Asianet Suvarna News Asianet Suvarna News

ಕೊರೋನಾ ಹೊಸ ರೂಪ: ಹೊಸ ನಿಯಮ ಘೋಷಿಸಿದ ಸಿಎಂ ಯಡಿಯೂರಪ್ಪ

ಕೊರೋನಾದ ಹೊಸ ರೂಪ ಪತ್ತೆ| ವಿದೇಶದಿಂದ ಬಂದವರಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯ| ವಿಮಾನ ನಿಲ್ದಾಣಗಳಲ್ಲಿ  ಕೋವಿಡ್‌ ಪರೀಕ್ಷೆ ಕಡ್ಡಾಯ| ವೈರಸ್‌ನ ಹೊಸ ರೂಪ ಹರಡದಂತೆ ಎಚ್ಚರಿಕೆ|  

ಬೆಂಗಳೂರು(ಡಿ.22): ಮಹಾಮಾರಿ  ಕೊರೋನಾದ ಹೊಸ ರೂಪ ಪತ್ತೆಯಾದ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಲು ಸೂಚನೆ ನೀಡಿದ್ದಾರೆ.

ಚುನಾವಣಾ ಅಖಾಡ: ಮತಗಟ್ಟೆಗಳಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು

ಕರ್ನಾಟಕದಲ್ಲಿ ಕೊರೋನಾದ ವೈರಸ್‌ನ ಹೊಸ ರೂಪ ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಬ್ರಿಟನ್‌ನಿಂದ ಬಂದ ಚೆನ್ನೈನ ವ್ಯಕ್ತಿಯಲ್ಲಿ ಹೊಸ ಕೊರೋನಾ ವೈರಸ್‌ ಕಂಡು ಬಂದಿದೆ. ಹೀಗಾಗಿ ವೈರಸ್‌ ಹರಡದಂತೆ ಹೈಲರ್ಟ್‌ ಘೋಷಿಸಲಾಗಿದೆ.