ಮೋರಿ: ಒಎನ್ಜಿಸಿಗೆ ಸೇರಿದ ಅನಿಲ ಬಾವಿಯೊಂದರ ಪೈಪ್ನಲ್ಲಿ ಅನಿಲ ಸೋರಿಕೆಯಾಗಿ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ನಡೆದಿದೆ. ಪರಿಣಾಮ 4 ಕಿ.ಮೀ. ಸುತ್ತಳತೆಯಲ್ಲಿ 2 ಗ್ರಾಮಗಳನ್ನು ಸ್ಥಳಾಂತರಗೊಳಿಸಲಾಗಿದೆ. ಆಂಧ್ರದ ಕೋನಸೀಮಾ ಜಿಲ್ಲೆಯ ಮೋರಿ ಎಂಬಲ್ಲಿ ಡೀಪ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ನಿರ್ವಹಿಸುತ್ತಿದ್ದ ಒಎನ್ಜಿಸಿಯ 5ನೇ ಬಾವಿಯ ಪೈಪ್ಲೈನ್ನಲ್ಲಿ ಸೋರಿಕೆಯಾಗಿ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳದಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿದ್ದು, 10ಕ್ಕೂ ಹೆಚ್ಚು ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿವೆ. ಸುತ್ತಮುತ್ತಲಿನ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಮಾಹಿತಿ ಪಡೆದಿದ್ದಾರೆ.
10:52 PM (IST) Jan 06
ಈ ಉಡಾವಣೆಯು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ನ 64 ನೇ ಉಡಾವಣೆ ಮತ್ತು ಎರಡು ಸ್ಟ್ರಾಪ್-ಆನ್ ಬೂಸ್ಟರ್ಗಳನ್ನು ಹೊಂದಿರುವ PSLV-DL ವೇರಿಯಂಟ್ನ 5 ನೇ ಬಳಕೆಯನ್ನು ಗುರುತಿಸುತ್ತದೆ.
10:19 PM (IST) Jan 06
ರಿಲಯನ್ಸ್ ಫೌಂಡೇಷನ್ ಚೇರ್ಮನ್ ನೀತಾ ಅಂಬಾನಿ ಅವರು 'ಯುನೈಟೆಡ್ ಇನ್ ಟ್ರಯಂಫ್' ಕಾರ್ಯಕ್ರಮದಲ್ಲಿ ಭಾರತದ ಮೂರು ವಿಶ್ವಕಪ್ ವಿಜೇತ ಕ್ರಿಕೆಟ್ ತಂಡಗಳನ್ನು ಸನ್ಮಾನಿಸಿದರು. ಈ ವಿಶೇಷ ಸಂದರ್ಭದಲ್ಲಿ, ಅವರು ಅಂಧರ ಮಹಿಳಾ ಕ್ರಿಕೆಟ್ ತಂಡಕ್ಕೆ 5 ಕೋಟಿ ರೂಪಾಯಿ ಬಹುಮಾನ ನೀಡಿದರು,
09:33 PM (IST) Jan 06
ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, ಅಮೆರಿಕ-ಭಾರತ ಸುಂಕ ವಿವಾದದ ಬಗ್ಗೆ ಮಾತನಾಡುತ್ತಾ, 'ವೆನೆಜುವೆಲಾದಂತೆ ಭಾರತದ ಪ್ರಧಾನಿಯನ್ನು ಅಮೆರಿಕ ಅಪಹರಿಸಬಹುದೇ?' ಎಂದು ಪ್ರಶ್ನಿಸಿ ವಿವಾದ ಸೃಷ್ಟಿ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ,'ಬೌದ್ಧಿಕ ದಿವಾಳಿತನ' ಎಂದು ಕರೆದಿದ್ದಾರೆ.
