ಭಾರತ ಗಡಿ ಮುಚ್ಚಿದರೆ ಪತನವಾಗೋದೇಕೆ ಬಾಂಗ್ಲಾ: ಮೌನವಾಗಿದ್ದ ಶೇಖ್ ಹಸೀನಾ ಸಿಡಿದೇಳೋಕೆ ಕಾರಣ ಯಾರು?

ಬಾಂಗ್ಲಾದೇಶದ ಮೇಲೆ ಪಾಕಿಸ್ತಾನಕ್ಕೆ ಪ್ರೀತಿ ಉಕ್ಕಿಬಂದಿದೆ. ಅದರ ಹೆಗಲ ಮೇಲೆ ಬಂದೂಕು ಇಟ್ಟು,ಭಾರತದ ಕಡೆ ಗುರಿ ಇಡೋದು ಅದರ ಪ್ಲಾನ್ ಆದ್ರೆ ಅದನ್ನ ಫ್ಲಾಪ್ ಮಾಡೋಕೆ ಏನು ಬೇಕೋ, ಅದೆಲ್ಲವೂ ಸಿದ್ಧವಾಗ್ತಾ ಇದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.07): ಬಾಂಗ್ಲಾದೇಶದಲ್ಲಿ ನಡೀತಿರೋ ಹತ್ಯಾಕಾಂಡದ ಮಾಸ್ಟರ್ ಮೈಂಡ್, ಅಲ್ಲಿನ ಮುಖ್ಯಸ್ಥ ಯೂನಸ್ ಅಂತ ಆರೋಪ ಮಾಡ್ತಿದ್ದಾರೆ, ಶೇಖ್ ಹಸೀನಾ. ಇಷ್ಟೂ ದಿನ ಏನಾದ್ರು, ಎಲ್ಲಿದಾರೆ ಅನ್ನೋ ಸುಳಿವೂ ಕೊಡದ ನಾಯಕಿ, ಈಗ ಕೆಂಡ ಕಾರೋಕೆ ಮುಂದಾಗಿದ್ದು ಯಾಕೆ? ಭಾರತ ಬಾಂಗ್ಲಾ ಗಡಿಯಲ್ಲಿ ಶತ್ರುದೇಶದ ಡ್ರೋನುಗಳು ಹಾರಾಡ್ತಾ ಇವೆ.

Add Asianetnews Kannada as a Preferred SourcegooglePreferred

ಭಾರತವೇನೋ ಹದ್ದಿನ ಕಣ್ಣಿಟ್ಟು ಕಾಪಾಡ್ತಾ ಇದೆ.. ಆದ್ರೆ ಅಪಾಯದ ಪ್ರಮಾಣ ಮಾತ್ರ ಅಂದಾಜಿಗೆ ಸಿಕ್ತಿಲ್ಲ.. ಪಕ್ಕದ ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತೇನೋ ಅನ್ನೋ ಭೀತಿ, ಹಲವರಿಗೆ.. ಹಿಂದೂಗಳ ಪರ ನಿಂತವರಿಗೆ ಓಪನ್ನಾಗೇ ಕೊಲೆ ಬೆದರಿಕೆ ಹಾಕ್ತಿರೋ ಬಾಂಗ್ಲಾದೇಶ, ಕೊತಕೊತ ಅಂತ ಕುದೀತಿರೋದೇಕೆ? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಬಗಲ್ ಮೆ ದುಷ್ಮನ್

ಏಕಾಂತದ ಬಗ್ಗೆ ರಜನಿಕಾಂತ್ ಉಪ್ಪಿಗೆ ಹೇಳಿದ್ದೇನು? ವಿದ್ಯಾರ್ಥಿಗಳಿಗೆ ಜೀವನ ಪಾಠ ಹೇಳಿದ ನಟ

ಈ ಪ್ರಶ್ನೆಗಳಿಗೆ ಉತ್ತರ, ನೀವು ಊಹಿಸಿರೋದಕ್ಕಿಂತಾ ಡಿಫರೆಂಟ್ ಆಗಿರುತ್ತೆ.. ಯಾಕಂದ್ರೆ, ಮುಂದೆ ನೀವು ನೋಡಲಿರೋದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಲಿರೋ ಸಂಚಲನದ ಕತೆ. ಶೇಖ್ ಹಸೀನಾ ಕೊಟ್ಟ ಒಂದೇ ಒಂದು ಹೇಳಿಕೆ, ಬಾಂಗ್ಲಾದ ಬಡಬಾಗ್ನಿಯೇ ಥಂಡಾ ಹೊಡೆಯೋ ಹಾಗೆ ಮಾಡಿದೆ.. ಪಾಕಿಸ್ತಾನದ ಜೊತೆ ಸೇರಿ ಕಿತಾಪತಿ ನಡೆಸೋಕೆ ಸದ್ದಿಲ್ಲದೆ ಸಿದ್ಧವಾಗಿದ್ದ ಬಾಂಗ್ಲಾಗೆ, ಸರಿಯಾಗೇ ಚೆಕ್ ಮೇಟ್ ಇಟ್ಟಾಗಿದೆ. ಅದು ಹೇಗೆ ಅನ್ನೋದರ ಕತೆ ಇಲ್ಲಿದೆ ನೋಡಿ. 

ಚೀನಾ ತನಗೆ ಬೇಕಾದ ಆಟ ಆಡೋಕೆ, ಬಾಂಗ್ಲಾದೇಶ ಅನ್ನೋ ದಾಳನಾ ಬೇಕಾದ ಹಾಗೆ ಬಳಸೋದಕ್ಕೆ ನೋಡ್ತಾ ಇದೆ.. ಆದ್ರೆ, ಆ ಆಟಕ್ಕೆ ಚೆಕ್ ಮೇಟ್ ಕೊಡೋಕೆ, ಭಾರತ ಕೂಡ ಸಜ್ಜಾಗಿದೆ. ಬಾಂಗ್ಲಾದೇಶದ ಮೇಲೆ ಪಾಕಿಸ್ತಾನಕ್ಕೆ ಪ್ರೀತಿ ಉಕ್ಕಿಬಂದಿದೆ. ಅದರ ಹೆಗಲ ಮೇಲೆ ಬಂದೂಕು ಇಟ್ಟು,ಭಾರತದ ಕಡೆ ಗುರಿ ಇಡೋದು ಅದರ ಪ್ಲಾನ್ ಆದ್ರೆ ಅದನ್ನ ಫ್ಲಾಪ್ ಮಾಡೋಕೆ ಏನು ಬೇಕೋ, ಅದೆಲ್ಲವೂ ಸಿದ್ಧವಾಗ್ತಾ ಇದೆ. 

Related Video