ದೂರುದಾರ ದಿನೇಶ್ಗೆ ಪೊಲೀಸ್ ನೋಟಿಸ್; ಸಂತ್ರಸ್ತೆ ದೂರು ನೀಡದಿದ್ರೆ ಪ್ರಕರಣವೇ ಠುಸ್!
ಕಬ್ಬನ್ ಪಾರ್ಕ್ ಪೊಲೀಸರು ಸೀಡಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಂತ್ರಸ್ತೆ ದೂರು ಕೊಟ್ಟರೆ ಮಾತ್ರ ಎಫ್ಐಆರ್ ದಾಖಲಾಗಲಿದೆ. ಒಂದು ವೇಳೆ ಸಂತ್ರಸ್ತೆ ದೂರು ನೀಡದಿದ್ರೆ ಇಡೀ ಪ್ರಕರಣವೇ ಠುಸ್ ಆಗಲಿದೆ.
ಬೆಂಗಳೂರು (ಮಾ. 03): ಕಬ್ಬನ್ ಪಾರ್ಕ್ ಪೊಲೀಸರು ಸೀಡಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಂತ್ರಸ್ತೆ ದೂರು ಕೊಟ್ಟರೆ ಮಾತ್ರ ಎಫ್ಐಆರ್ ದಾಖಲಾಗಲಿದೆ. ಒಂದು ವೇಳೆ ಸಂತ್ರಸ್ತೆ ದೂರು ನೀಡದಿದ್ರೆ ಇಡೀ ಪ್ರಕರಣವೇ ಠುಸ್ ಆಗಲಿದೆ. ಕಾನೂನು ತಜ್ಞರ ಸಲಹೆ ಪಡೆಯಲಿದ್ದಾರೆ ಪೊಲೀಸರು. ಇನ್ನು ದೂರುದಾರ ದಿನೇಶ್ ಕಲ್ಲಹಳ್ಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಬಗ್ಗೆ ದಿನೇಶ್ ಕಲ್ಲಹಳ್ಳಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.