08:55 PM (IST) Jan 06
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಫೋಟೋ ವೈರಲ್ ಆದ ನಂತರ, ಅವರು ಧರಿಸಿದ್ದ ಬೂದು ಬಣ್ಣದ ನೈಕ್ ಟ್ರ್ಯಾಕ್ಸೂಟ್ಗೆ ಭಾರೀ ಬೇಡಿಕೆ ಸೃಷ್ಟಿಯಾಯಿತು. ಈ ಬೇಡಿಕೆಯಿಂದಾಗಿ ಕೆಲವೇ ನಿಮಿಷಗಳಲ್ಲಿ ಈ ನಿರ್ದಿಷ್ಟ ಟ್ರ್ಯಾಕ್ಸೂಟ್ ಸೋಲ್ಡ್ ಔಟ್ ಆಗಿದೆ.
08:01 PM (IST) Jan 06
Lalu Yadav’s Grandson Joins Singapore Military; Rohini Acharya Shares Post ರೋಹಿಣಿ ಆಚಾರ್ಯ ಅವರ ಮಗ ಆದಿತ್ಯ ಸಿಂಗಾಪುರದಲ್ಲಿ ಎರಡು ವರ್ಷಗಳ ಕಡ್ಡಾಯ ರಾಷ್ಟ್ರೀಯ ಸೇವೆಯನ್ನು ಪ್ರಾರಂಭ ಮಾಡಿದ್ದಾರೆ. ಈ ಬಗ್ಗೆ ಹೆಮ್ಮೆ ಪಟ್ಟು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
07:35 PM (IST) Jan 06
ಕಪ್ಪು, ಬಿಳಿ ಅಥವಾ ಕೆಂಪು; ಯಾವ ಬಣ್ಣದ ಕಾರು ನಿಮಗೆ ಲಾಭದಾಯಕ? ಕಾರಿನ ಬಣ್ಣದ ಆಯ್ಕೆ ಕೇವಲ ಸೌಂದರ್ಯಕ್ಕಾಗಿ ಅಲ್ಲ, ಇದು ನಿರ್ವಹಣೆ, ಮರುಮಾರಾಟ ಮೌಲ್ಯದ ಮೇಲೂ ಪರಿಣಾಮ ಬೀರುತ್ತದೆ.
07:19 PM (IST) Jan 06
ರಾಜ್ ಶಮಾನಿ ಪಾಡ್ಕಾಸ್ಟ್ನಲ್ಲಿ ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದ್ದ ಸಾಧನವು ಚರ್ಚೆಗೆ ಕಾರಣವಾಗಿದೆ. 'ಟೆಂಪಲ್' ಹೆಸರಿನ ಈ ಪ್ರಾಯೋಗಿಕ ಉಪಕರಣವು ಮೆದುಳಿನ ರಕ್ತದ ಹರಿವನ್ನು ನೈಜ ಸಮಯದಲ್ಲಿ ಅಳೆಯುವ ಮೂಲಕ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.
07:19 PM (IST) Jan 06
ವಾಹನ ಪಾರ್ಕಿಂಗ್ ವಿಚಾರಕ್ಕೆ ಆರಂಭವಾದ ಗಲಾಟೆಯೊಂದು 30 ವರ್ಷದ ಯುವಕ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
07:02 PM (IST) Jan 06
ಹೆದ್ದಾರಿಗಳಲ್ಲಿ ಇನ್ಮುಂದೆ ಕಾಲ್ ಡ್ರಾಪ್ ಆಗಲ್ಲ, ಏನಿದು ಹೊಸ ರಸ್ತೆಗಳಲ್ಲಿ 5ಜಿ ನೆಟ್ವರ್ಕ್?, ಪ್ರಯಾಣದ ವೇಳೆ ನೆಟ್ವರ್ಕ್ ಸಮಸ್ಯೆಯಿಂದ ಕಾಲ್ ಡ್ರಾಪ್ ಸಮಸ್ಯೆಗಳನ್ನು ಬಹುತೇಕರು ಎದಿರಿಸಿದ್ದಾರೆ. ಇನ್ನು ಈ ಸಮಸ್ಯೆ ಇರುವುದಿಲ್ಲ
06:33 PM (IST) Jan 06
ಭಾರತದ ಜನಪ್ರಿಯ ರಮ್ ಬ್ರಾಂಡ್ ಓಲ್ಡ್ ಮಂಕ್ ಬಗ್ಗೆ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ. ಇದು ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಹುಟ್ಟಿದ ಕತೆ.
