Asianet Suvarna News Asianet Suvarna News

750ಕೆಜಿ ಚಿನ್ನದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು, ಅದ್ಧೂರಿ ದಸರಾಗೆ ಮಳೆ ಸಿಂಚನ!

ಅದ್ಧೂರಿಯಾಗಿ ಸಂಪನ್ನಗೊಂಡ ಮೈಸೂರು ದಸರಾ, ಪ್ರತ್ಯೇಕ ಕೊಠಡಿಯಲ್ಲಿ ಸುತ್ತೂರು ಶ್ರೀಗಳ ಜೊತೆ ಸಿದ್ದರಾಮಯ್ಯ ಚರ್ಚೆ, ಬಾಂಗ್ಲಾ ದುರ್ಗಾಪೂಜೆ ಮೇಲೆ ದಾಳಿ, ಭಾರತ ಖಡಕ್ ಸಂದೇಶ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ.

First Published Oct 12, 2024, 11:21 PM IST | Last Updated Oct 12, 2024, 11:21 PM IST

ವಿಶ್ವವಿಖ್ಯಾತ ಮೈಸೂರು ದಸರಾ ಅದ್ಧೂರಿಯಾಗಿ ನಡೆದಿದೆ. ನಂದಿ ಧ್ವಜ ಪೂಜೆ ಸೇರಿದಂತೆ ಪೂಜಾ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದೆ. ಇದೇ ವೇಳೆ 750 ಕೆಜಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಜಂಬು ಸವಾರಿ ನೋಡಲು ಲಕ್ಷಾಂತರ ಜನ ಸೇರಿದ್ದರು. ಇದರ ನಡುವೆ ಮೈಸೂರಿನಲ್ಲಿ ಸುರಿದ ಭಾರಿ ಮಳೆ ಸುರಿದಿತ್ತು. ಮಳೆಯ ನಡುವೆ ಸ್ಥಬ್ಧ ಚಿತ್ರಗಳ ಪ್ರದರ್ಶನ ನಡೆದಿತ್ತು. ಮಳೆ ನಿಲ್ಲುತ್ತಿದ್ದಂತೆ ಜಂಬು ಸವಾರಿ ಅದ್ದೂರಿಯಾಗಿ ನೆರವೇರಿದೆ. ಮೈಸೂರು ದಸರಾ, ಕರ್ನಾಟಕ ರಾಜಕೀಯ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 
 

Video Top Stories