ಮಾಸ್ ಮಹಾರಾಜ ರವಿತೇಜ ಅಭಿನಯದ 'ಇರುಮುಡಿ' ಸಿನಿಮಾವು ಕೇವಲ ಐದೇ ದಿನಗಳಲ್ಲಿ 100 ಕೋಟಿ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಅಪ್ಪ-ಮಗಳ ಬಾಂಧವ್ಯದ ಭಾವನಾತ್ಮಕ ಕಥೆಯನ್ನು ಹೊಂದಿದ್ದು, ರವಿತೇಜ ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.
ಮಾಸ್ ಮಹಾರಾಜ ರವಿತೇಜ ಅಭಿನಯದ ಹೊಸ ಸಿನಿಮಾ 'ಇರುಮುಡಿ' ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಸಿನಿಮಾ ರಿಲೀಸ್ ಆದ ಕೇವಲ ಐದೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಈ ವಿಚಾರವನ್ನು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅಧಿಕೃತವಾಗಿ ಘೋಷಿಸಿದೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರಕ್ಕೆ ಥಿಯೇಟರ್ಗಳಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಇದು ರವಿತೇಜ ಅವರ ವೃತ್ತಿಜೀವನದ 77ನೇ ಸಿನಿಮಾ ಅನ್ನೋದು ವಿಶೇಷ.
ಒಂದು ಮಿಲಿಯನ್ಗೂ ಹೆಚ್ಚು ಟಿಕೆಟ್ ಮಾರಾಟ
ಈ ಚಿತ್ರಕ್ಕೆ 'ಇರುಮುಡಿ' ಅಂತ ಬಲವಾದ ಶೀರ್ಷಿಕೆ ಇಡಲಾಗಿದ್ದು, ಇದು ಆಳವಾದ ಆಧ್ಯಾತ್ಮಿಕ ಅರ್ಥವನ್ನು ಸೂಚಿಸುತ್ತದೆ. ಟಿಕೆಟ್ ಬುಕಿಂಗ್ನಲ್ಲೂ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಒಂದು ಮಿಲಿಯನ್ಗೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ಫಸ್ಟ್ ಲುಕ್ ಪೋಸ್ಟರ್ನಲ್ಲಿ ರವಿತೇಜ, ಸಾಂಪ್ರದಾಯಿಕ ಅಯ್ಯಪ್ಪ ಸ್ವಾಮಿ ವೇಷದಲ್ಲಿ ಕಾಣಿಸಿಕೊಂಡಿದ್ದರು. ಕೈಯಲ್ಲಿ ಹೆಣ್ಣು ಮಗುವನ್ನು ಎತ್ತಿಕೊಂಡಿರುವ ಅವರ ಪೋಸ್, ಅಪ್ಪ-ಮಗಳ ಬಾಂಧವ್ಯದ ಭಾವನಾತ್ಮಕ ಕಥೆಯನ್ನು ಸಾರಿ ಹೇಳುತ್ತಿದೆ.
ಈ ಸಿನಿಮಾ ಬಗ್ಗೆ ರವಿತೇಜ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ಕೆಲವು ಕಥೆಗಳು ನಮ್ಮ ಜೀವನದ ಸರಿಯಾದ ಸಮಯದಲ್ಲಿ ನಮ್ಮನ್ನು ಆಯ್ಕೆ ಮಾಡುತ್ತವೆ. ಅಂತಹ ಒಂದು ಕಥೆಯ ಭಾಗವಾಗಲು ನನಗೆ ಅದೃಷ್ಟ ಸಿಕ್ಕಿದೆ. ನಂಬಿಕೆ ಎಲ್ಲರನ್ನೂ ಮುಂದೆ ನಡೆಸಲಿ. ಶಿವ ನಿರ್ವಾಣ ಮತ್ತು ಮೈತ್ರಿ ಮೂವಿ ಮೇಕರ್ಸ್ ಜೊತೆ 'ಇರುಮುಡಿ' ಎಂಬ ಹೊಸ ಪ್ರಯಾಣ ಆರಂಭಿಸಲು ನಾನು ಉತ್ಸುಕನಾಗಿದ್ದೇನೆ' ಎಂದು ಅವರು ಹೇಳಿದ್ದಾರೆ.
ವಿಭಿನ್ನ ಪಾತ್ರದಲ್ಲಿ ನಟಿಸಿರುವ ರವಿತೇಜ
ಈ ಸಿನಿಮಾದಲ್ಲಿ ರವಿತೇಜ ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಅಪ್ಪ-ಮಗಳ ಬಾಂಧವ್ಯವೇ ಈ ಚಿತ್ರದ ಮುಖ್ಯ ಕಥಾವಸ್ತು. ಇಂತಹ ಪಾತ್ರವನ್ನು ಮೊದಲ ಬಾರಿಗೆ ಮಾಡುತ್ತಿರುವ ರವಿತೇಜ, ನಟನಾಗಿ ದೊಡ್ಡ ಬದಲಾವಣೆಗೆ ಒಳಗಾಗಿದ್ದಾರೆ. ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸಿದ್ದು, ರವಿತೇಜ ಅವರ ಮಗಳ ಪಾತ್ರದಲ್ಲಿ ಬೇಬಿ ನಕ್ಷತ್ರ ಕಾಣಿಸಿಕೊಂಡಿದ್ದಾರೆ. ಸಾಯಿಕುಮಾರ್, ಅಜಯ್ ಘೋಷ್, ರಮೇಶ್ ಇಂದಿರಾ, ಸ್ವಾಸಿಕಾ, ಮೀಸಾಲ ಲಕ್ಷ್ಮಣ್, ರಾಜ್ಕುಮಾರ್ ಕಾಸಿರೆಡ್ಡಿ, ರಮಣ ಭಾರ್ಗವ್, ಕಿಶೋರ್ ಕಂಚೇರಪಾಲೆಂ, ಕಾರ್ತಿಕ್ ಅಡುಸುಮಲ್ಲಿ ಮತ್ತು ಮಹೇಶ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ: ಶಿವ ನಿರ್ವಾಣ, ನಿರ್ಮಾಪಕರು: ನವೀನ್ ಯೆರ್ನೇನಿ, ವೈ. ರವಿಶಂಕರ್, ಬ್ಯಾನರ್: ಮೈತ್ರಿ ಮೂವಿ ಮೇಕರ್ಸ್, ಸಂಗೀತ: ಜಿ.ವಿ. ಪ್ರಕಾಶ್ ಕುಮಾರ್, ಛಾಯಾಗ್ರಹಣ: ವಿಷ್ಣು ಶರ್ಮಾ, ಪ್ರೊಡಕ್ಷನ್ ಡಿಸೈನರ್: ಸಾಹಿ ಸುರೇಶ್, ಸಂಕಲನ: ಪ್ರವೀಣ್ ಪುಡಿ, ಸ್ಕ್ರಿಪ್ಟ್ ಕೋ-ಆರ್ಡಿನೇಟರ್: ನರೇಶ್ ಬಾಬು ಪಿ, ಸಹ ನಿರ್ದೇಶಕ: ಸುರೇಶ್, ಮೇಕಪ್: ಶ್ರೀನಿವಾಸ್ ರಾಜು, ವಸ್ತ್ರಾಲಂಕಾರ: ರಾಜೇಶ್.


