Asianet Suvarna News Asianet Suvarna News

ರಾಧಿಕಾಗೆ ಪೊಲೀಸ್ ಬುಲಾವ್, ವಿಚಾರಣೆಗೆ ಬರ್ತಾರಾ..? ಗೈರಾಗ್ತಾರಾ..?

ವಂಚಕ ಯುವರಾಜ್‌ ಜತೆ ಹಣಕಾಸು ವ್ಯವಹಾರ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಕರಣ ಸಂಬಂಧ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನೋಟಿಸ್‌ ನೀಡಿದೆ. 

ಬೆಂಗಳೂರು (ಜ. 08): ವಂಚಕ ಯುವರಾಜ್‌ ಜತೆ ಹಣಕಾಸು ವ್ಯವಹಾರ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಕರಣ ಸಂಬಂಧ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನೋಟಿಸ್‌ ನೀಡಿದೆ.

ಪ್ರಭಾವಿ ರಾಜಕಾರಣಿ ಜೊತೆ ರಾಧಿಕಾ ಕುಮಾರಸ್ವಾಮಿ ನಂಟು..?

ಚಾಮರಾಜಪೇಟೆಯಲ್ಲಿನ ಸಿಸಿಬಿ ಕಚೇರಿಗೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಯುವರಾಜ್‌ ವಂಚನೆ ಪ್ರಕರಣದ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ಸೂಚಿಸಲಾಗಿದೆ. ಆದರೆ ರಾಧಿಕಾ ಕೂರ್ಗ್‌ನಲ್ಲಿದ್ದಾರೆ ಅಂತ ಸಹೋದರ ರವಿರಾಜ್ ಮಾಹಿತಿ ನೀಡಿದ್ದಾರೆ. ಹಾಗಾದರೆ ರಾಧಿಕಾ ವಿಚಾರಣೆಗೆ ಹಾಜರಾಗ್ತಾರಾ..? ಕುತೂಹಲ ಮೂಡಿಸಿದೆ.