ್ಯದ ನಡುವೆ ಲಖನೌ ಸೂಪರ್ಜೈಂಟ್ಸ್ ತಂಡದ ಸ್ಟಾಫ್ ಫೋನ್ ಬಳಕೆ ಮಾಡುತ್ತಿರುವ ದೃಶ್ಯ ಭಾರಿ ವಿವಾದ ಸೃಷ್ಟಿಸಿದೆ.
India Latest News Live 10 May 2026ಯಕ್ಷ ಪ್ರಶ್ನೆ! ವಿಜಯ್ ಜೊತೆ ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೆ. ನಾರಾಯಣ ರಾಜ್ಯಪಾಲರನ್ನು ಭೇಟಿ ಆಗಿದ್ದೇಕೆ?
ಕೆಲ ದಿನಗಳ ಹಿಂದೆ ವಿಜಯ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿಯಾಗಲು ಲೊಕ ಭವನಕ್ಕೆ ಹೋದಾಗ, ಅವರ ಜೊತೆ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಕೂಡ ಕಾಣಿಸಿಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಉತ್ತರ..?
India Latest News Live 10 May 2026ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಯಾರಿದ್ದಾರೆ? ಮುಂಬೈನಲ್ಲಿ ಪಾಂಡ್ಯ, ಸೂರ್ಯಕುಮಾರ್ ಅನುಮಾನ
ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ತಂಡ ಜೇಕಬ್ ಬೆತೆಲ್ ಬದಲಾವಣೆ ಮಾಡುತ್ತಾ? ಪ್ಲೇಯಿಂಗ್ 11ನಲ್ಲಿ ಯಾರಿಗಿದೆ ಚಾನ್ಸ್, ಮುಂಬೈ ತಂಡದಲ್ಲಿ ಇಂಜರು ಸಮಸ್ಯೆಯಿಂದ ಆತಂಕ ಎದುರಾಗಿದೆ.
India Latest News Live 10 May 2026Drishyam 3 - 'ಅಪ್ಪ ಒಬ್ಬ ಕ್ರಿಮಿನಲ್ ಅನಿಸಿದ್ರೆ...' - ಜಾರ್ಜ್ಕುಟ್ಟಿ ಶುರುಮಾಡಿದ ಟ್ರೇಲರ್ ಹೈಲೈಟ್ ಏನು?
ಮೋಹನ್ಲಾಲ್-ಜೀತು ಜೋಸೆಫ್ ಕಾಂಬಿನೇಷನ್ನ ಬಹುನಿರೀಕ್ಷಿತ 'ದೃಶ್ಯಂ 3' ಸಿನಿಮಾದ ಸಸ್ಪೆನ್ಸ್ ತುಂಬಿದ ಟ್ರೇಲರ್ ರಿಲೀಸ್ ಆಗಿದೆ. ಮೋಹನ್ಲಾಲ್ ಹುಟ್ಟುಹಬ್ಬದ ದಿನವಾದ ಮೇ 21ಕ್ಕೆ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ.
India Latest News Live 10 May 2026ರಾಮ್ ಚರಣ್ ಫ್ಯಾನ್ಸ್ಗೆ ಗುಡ್ ನ್ಯೂಸ್ - 'ಪೆದ್ದಿ' ಟ್ರೇಲರ್ ಲಾಂಚ್ ಡೇಟ್ ಫಿಕ್ಸ್, ಎಲ್ಲಿ? ಯಾವಾಗ?
ರಾಮ್ ಚರಣ್ ಅವರ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾ ರಿಲೀಸ್ಗೂ ಮುನ್ನವೇ ಸದ್ದು ಮಾಡುತ್ತಿದೆ. ಉತ್ತರ ಅಮೆರಿಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಟಿಕೆಟ್ಗಳು ಭರ್ಜರಿಯಾಗಿ ಸೇಲ್ ಆಗುತ್ತಿವೆ. ಇನ್ನೂ ಟ್ರೇಲರ್ ರಿಲೀಸ್ ಆಗಿಲ್ಲ.
India Latest News Live 10 May 2026ವಿಜಯ್ ಸಿಎಂ ಆದ ಬೆನ್ನಲ್ಲೇ ವಿವಾದ ಶುರು, ಪ್ರಮಾಣವಚನದಲ್ಲಿ ತಮಿಳು ಗೀತೆಗೆ 3ನೇ ಸ್ಥಾನ ಆರೋಪ
ನಟ ಜೊಸೆಫ್ ವಿಜಯ್ ಮುಖ್ಯಮಂತ್ರಿ ಆದ ಬೆನ್ನಲ್ಲೇ ತಲೆನೋವು ಶುರುವಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಂಪ್ರದಾಯದ ಉಲ್ಲಂಘನೆ ಆರೋಪ ಕೇಳಿಬಂದಿದೆ. ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ತಮಿಳು ಗೀತೆ ಸ್ಥಾನವನ್ನು ಸಿಪಿಐ ಪ್ರಶ್ನಿಸಿದೆ.
India Latest News Live 10 May 2026'ದೊಡ್ಡಮ್ಮ' ಅಂತ ಮಾತ್ರ ಕರೀಬೇಡಪ್ಪಾ - ತಂಗಿ ಮಗನಿಗೆ ಕಂಡೀಷನ್ ಹಾಕಿದ್ರು ನಟಿ ಅಹಾನಾ!
