Asianet Suvarna News Asianet Suvarna News

SIT ಮಹಾಬೇಟೆ : 'ಮಹಾನ್ ನಾಯಕ', 'ಶೋ ಪೀಸ್‌' ಗೆ ಟೆನ್ಷನ್

ರಮೇಶ್ ಜಾರಕಿಹೊಳಿ ಸೀಡಿ ಹಗರಣ ಸಂಬಂಧ ಮೊದಲ ದಿನವೇ ಎಸ್‌ಐಟಿ ಭರ್ಜರಿ ಬೇಟೆಯಾಡಿದೆ. ಖಾಸಗಿ ಸುದ್ದಿವಾಹಿನಿಯ ನಾಲ್ವರು ಪತ್ರಕರ್ತರು, ಹಾಗೂ ಒಬ್ಬ ಸರ್ಕಾರಿ ಉಪನ್ಯಾಸಕಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. 

ಬೆಂಗಳೂರು (ಮಾ. 13): ರಮೇಶ್ ಜಾರಕಿಹೊಳಿ ಸೀಡಿ ಹಗರಣ ಸಂಬಂಧ ಮೊದಲ ದಿನವೇ ಎಸ್‌ಐಟಿ ಭರ್ಜರಿ ಬೇಟೆಯಾಡಿದೆ. ಖಾಸಗಿ ಸುದ್ದಿವಾಹಿನಿಯ ನಾಲ್ವರು ಪತ್ರಕರ್ತರು, ಹಾಗೂ ಒಬ್ಬ ಸರ್ಕಾರಿ ಉಪನ್ಯಾಸಕಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸೀಡಿ ಬಹಿರಂಗಪಡಿಸಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಸೀಡಿ ಹಸ್ತಾಂತರ ವೇಳೆ ಅವರ ಜೊತೆ ಉಪನ್ಯಾಸಕಿ ಕೂಡಾ ಇದ್ದಳಂತೆ. ರಷ್ಯಾ ಸರ್ವರ್‌ಗೆ ಹಣ ಪಾವತಿಸಿ ಬೆಂಗಳೂರಿನಲ್ಲೇ ಕುಳಿತು ವಿಡಿಯೋ ಅಪ್‌ಲೋಡ್ ಮಾಡಲಾಗಿದೆ ಎನ್ನಲಾಗಿದೆ. 

ರಾಸಲೀಲೆ ಸಿಡಿ ವಿವಾದ : ಕನಕಪುರದಲ್ಲಿ ಯುವತಿ ಸೇರಿದಂತೆ ಐವರು ಬಲೆಗೆ!

Video Top Stories