
ಟ್ಯಾಂಕರ್ಗಳ ಧೂಳಿನಿಂದ ಆವರಿಸಿದ ಇಸ್ರೇಲ್ ಗಡಿ: 7 ಪೊಲೀಸರ ಎದೆ ಸೀಳಿಸಿದ ಉಗ್ರರ ಗುಂಡು
ಇಸ್ರೇಲ್ ರಣಭೂಮಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್
ಇಸ್ರೇಲ್ ಯುದ್ಧಭೂಮಿಯಲ್ಲಿ ಅಜಿತ್ ಹನಮಕ್ಕನವರ್
ಇಸ್ರೇಲ್ ಯುದ್ಧಭೂಮಿಯಲ್ಲಿ ಕನ್ನಡದ ಏಕೈಕ ವರದಿಗಾರ
ಇಸ್ರೇಲ್ ಯುದ್ಧಭೂಮಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ನಿನ್ನೆಯಿಂದ ನಿರಂತರ ಲೈವ್ ಕವರೇಜ್ ಮಾಡ್ತಿದೆ. ರಣರಂಗದಿಂದ ಅಜಿತ್ ಹನಮಕ್ಕನವರ್ ನೇರ ಪ್ರಸಾರ ನೀಡ್ತೀದ್ದು, ಗಡಿ ಚಿತ್ರಣವನ್ನ ವಿವರಿಸಿದ್ದಾರೆ. ಕೇವಲ 2 ಕಿಮೀ ದೂರದಲ್ಲಿ ಗಾಜಾ ಗಡಿಯಿದ್ದು, 7ನೇ ತಾರೀಕು ಶನಿವಾರ ದಾಳಿ ಮಾಡಿದ ಹಮಾಸ್ ಉಗ್ರರು ಕೆಲವರನ್ನ ಹತ್ಯೆ ಮಾಡಿ ಕೆಲವರನ್ನ ಒತ್ತೆಯಾಳಾಗಿ ತೆಗೆದುಕೊಂಡು ಹೋದರು. ಆ ಸಂದರ್ಭದಲ್ಲಾದ ಫೈರಿಂಗ್ನಲ್ಲಿ ಇಬ್ಬರು ಹಮಾಸ್ ಉಗ್ರರು ಮೃತ ಪಡುತ್ತಾರೆ. ಮೃತಪಟ್ಟ ಉಗ್ರರ ಶವಗಳು ಇನ್ನೂ ಕೂಡ ಇದೇ ಜಾಗದಲ್ಲಿ ಕೊಳೆಯುತ್ತಿವೆ. ಇಸ್ರೇಲ್ ಸೇನೆ ಇಬ್ಬರು ಹಮಾಸ್ ಉಗ್ರರ ಶವಗಳನ್ನ ಕೊಳೆಯಲು ಬಿಟ್ಟಿದ್ದು, ಇದರ ನೈಜ ಚಿತ್ರಣವನ್ನ ಅಜಿತ್ ಹನಮಕ್ಕನವರ ವಾಕ್ ಥ್ರೂ ಮೂಲಕ ವಿವರಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಹಮಾಸ್ ಪಾಲಿಗೆ ಮೃತ್ಯುದೇವಿಯಾದವರು ಯಾರು..? ಬ್ಯೂಟಿಫುಲ್ ಬಟ್ ಡೇಂಜರಸ್ ಇಸ್ರೇಲ್ ಲೇಡೀಸ್..!