ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಜೊತೆ ಮದುವೆ ವದಂತಿಗಳಿಂದಾಗಿ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಿದ್ರೆ ಯಾರು ಈ ಅನಿರುಧ್? ಅವರ ಶಿಕ್ಷಣ, ವೃತ್ತಿ, ಕುಟುಂಬ ಮತ್ತು ಕೆಲವು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸೌತ್ ಸಿನಿಮಾರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್ ಮತ್ತೊಮ್ಮೆ ಸಖತ್ ಸದ್ದು ಮಾಡುತ್ತಿದ್ದಾರೆ. ಆದರೆ ಈ ಬಾರಿ ಅವರ ಹೊಸ ಸಿನಿಮಾ ಅಥವಾ ಸೂಪರ್ಹಿಟ್ ಹಾಡಿನಿಂದಲ್ಲ, ಬದಲಿಗೆ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಸಿಇಒ ಕಾವ್ಯಾ ಮಾರನ್ ಜೊತೆಗಿನ ಮದುವೆ ಚರ್ಚೆಯಿಂದ. ಇತ್ತೀಚೆಗೆ ಅನಿರುಧ್ ಅವರ ಚಿಕ್ಕಪ್ಪ ಹಾಗೂ ಹಿರಿಯ ನಟ ವೈ. ಜಿ. ಮಹೇಂದ್ರ ನೀಡಿದ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಈ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿದೆ. ಆದರೆ, ಈ ಬಗ್ಗೆ ಅನಿರುಧ್ ರವಿಚಂದರ್ ಆಗಲಿ, ಕಾವ್ಯಾ ಮಾರನ್ ಆಗಲಿ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಈ ನಡುವೆ, ಕಾವ್ಯಾ ಮಾರನ್ ಜೊತೆ ಹೆಸರು ಕೇಳಿಬಂದಿರುವ ಅನಿರುಧ್ ರವಿಚಂದರ್ ಯಾರು ಅಂತ ತಿಳಿಯೋ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. ಅವರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ.
21ನೇ ವಯಸ್ಸಿಗೆ ವರ್ಲ್ಡ್ ರೆಕಾರ್ಡ್ ಮಾಡಿದ ಹುಡುಗ ಅನಿರುಧ್
ಚೆನ್ನೈನಲ್ಲಿ ಹುಟ್ಟಿದ ಅನಿರುಧ್ ರವಿಚಂದರ್ಗೆ ಸಿನಿಮಾ ಮತ್ತು ಸಂಗೀತ ಅನ್ನೋದು ರಕ್ತದಲ್ಲೇ ಬಂದಿದೆ. ಅವರ ತಂದೆ ಖ್ಯಾತ ನಟ ರವಿ ರಾಘವೇಂದ್ರ, ತಾಯಿ ಲಕ್ಷ್ಮಿ ರವಿಚಂದರ್ ಒಬ್ಬ ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾರ್ತಿ. ಅನಿರುಧ್ ಲಂಡನ್ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ನಲ್ಲಿ ಕ್ಲಾಸಿಕಲ್ ಪಿಯಾನೋ ಕಲಿತರು. ನಂತರ ಚೆನ್ನೈನಲ್ಲಿ ಸೌಂಡ್ ಇಂಜಿನಿಯರಿಂಗ್ ತರಬೇತಿ ಪಡೆದರು. 2011ರಲ್ಲಿ ರಿಲೀಸ್ ಆದ 'ವೈ ದಿಸ್ ಕೊಲವೆರಿ ಡಿ' ಹಾಡು ಅವರ ಕೆರಿಯರ್ಗೆ ಅತಿದೊಡ್ಡ ಟರ್ನಿಂಗ್ ಪಾಯಿಂಟ್ ಕೊಡ್ತು. ಈ ಹಾಡು ಕೇವಲ ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಹಲವು ದೇಶಗಳಲ್ಲಿ ವೈರಲ್ ಆಗಿ, ಅನಿರುಧ್ ರಾತ್ರೋರಾತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಯುವ ಭಾರತೀಯ ಸಂಗೀತ ನಿರ್ದೇಶಕರಾದರು.
