Asianet Suvarna News Asianet Suvarna News

'ಕಲ್ಪತರುನಾಡಲ್ಲಿ' ಕೊರೋನಾ ಶವಸಂಸ್ಕಾರದ ರಾಜಕೀಯ..!

ಶಾಸಕ ಗೌರಿಶಂಕರ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಶವವನ್ನು ಮಣ್ಣು ಮಾಡಲಾಗಿದೆ ಎಂದು ಸುರೇಶ್ ಗೌಡ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಗೌರಿಶಂಕರ್ ಅಲ್ಲಗಳೆದಿದ್ದಾರೆ.

ತುಮಕೂರು(ಮೇ.01): ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟ ಕೊರೋನಾ ರೋಗಿ ನಂ.535 ಅಂತ್ಯ ಸಂಸ್ಕಾರಕ್ಕೆ ರಾಜಕೀಯ ವಾಸನೆ ಬಡಿದಿದೆ. ಇದು ಮಾಜಿ ಶಾಸಕ ಸುರೇಶ್ ಗೌಡಾ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ನಡುವಿನ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

ಶಾಸಕ ಗೌರಿಶಂಕರ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಶವವನ್ನು ಮಣ್ಣು ಮಾಡಲಾಗಿದೆ ಎಂದು ಸುರೇಶ್ ಗೌಡ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಗೌರಿಶಂಕರ್ ಅಲ್ಲಗಳೆದಿದ್ದಾರೆ.

ನಕಲಿ ಬೀಜ ಮಾರಾಟ ಹಗರಣ: ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ, ಸಚಿವ ಪಾಟೀಲ

ಇದರ ಬೆನ್ನಲ್ಲೇ ಶಾಸಕ ಗೌರಿಶಂಕರ್, ತಹಶೀಲ್ದಾರ್‌ಗೆ ಫೋನ್‌ನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ. ಈ ಆಡಿಯೋ ಸಾಕಷ್ಟು ವೈರಲ್ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories