
ಹಿಜಾಬ್ VS ಕೇಸರಿ ಶಾಲು ಕದನ: ಕೋರ್ಟ್ ಮೇಲೆ ನಮಗೆ ಅಪಾರ ನಂಬಿಕೆಯಿದೆ: ಯಶ್ಪಾಲ್
* ಶಿಕ್ಷಣ ವಿಚಾರದಲ್ಲಿ ನ್ಯಾಯಾಲಯ ತಾರತಮ್ಯ ಮಾಡಲ್ಲ
* ಮಂಡಳಿಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಬದ್ಧರಾಗಿರಬೇಕು
* ವಿದ್ಯಾರ್ಥಿನಿಯರು ಸ್ವಂತ ಬುದ್ದಿಯಿಂದ ಕೋರ್ಟ್ ಮೆಟ್ಟಿಲೇರಿಲ್ಲ
ಉಡುಪಿ(ಫೆ.08): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಯಶ್ಪಾಲ್ ಮಾತನಾಡಿದ್ದು, ಶಿಕ್ಷಣ ವಿಚಾರದಲ್ಲಿ ನ್ಯಾಯಾಲಯ ತಾರತಮ್ಯ ಮಾಡಲ್ಲ, ನ್ಯಾಯ, ಕೋರ್ಟ್ ಮೇಲೆ ನಮಗೆ ಅಪಾರ ನಂಬಿಕೆಯಿದೆ ಅಂತ ಹೇಳಿದ್ದಾರೆ. ಆಡಳಿತ ಮಂಡಳಿಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಬದ್ಧರಾಗಿರಬೇಕು, ವಿದ್ಯಾರ್ಥಿನಿಯರು ಸ್ವಂತ ಬುದ್ದಿಯಿಂದ ಕೋರ್ಟ್ ಮೆಟ್ಟಿಲೇರಿಲ್ಲ. ಇದಕ್ಕೆ ಮತಾಂಧಶಕ್ತಿಗಳ ಕುಮ್ಮಕ್ಕು ಇದೆ ಅಂತ ಆರೋಪಿಸಿದ್ದಾರೆ.
Add Asianetnews Kannada as a Preferred Source
