Asianet Suvarna News Asianet Suvarna News

ಲಿಂಗಾಯತ ಅಭಿವೃದ್ಧಿ ನಿಗಮ ಬಳಿಕ ಒಕ್ಕಲಿಗರಿಂದಲೂ ಸಿಎಂಗೆ ಬೇಡಿಕೆ

ವೀರಶೈವ - ಲಿಂಗಾಯತ ಪ್ರಾಧಿಕಾರ ಸ್ಥಾಪನೆಗೆ ಆದೇಶ ಕೊಟ್ಟಾಯ್ತು. ಮರಾಠ ನಿಗಮ ಸ್ಥಾಪನೆಗೂ ತೀರ್ಮಾನ ತೆಗೆದುಕೊಂಡ ಬೆನ್ನಲ್ಲೇ ಇದೀಗ ಒಕ್ಕಲಿಗ ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಆಗ್ರಹಿಸಲಾಗಿದೆ. 

ಬೆಂಗಳೂರು (ನ. 17): ವೀರಶೈವ - ಲಿಂಗಾಯತ ಪ್ರಾಧಿಕಾರ ಸ್ಥಾಪನೆಗೆ ಆದೇಶ ಕೊಟ್ಟಾಯ್ತು. ಮರಾಠ ನಿಗಮ ಸ್ಥಾಪನೆಗೂ ತೀರ್ಮಾನ ತೆಗೆದುಕೊಂಡ ಬೆನ್ನಲ್ಲೇ ಇದೀಗ ಒಕ್ಕಲಿಗ ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಆಗ್ರಹಿಸಲಾಗಿದೆ. 

ಮರಾಠಾ ಪ್ರಾಧಿಕಾರ ರಚನೆಗೆ ವಿರೋಧ: ಡಿಸಂಬರ್ 5 ರಂದು ಕರ್ನಾಟಕ ಬಂದ್‌ಗೆ ಕರೆ

ಕೆಂಪೇಗೌಡ ಹೆಸರಲ್ಲಿ ಒಕ್ಕಲಿಗ ಅಭಿವೃದ್ದಿ ಪ್ರಾಧಿಕಾರ ರಚಿಸಬೇಕು. ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ರಾಜ್ಯಕ್ಕೆ ನಮ್ಮ ಕೊಡುಗೆ ಅಪಾರ. ಹಾಗಾಗಿ ಒಕ್ಕಲಿಗ ನಿಗಮ ಸ್ಥಾಪನೆ ಮಾಡಬೇಕು' ಎಂದು ಕೆಆರ್‌ ನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ ಸಿಎಂಗೆ ಪತ್ರ ಬರೆದಿದ್ದಾರೆ.