06:15 PM (IST) Jan 06
06:10 PM (IST) Jan 06
ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗುವ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೀಪಸ್ತಂಭ ವಕ್ಫ್ ಮಂಡಳಿಗೆ ಸೇರಿದ್ದು ಮತ್ತು ದೀಪ ಹಚ್ಚುವುದರಿಂದ ಶಾಂತಿಗೆ ಭಂಗವಾಗುತ್ತದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
05:35 PM (IST) Jan 06
ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರ ಬ್ರೇಕಪ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಕ್ಷಿತ್ ಅವರ ಆಪ್ತ ಸ್ನೇಹಿತ ಪ್ರಮೋದ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಚೈಲ್ಡಿಶ್ ಬುದ್ಧಿಯೇ ಇದಕ್ಕೆ ಕಾರಣ ಎಂದು ಪ್ರಮೋದ್ ಅಭಿಪ್ರಾಯಪಟ್ಟಿದ್ದಾರೆ
05:21 PM (IST) Jan 06
05:14 PM (IST) Jan 06
ಕಳೆದ ವರ್ಷ ಷೇರು ಮಾರುಕಟ್ಟೆಯು ಮಿಶ್ರಫಲ ನೀಡಿದ್ದು, ಕೆಲವು ಷೇರುಗಳು ಹೂಡಿಕೆದಾರರನ್ನು ಸಂಪೂರ್ಣವಾಗಿ ದಿವಾಳಿ ಮಾಡಿವೆ. ತೇಜಸ್ ನೆಟ್ವರ್ಕ್ಸ್, ಓಲಾ ಎಲೆಕ್ಟ್ರಿಕ್ಸೇ ರಿದಂತೆ ಶೇ. 50ಕ್ಕೂ ಹೆಚ್ಚು ಮೌಲ್ಯ ಕಳೆದುಕೊಂಡ ಟಾಪ್ 10 ಕಳಪೆ ಷೇರುಗಳ ಬಗ್ಗೆ ವಿವರಿಸಲಾಗಿದೆ.
05:13 PM (IST) Jan 06
ತಾಯಿಗೆ ಹುಷಾರಿಲ್ಲ ಎಂದು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ರಜೆ ನೀಡದೇ, ತಾಯಿಯನ್ನು ಬೇಕಿದ್ದರೆ ಆಶ್ರಯ ಕೇಂದ್ರಕ್ಕೆ ಸೇರಿಸು ರಜೆ ಮಾತ್ರ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ ಘಟನೆ ನಡೆದಿದೆ.
04:56 PM (IST) Jan 06
04:31 PM (IST) Jan 06
ಹೊಸ ವರ್ಷಾಚರಣೆ ಅಂಗವಾಗಿ ಗೋವಾದಲ್ಲಿ ನಡೆದ ಪಾರ್ಟಿಯೊಂದರಲ್ಲಿ ನಟಿ ತಮನ್ನಾ ಭಾಟಿಯಾ ಐಟಂ ಡಾನ್ಸ್ ಮಾಡಿದ್ದಾರೆ. ಕೇವಲ ಆರು ನಿಮಿಷಗಳ ಈ ಪ್ರದರ್ಶನಕ್ಕೆ ಅವರು ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
04:23 PM (IST) Jan 06
World's Largest Shivling Stranded in Bihar's Gopalganj Over Safety Concerns ಶಿವಲಿಂಗ ಇನ್ನೂ ತನ್ನ ನಿಗದಿತ ಸ್ಥಳ ತಲುಪಬೇಕಿದೆ. ಆದರೆ, ಗೋಪಾಲ್ಗಂಜ್ ಜಿಲ್ಲೆಯಲ್ಲಿರುವ ಸೇತುವೆ ದುರ್ಬಲವಾಗಿರುವ ಕಾರಣಕ್ಕೆ ಅದು ಅಲ್ಲಿನ ಚೆಕ್ಪೋಸ್ಟ್ನಲ್ಲಿಯೇ ನಿಂತಿದೆ ಎಂದು ವರದಿಯಾಗಿದೆ.
