
ಪ್ರಯಾಣಿಕರೇ ಗಮನಿಸಿ, ನಾಳೆಯಿಂದ ಸಾರಿಗೆ ಮುಷ್ಕರ, 4 ನಿಗಮಗಳ ಬಸ್ ಸಂಚಾರ ಬಂದ್
ಆರನೇ ವೇತನ ಅಯೋಗ ವರದಿ ಜಾರಿಗೆ ಪಟ್ಟು ಹಿಡಿದು, ಏ. 07 ರಿಂದ ಸಾರಿಗೆ ಮುಷ್ಕರ ನಡೆಸುವ ನಿರ್ಧಾರವನ್ನು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಕೈಗೊಂಡಿದೆ. ಹೀಗಾಗಿ ಬುಧವಾರದಿಂದ ಪ್ರಯಾಣಿಕರಿಗೆ ಬಸ್ ಮುಷ್ಕರದ ಬಿಸಿ ತಟ್ಟಲಿದೆ.
ಬೆಂಗಳೂರು (ಏ. 06): ಆರನೇ ವೇತನ ಅಯೋಗ ವರದಿ ಜಾರಿಗೆ ಪಟ್ಟು ಹಿಡಿದು, ಏ. 07 ರಿಂದ ಸಾರಿಗೆ ಮುಷ್ಕರ ನಡೆಸುವ ನಿರ್ಧಾರವನ್ನು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಕೈಗೊಂಡಿದೆ. ಹೀಗಾಗಿ ಬುಧವಾರದಿಂದ ಪ್ರಯಾಣಿಕರಿಗೆ ಬಸ್ ಮುಷ್ಕರದ ಬಿಸಿ ತಟ್ಟಲಿದೆ. ಅಸಹಕಾರ ಚಳುವಳಿ ಮಾದರಿಯಲ್ಲಿ ಬಸ್ ಸಂಚಾರ ಸ್ಥಗಿತವಾಗಲಿದೆ. ಕೊರೊನಾ ನಿಯಮ ಮೀರುವುದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ಧಾರೆ.
Add Asianetnews Kannada as a Preferred Source