ಸೌತ್ನಿಂದ ಬಾಲಿವುಡ್ವರೆಗೂ ಅನಿರುಧ್ ಹವಾ
'ಕೊಲವೆರಿ ಡಿ' ನಂತರ ಅನಿರುಧ್ ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದರು. ಇಂದು ಅವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆಯ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಬಾಲಿವುಡ್ನಲ್ಲೂ ಅನಿರುಧ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಶಾರುಖ್ ಖಾನ್ ಅವರ ಬ್ಲಾಕ್ಬಸ್ಟರ್ ಸಿನಿಮಾ 'ಜವಾನ್'ಗೆ ಸಂಗೀತ ಸಂಯೋಜನೆ ಮಾಡಿ, ಹಿಂದಿ ಪ್ರೇಕ್ಷಕರಲ್ಲೂ ಸಖತ್ ಫೇಮಸ್ ಆದ್ರು. ಮಾಡರ್ನ್ ಬೀಟ್ಸ್ ಮತ್ತು ಭಾರತೀಯ ಸಂಗೀತವನ್ನು ಮಿಕ್ಸ್ ಮಾಡಿ ಕೊಡುವ ಅವರ ಶೈಲಿ ಜನರಿಗೆ ತುಂಬಾ ಇಷ್ಟವಾಗುತ್ತದೆ.
ಸಿನಿಮಾ ಹಿನ್ನೆಲೆಯಿದ್ದರೂ ಸ್ವಂತ ಪರಿಶ್ರಮದಿಂದ ಬೆಳೆದ ಪ್ರತಿಭೆ
ಅನಿರುಧ್ ಹೆಸರು ಸೂಪರ್ಸ್ಟಾರ್ ರಜನಿಕಾಂತ್ ಅವರ ಕುಟುಂಬದ ಜೊತೆಗೂ ತಳಕು ಹಾಕಿಕೊಂಡಿದೆ. ಅವರು ರಜನಿಕಾಂತ್ ಅವರ ಸಂಬಂಧಿ. ಆದರೆ, ಅವರು ಎಂದಿಗೂ ತಮ್ಮ ಕುಟುಂಬದ ಹೆಸರನ್ನು ಬಳಸಿಕೊಂಡು ಬೆಳೆಯಲಿಲ್ಲ. ಅವರ ಯಶಸ್ಸಿಗೆ ಅವರ ಪರಿಶ್ರಮ, ವಿಭಿನ್ನ ಆಲೋಚನೆ ಮತ್ತು ಸತತ ಹಿಟ್ ಸಂಗೀತವೇ ಕಾರಣ.
ಕಾವ್ಯಾ ಮಾರನ್ ಜೊತೆಗಿನ ಮದುವೆ ಚರ್ಚೆ ಯಾಕೆ?
ಇತ್ತೀಚೆಗೆ ಅನಿರುಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದೆ. ಅನಿರುಧ್ ಅವರ ಚಿಕ್ಕಪ್ಪ, ಹಿರಿಯ ನಟ ವೈ. ಜಿ. ಮಹೇಂದ್ರನ್ ಇಬ್ಬರ ಮದುವೆಯ ಬಗ್ಗೆ ಸುಳಿವು ನೀಡಿದ್ದಾರೆ. "ಮದುವೆ ಬಹುತೇಕ ನಿಗದಿಯಾಗಿದೆ, ಆದರೆ ದಿನಾಂಕ ಇನ್ನೂ ಫೈನಲ್ ಆಗಿಲ್ಲ" ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ನಂತರ ಮದುವೆ ವದಂತಿಗಳು ಮತ್ತೆ ಜೋರಾಗಿವೆ. ಆದರೆ, ಎರಡೂ ಕುಟುಂಬಗಳು ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ, ಈ ಸುದ್ದಿಯನ್ನು ಸದ್ಯಕ್ಕೆ ಖಚಿತಪಡಿಸಲು ಸಾಧ್ಯವಿಲ್ಲ. ಮದುವೆ ವದಂತಿಗಳ ಹೊರತಾಗಿ, ಅನಿರುಧ್ ರವಿಚಂದರ್ ಇಂದಿಗೂ ತಮ್ಮ ಪ್ರತಿಭೆಯಿಂದಲೇ ಭಾರತೀಯ ಸಂಗೀತ ಲೋಕದಲ್ಲಿ ವಿಶೇಷ ಸ್ಥಾನ ಗಳಿಸಿ, ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯ ಗೆದ್ದ ಯುವ ಸಂಗೀತಗಾರನಾಗಿ ಗುರುತಿಸಿಕೊಂಡಿದ್ದಾರೆ.