04:21 PM (IST) Jan 06
ಧೋತಿ, ಕುರ್ತಾ ಜರ್ಸಿ ಜೊತೆ ಸಂಸ್ಕೃತ ಕಮೆಂಟ್ರಿ, ಸದ್ದು ಮಾಡುತ್ತಿದೆ ಸನಾತನಿ ಕ್ರಿಕೆಟ್ ಲೀಗ್ ವಿಡಿಯೋ, ಭಾರತದ ಸಾಂಸ್ಕೃತಿ ಹಿರಿಯ ಕ್ರಿಕೆಟ್ ಲೀಗ್ ಟೂರ್ನಿ ಸಾಂಪ್ರದಾಯಿಕ ಜರ್ಸಿಯಲ್ಲಿ ಗುರುಕುಲ ವಿದ್ಯಾರ್ಥಿಗಳು ದೇಶದ ಗಮನಸೆಳೆದಿದ್ದಾರೆ.
04:15 PM (IST) Jan 06
ಬೆಂಗಳೂರು: ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅನುಭವಿ ವೇಗಿ ಮೊಹಮ್ಮದ್ ಶಮಿ ವಿಫಲವಾಗಿದ್ದಾರೆ. ಹಾಗಂತ ಶಮಿ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
03:58 PM (IST) Jan 06
ಅಂಬಾಲಾದಲ್ಲಿ, ಮಹಿಳೆಯ ನಕಲಿ ಫೇಸ್ಬುಕ್ ಖಾತೆಯ ಮೂಲಕ ಹನಿಟ್ರ್ಯಾಪ್ಗೆ ಒಳಗಾದ 31 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಭಾರತೀಯ ಸೇನೆ ಮತ್ತು ಏರ್ಫೋರ್ಸ್ಗೆ ಸಂಬಂಧಿಸಿದ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನದ ಐಎಸ್ಐ ಹ್ಯಾಂಡಲರ್ಗಳೊಂದಿಗೆ ಹಂಚಿಕೊಂಡಿದ್ದಾನೆ.
03:26 PM (IST) Jan 06
ಬೆಂಗಳೂರು: ಹಲವಾರು ಸಂದರ್ಭಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜತೆ ರನ್ ಮಷೀನ್ ವಿರಾಟ್ ಕೊಹ್ಲಿಯನ್ನು ಹೋಲಿಸಲಾಗುತ್ತಿತ್ತು. ಆದರೆ ಸಚಿನ್ ಹೆಸರಿನಲ್ಲಿರುವ ಈ 8 ದಾಖಲೆಗಳನ್ನು ಬ್ರೇಕ್ ಮಾಡುವುದು ಕೊಹ್ಲಿ ಪಾಲಿಗೆ ಸಾಧ್ಯವೇ ಇಲ್ಲ.
02:49 PM (IST) Jan 06
ಮನೆಯಲ್ಲಿ ಜಾಗವಿಲ್ಲ ಎಂಬ ಕಾರಣ ನೀಡಿ ಮಗಳೊಬ್ಬಳು ತನ್ನ ವೃದ್ಧ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಲು ಕರೆತಂದಿದ್ದಾಳೆ. ಈ ಸಂದರ್ಭದಲ್ಲಿ, ಅಪರಿಚಿತರೊಬ್ಬರು ಪ್ರಶ್ನಿಸಿದಾಗ ಆ ತಾಯಿ ಕಣ್ಣೀರಿಟ್ಟಿದ್ದು, ಈ ಭಾವುಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
02:36 PM (IST) Jan 06
ಕಾಂತಾರದ ಕನಕವತಿ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಮೆಲ್ಲಿಸಾ, ರುಕ್ಮಿಣಿ ಅವತಾರಕ್ಕೆ ಫ್ಯಾನ್ಸ್ ಫಿದಾ, ರುಕ್ಮಿಣಿ ವಸಂತ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿಸ್ ಸಿನಿಮಾದ ಫೇರಿ ಟೇಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಭಾರಿ ಚರ್ಚೆಯಾಗುತ್ತಿದೆ.
