Asianet Suvarna News Asianet Suvarna News

News Hour ಹಲಾಲ್ ವಾರ್ ನಡುವೆ ಗಂಡಸ್ತನದ ಗಲಾಟೆ, "ಹಿಂದೂ ಎನ್ನುವ ಶಬ್ದವೇ ಅಪಾಯ" ಎಂದ ಸಾಹಿತಿ ಕುಂವೀ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಗಂಡಸ್ತನದ ಸವಾಲನ್ ಹಾಕಿದ ಎಚ್ ಡಿಕೆ
ಜಿಲ್ಲೆಜಿಲ್ಲೆಗಳಲ್ಲೂ ಹಬ್ಬಿದ ಹಲಾಲ್ ವರ್ಸಸ್ ಜಟ್ಕಾ ಹೋರಾಟ
ಹಿಂದು ಸಂಘಟನೆಗಳ ಪರ ನಿಂತ ಪೇಜಾವರ ಶ್ರೀ
ಹಿಂದುಗಳ ಕುರಿತಾಗಿ ಕುಂ.ವೀರಭದ್ರಪ್ಪ ವಿವಾದಿತ ಹೇಳಿಕೆ
 

First Published Mar 31, 2022, 11:16 PM IST | Last Updated Mar 31, 2022, 11:16 PM IST

ಬೆಂಗಳೂರು (ಮಾ. 31): ರಾಜ್ಯದಲ್ಲಿ ವಿವಾದದ ರೂಪ ತಾಳಿರುವ ಹಲಾಲ್ (Halal) ಹಾಗೂ ವ್ಯಾಪಾರ ವಾರ್ (Trade) ವಿಚಾರದ ಬಗ್ಗೆ ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ಗುರುವಾರ ಕೆಂಡಾಮಂಡಲರಾದರು. ಮಾತನಾಡುವ ಭರದಲ್ಲಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಗಂಡಸ್ತನ ಪ್ರಶ್ನೆ ಮಾಡಿದ್ದು ಸುದ್ದಿಯಾಗುತ್ತಿದ್ದಂತೆ ತಮ್ಮ ಮಾತಿನ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಇನ್ನೊಂದೆಡೆ ಹಲಾಲ್ ಹಾಗೂ ಜಟ್ಕಾ ಕುರಿತಾಗಿ ಕರಪತ್ರ ಹಂಚುವ ಅಭಿಯಾನ ಜಿಲ್ಲೆಜಿಲ್ಲೆಗಳಿಗೆ ಮುಟ್ಟಿದೆ. ಬೆಂಗಳೂರಿನ ಬಹುತೇಕ ಅಂಗಡಿಗಳಲ್ಲಿ ಹಲಾಲ್ ಬೋರ್ಡ್ ಗಳನ್ನು ತೆಗೆದುಹಾಕಲಾಗಿದೆ.  ರಾಜ್ಯದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತಾಗಿ ಉಡುಪಿಯ ಪೇಜಾವರ ಶ್ರೀ ಗಳನ್ನು ಮುಸ್ಲಿಂ ವ್ಯಾಪಾರಿಗಳ ಗುಂಪು ಭೇಟಿ ಮಾಡಿ ಮಾತುಕತೆ ನಡೆಸಿತು. ಈ ವೇಳೆ ಪೇಜಾವರ ಶ್ರೀಗಳು, "ಸಾಮರಸ್ಯ ಅನ್ನೋದು ಎರಡೂ ಕಡೆಯಿಂದ ಬರಬೇಕು. ಯಾರಿಂದ ಸಮಸ್ಯೆ ಹುಟ್ಟಿದೆಯೋ ಅವರಿಂದಲೇ ಈ ಸಮಸ್ಯೆ ಬಗೆಹರಿಯಬೇಕು' ಎಂದು ಹೇಳಿದ್ದಾರೆ.
ಪೇಜಾವರ ಶ್ರೀಗಳು ಹಿಂದು ಸಂಘಟನೆಗಳ ಪರವಾಗಿ ನಿಂತ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. "ಯಾವುದು ಹಿಂದೂ ಸಮಾಜ, ಯಾವ ಸಮಾಜಕ್ಕೆ ನೋವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಗುಲಾಮಗಿರಿಯಲ್ಲಿ ಇಟ್ಟಿದ್ದೀರಲ್ಲ ಅಂಥಾ ಜನಕ್ಕೆ ನೋವಾಗಿರಬಹುದು' ಎಂದು ಹೇಳಿದ್ದಾರೆ.

News Hour: ಕಲಾಪದಲ್ಲೂ ಹಲಾಲ್ ಪ್ರತಿಧ್ವನಿ.. ಇಬ್ರಾಹಿಂ ಹೇಳಿದ ವಿಧಾನ!

ಈ ನಡುವೆ ಸಾಹಿತಿ ಕುಂ.ವೀರಭದ್ರಪ್ಪ ಹಿಂದುಗಳ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ವಿದ್ಯಮಾನದ ಬಗ್ಗೆ ಮಾತನಾಡುತ್ತಾ, "ದೇಶಕ್ಕೆ ಹಿಂದೂ ಎನ್ನುವ ಶಬ್ದದಿಂದಲೇ ಅಪಾಯವಿದೆ. ಹಿಂದುಗಳು ಬಹುಸಂಖ್ಯಾತರು ಎಂದು ಹೇಳೋದು ಸರಿಯಲ್ಲ. ನಾನು ಹಿಂದು ಅಲ್ಲ, ನಾನು ಭಾರತೀಯ, ಲಿಂಗಾಯತ ಬಸವಣ್ಣನ ಅನುಯಾಯಿ' ಎಂದು ಹೇಳಿದ್ದಾರೆ. 

Video Top Stories