- Home
- News
- India News
- India Latest News Live: ಐರ್ಲೆಂಡ್ ಶಾಕ್ ಬಳಿಕ ಭಾರತಕ್ಕಿನ್ನು ಇಂಗ್ಲೆಂಡ್ ಚಾಲೆಂಜ್..! ಇಂದು ವೈಭವ್ ಸೂರ್ಯವಂಶಿಗೆ ಸಿಗುತ್ತಾ ಸ್ಥಾನ?
India Latest News Live: ಐರ್ಲೆಂಡ್ ಶಾಕ್ ಬಳಿಕ ಭಾರತಕ್ಕಿನ್ನು ಇಂಗ್ಲೆಂಡ್ ಚಾಲೆಂಜ್..! ಇಂದು ವೈಭವ್ ಸೂರ್ಯವಂಶಿಗೆ ಸಿಗುತ್ತಾ ಸ್ಥಾನ?

ಭಂಡಾರ: ಮಹಾರಾಷ್ಟ್ರದ ರೈತ ಮಹಿಳೆಯೊಬ್ಬರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಬರಬೇಕಿದ್ದ 2 ಸಾವಿರ ರು.ಹಣದ ಬದಲು ಕೇವಲ 1 ಪೈಸೆ ರು. ಜಮೆ ಆಗಿರುವ ಸಂದೇಶ ಬಂದಿದೆ. ಈ ಬೆನ್ನಲ್ಲೇ ‘ತಾಂತ್ರಿಕ ದೋಷದಿಂದ ತಪ್ಪು ಸಂದೇಶ ಬಂದಿದೆ. ಆದರೆ ಪೂರ್ತಿ ಹಣ ಜಮಾ ಆಗಿದೆ’ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.
ಭಂಡಾರ ಜಿಲ್ಲೆಯ ಜೇವನಾಳ ಗ್ರಾಮದ 65 ವರ್ಷದ ರೈತ ಮಹಿಳೆ ಲಕ್ಷ್ಮೀಬಾಯಿ ಎನ್ನುವವರ ಮೊಬೈಲ್ಗೆ ‘ಕಿಸಾನ್ ಕಂತಿನ ಹಣವಾಗಿ 0.01 ರು. ಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ’ ಎನ್ನುವ ಸಂದೇಶ ಬಂದಿತ್ತು. ಇದರ ಬೆನ್ನಲ್ಲೇ ಅವರ ಪುತ್ರ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕೃಷಿ ಇಲಾಖೆ ‘ಸಂದೇಶ ತಾಂತ್ರಿಕ ದೋಷದಿಂದ ಹೋಗಿದೆ. ದಾಖಲೆಗಳ ಪ್ರಕಾರ ರೈತನ ಖಾತೆಗೆ 2000 ರು. ಯಶಸ್ವಿಯಾಗಿ ಜಮಾ ಆಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
India Latest News Live 1 July 2026ಐರ್ಲೆಂಡ್ ಶಾಕ್ ಬಳಿಕ ಭಾರತಕ್ಕಿನ್ನು ಇಂಗ್ಲೆಂಡ್ ಚಾಲೆಂಜ್..! ಇಂದು ವೈಭವ್ ಸೂರ್ಯವಂಶಿಗೆ ಸಿಗುತ್ತಾ ಸ್ಥಾನ?
India Latest News Live 1 July 2026FIFA World Cup - 1934ರ ಬಳಿಕ ಮೊದಲ ಬಾರಿ ಪ್ರಿಕ್ವಾರ್ಟರ್ಗೇರದೇ ಹೊರಬಿದ್ದ ನೆದರ್ಲೆಂಡ್ಸ್
India Latest News Live 1 July 2026ಫಿಫಾ ವಿಶ್ವಕಪ್ ಅಚ್ಚರಿ - ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯ ಪತನಕ್ಕೆ ಕಾರಣವಾದ ಆ ಹೀರೋ ಯಾರು?
India Latest News Live 1 July 2026TVK Govt - ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಸಿಎಂ ವಿಜಯ್; ತಮಿಳುಗರು ಫುಲ್ ಖುಷ್
ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಈ ಬಗ್ಗೆ ಸಿಎಂ ಜೋಸೆಫ್ ವಿಜಯ್ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿಯನ್ನು ನೀಡಿದ್ದಾರೆ.
India Latest News Live 1 July 2026ರಾಮಮಂದಿರದಲ್ಲಿ ದೇಣಿಗೆ ಕಳವು - ಚಂಪತ್ ರಾಯ್ ಮುಂದೆ 4 ಪ್ರಶ್ನೆ ಮುಂದಿಟ್ಟ ಎಸ್ಐಟಿ
India Latest News Live 1 July 2026ಜುಲೈ ತಿಂಗಳ ಮೊದಲ ದಿನವೇ ಗುಡ್ನ್ಯೂಸ್; LPG ದರದಲ್ಲಿ ಗಣನೀಯ ಇಳಿಕೆ, ಕಡಿಮೆಯಾದ ಹೊರೆ
ತೈಲ ಕಂಪನಿಗಳು ಜುಲೈ 1 ರಿಂದ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ₹183.50 ರಷ್ಟು ಇಳಿಕೆ ಮಾಡಿವೆ. ಆದರೆ, ಗೃಹಬಳಕೆಯ 14 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರವಾಗಿರಿಸಲಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್ಗಳ ಬೆಲೆ ಕಡಿಮೆಯಾಗಿದೆ.