01:28 PM (IST) Jan 06
ಇತ್ತೀಚಿನ OECD ವರದಿಯ ಪ್ರಕಾರ, ಪಾಕಿಸ್ತಾನವು 80 ಲಕ್ಷ ನಿರ್ಗತಿಕರೊಂದಿಗೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ, ಇದಕ್ಕೆ ಆರ್ಥಿಕ ಅಸ್ಥಿರತೆ ಮತ್ತು ನೈಸರ್ಗಿಕ ವಿಕೋಪಗಳು ಕಾರಣ. ಜೊತೆಗೆ, ಹಿಂದೂಗಳನ್ನು ಕಗ್ಗೊಲೆ ಮಾಡುತ್ತಿರುವ ಬಾಂಗ್ಲಾ ದೇಶ 3ನೇ ಸ್ಥಾನದಲ್ಲಿದೆ. ಭಾರತದ ಸ್ಥಾನಮಾನವೆಷ್ಟು? ಇಲ್ಲಿದೆ.
01:25 PM (IST) Jan 06
ಜಿರಳೆಗಳು ಮನುಷ್ಯರನ್ನು ಮುಟ್ಟಿದ ತಕ್ಷಣ ತಮ್ಮನ್ನು ತಾವು ಸ್ವಚ್ಛಗೊಳಿಸಿಕೊಳ್ಳುತ್ತವೆ ಎಂದು ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಮಾನವನ ಚರ್ಮದ ಎಣ್ಣೆ ಮತ್ತು ಬೆವರು ಅವುಗಳ ಸಂವೇದನಾಶೀಲ ಆಂಟೆನಾಗಳಿಗೆ ಅಂಟಿಕೊಳ್ಳುವುದರಿಂದ, ತಮ್ಮ ಉಳಿವಿಗಾಗಿ ಅವು ಈ ರೀತಿ ಶುಚಿಗೊಳಿಸಿಕೊಳ್ಳುತ್ತವೆ.
01:09 PM (IST) Jan 06
ಹರ್ಯಾಣ ಹರಿಕೇನ್ ಖ್ಯಾತಿಯ ಕಪಿಲ್ ದೇವ್ ಇಂದು 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ಬಗೆಗಿನ ಏಳು ಇಂಟ್ರೆಸ್ಟಿಂಗ್ ಸಂಗತಿಗಳನ್ನು ತಿಳಿಯೋಣ ಬನ್ನಿ.
01:05 PM (IST) Jan 06
ದೆಹಲಿ ಗಂಗಾ ರಾಮ್ ಆಸ್ಪತ್ರೆ ದಾಖಲಾದ ಸೋನಿಯಾ ಗಾಂಧಿ, ವೈದ್ಯರ ನಿಗಾದಲ್ಲಿ ಕಾಂಗ್ರೆಸ್ ನಾಯಕಿ, ಇಂದು ಬೆಳಗ್ಗೆ ಸೋನಿಯಾ ಗಾಂಧಿ ಆರೋಗ್ಯ ಸಮಸ್ಯೆಯಿಂದ ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನಿಯಾ ಗಾಂಧಿ ಆರೋಗ್ಯ ಕ್ಷೀಣಿಸಲು ದೆಹಲಿ ಮಾಲಿನ್ಯ ಕಾರಣವಾಯಿತೆ?
12:54 PM (IST) Jan 06
12:47 PM (IST) Jan 06
ಒಎನ್ಜಿಸಿ ತೈಲ ಘಟಕದಲ್ಲಿ ದುರಸ್ತಿ ಕಾರ್ಯದ ವೇಳೆ ಭಾರಿ ಸ್ಪೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ತೈಲ ಬಾವಿಯಿಂದ ಜ್ವಾಲೆಗಳು ಬಾನೆತ್ತರಕ್ಕೆ ಏಳುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
12:36 PM (IST) Jan 06
ಉಮರ್ ಖಾಲಿದ್, ಶಾರ್ಜಿಲ್ ಜಾಮೀನು ರದ್ದು ಬೆನ್ನಲ್ಲೇ JNUನಲ್ಲಿ ಮೋದಿ, ಶಾ ವಿರೋಧಿ ಘೋಷಣೆ ಕೂಗಲಾಗಿದೆ. ದೆಹಲಿ ಗಲಭೆಯ ಆರೋಪಿಗಳು ಜೆನ್ಯು ಕಾಲೇಜಿನ ಹಳೇ ವಿದ್ಯಾರ್ಥಿಗಳಾಗಿದ್ದಾರೆ. ಇದರ ಹಿನ್ನಲೆಯಲ್ಲಿ ಎಡಪಂಥಿಯ ಸಂಘಟನೆಗಳು ನಿಯಮ ಬಾಹಿರ ಘೋಷಣೆ ಕೂಗಿದೆ.
