ಶ್ರೀರಂಗಪಟ್ಟಣದಲ್ಲಿ ಮಸೀದಿ ವಿರುದ್ಧ ಕೇಸರಿ ಕಿಚ್ಚು: ಹಿಂದೂ ಸಂಘಟನೆಗಳ 10 ಪ್ರಶ್ನೆಗಳೇನು?
ಅಂದು ಮಳಲಿ ದರ್ಗಾ ದಿಂದ ಶುರುವಾದ ಈ ಹೋರಾಟ, ಬಸವಣ್ಣರ ನಾಡಿಗೂ ಕಾಲಿಟ್ಟು, ಈಗ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿವರೆಗೂ ಬಂದು ನಿಂತಿದೆ. ಈ ಕುರಿತ ಕಂಪ್ಲೀಟ್ ರಿಫೋರ್ಟ್ ಇಲ್ಲಿದೆ
ಮಂಡ್ಯ (ಜೂ. 05): ಶ್ರೀರಂಗಪಟ್ಟಣದಲ್ಲಿ ಒಂದೇ ಕೂಗು ಕೇಳಿಸುತ್ತಿತ್ತು. ಆ ಕೂಗು ಇಡಿ ರಾಜ್ಯಕ್ಕೆ ಕೇಳಿಸ್ತಿತ್ತು. ಅದೇ ಜೈಶ್ರೀರಾಮ್. ರಾಜ್ಯದಲ್ಲಿ ಹಿಜಾಬ್- ಕೇಸರಿ ಕಿಚ್ಚು, ಹಲಾಲ್-ಜಟ್ಕಾ ಕಟ್, ಮುಸ್ಲಿಂ ವ್ಯಾಪಾರ ನಿರ್ಬಂಧ,ಆಜಾನ್-ಭಜನೆ, ಮಾವು ಧರ್ಮಯುದ್ಧ, ಮುಸ್ಲಿಂ ಟ್ರ್ಯಾವೆಲ್ಸ್ ಬ್ಯಾನ್ ಹೀಗೆ ಮುಸ್ಲಿಮರ ವಿರುದ್ಧ ಹಿಂದೂ ಪರ ಸಂಘಟನೆಗಳು ರೊಚ್ಚಿಗೆದ್ದಿದ್ದವು. ಅಂದಿನ ಬೆಂಕಿ ನಂದಿದ್ರೂ, ಕಿಡಿ ಮಾತ್ರ ಆರಿಲ್ಲ. ಈ ಕಿಡಿ ಮತ್ತೆ ಜ್ವಾಲೆಯಾಗಿ ಸ್ಫೋಟಗೊಂಡಿದೆ. ರಾಜ್ಯದಲ್ಲೂ ಜ್ಞಾನವಾಪಿ ಮಾದರಿಯಲ್ಲೇ ಇರೋ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಈ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ. ಹೌದು, ಉತ್ತರ ಪ್ರದೇಶದಲ್ಲಿ ಶುರುವಾಗಿರೋ ಮಸೀದಿ, ಮಂದಿರ ಸಂಘರ್ಷ ಈಗ ಕರುನಾಡಿಗೂ ಕಾಲಿಟ್ಟಿದೆ. ಅಂದು ಮಳಲಿ ದರ್ಗಾ ದಿಂದ ಶುರುವಾದ ಈ ಹೋರಾಟ, ಬಸವಣ್ಣರ ನಾಡಿಗೂ ಕಾಲಿಟ್ಟು, ಈಗ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿವರೆಗೂ ಬಂದು ನಿಂತಿದೆ. ಈ ಕುರಿತ ಕಂಪ್ಲೀಟ್ ರಿಫೋರ್ಟ್ ಇಲ್ಲಿದೆ
ಇದನ್ನೂ ನೋಡಿ: ಜಾಮಿಯಾ ಮಸೀದಿ ವಿವಾದ: ಮಸೀದಿಯೊಳಗೆ ಗಣಪತಿ,ಲಕ್ಷ್ಮೀ ಹೋಲಿಕೆಯ ಕೆತ್ತನೆ ಪತ್ತೆ