ತನ್ನ ಸೋದರಿ ದಿಯಾ ಅವರ ಮಗ ಓಮಿಗೆ 'ದೊಡ್ಡಮ್ಮ' ಎಂದು ಕರೆಸಿಕೊಳ್ಳಲು ತನಗೆ ಇಷ್ಟವಿಲ್ಲ ಎಂದು ನಟಿ ಅಹಾನಾ ಕೃಷ್ಣ ಹೇಳಿದ್ದಾರೆ. ಈ ಹಿಂದೆ ಅವರ ಸೋದರಿ ಇಶಾನಿ ಕೂಡ 'ಚಿಕ್ಕಮ್ಮ' ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ ಎಂದಿದ್ದರು. ಈಗ ಅಹಾನಾ ಸರದಿ.
India Latest News Live 10 May 2026'ತ್ರಿಷಾ-ವಿಜಯ್ ಮದುವೆ ಆಗ್ಬೇಕು' ಎಂದ ಬಾಲಿವುಡ್ ನಟಿ; ಆಕೆ ಕೊಟ್ಟ ಕಾರಣಕ್ಕೆ ಬೆಚ್ಚಿಬಿದ್ದ ತಮಿಳುನಾಡು-ಭಾರತ!
ಯಾವಾಗಲೂ ತನ್ನ ವಿಚಿತ್ರ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಈ ನಟಿ, ಈಗ ವಿಜಯ್ ಮತ್ತು ತ್ರಿಷಾ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. "ವಿಜಯ್ ಮತ್ತು ತ್ರಿಷಾ ಇಬ್ಬರೂ ನನಗೆ ಚೆನ್ನಾಗಿ ಗೊತ್ತು. ಅವರಿಬ್ಬರೂ ಮದುವೆಯಾಗಬೇಕು ಎಂಬುದು ನನ್ನ ಆಸೆ. ಒಂದು ವೇಳೆ ಅವರು ಮದುವೆಯಾದರೆ, ಅವರ ಮೆಹಂದಿ ಶಾಸ್ತ್ರಕ್ಕೆ ನಾನು ಖಂಡಿತವಾಗಿಯೂ ಹಾಜರಾಗುತ್ತೇನೆ" ಎಂದಿದ್ದಾರೆ.
India Latest News Live 10 May 2026ಮಿಸ್ ಯು ಮಮ್ಮಾ - ತಾಯಿ ನರ್ಗಿಸ್ ನೆನೆದು ಭಾವುಕರಾದ ಮುನ್ನಾಭಾಯಿ ಸಂಜಯ್ ದತ್!
ತಾಯಂದಿರ ದಿನದ ವಿಶೇಷ ಸಂದರ್ಭದಲ್ಲಿ, ನಟ ಸಂಜಯ್ ದತ್ ತಮ್ಮ ತಾಯಿ, ದಿವಂಗತ ನಟಿ ನರ್ಗಿಸ್ ದತ್ ಅವರನ್ನು ನೆನಪಿಸಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
India Latest News Live 10 May 2026ನಟ ಜೊಸೆಫ್ ವಿಜಯ್ ಮುಖ್ಯಮಂತ್ರಿ ಆದ ಬೆನ್ನಲ್ಲೇ ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ರಾಜೀನಾಮೆ
ನಟ ಜೊಸೆಫ್ ವಿಜಯ್ ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
India Latest News Live 10 May 2026ಯಾರಿಗೂ ಗೊತ್ತಾಗದಂತೆ ಒಂದು ತಿಂಗಳು ಕುದುರೆ ಸವಾರಿ ಕಲಿತ ನಟಿ ಮಂಜು ವಾರಿಯರ್ - ಕಾರಣವೇನು?
ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಅವರು ಕೇರಳದ ಆಲುವಾದಲ್ಲಿ ರಹಸ್ಯವಾಗಿ ಕುದುರೆ ಸವಾರಿ ಕಲಿಯುತ್ತಿದ್ದರು ಎಂಬ ವರದಿಗಳು ಹೊರಬಿದ್ದಿವೆ.
India Latest News Live 10 May 2026'ನನ್ನಲ್ಲಿರುವುದೆಲ್ಲಾ ನಿಮಗೆ' ಎಂದ ವಿಜಯ್, 'ನನ್ನ ಪುರುಷ' ಎಂದ ರಶ್ಮಿಕಾ; ಎಲ್ಲಾನೂ ಒಕೆ, ಪತ್ರದಲ್ಲೇನಿದೆ?
ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ (X) ಖಾತೆಯಲ್ಲಿ ವಿಜಯ್ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಉದ್ದೇಶಿಸಿ ಸುದೀರ್ಘ ಪತ್ರ ಬರೆದಿದ್ದಾರೆ. "ನನ್ನ ಪ್ರೀತಿಯ ರೌಡಿ ಹುಡುಗ-ಹುಡುಗಿಯರೇ, ನನ್ನ ಅಣ್ಣ-ತಂಗಿಯರೇ ಹಾಗೂ ತಂದೆ-ತಾಯಿಯ ಸಮಾನರಾದ ಹಿರಿಯರೇ... ಮುಂದೆ ಓದಿ..