12:13 PM (IST) Jan 06
ಪೋಷಕರ ವಿಚ್ಛೇದನದ ಬಳಿಕ 11 ವರ್ಷದ ಬಾಲಕನೊಬ್ಬ ತಾಯಿಯನ್ನು ಬಿಟ್ಟು, ತಂದೆಯೊಂದಿಗೆ ಇರಲು ಗೋಳಾಡಿದ ಹೃದಯವಿದ್ರಾವಕ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಪೋಷಕರ ವಿಚ್ಛೇದನದ ನಂತರ ಮಕ್ಕಳ ಕಸ್ಟಡಿ ಹೋರಾಟಗಳ ಸಮಯದಲ್ಲಿ ಮಕ್ಕಳು ಅನುಭವಿಸುವ ನೋವನ್ನು ಎತ್ತಿ ತೋರಿಸುತ್ತದೆ.
12:13 PM (IST) Jan 06
11:57 AM (IST) Jan 06
ಗುಡ್ ಬೈ ಹೇಳುತ್ತಿದೆ ನೆಚ್ಚಿನ ಟೊಯೋಟಾ ಇನ್ನೋವಾ ಕ್ರೈಸ್ಟಾ ಕಾರು, ಸ್ಥಗಿತಕ್ಕೆ ಕಾರಣವೇನು?. ಜನರ ಬೇಡಿಕೆ, ಮಾರಾಟದಲ್ಲೂ ಅಗ್ರ ಸ್ಥಾನದಲ್ಲಿರುವ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳ್ಳಲು ಕಾರಣವೇನು?
11:47 AM (IST) Jan 06
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಇದೀಗ ಮತ್ತೊಮ್ಮೆ ಎರಡನೇ ಮದುವೆಯಾಗಲು ಸಜ್ಜಾಗಿದ್ದಾರೆ. ಧವನ್ ಮದುವೆಯಾಗುತ್ತಿರುವುದು ತಮ್ಮ ಗೆಳತಿ ಸೋಫಿ ಶೈನ್ ಅವರನ್ನು. ಅಷ್ಟಕ್ಕೂ ಈಕೆ ಯಾರು? ಹಿನ್ನೆಲೆ ಏನು? ಯಾವ ದೇಶದವರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.
11:46 AM (IST) Jan 06
11:05 AM (IST) Jan 06
09:54 AM (IST) Jan 06
ಷರಿಯಾ ಕಾನೂನನ್ನು ಕಠಿಣಗೊಳಿಸುತ್ತಿರುವ ಸೌದಿ ಅರೇಬಿಯಾ, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಾಹುವಿನ ಹೆಸರುಗಳ ಬಳಕೆಗೆ ಮಿತಿ ಹೇರಿದೆ. ಸಂಸತ್ ಅನುಮೋದಿಸಿರುವ ಈ ಹೊಸ ನಿಯಮದ ಪ್ರಕಾರ, ಅಲ್ಲಾಹುವಿನ ಏಳು ನಿರ್ದಿಷ್ಟ ಹೆಸರು ಬಳಕೆಗೆ ಮಿತಿ.
09:33 AM (IST) Jan 06
ಕೆಐಐಟಿ ಮತ್ತು ಕೆಐಎಸ್ಎಸ್ನ ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರು ಭಾರತೀಯ ವಾಲಿಬಾಲ್ ಫೆಡರೇಶನ್ನ (ವಿಎಫ್ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ವಾರಣಸಿಯಲ್ಲಿ ನಡೆದ ವಿಎಫ್ಐನ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.