
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಟ್ವಿಸ್ಟ್: ಕಾಂಗ್ರೆಸ್ ಶಾಸಕರಿಬ್ಬರಿಗೆ NIA ಬಿಗ್ ಶಾಕ್..!
ಬೆಂಗಳೂರು ಗಲಭೆ ಪ್ರಕರಣ| ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಜಮೀರ್ ಅಹಮದ್ ಖಾನ್ ವಿಚಾರಣೆ| ಗಲಭೆ ನಡೆದ ರಾತ್ರಿ ಪ್ರತಿಭಟನಾ ಸ್ಥಳದಲ್ಲಿದ್ದ ರಿಜ್ವಾನ್ ಅರ್ಷದ್ ಹಾಗೂ ಜಮೀರ್ ಅಹಮದ್ ಖಾನ್|
ಬೆಂಗಳೂರು(ಅ.14): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರನ್ನ ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸಿದೆ. ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಜಮೀರ್ ಅಹಮದ್ ಖಾನ್ ಅವರನ್ನ ಎನ್ಐಎ ಅಧಿಕಾರಿಗಳು ವಿಚಾರಣೆಯನ್ನ ನಡೆಸಿದೆ.
Add Asianetnews Kannada as a Preferred Source

ಮುಂದುವರೆದ ಮಳೆ ಆರ್ಭಟ; ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಸೋಮವಾರ ರಿಜ್ವಾನ್ ಅರ್ಷದ್ ಹಾಗೂ ಮಂಗಳವಾರ ಜಮೀರ್ ಅಹಮದ್ ಖಾನ್ ಅವರ ವಿಚಾರಣೆ ನಡೆದಿದೆ. ಡಿಜೆ ಹಳ್ಳಿ ಗಲಭೆ ನಡೆದ ರಾತ್ರಿ ಪ್ರತಿಭಟನಾ ಸ್ಥಳದಲ್ಲಿದ್ದ ರಿಜ್ವಾನ್ ಅರ್ಷದ್ ಹಾಗೂ ಜಮೀರ್ ಅಹಮದ್ ಖಾನ್ ಇದ್ದಿದ್ದರು. ಹೀಗಾಗಿ ಇವರ ವಿಚಾರಣೆ ನಡೆದಿದೆ.