Asianet Suvarna News Asianet Suvarna News

ಕೊರೋನಾ ವಾರಿಯರ್ಸ್‌ ತಂಟೆಗೆ ಹೋಗುವ ಮುನ್ನ ಇಲ್ನೋಡಿ..!

ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಡಾ.ಕೆ.ಸುಧಾಕರ್‌ ಆಶಾ ಕಾರ್ಯಕರ್ತೆ ಸುಮಯಾ ಪಿರ್ದೋಶ್ ಅವರನ್ನ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.

ಮೈಸೂರು, (ಏ.21): ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಡಾ.ಕೆ.ಸುಧಾಕರ್‌ ಆಶಾ ಕಾರ್ಯಕರ್ತೆ ಸುಮಯಾ ಪಿರ್ದೋಶ್ ಅವರನ್ನ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.

ಮಂಗಳವಾರ ಸುಮಯಾ ಅವರಿಗೆ ಮೂವರು ಪುಂಡರು ಧಮ್ಕಿ ಹಾಕಿದ್ದರು. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದಿದ್ದಕ್ಕೆ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನೆಲೆ ಅಲೀಂ ನಗರಕ್ಕೆ ಭೇಟಿ ನೀಡಿದ ಸಚಿವರು, ಯಾವುದೇ ರೀತಿ ಭಯ ಬೇಡ ಎಂದು ಆಶಾ ಕಾರ್ಯಕರ್ತೆಗೆ ಧೈರ್ಯ ತುಂಬಿದ್ದಾರೆ. ಇದೇ ವೇಳೆ ಖಡಕ್ ಎಚ್ಚರಿಯೊಂದನ್ನು ರವಾನಿಸಿದ್ದಾರೆ.