08:51 AM (IST) Jul 01

India Latest News Live 1 July 2026ಐರ್ಲೆಂಡ್‌ ಶಾಕ್‌ ಬಳಿಕ ಭಾರತಕ್ಕಿನ್ನು ಇಂಗ್ಲೆಂಡ್‌ ಚಾಲೆಂಜ್‌..! ಇಂದು ವೈಭವ್ ಸೂರ್ಯವಂಶಿಗೆ ಸಿಗುತ್ತಾ ಸ್ಥಾನ?

ಐರ್ಲೆಂಡ್‌ ವಿರುದ್ಧದ ಸೋಲಿನ ನಂತರ, ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ 15 ವರ್ಷದ ಯುವ ಆಟಗಾರ ವೈಭವ್‌ ಸೂರ್ಯವಂಶಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದ್ದು, ಹ್ಯಾರಿ ಬ್ರೂಕ್‌ ನೇತೃತ್ವದ ಇಂಗ್ಲೆಂಡ್ ತಂಡದಿಂದ ಕಠಿಣ ಸವಾಲು ಎದುರಾಗಲಿದೆ.
Read Full Story
08:18 AM (IST) Jul 01

India Latest News Live 1 July 2026FIFA World Cup - 1934ರ ಬಳಿಕ ಮೊದಲ ಬಾರಿ ಪ್ರಿಕ್ವಾರ್ಟರ್‌ಗೇರದೇ ಹೊರಬಿದ್ದ ನೆದರ್‌ಲೆಂಡ್ಸ್‌

ಫಿಫಾ ವಿಶ್ವಕಪ್‌ನಲ್ಲಿ ಮೊರಾಕ್ಕೊ ವಿರುದ್ಧ ನೆದರ್‌ಲೆಂಡ್ಸ್‌ ಪೆನಾಲ್ಟಿ ಶೂಟೌಟ್‌ನಲ್ಲಿ 2-3 ಗೋಲುಗಳಿಂದ ಸೋತಿದೆ. ಈ ಮೂಲಕ 3 ಬಾರಿ ರನ್ನರ್‌-ಅಪ್‌ ಆಗಿರುವ ಡಚ್ ಪಡೆ, ಇದೇ ಮೊದಲ ಬಾರಿಗೆ ಅಂತಿಮ 16ರ ಸುತ್ತು ತಲುಪಲು ವಿಫಲವಾಗಿ ಐತಿಹಾಸಿಕ ಮುಖಭಂಗ ಅನುಭವಿಸಿದೆ.
Read Full Story
08:03 AM (IST) Jul 01

India Latest News Live 1 July 2026ಫಿಫಾ ವಿಶ್ವಕಪ್ ಅಚ್ಚರಿ - ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯ ಪತನಕ್ಕೆ ಕಾರಣವಾದ ಆ ಹೀರೋ ಯಾರು?

ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದ್ದು, 4 ಬಾರಿಯ ಚಾಂಪಿಯನ್ ಜರ್ಮನಿ ತಂಡವು ಪರಗ್ವೆ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಜರ್ಮನಿಯ ಹಲವು ಗೋಲು ಪ್ರಯತ್ನಗಳನ್ನು ತಡೆದು, ಪೆನಾಲ್ಟಿ ಶೂಟೌಟ್‌ನಲ್ಲೂ ಮಿಂಚಿದ ಪರಗ್ವೆ ಗೋಲ್‌ಕೀಪರ್ ಓರ್ಲಾಂಡೊ ಗಿಲ್ ಹೀರೋ ಆಗಿ ಹೊರಹೊಮ್ಮಿದರು.
Read Full Story
07:44 AM (IST) Jul 01

India Latest News Live 1 July 2026TVK Govt - ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಸಿಎಂ ವಿಜಯ್; ತಮಿಳುಗರು ಫುಲ್ ಖುಷ್

ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಈ ಬಗ್ಗೆ ಸಿಎಂ ಜೋಸೆಫ್ ವಿಜಯ್ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿಯನ್ನು ನೀಡಿದ್ದಾರೆ. 

Read Full Story
07:34 AM (IST) Jul 01

India Latest News Live 1 July 2026ರಾಮಮಂದಿರದಲ್ಲಿ ದೇಣಿಗೆ ಕಳವು - ಚಂಪತ್ ರಾಯ್ ಮುಂದೆ 4 ಪ್ರಶ್ನೆ ಮುಂದಿಟ್ಟ ಎಸ್‌ಐಟಿ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ, ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರನ್ನು ವಿಚಾರಣೆ ನಡೆಸಿದ್ದು, ಅವರು ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ವಿವಾದವು ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದರೆ, ಸಿಎಂ ಯೋಗಿ ಆದಿತ್ಯನಾಥ್ ವಿಪಕ್ಷಗಳ ನಿಲುವನ್ನು ಟೀಕಿಸಿದ್ದಾರೆ.
Read Full Story
07:08 AM (IST) Jul 01

India Latest News Live 1 July 2026ಜುಲೈ ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್; LPG ದರದಲ್ಲಿ ಗಣನೀಯ ಇಳಿಕೆ, ಕಡಿಮೆಯಾದ ಹೊರೆ

ತೈಲ ಕಂಪನಿಗಳು ಜುಲೈ 1 ರಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹183.50 ರಷ್ಟು ಇಳಿಕೆ ಮಾಡಿವೆ. ಆದರೆ, ಗೃಹಬಳಕೆಯ 14 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರವಾಗಿರಿಸಲಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ.

Read Full Story